TOP STORIES:

FOLLOW US

‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!!


‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!!

ಒಬ್ಬ ವ್ಯಕ್ತಿ ಅನೇಕ ಸವಾಲುಗಳನ್ನ ಎದುರಿಸಿ ಮುನ್ನಡೆಯುತ್ತಿದ್ದಾನೆ ಎಂದಾದರೆ ಆತ ಸಾಧನೆಯ ಹಾದಿಯಲ್ಲಿ ಹೊರಟಿದ್ದಾನೆ ಎಂದರ್ಥ. ಅಂದಹಾಗೆ ಅಂತಹದೇ ಸಾಧನೆಯ ಹಾದಿಯಲ್ಲಿ ಶಿಖರವನ್ನೇರಿದ ಓರ್ವ ವ್ಯಕ್ತಿ ಇದೀಗ ಜನಪ್ರೀಯತೆಯನ್ನ ಪಡೆದಿದ್ದಾನೆ. ಹೌದು ನಾವು ಹೇಳ ಹೊರಟಿರುವುದು ಉಡುಪಿಯ ಕಾಡೂರು ಮೂಲದ ದಯಾನಂದ ಮತ್ತು ಸುನೀತಾ ದಂಪತಿಯ ಪುತ್ರ ಸಂಜಯ್ ಅವ್ರ ಬಗ್ಗೆ. ಸಂಜಯ್ ಓದಿರೋದು ಡಿಪ್ಲೋಮ ಇನ್ ಸಯನ್ಸ್. ಹುಟ್ಟಿನಿಂದಲೇ ಒಂದಲ್ಲ ಒಂದು ಕ್ಷೇತ್ರದಲ್ಲಿ ಏನಾದ್ರು ಒಂದು ಸಾಧನೆಯನ್ನ ಮಾಡಲೇಬೇಕು ಅನ್ನೋ ಛಲವನ್ನ ಹೊಂದಿದ್ದ ಸಂಜಯ್ ಗೆ ‘ಮೈಕ್ರೋ ಆರ್ಟ್’ ತನ್ನಲ್ಲಿನ ಕಲೆಯನ್ನ ಪ್ರದರ್ಶಿಸಿತು. ಜೊತೆಗೆ ಜೀವನದಲ್ಲಿ ಸಾಧನೆಯನ್ನ ಮಾಡುವ ಛಲವನ್ನ ತೋರಿಸಿಕೊಟ್ಟಿತು. ಯಸ್ ಮೈಕ್ರೋ ಆರ್ಟ್ ಅರ್ಥಾತ್ ಸೂಕ್ಷ್ಮ ಕಲಾ ಕ್ಷೇತ್ರ. ಇದೇನು ಅಷ್ಟು ಸುಲಭದ ಕಲೆಯಲ್ಲ. ಅದಕ್ಕೆ ಅದರದೇ ರೀತಿ ಸೂಕ್ಷ್ಮ ಮತ್ತು ಕಠಿಣ ಪರಿಶ್ರಮಬೇಕು. ಚೂರು ಎಡವಿದರೂ ಕಲಾಕೃತಿ ಹಾಗೂ ಮಾಡಿದ ಪರಿಶ್ರಮ ವ್ಯರ್ಥವಾಗಿಬಿಡುತ್ತೆ. ಅಷ್ಟು ಸೂಕ್ಷ್ಮ ಕಲೆ ಇದು.

ತಾತ ಕೊರಗಪ್ಪ ಮತ್ತು ಅಜ್ಜಿ ಸುಂದರಮ್ಮರ ಮೂಲಕ ಮೈಕ್ರೋ ಆರ್ಟ್ ಮಾಡಲು ಸ್ಫೂರ್ತಿ ಪಡೆದ ಇವರಿಗೆ ಆರಂಭದಲ್ಲಿ ಬೆಂಬಲಕ್ಕೆ ನಿಂತವರು ಕೇವಲ ಕುಟುಂಬದವರು ಅರ್ಥಾತ್ ಸಹೋದರರು ಮತ್ತು ಪಾಲಕರು ಹಾಗೂ ಕೆಲವು ಗೆಳೆಯರು ಮಾತ್ರ. ಹಾಗಾಗಿ ಸಂಜಯ್ ಇವತ್ತಿಗೂ ಅವರಿಗೆ ಅಭಾರಿಯಾಗಿ ನನ್ನ ಸಾಧನೆಯ ಪರಿಶ್ರಮಕ್ಕೆ ಹೆಜ್ಜೆ ಹಾಕಿದವರು ಎನ್ನುತ್ತಾರೆ.

ಅಂದಹಾಗೆ ಸಂಜಯ್ ಇದುವರೆಗೂ 2 ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, 1 ವರ್ಲ್ಡ್ ಕಿಂಗ್ಸ್, ಮತ್ತು 2 ಗಿನ್ನಿಸ್ ದಾಖಲೆ ಮಾಡಿದ್ದಾರೆ. ಇವರ ಸಾಧನೆ ಗುರುತಿಸಿ ಇದುವರೆಗೂ ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ತಲಾ ಎರಡು, ಜಿಲ್ಲಾ ಮಟ್ಟದಲ್ಲಿ 1 ಸನ್ಮಾನ (ಸಂಘಟನೆಗಳ ಮೂಲಕ ), ಸ್ಥಳೀಯ ಆಡಳಿತ (ಗ್ರಾಮ ಪಂಚಾಯತ್ )ವತಿಯಿಂದ 5 ಸನ್ಮಾನ ಸೇರಿದಂತೆ 35ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದಾರೆ. ಜೊತೆಗೆ ಮಂಗಳೂರಿಯನ್.ಕಾಮ್ ಮತ್ತು ಡೈಜಿವರ್ಲ್ಡ್ ಚಾನೆಲ್ ನ ವೆಬ್ಸೈಟ್ ನಲ್ಲಿ ಇವರ ಸಾಧನೆ ಕುರಿತು ಲೇಖನ ಪ್ರಕಟವಾಗಿತ್ತು.

ಇಷ್ಟೇ ಅಲ್ಲ ಇವರು ಇದುವರೆಗೂ 25 ಮಣ್ಣಿನ ಕಲಾಕೃತಿ, 15-20 ಸೋಪ್ ಆರ್ಟ್, 100ಕ್ಕೂ ಹೆಚ್ಚು ಚಾಕ್ ಆರ್ಟ್, 25-30 ಪೆನ್ಸಿಲ್ ಆರ್ಟ್, 30 ಪೆನ್ಸಿಲ್ ಗಣೇಶ ಮೂರ್ತಿ ಮಾಡಿದ್ದಾರೆ. ಇವರೊಬ್ಬ ಬಹುಮುಖ ಪ್ರತಿಭೆ. ‘ಚಿನ್ಮಯ’ ಹೆಸರಿನ ಒಂದು ಕವನ ಸಂಕಲನವನ್ನು ಕೂಡಾ ಬರೆದಿದ್ದು ಹಲವಾರು ಪೇಂಟಿಂಗ್ಸ್ ಕೂಡಾ ಮಾಡಿದ್ದಾರೆ.

ಇನ್ನೇನು ಸಂಜಯ್ 2 ಗಿನ್ನಿಸ್ ದಾಖಲೆ ಬರೆದಿದ್ದಾರೆ ಅಂದ ಮಾತ್ರಕ್ಕೆ ಇವರ ಆರಂಭಿಕ ಜೀವನ ಹೂವಿನ ಹಾಸಿಗೆಯಾಗಿತ್ತು ಅಂತ ಭಾವಿಸಿದ್ದರೆ ಅದು ಮೂರ್ಖತನ. ಯಾಕಂದ್ರೆ ಅವರ ಬದುಕಿನುದ್ದಕ್ಕೂ ಕಷ್ಟಗಳನ್ನೇ ಅನುಭವಿಸಿ ಮೇಲೆ ಬಂದವರು. ಹಾಗಾಗಿ ಇಂತಹ ಕಲಾವಿದರಿಗೆ ಇನ್ನಷ್ಟು ಬೆಂಬಲ ದೊರೆಯಲಿ ಮತ್ತು ಅದರಿಂದ ಇನ್ನಷ್ಟು ಸಾಧನೆ ಮಾಡಲು ಶಕ್ತಿ ಸ್ಫೂರ್ತಿ ದೊರೆಯಲಿ ಎನ್ನುವ ಆಶಯ ನಮ್ಮದು.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »