TOP STORIES:

ಮಾನವೀಯ ಮೌಲ್ಯಗೆ ಹೊಸ ಭಾಷ್ಯ ಬರೆದ ಕುದ್ರೋಳಿಯ ಗುರು ಬೆಳದಿಂಗಳು ಸೇವಾ ಸಂಸ್ಥೆ


ಮಾನವೀಯ ಮೌಲ್ಯಗೆ ಹೊಸ ಭಾಷ್ಯ ಬರೆದ ಕುದ್ರೋಳಿಯ ಗುರು ಬೆಳದಿಂಗಳು ಸೇವಾ ಸಂಸ್ಥೆ                

ಗರೋಡಿ ಅರ್ಚಕರಿಗೆ ಆಹಾರ ಸಾಮಾಗ್ರಿ ವಿತರಣೆ

  ಧಾರ್ಮಿಕ ಕ್ಷೇತ್ರಗಳನ್ನು ಮಾನವ  ಕಲ್ಯಾಣ ಕೇಂದ್ರಗಳನ್ನು  ರೂಪಿಸಬೇಕು ಎಂಬ ಮಹತ್ವದ ಉದ್ದೇಶವನ್ನು ಇಟ್ಟುಕೊಂಡ ಬ್ರಹ್ಮಶ್ರೀನಾರಾಯಣ ಗುರುಗಳಿಂದ ಸ್ಥಾಪನೆಗೊಂಡ  ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ಕೇಂದ್ರಿಕರಿಸಿಕೊಂಡು ಮಾನವತಾವಾದಿನಿಷ್ಕಲಂಕ ವ್ಯಕ್ತಿತ್ವದ ಶ್ರೀ ಬಿ.ಜನಾರ್ಧನ ಪೂಜಾರಿ ಇವರ ಮಾರ್ಗದರ್ಶನದಲ್ಲಿ ಜನಪರ ಕಾಳಜಿಯ ಬಹುಮುಖ  ವ್ಯಕ್ತಿತ್ವದನ್ಯಾಯವಾದಿ ಶ್ರೀ ಪದ್ಮರಾಜ್ ರವರ ನೇತೃತ್ವದಲ್ಲಿ  ರಚಿತವಾದ  ಸಂಸ್ಥೆಯೇ ಗುರು ಬೆಳದಿಂಗಳು ಸೇವಾ ಸಂಸ್ಥೆ .  ಕೋರೊನಾಸಂಕಷ್ಟದ ಕಾಲಘಟ್ಟದಲ್ಲಿ  ಸರಕಾರಿ ವ್ಯವಸ್ಥೆಗಳು ಜನರ ಬವಣೆಯನ್ನು ನೀಗಿಸಲು ಹಲವಾರು ಯೋಜನೆಗಳನ್ನು  ರೂಪಿಸಿದರೂಆರ್ಹ ಫಲಾನುಭವಿಗಳನ್ನು ಪೂರ್ಣ ಪ್ರಮಾಣದಲ್ಲಿ  ತಲುಪುವುದು ಅಸಾಧ್ಯವಾಗುತ್ತಿರುವುದು ಕಾಣಬಹುದಾಗಿದೆ.ಸಾಮಾಜಿಕವಾದಮಹತ್ತರವಾದ ಹೊಣೆಗಾರಿಕೆಯಿಂದ ಗುರುತಿಸಿಕೊಂಡ ಗುರುಬೆಳದಿಂಗಳು ಸಂಸ್ಥೆ ಸಾಮಾಜಿಕ ಹಾಗು ಆರ್ಥಿಕ ಮತ್ತು ಆರೋಗ್ಯಸೇವಾ ವಲಯದಲ್ಲಿ ಸಹಾಯಹಸ್ತವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ವ್ಯವಸ್ಥಿತವಾಗಿ ನೀಡುತಿದ್ದು ಸಂಕಷ್ಟಕಾಲಘಟ್ಟದಲ್ಲಿ ಗರೋಡಿಯಲ್ಲಿ ಪೂ ಪೂಜನೆಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಪೂಜಾರಿಗಳಿಗೆ ದೈನಂದಿನ ಉಪಯೋಗಕ್ಕೆಪೂರಕವಾಗಿ ಆಹಾರ ಸಾಮಾಗ್ರಿಗಳನ್ನು ಒದಗಿಸುವ ಕುರಿತು ಸರಕಾರಿ ಆಡಳಿತಕ್ಕೆ ಸೇವಾ ಸಂಘಗಳು ಮನವಿಯನ್ನು ಸಲ್ಲಿಸಿದ್ದರೂಕೂಡಾ ಕನಿಷ್ಟ ಸ್ಪಂದನೆಯು ಸಿಗದೇ ಇರುವ ಸಮಯದಲ್ಲಿ ಗುರು ಬೆಳದಿಂಗಳ ಸಂಸ್ಥೆಯ ಉಪಾಧ್ಯಾಕ್ಷರಾದ ಶ್ರೀ ರಘುನಾಥಮಾಬಿಯಾನ್ ಇವರ ಸಮಯೋಚಿತ ನಿಲುವುಗಳನ್ನು ಶ್ರೀ ಪದ್ಮರಾಜ್ ಇವರ ಗಮನಕ್ಕೆ ತಂದಿದ್ದು, ಕ್ಷೀಪ್ರವಾಗಿ ಪ್ರತಿಕ್ರಿಯಿಸಿದಲ್ಲದೇಸಂಸ್ಥೆಯ ವತಿಯಿಂದಲೆ ಸಹಾಯ ಹಸ್ತವನ್ನು ನೀಡುವುದನ್ನು ಪ್ರಕಟಿಸಿ ಕಾರ್ಯತತ್ಪರವಾಗಿ ತಮ್ಮ ಸಂಗಡಿಗರನ್ನು ಒಡಗೂಡಿಸಿಗರೋಡಿ ಗೈಸ್ ಸಂಸ್ಥೆಯು ನೀಡಿದ ಆರ್ಹ ಪಲಾನುಭವಿಗಳ ಪಟ್ಟಿಯನ್ನು ಪರಿಗಣಿಸಿ  ಕೇವಲ 2 ದಿನಗಳಲ್ಲಿ ಸರಿ ಸುಮಾರು 72 ಕ್ಕೂಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ತಯಾರಿಸಿ ದಿನಾಂಕ 30/05/2021 ರಂದು ಉಡುಪಿಯ ಕಿನ್ನಿಮೂಲ್ಕಿ ಬೆಮ್ಮೆರ್ಬೈದರ್ಲೆ ಗರೋಡಿಯಲ್ಲಿ ಹಿರಿಯರಾದ ಬನ್ನಂಜೆ ಬಾಬು ಅಮೀನ್, ಉಡುಪಿ ವೃತ್ತ ನೀರಿಕ್ಷಕರಾದ ಶ್ರೀ ಮಂಜುನಾಥ ,ಬಿಲ್ಲವ ಯುವವೇದಿಕೆಯ  ಪ್ರವೀಣ ಎಂ ಪೂಜಾರಿ ಯುವವಾಹಿನಿಯ ಪ್ರಮುಖರು ಹಾಗೂ ಗರೋಡಿ ಗೈಸ್ ಸದಸ್ಯರುಗಳ  ಸಮ್ಮುಖದಲ್ಲಿಉಡುಪಿ ಜಿಲ್ಲೆಯ ಗರೋಡಿಗಳ ಪೂ ಪೂಜನೆಯ ಅರ್ಚಕರಿಗೆ ಸಾಂಕೇತಿಕವಾಗಿ ಅಹಾರ ಸಾಮಾಗ್ರಿಗಳ ಕಿಟ್ ಗಳನ್ನುಹಸ್ತಾಂತರಿಸಲಾಯಿತು. ಗುರು ಬೆಳಂದಿಗಳ ಸೇವಾ ಸಂಸ್ಥೆಯ ವೈಶಿಷ್ಟ್ಯ ಪೂರ್ಣ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಆರ್ಥಿಕವಾಗಿ ಸಬಲರುಳ್ಳವರು ದುರ್ಬಲ ವ್ಯಕ್ತಿಗಳಿಗೆ ಸಾಹಾಯ ಹಸ್ತ ನೀಡುವುದಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನುಸಜ್ಜುಗೊಳಿಸಿ ತರಬೇತು ನೀಡಲು ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥರವರು  ಕರೆ ನೀಡಿದರು. ಶ್ರೀ ಪದ್ಮರಾಜ್ ರವರುಮಾತನಾಡುತ್ತಾ ಗುರು ಬೆಳಂದಿಗಳು ಸೇವಾ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರಿಸುತ್ತಾ ಸಂಸ್ಥೆಯು  ಸದಾಕಾಲದುರ್ಬಲರ ಶೋಷಿತರ ಪರವಾದ ಧ್ವನಿಯಾಗಿ  ಇರುತ್ತದೆ ಎಂಬ ಭರವಸೆಯನ್ನು ನೀಡಿದರು. ಬನ್ನಂಜೆ ಬಾಬು ಅಮೀನ್ ರವರುಮಾತನಾಡುತ್ತಾ ತುಳುನಾಡಿನ ಮಣ್ಣಿನ ಶಕ್ತಿಗಳ ಅಂತಸತ್ವದ  ಪರಿಚಯವನ್ನು ಮಾಡುತ್ತಾ ಕೊರೊನಾ ಕಾಲಘಟ್ಟದಲ್ಲಿ ಸಂಸ್ಥೆಯಸೇವಾಕಾರ್ಯವು ಬೇರೆ ಸಂಸ್ಥೆಗಳಿಗೆ ಮಾದರಿಯಾಗಲಿ  ಎಂದು ಹಾರೈಸಿದರು. ಶ್ರೀ ಭಾಸ್ಕರ ಸುವರ್ಣ ಇವರು ಕಾರ್ಯಕ್ರಮವನ್ನುನಿರ್ವಹಿಸಿ ಸ್ವಾಗತಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಧನ್ಯವಾದ ಸಮರ್ಪಿಸಿದಕಾರ್ಯಕ್ರಮದಲ್ಲಿ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಶ್ರೀ ರವಿರಾಜ್ ಕುಮಾರ್ , ಮಂಜೇಶ್ ಕುಮಾರ್ , ಯುವವಾಹಿನಿಗರೋಡಿ ಗೈಸ್  ಗುರುಬೆಳದಿಂಗಳು ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಸಾಮಾಜಿಕ ಸೇವಾ ಸಂಸ್ಥೆಯಲ್ಲಿ ಆತ್ಮ ಸಮರ್ಪಣಾಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಗುರು ಬೆಳದಿಂಗಳು ಸಂಸ್ಥೆಯ ಮಾನವೀಯ ಮೌಲ್ಯದ ಕಾರ್ಯಗಳು ಹೊಸಭಾಷ್ಯವನ್ನು ಬರೆದಂತಾಗಿದೆ.ಕಳೆದ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ 350 ಕಿಂಟ್ವಾಲ್ ಅಕ್ಕಿ ಹಾಗೂ ಪ್ರತಿ ದಿನ 1200 ಜನರಿಗೆಊಟದ ವ್ಯವಸ್ಥೆಯನ್ನು  ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಿರ್ವಹಿಸಲ್ಪಟ್ಟಿದ್ದು ಜನಮನ್ನಣೆಗೆ ಪಾತ್ರವಾಗಿರುತ್ತದೆ. ಗುರುಬೆಳದಿಂಗಳು ಸಂಸ್ಥೆಯು ಕೇವಲ ಜಿಲ್ಲೆಗೆ ಸೀಮಿತವಾಗದೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿ ಮನುಕುಲದ ಅಭಿವೃದ್ದಿಗೆನಾರಾಯಣಗುರುಗಳು ನೀಡಿದ ಕೊಡುಗೆಯನ್ನು ಮುಂದುವರೆಸುವ ಶಕ್ತಿಯಾಗಿ ಮೂಡಿಬರಲೆಂದು ಹಾರೈಸುತ್ತೇವೆ.

ಬರಹ : ಪಾಂಡು ಕೋಟ್ಯಾನ್ ಕೆಳಾರ್ಕಳಬೆಟ್ಟು

 

 


Related Posts

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »