TOP STORIES:

FOLLOW US

ಮಾನವೀಯ ಮೌಲ್ಯಗೆ ಹೊಸ ಭಾಷ್ಯ ಬರೆದ ಕುದ್ರೋಳಿಯ ಗುರು ಬೆಳದಿಂಗಳು ಸೇವಾ ಸಂಸ್ಥೆ


ಮಾನವೀಯ ಮೌಲ್ಯಗೆ ಹೊಸ ಭಾಷ್ಯ ಬರೆದ ಕುದ್ರೋಳಿಯ ಗುರು ಬೆಳದಿಂಗಳು ಸೇವಾ ಸಂಸ್ಥೆ                

ಗರೋಡಿ ಅರ್ಚಕರಿಗೆ ಆಹಾರ ಸಾಮಾಗ್ರಿ ವಿತರಣೆ

  ಧಾರ್ಮಿಕ ಕ್ಷೇತ್ರಗಳನ್ನು ಮಾನವ  ಕಲ್ಯಾಣ ಕೇಂದ್ರಗಳನ್ನು  ರೂಪಿಸಬೇಕು ಎಂಬ ಮಹತ್ವದ ಉದ್ದೇಶವನ್ನು ಇಟ್ಟುಕೊಂಡ ಬ್ರಹ್ಮಶ್ರೀನಾರಾಯಣ ಗುರುಗಳಿಂದ ಸ್ಥಾಪನೆಗೊಂಡ  ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ಕೇಂದ್ರಿಕರಿಸಿಕೊಂಡು ಮಾನವತಾವಾದಿನಿಷ್ಕಲಂಕ ವ್ಯಕ್ತಿತ್ವದ ಶ್ರೀ ಬಿ.ಜನಾರ್ಧನ ಪೂಜಾರಿ ಇವರ ಮಾರ್ಗದರ್ಶನದಲ್ಲಿ ಜನಪರ ಕಾಳಜಿಯ ಬಹುಮುಖ  ವ್ಯಕ್ತಿತ್ವದನ್ಯಾಯವಾದಿ ಶ್ರೀ ಪದ್ಮರಾಜ್ ರವರ ನೇತೃತ್ವದಲ್ಲಿ  ರಚಿತವಾದ  ಸಂಸ್ಥೆಯೇ ಗುರು ಬೆಳದಿಂಗಳು ಸೇವಾ ಸಂಸ್ಥೆ .  ಕೋರೊನಾಸಂಕಷ್ಟದ ಕಾಲಘಟ್ಟದಲ್ಲಿ  ಸರಕಾರಿ ವ್ಯವಸ್ಥೆಗಳು ಜನರ ಬವಣೆಯನ್ನು ನೀಗಿಸಲು ಹಲವಾರು ಯೋಜನೆಗಳನ್ನು  ರೂಪಿಸಿದರೂಆರ್ಹ ಫಲಾನುಭವಿಗಳನ್ನು ಪೂರ್ಣ ಪ್ರಮಾಣದಲ್ಲಿ  ತಲುಪುವುದು ಅಸಾಧ್ಯವಾಗುತ್ತಿರುವುದು ಕಾಣಬಹುದಾಗಿದೆ.ಸಾಮಾಜಿಕವಾದಮಹತ್ತರವಾದ ಹೊಣೆಗಾರಿಕೆಯಿಂದ ಗುರುತಿಸಿಕೊಂಡ ಗುರುಬೆಳದಿಂಗಳು ಸಂಸ್ಥೆ ಸಾಮಾಜಿಕ ಹಾಗು ಆರ್ಥಿಕ ಮತ್ತು ಆರೋಗ್ಯಸೇವಾ ವಲಯದಲ್ಲಿ ಸಹಾಯಹಸ್ತವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ವ್ಯವಸ್ಥಿತವಾಗಿ ನೀಡುತಿದ್ದು ಸಂಕಷ್ಟಕಾಲಘಟ್ಟದಲ್ಲಿ ಗರೋಡಿಯಲ್ಲಿ ಪೂ ಪೂಜನೆಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಪೂಜಾರಿಗಳಿಗೆ ದೈನಂದಿನ ಉಪಯೋಗಕ್ಕೆಪೂರಕವಾಗಿ ಆಹಾರ ಸಾಮಾಗ್ರಿಗಳನ್ನು ಒದಗಿಸುವ ಕುರಿತು ಸರಕಾರಿ ಆಡಳಿತಕ್ಕೆ ಸೇವಾ ಸಂಘಗಳು ಮನವಿಯನ್ನು ಸಲ್ಲಿಸಿದ್ದರೂಕೂಡಾ ಕನಿಷ್ಟ ಸ್ಪಂದನೆಯು ಸಿಗದೇ ಇರುವ ಸಮಯದಲ್ಲಿ ಗುರು ಬೆಳದಿಂಗಳ ಸಂಸ್ಥೆಯ ಉಪಾಧ್ಯಾಕ್ಷರಾದ ಶ್ರೀ ರಘುನಾಥಮಾಬಿಯಾನ್ ಇವರ ಸಮಯೋಚಿತ ನಿಲುವುಗಳನ್ನು ಶ್ರೀ ಪದ್ಮರಾಜ್ ಇವರ ಗಮನಕ್ಕೆ ತಂದಿದ್ದು, ಕ್ಷೀಪ್ರವಾಗಿ ಪ್ರತಿಕ್ರಿಯಿಸಿದಲ್ಲದೇಸಂಸ್ಥೆಯ ವತಿಯಿಂದಲೆ ಸಹಾಯ ಹಸ್ತವನ್ನು ನೀಡುವುದನ್ನು ಪ್ರಕಟಿಸಿ ಕಾರ್ಯತತ್ಪರವಾಗಿ ತಮ್ಮ ಸಂಗಡಿಗರನ್ನು ಒಡಗೂಡಿಸಿಗರೋಡಿ ಗೈಸ್ ಸಂಸ್ಥೆಯು ನೀಡಿದ ಆರ್ಹ ಪಲಾನುಭವಿಗಳ ಪಟ್ಟಿಯನ್ನು ಪರಿಗಣಿಸಿ  ಕೇವಲ 2 ದಿನಗಳಲ್ಲಿ ಸರಿ ಸುಮಾರು 72 ಕ್ಕೂಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ತಯಾರಿಸಿ ದಿನಾಂಕ 30/05/2021 ರಂದು ಉಡುಪಿಯ ಕಿನ್ನಿಮೂಲ್ಕಿ ಬೆಮ್ಮೆರ್ಬೈದರ್ಲೆ ಗರೋಡಿಯಲ್ಲಿ ಹಿರಿಯರಾದ ಬನ್ನಂಜೆ ಬಾಬು ಅಮೀನ್, ಉಡುಪಿ ವೃತ್ತ ನೀರಿಕ್ಷಕರಾದ ಶ್ರೀ ಮಂಜುನಾಥ ,ಬಿಲ್ಲವ ಯುವವೇದಿಕೆಯ  ಪ್ರವೀಣ ಎಂ ಪೂಜಾರಿ ಯುವವಾಹಿನಿಯ ಪ್ರಮುಖರು ಹಾಗೂ ಗರೋಡಿ ಗೈಸ್ ಸದಸ್ಯರುಗಳ  ಸಮ್ಮುಖದಲ್ಲಿಉಡುಪಿ ಜಿಲ್ಲೆಯ ಗರೋಡಿಗಳ ಪೂ ಪೂಜನೆಯ ಅರ್ಚಕರಿಗೆ ಸಾಂಕೇತಿಕವಾಗಿ ಅಹಾರ ಸಾಮಾಗ್ರಿಗಳ ಕಿಟ್ ಗಳನ್ನುಹಸ್ತಾಂತರಿಸಲಾಯಿತು. ಗುರು ಬೆಳಂದಿಗಳ ಸೇವಾ ಸಂಸ್ಥೆಯ ವೈಶಿಷ್ಟ್ಯ ಪೂರ್ಣ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಆರ್ಥಿಕವಾಗಿ ಸಬಲರುಳ್ಳವರು ದುರ್ಬಲ ವ್ಯಕ್ತಿಗಳಿಗೆ ಸಾಹಾಯ ಹಸ್ತ ನೀಡುವುದಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನುಸಜ್ಜುಗೊಳಿಸಿ ತರಬೇತು ನೀಡಲು ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥರವರು  ಕರೆ ನೀಡಿದರು. ಶ್ರೀ ಪದ್ಮರಾಜ್ ರವರುಮಾತನಾಡುತ್ತಾ ಗುರು ಬೆಳಂದಿಗಳು ಸೇವಾ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರಿಸುತ್ತಾ ಸಂಸ್ಥೆಯು  ಸದಾಕಾಲದುರ್ಬಲರ ಶೋಷಿತರ ಪರವಾದ ಧ್ವನಿಯಾಗಿ  ಇರುತ್ತದೆ ಎಂಬ ಭರವಸೆಯನ್ನು ನೀಡಿದರು. ಬನ್ನಂಜೆ ಬಾಬು ಅಮೀನ್ ರವರುಮಾತನಾಡುತ್ತಾ ತುಳುನಾಡಿನ ಮಣ್ಣಿನ ಶಕ್ತಿಗಳ ಅಂತಸತ್ವದ  ಪರಿಚಯವನ್ನು ಮಾಡುತ್ತಾ ಕೊರೊನಾ ಕಾಲಘಟ್ಟದಲ್ಲಿ ಸಂಸ್ಥೆಯಸೇವಾಕಾರ್ಯವು ಬೇರೆ ಸಂಸ್ಥೆಗಳಿಗೆ ಮಾದರಿಯಾಗಲಿ  ಎಂದು ಹಾರೈಸಿದರು. ಶ್ರೀ ಭಾಸ್ಕರ ಸುವರ್ಣ ಇವರು ಕಾರ್ಯಕ್ರಮವನ್ನುನಿರ್ವಹಿಸಿ ಸ್ವಾಗತಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಧನ್ಯವಾದ ಸಮರ್ಪಿಸಿದಕಾರ್ಯಕ್ರಮದಲ್ಲಿ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಶ್ರೀ ರವಿರಾಜ್ ಕುಮಾರ್ , ಮಂಜೇಶ್ ಕುಮಾರ್ , ಯುವವಾಹಿನಿಗರೋಡಿ ಗೈಸ್  ಗುರುಬೆಳದಿಂಗಳು ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಸಾಮಾಜಿಕ ಸೇವಾ ಸಂಸ್ಥೆಯಲ್ಲಿ ಆತ್ಮ ಸಮರ್ಪಣಾಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಗುರು ಬೆಳದಿಂಗಳು ಸಂಸ್ಥೆಯ ಮಾನವೀಯ ಮೌಲ್ಯದ ಕಾರ್ಯಗಳು ಹೊಸಭಾಷ್ಯವನ್ನು ಬರೆದಂತಾಗಿದೆ.ಕಳೆದ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ 350 ಕಿಂಟ್ವಾಲ್ ಅಕ್ಕಿ ಹಾಗೂ ಪ್ರತಿ ದಿನ 1200 ಜನರಿಗೆಊಟದ ವ್ಯವಸ್ಥೆಯನ್ನು  ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಿರ್ವಹಿಸಲ್ಪಟ್ಟಿದ್ದು ಜನಮನ್ನಣೆಗೆ ಪಾತ್ರವಾಗಿರುತ್ತದೆ. ಗುರುಬೆಳದಿಂಗಳು ಸಂಸ್ಥೆಯು ಕೇವಲ ಜಿಲ್ಲೆಗೆ ಸೀಮಿತವಾಗದೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿ ಮನುಕುಲದ ಅಭಿವೃದ್ದಿಗೆನಾರಾಯಣಗುರುಗಳು ನೀಡಿದ ಕೊಡುಗೆಯನ್ನು ಮುಂದುವರೆಸುವ ಶಕ್ತಿಯಾಗಿ ಮೂಡಿಬರಲೆಂದು ಹಾರೈಸುತ್ತೇವೆ.

ಬರಹ : ಪಾಂಡು ಕೋಟ್ಯಾನ್ ಕೆಳಾರ್ಕಳಬೆಟ್ಟು

 

 


Share:

More Posts

Category

Send Us A Message

Related Posts

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ, ತಾಲೂಕು ಮಟ್ಟದ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಬೆಳ್ತಂಗಡಿ ತಾಲೂಕಿನಲ್ಲಿ ಗೆಜ್ಜೆಗಿರಿ ಜಾತ್ರೋತ್ಸವದ ವಲಯ ಸಮಿತಿ ಗಳನ್ನು ರಚಿಸಿ ಗ್ರಾಮ ಮಟ್ಟದಲ್ಲಿ ಸಮಾಜದ ಎಲ್ಲಾ ಸಂಘಟನೆಗಳು ಒಗ್ಗಟ್ಟಿನ ಮೂಲಕ ಸಂಘಟನಾತ್ಮಕವಾಗಿ ಕೆಲಸ ಮಾಡಲು ನಿರ್ಧಾರ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ


Read More »