TOP STORIES:

FOLLOW US

ಮಾನವೀಯ ಮೌಲ್ಯಗೆ ಹೊಸ ಭಾಷ್ಯ ಬರೆದ ಕುದ್ರೋಳಿಯ ಗುರು ಬೆಳದಿಂಗಳು ಸೇವಾ ಸಂಸ್ಥೆ


ಮಾನವೀಯ ಮೌಲ್ಯಗೆ ಹೊಸ ಭಾಷ್ಯ ಬರೆದ ಕುದ್ರೋಳಿಯ ಗುರು ಬೆಳದಿಂಗಳು ಸೇವಾ ಸಂಸ್ಥೆ                

ಗರೋಡಿ ಅರ್ಚಕರಿಗೆ ಆಹಾರ ಸಾಮಾಗ್ರಿ ವಿತರಣೆ

  ಧಾರ್ಮಿಕ ಕ್ಷೇತ್ರಗಳನ್ನು ಮಾನವ  ಕಲ್ಯಾಣ ಕೇಂದ್ರಗಳನ್ನು  ರೂಪಿಸಬೇಕು ಎಂಬ ಮಹತ್ವದ ಉದ್ದೇಶವನ್ನು ಇಟ್ಟುಕೊಂಡ ಬ್ರಹ್ಮಶ್ರೀನಾರಾಯಣ ಗುರುಗಳಿಂದ ಸ್ಥಾಪನೆಗೊಂಡ  ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ಕೇಂದ್ರಿಕರಿಸಿಕೊಂಡು ಮಾನವತಾವಾದಿನಿಷ್ಕಲಂಕ ವ್ಯಕ್ತಿತ್ವದ ಶ್ರೀ ಬಿ.ಜನಾರ್ಧನ ಪೂಜಾರಿ ಇವರ ಮಾರ್ಗದರ್ಶನದಲ್ಲಿ ಜನಪರ ಕಾಳಜಿಯ ಬಹುಮುಖ  ವ್ಯಕ್ತಿತ್ವದನ್ಯಾಯವಾದಿ ಶ್ರೀ ಪದ್ಮರಾಜ್ ರವರ ನೇತೃತ್ವದಲ್ಲಿ  ರಚಿತವಾದ  ಸಂಸ್ಥೆಯೇ ಗುರು ಬೆಳದಿಂಗಳು ಸೇವಾ ಸಂಸ್ಥೆ .  ಕೋರೊನಾಸಂಕಷ್ಟದ ಕಾಲಘಟ್ಟದಲ್ಲಿ  ಸರಕಾರಿ ವ್ಯವಸ್ಥೆಗಳು ಜನರ ಬವಣೆಯನ್ನು ನೀಗಿಸಲು ಹಲವಾರು ಯೋಜನೆಗಳನ್ನು  ರೂಪಿಸಿದರೂಆರ್ಹ ಫಲಾನುಭವಿಗಳನ್ನು ಪೂರ್ಣ ಪ್ರಮಾಣದಲ್ಲಿ  ತಲುಪುವುದು ಅಸಾಧ್ಯವಾಗುತ್ತಿರುವುದು ಕಾಣಬಹುದಾಗಿದೆ.ಸಾಮಾಜಿಕವಾದಮಹತ್ತರವಾದ ಹೊಣೆಗಾರಿಕೆಯಿಂದ ಗುರುತಿಸಿಕೊಂಡ ಗುರುಬೆಳದಿಂಗಳು ಸಂಸ್ಥೆ ಸಾಮಾಜಿಕ ಹಾಗು ಆರ್ಥಿಕ ಮತ್ತು ಆರೋಗ್ಯಸೇವಾ ವಲಯದಲ್ಲಿ ಸಹಾಯಹಸ್ತವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ವ್ಯವಸ್ಥಿತವಾಗಿ ನೀಡುತಿದ್ದು ಸಂಕಷ್ಟಕಾಲಘಟ್ಟದಲ್ಲಿ ಗರೋಡಿಯಲ್ಲಿ ಪೂ ಪೂಜನೆಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಪೂಜಾರಿಗಳಿಗೆ ದೈನಂದಿನ ಉಪಯೋಗಕ್ಕೆಪೂರಕವಾಗಿ ಆಹಾರ ಸಾಮಾಗ್ರಿಗಳನ್ನು ಒದಗಿಸುವ ಕುರಿತು ಸರಕಾರಿ ಆಡಳಿತಕ್ಕೆ ಸೇವಾ ಸಂಘಗಳು ಮನವಿಯನ್ನು ಸಲ್ಲಿಸಿದ್ದರೂಕೂಡಾ ಕನಿಷ್ಟ ಸ್ಪಂದನೆಯು ಸಿಗದೇ ಇರುವ ಸಮಯದಲ್ಲಿ ಗುರು ಬೆಳದಿಂಗಳ ಸಂಸ್ಥೆಯ ಉಪಾಧ್ಯಾಕ್ಷರಾದ ಶ್ರೀ ರಘುನಾಥಮಾಬಿಯಾನ್ ಇವರ ಸಮಯೋಚಿತ ನಿಲುವುಗಳನ್ನು ಶ್ರೀ ಪದ್ಮರಾಜ್ ಇವರ ಗಮನಕ್ಕೆ ತಂದಿದ್ದು, ಕ್ಷೀಪ್ರವಾಗಿ ಪ್ರತಿಕ್ರಿಯಿಸಿದಲ್ಲದೇಸಂಸ್ಥೆಯ ವತಿಯಿಂದಲೆ ಸಹಾಯ ಹಸ್ತವನ್ನು ನೀಡುವುದನ್ನು ಪ್ರಕಟಿಸಿ ಕಾರ್ಯತತ್ಪರವಾಗಿ ತಮ್ಮ ಸಂಗಡಿಗರನ್ನು ಒಡಗೂಡಿಸಿಗರೋಡಿ ಗೈಸ್ ಸಂಸ್ಥೆಯು ನೀಡಿದ ಆರ್ಹ ಪಲಾನುಭವಿಗಳ ಪಟ್ಟಿಯನ್ನು ಪರಿಗಣಿಸಿ  ಕೇವಲ 2 ದಿನಗಳಲ್ಲಿ ಸರಿ ಸುಮಾರು 72 ಕ್ಕೂಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ತಯಾರಿಸಿ ದಿನಾಂಕ 30/05/2021 ರಂದು ಉಡುಪಿಯ ಕಿನ್ನಿಮೂಲ್ಕಿ ಬೆಮ್ಮೆರ್ಬೈದರ್ಲೆ ಗರೋಡಿಯಲ್ಲಿ ಹಿರಿಯರಾದ ಬನ್ನಂಜೆ ಬಾಬು ಅಮೀನ್, ಉಡುಪಿ ವೃತ್ತ ನೀರಿಕ್ಷಕರಾದ ಶ್ರೀ ಮಂಜುನಾಥ ,ಬಿಲ್ಲವ ಯುವವೇದಿಕೆಯ  ಪ್ರವೀಣ ಎಂ ಪೂಜಾರಿ ಯುವವಾಹಿನಿಯ ಪ್ರಮುಖರು ಹಾಗೂ ಗರೋಡಿ ಗೈಸ್ ಸದಸ್ಯರುಗಳ  ಸಮ್ಮುಖದಲ್ಲಿಉಡುಪಿ ಜಿಲ್ಲೆಯ ಗರೋಡಿಗಳ ಪೂ ಪೂಜನೆಯ ಅರ್ಚಕರಿಗೆ ಸಾಂಕೇತಿಕವಾಗಿ ಅಹಾರ ಸಾಮಾಗ್ರಿಗಳ ಕಿಟ್ ಗಳನ್ನುಹಸ್ತಾಂತರಿಸಲಾಯಿತು. ಗುರು ಬೆಳಂದಿಗಳ ಸೇವಾ ಸಂಸ್ಥೆಯ ವೈಶಿಷ್ಟ್ಯ ಪೂರ್ಣ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಆರ್ಥಿಕವಾಗಿ ಸಬಲರುಳ್ಳವರು ದುರ್ಬಲ ವ್ಯಕ್ತಿಗಳಿಗೆ ಸಾಹಾಯ ಹಸ್ತ ನೀಡುವುದಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನುಸಜ್ಜುಗೊಳಿಸಿ ತರಬೇತು ನೀಡಲು ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥರವರು  ಕರೆ ನೀಡಿದರು. ಶ್ರೀ ಪದ್ಮರಾಜ್ ರವರುಮಾತನಾಡುತ್ತಾ ಗುರು ಬೆಳಂದಿಗಳು ಸೇವಾ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರಿಸುತ್ತಾ ಸಂಸ್ಥೆಯು  ಸದಾಕಾಲದುರ್ಬಲರ ಶೋಷಿತರ ಪರವಾದ ಧ್ವನಿಯಾಗಿ  ಇರುತ್ತದೆ ಎಂಬ ಭರವಸೆಯನ್ನು ನೀಡಿದರು. ಬನ್ನಂಜೆ ಬಾಬು ಅಮೀನ್ ರವರುಮಾತನಾಡುತ್ತಾ ತುಳುನಾಡಿನ ಮಣ್ಣಿನ ಶಕ್ತಿಗಳ ಅಂತಸತ್ವದ  ಪರಿಚಯವನ್ನು ಮಾಡುತ್ತಾ ಕೊರೊನಾ ಕಾಲಘಟ್ಟದಲ್ಲಿ ಸಂಸ್ಥೆಯಸೇವಾಕಾರ್ಯವು ಬೇರೆ ಸಂಸ್ಥೆಗಳಿಗೆ ಮಾದರಿಯಾಗಲಿ  ಎಂದು ಹಾರೈಸಿದರು. ಶ್ರೀ ಭಾಸ್ಕರ ಸುವರ್ಣ ಇವರು ಕಾರ್ಯಕ್ರಮವನ್ನುನಿರ್ವಹಿಸಿ ಸ್ವಾಗತಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಧನ್ಯವಾದ ಸಮರ್ಪಿಸಿದಕಾರ್ಯಕ್ರಮದಲ್ಲಿ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಶ್ರೀ ರವಿರಾಜ್ ಕುಮಾರ್ , ಮಂಜೇಶ್ ಕುಮಾರ್ , ಯುವವಾಹಿನಿಗರೋಡಿ ಗೈಸ್  ಗುರುಬೆಳದಿಂಗಳು ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಸಾಮಾಜಿಕ ಸೇವಾ ಸಂಸ್ಥೆಯಲ್ಲಿ ಆತ್ಮ ಸಮರ್ಪಣಾಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಗುರು ಬೆಳದಿಂಗಳು ಸಂಸ್ಥೆಯ ಮಾನವೀಯ ಮೌಲ್ಯದ ಕಾರ್ಯಗಳು ಹೊಸಭಾಷ್ಯವನ್ನು ಬರೆದಂತಾಗಿದೆ.ಕಳೆದ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ 350 ಕಿಂಟ್ವಾಲ್ ಅಕ್ಕಿ ಹಾಗೂ ಪ್ರತಿ ದಿನ 1200 ಜನರಿಗೆಊಟದ ವ್ಯವಸ್ಥೆಯನ್ನು  ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಿರ್ವಹಿಸಲ್ಪಟ್ಟಿದ್ದು ಜನಮನ್ನಣೆಗೆ ಪಾತ್ರವಾಗಿರುತ್ತದೆ. ಗುರುಬೆಳದಿಂಗಳು ಸಂಸ್ಥೆಯು ಕೇವಲ ಜಿಲ್ಲೆಗೆ ಸೀಮಿತವಾಗದೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿ ಮನುಕುಲದ ಅಭಿವೃದ್ದಿಗೆನಾರಾಯಣಗುರುಗಳು ನೀಡಿದ ಕೊಡುಗೆಯನ್ನು ಮುಂದುವರೆಸುವ ಶಕ್ತಿಯಾಗಿ ಮೂಡಿಬರಲೆಂದು ಹಾರೈಸುತ್ತೇವೆ.

ಬರಹ : ಪಾಂಡು ಕೋಟ್ಯಾನ್ ಕೆಳಾರ್ಕಳಬೆಟ್ಟು

 

 


Share:

More Posts

Category

Send Us A Message

Related Posts

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »