TOP STORIES:

FOLLOW US

‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!!


‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!!

ಒಬ್ಬ ವ್ಯಕ್ತಿ ಅನೇಕ ಸವಾಲುಗಳನ್ನ ಎದುರಿಸಿ ಮುನ್ನಡೆಯುತ್ತಿದ್ದಾನೆ ಎಂದಾದರೆ ಆತ ಸಾಧನೆಯ ಹಾದಿಯಲ್ಲಿ ಹೊರಟಿದ್ದಾನೆ ಎಂದರ್ಥ. ಅಂದಹಾಗೆ ಅಂತಹದೇ ಸಾಧನೆಯ ಹಾದಿಯಲ್ಲಿ ಶಿಖರವನ್ನೇರಿದ ಓರ್ವ ವ್ಯಕ್ತಿ ಇದೀಗ ಜನಪ್ರೀಯತೆಯನ್ನ ಪಡೆದಿದ್ದಾನೆ. ಹೌದು ನಾವು ಹೇಳ ಹೊರಟಿರುವುದು ಉಡುಪಿಯ ಕಾಡೂರು ಮೂಲದ ದಯಾನಂದ ಮತ್ತು ಸುನೀತಾ ದಂಪತಿಯ ಪುತ್ರ ಸಂಜಯ್ ಅವ್ರ ಬಗ್ಗೆ. ಸಂಜಯ್ ಓದಿರೋದು ಡಿಪ್ಲೋಮ ಇನ್ ಸಯನ್ಸ್. ಹುಟ್ಟಿನಿಂದಲೇ ಒಂದಲ್ಲ ಒಂದು ಕ್ಷೇತ್ರದಲ್ಲಿ ಏನಾದ್ರು ಒಂದು ಸಾಧನೆಯನ್ನ ಮಾಡಲೇಬೇಕು ಅನ್ನೋ ಛಲವನ್ನ ಹೊಂದಿದ್ದ ಸಂಜಯ್ ಗೆ ‘ಮೈಕ್ರೋ ಆರ್ಟ್’ ತನ್ನಲ್ಲಿನ ಕಲೆಯನ್ನ ಪ್ರದರ್ಶಿಸಿತು. ಜೊತೆಗೆ ಜೀವನದಲ್ಲಿ ಸಾಧನೆಯನ್ನ ಮಾಡುವ ಛಲವನ್ನ ತೋರಿಸಿಕೊಟ್ಟಿತು. ಯಸ್ ಮೈಕ್ರೋ ಆರ್ಟ್ ಅರ್ಥಾತ್ ಸೂಕ್ಷ್ಮ ಕಲಾ ಕ್ಷೇತ್ರ. ಇದೇನು ಅಷ್ಟು ಸುಲಭದ ಕಲೆಯಲ್ಲ. ಅದಕ್ಕೆ ಅದರದೇ ರೀತಿ ಸೂಕ್ಷ್ಮ ಮತ್ತು ಕಠಿಣ ಪರಿಶ್ರಮಬೇಕು. ಚೂರು ಎಡವಿದರೂ ಕಲಾಕೃತಿ ಹಾಗೂ ಮಾಡಿದ ಪರಿಶ್ರಮ ವ್ಯರ್ಥವಾಗಿಬಿಡುತ್ತೆ. ಅಷ್ಟು ಸೂಕ್ಷ್ಮ ಕಲೆ ಇದು.

ತಾತ ಕೊರಗಪ್ಪ ಮತ್ತು ಅಜ್ಜಿ ಸುಂದರಮ್ಮರ ಮೂಲಕ ಮೈಕ್ರೋ ಆರ್ಟ್ ಮಾಡಲು ಸ್ಫೂರ್ತಿ ಪಡೆದ ಇವರಿಗೆ ಆರಂಭದಲ್ಲಿ ಬೆಂಬಲಕ್ಕೆ ನಿಂತವರು ಕೇವಲ ಕುಟುಂಬದವರು ಅರ್ಥಾತ್ ಸಹೋದರರು ಮತ್ತು ಪಾಲಕರು ಹಾಗೂ ಕೆಲವು ಗೆಳೆಯರು ಮಾತ್ರ. ಹಾಗಾಗಿ ಸಂಜಯ್ ಇವತ್ತಿಗೂ ಅವರಿಗೆ ಅಭಾರಿಯಾಗಿ ನನ್ನ ಸಾಧನೆಯ ಪರಿಶ್ರಮಕ್ಕೆ ಹೆಜ್ಜೆ ಹಾಕಿದವರು ಎನ್ನುತ್ತಾರೆ.

ಅಂದಹಾಗೆ ಸಂಜಯ್ ಇದುವರೆಗೂ 2 ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, 1 ವರ್ಲ್ಡ್ ಕಿಂಗ್ಸ್, ಮತ್ತು 2 ಗಿನ್ನಿಸ್ ದಾಖಲೆ ಮಾಡಿದ್ದಾರೆ. ಇವರ ಸಾಧನೆ ಗುರುತಿಸಿ ಇದುವರೆಗೂ ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ತಲಾ ಎರಡು, ಜಿಲ್ಲಾ ಮಟ್ಟದಲ್ಲಿ 1 ಸನ್ಮಾನ (ಸಂಘಟನೆಗಳ ಮೂಲಕ ), ಸ್ಥಳೀಯ ಆಡಳಿತ (ಗ್ರಾಮ ಪಂಚಾಯತ್ )ವತಿಯಿಂದ 5 ಸನ್ಮಾನ ಸೇರಿದಂತೆ 35ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದಾರೆ. ಜೊತೆಗೆ ಮಂಗಳೂರಿಯನ್.ಕಾಮ್ ಮತ್ತು ಡೈಜಿವರ್ಲ್ಡ್ ಚಾನೆಲ್ ನ ವೆಬ್ಸೈಟ್ ನಲ್ಲಿ ಇವರ ಸಾಧನೆ ಕುರಿತು ಲೇಖನ ಪ್ರಕಟವಾಗಿತ್ತು.

ಇಷ್ಟೇ ಅಲ್ಲ ಇವರು ಇದುವರೆಗೂ 25 ಮಣ್ಣಿನ ಕಲಾಕೃತಿ, 15-20 ಸೋಪ್ ಆರ್ಟ್, 100ಕ್ಕೂ ಹೆಚ್ಚು ಚಾಕ್ ಆರ್ಟ್, 25-30 ಪೆನ್ಸಿಲ್ ಆರ್ಟ್, 30 ಪೆನ್ಸಿಲ್ ಗಣೇಶ ಮೂರ್ತಿ ಮಾಡಿದ್ದಾರೆ. ಇವರೊಬ್ಬ ಬಹುಮುಖ ಪ್ರತಿಭೆ. ‘ಚಿನ್ಮಯ’ ಹೆಸರಿನ ಒಂದು ಕವನ ಸಂಕಲನವನ್ನು ಕೂಡಾ ಬರೆದಿದ್ದು ಹಲವಾರು ಪೇಂಟಿಂಗ್ಸ್ ಕೂಡಾ ಮಾಡಿದ್ದಾರೆ.

ಇನ್ನೇನು ಸಂಜಯ್ 2 ಗಿನ್ನಿಸ್ ದಾಖಲೆ ಬರೆದಿದ್ದಾರೆ ಅಂದ ಮಾತ್ರಕ್ಕೆ ಇವರ ಆರಂಭಿಕ ಜೀವನ ಹೂವಿನ ಹಾಸಿಗೆಯಾಗಿತ್ತು ಅಂತ ಭಾವಿಸಿದ್ದರೆ ಅದು ಮೂರ್ಖತನ. ಯಾಕಂದ್ರೆ ಅವರ ಬದುಕಿನುದ್ದಕ್ಕೂ ಕಷ್ಟಗಳನ್ನೇ ಅನುಭವಿಸಿ ಮೇಲೆ ಬಂದವರು. ಹಾಗಾಗಿ ಇಂತಹ ಕಲಾವಿದರಿಗೆ ಇನ್ನಷ್ಟು ಬೆಂಬಲ ದೊರೆಯಲಿ ಮತ್ತು ಅದರಿಂದ ಇನ್ನಷ್ಟು ಸಾಧನೆ ಮಾಡಲು ಶಕ್ತಿ ಸ್ಫೂರ್ತಿ ದೊರೆಯಲಿ ಎನ್ನುವ ಆಶಯ ನಮ್ಮದು.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »