TOP STORIES:

ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಯುವ ಪ್ರತಿಭೆ ಅರ್ವಿಂದ್ ವಿವೇಕ್


ಒಬ್ಬ ವ್ಯಕ್ತಿ ತನ್ನ ನಿಸ್ವಾರ್ಥ ಸೇವೆಯಿಂದ ಇನ್ನೊಬ್ಬರ ಬದುಕಿನ ಚಿತ್ರಕ್ಕೆ ಬಣ್ಣದಿಂದ ಕೂಡಿದ ಕನಸುಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೋ ಆಗ ಮಾತ್ರ ವೇದಿಕೆ ಸಿಗುತ್ತದೆ ತನ್ನಲಿರುವ ಪ್ರತಿಭೆಯ ಜೊತೆಗೆ ಇನೊಬ್ಬರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟು ವೇದಿಕೆ ಕಲ್ಪಿಸಿಕೊಡುವ ಯುವ ಪ್ರತಿಭೆ ಅರ್ವಿಂದ್ ವಿವೇಕ್.
ಮಂಗಳೂರಿನ ಪುತ್ತುರ್ ನಲ್ಲಿ ಪುಟ್ಟ ಹಳ್ಳಿಯಲ್ಲಿ ಜನಿಸಿದ ಇವರು, ಬೆಳೆದ್ದದು ಬೆಳ್ತಂಗಡಿ ತಾಲೂಕಿನ ಮಡ್ಯಾಂತರು. ಸಣ್ಣ ವಯಸ್ಸಿನಿಂದಲೇ ಹಾಡುವುದು ಎಂದರೆ ಪಂಚಪ್ರಾಣ. ಮನೆಯಲ್ಲಿ ಯಾರ ಪ್ರೋತ್ಸಾಹ ಸಿಗಲಿಲ್ಲ ಆದರೂ ಸಂಗೀತದ ಹುಚ್ಚ ಬಿಡಲಿಲ್ಲ. ತುಳುಚಿತ್ರರಂಗ, ರಂಗ ಭೂಮಿಯಲ್ಲಿ ಹಾಡಲು ಮೊದಲು ಬಾರಿಗೆ ಅವಕಾಶ ಕಲ್ಪಿಸಿಕೊಟ್ಟು ಸ್ನೇಹ ಮ್ಯೂಸಿಕ್ ನ ಪ್ರಶಾಂತ್ ಭಾರದ್ವಾಜ್ ಇವರ ಜೊತೆ ಅನೇಕ ಕಾರ್ಯಕ್ರಮಗಲ್ಲಿ 400 ಕ್ಕೂ ಹೆಚ್ಚು ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ತೋರಿಸಿದ ಇವರು ಕಾರಣಾಂತರದಿಂದ ಸಂಗೀತದಿಂದ ದೂರಾನೇ ಉಳಿದರು.

ನಂತರ 2006 ರಲ್ಲಿ ಗಾಯನದ ಜೊತೆ ಸಂಗೀತ ನಿರ್ದೇಶಕರಾಗಿ ರಂಗಭೂಮಿ ಪ್ರವೇಶಮಾಡಿದ ಇವರು ಮತ್ತೆ ಹಿಂದೆ ನೋಡಲಿಲ್ಲ, ಒಂದು ಕಾಲದಲ್ಲಿ ನಾಟಕದಲ್ಲಿ ಹಿನ್ನಲೆ ಹಾಡುಗಾರ ನಾಗಿದ್ದ ಇವರು ನಾಟಕ ಸೂಪರ್ ಹಿಟ್ ಆಗುವುದರಲ್ಲಿ ಎರಡು ಮಾತಿಲ್ಲ ಮತ್ತು ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಡುಗಾರರು ಆಗಿದ್ದರು ಸ್ಥಳೀಯ ನಾಟಕ ನಿಂತು, ಟೀಮ್ ನಾಟಕ ಆದಾಗ ಲ್ಯಾಪ್ ಟಾಪ್ ಸಂಗೀತ ಶುರು ಆದಾಗ ರಂಗ ಭೂಮಿಯಿಂದ ದೂರ ಸರಿದು ಸಂಗೀತ ರಸ ಮಂಜರಿ ಕಾರ್ಯಕ್ರಮ ನೀಡಲು ಶುರು ಮಾಡಿದ ಇವರು ಅನೇಕ ಹೊಸ ಪ್ರತಿಭೆಗಳು ಪರಿಚಯ ಮಾಡಿ ಕೊಟ್ಟು ಅವರಿಗೆ ವೇದಿಕೆ ಕಲ್ಪಿಸಿ ಕೊಟ್ಟರು.

20ವರ್ಷದಿಂದ ಸಂಗೀತ ಕ್ಷೇತ್ರದಲ್ಲಿ ಇದ್ದ ಇವರು ಕಳೆದ ನಾಲ್ಕು ವರ್ಷದಿಂದ ಉತ್ತಮ ಸಂಗೀತ ನಿರೂಪಕರಾಗಿ ಹೆಸರು ಗಳಿಸಿದ್ದಾರೆ.

ಇಡೀ ಜಗತ್ತಿನಲ್ಲಿ ಮಹಾಮಾರಿ ಕೋರೋಣ ಬಂದು ಲಾಕ್ಡೌನಿಂದ ಬೇಸತ್ತ ಜನರ ಮನಸ್ಸನ್ನು ಮುದಗೊಳಿಸಲು ಸಂಗೀತ ಫೇಸ್ಬುಕ್ ಲೈವ್ ಪ್ರೋಗ್ರಾಮ್ ಪ್ರಾರಂಭಿಸಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ 40ಕ್ಕೂ ಹೆಚ್ಚು ಲೈವ್ ಪ್ರೋಗ್ರಾಮ್ ಯಶಸ್ವಿ ಮಾಡಿ ಅನೇಕ ಪ್ರತಿಭೆಗಳ ಪರಿಚಯ ಮಾಡಿ ಅವರಿಗೆ ಮುನ್ನಡೆಯಲು ಅವಕಾಶ ಮಾಡಿಕೊಟ್ಟ ಹೆಮ್ಮೆ ಇವರದ್ದು. ಇವರ ಈ ಲೈವ್ ಪ್ರೋಗ್ರಾಮ್ ಲಕ್ಷಾಂತರ ವೀಕ್ಷಕರು ನೋಡುವುದರ ಮೂಲಕ ಇವರ ಹೆಸರು ಇನ್ನಷ್ಟು ಎತ್ತರಕ್ಕೆ ಬೆಳೆಯಿತ್ತು.

ತನ್ನ ಪ್ರತಿಭೆ ಜೊತೆ ಇನ್ನೊಬ್ಬರ ಪ್ರತಿಭೆಗೆ ಪ್ರೋತ್ಸಾಹ ಕೊಡುವ ಇವರ ಒಳ್ಳೆಯ ಮನಸ್ಸಿಗೆ ದೇವರ ಅನುಗ್ರಹ ಸದಾ ಇರಲಿ ಸಂಗೀತದಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡವಲಿ ಯಶಸ್ವಿಯಾಗಲಿ ಎಂದು ದೇವರಲ್ಲಿ ಬೇಡುವ.

ಪ್ರಶಾಂತ್ ಅಂಚನ್ – ಮಸ್ಕತ್ತ್ (Billava warriors)


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »