TOP STORIES:

FOLLOW US

ರಾತ್ರಿ ಉತ್ತಮ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ವಾ: ಹಾಗಾದ್ರೆ ನಿಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಿ! ಏಕೆಂದರೆ?


ಉತ್ತಮ ನಿದ್ರೆಗಾಗಿ ನಿರ್ದಿಷ್ಟ ಸಮಯ ಮೀಸಲಿಡಬೇಕು. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.

 

ರಾತ್ರಿ ಕಣ್ತುಂಬ ಉತ್ತಮ ನಿದ್ದೆ ಮಾಡುವ ಸುಖವನ್ನು ಯಾರು ಕೂಡ ಬೇಡ ಅನ್ನುವುದಿಲ್ಲ. ಆದರೆ, ಕೆಲಸದ ಒತ್ತಡ ಮತ್ತು ಇತರ ಸಮಸ್ಯೆಗಳು ನಿದ್ದೆಗೆ ತೊಡಕಾಗುವಂತೆ ಮಾಡುತ್ತದೆ.

ಈ ನಿದ್ದೆ ಸಮಸ್ಯೆ ಪುರುಷರಿಗೆ ಹೋಲಿಕೆ ಮಾಡಿದಾಗ ಸ್ತ್ರೀಯರಲ್ಲಿ ಹೆಚ್ಚು. ಆರೋಗ್ಯ ಸಮಸ್ಯೆ ಕಾರಣ ಹೊರತಾಗಿ ಕೆಲವು ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವ ಮೂಲಕ ಈ ಸಮಸ್ಯೆ ನಿವಾರಣೆಯನ್ನು ಪಡೆಯಬಹುದು. ಉತ್ತಮ ನಿದ್ರೆಗಾಗಿ ನಿರ್ದಿಷ್ಟ ಸಮಯವನ್ನು ಮೀಸಲಿಡಬೇಕು. ನಿರ್ದಿಷ್ಟ ಸಮಯದಲ್ಲಿ ಉತ್ತಮ ನಿದ್ದೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.

ಉತ್ತಮ ಗಾಢವಾದ ನಿದ್ರೆಗೆ ಮೆಲೆಟೊನಿನ್​ ಹಾರ್ಮೋನ್​ ಅಗತ್ಯ. ಇದು ಮಲಗುವ ವಾತಾವರಣ ಅಥವಾ ಕೋಣೆ ಸಂಪೂರ್ಣ ಕತ್ತಲಾಗಿದ್ದಾರೆ ಇದು ಉತ್ತೇಜನಗೊಳ್ಳುತ್ತದೆ. ಎಂದರೆ, ಮಲಗುವಾಗ ಯಾವುದೇ ಟಿವಿ, ಕಂಪ್ಯೂಟರ್​ ಮತ್ತು ಫೋನ್​ ಸ್ಕ್ರೀನ್​ ಇಲ್ಲದೇ ಮಲಗುವುದರಿಂದ ಆರಾಮದಾಯಕ ಉತ್ತಮ ನಿದ್ರೆಯನ್ನು ನೀವು ಮಾಡಬಹುದು.

ಕೊಠಡಿಯ ತಾಪಮಾನ ಕೂಡ ಮುಖ್ಯ: ಅನೇಕರು ರಾತ್ರಿ ತಾಪಮಾನದ ಬಗ್ಗೆ ಅಷ್ಟೊಂದು ಮಹತ್ವ ನೀಡುವುದಿಲ್ಲ. ಆದರೆ, ನಿದ್ರೆ ವಿಚಾರದಲ್ಲಿ ಇದು ಅವಶ್ಯಕತೆ ಹೊಂದಿದೆ. ತೀರ ಚಳಿ ಅಥವಾ ತೀರ ಬಿಸಿಲಿನ ವಾತಾವರಣ ಕೂಡ ನಿಮ್ಮ ನಿದ್ದೆಗೆ ಭಂಗ ತರುತ್ತದೆ. ಜೊತೆಗೆ ಮಲಗುವ ಕೋಣೆಯಲ್ಲಿ ಯಾವುದೆ ಕಿರಿಕಿರಿ ಮಾಡುವ ವಾಸನೆ ಅಂಶ ಇಲ್ಲದೇ ಇರುವಂತೆ ನೋಡಿಕೊಳ್ಳುವುದು ಅವಶ್ಯ. ಕಾರ್ಪೂರ ಅಥವಾ ಸಾಂಬ್ರಾಣಿ, ಮಲ್ಲಿಗೆ ಸುಂಗಂಧಗಳು ಕೂಡ ನಿಮ್ಮ ನಿದ್ದೆಗೆ ಭಂಗ ತರುತ್ತದೆ.

ಶುಚಿತ್ವ: ಮಲಗುವ ವಾತಾವರಣ ಮತ್ತು ಹಾಸಿಗೆ ಶುಚಿಯಾಗಿರುವಂತೆ ನೋಡಿಕೊಳ್ಳಿ. ಎಂಬ್ರೋಯ್ಡರಿ ಧಿರಿಸಿ ಅಥವಾ ಬೆಡ್​​ಶೀಟ್​ಗಳು ನಿಮಗೆ ಕಿರಿಕಿರಿ ಮಾಡದಂತೆ ಇರಬೇಕು. ಜೊತೆಗೆ ಹೊದಿಕೆ ಮತ್ತು ದಿಂಬುಗಳು ಕೂಡ ಸಮಯದಕ್ಕೆ ಸರಿಯಾಗಿ ಸ್ವಚ್ಛ ಮಾಡುವತ್ತ ಗಮನಹರಿಸಿ. ರಾತ್ರಿ ಮಲಗುವಾಗ ಅದಷ್ಟು ಸಡಿಲವಾದ ಕಾಟನ್​ ಧಿರಿಸಿನಲ್ಲಿ ಮಲಗುವುದು ಉತ್ತಮ.

ಈ ಚಟದಿಂದ ದೂರ ಇರಿ: ಹಗಲಿನ ಹೊತ್ತಿನಲ್ಲಿ ಹೆಚ್ಚು ನಿದ್ದೆ, ಅಥವಾ ಮಲಗುವ ಮುನ್ನ ಹೆಚ್ಚಿನ ವ್ಯಾಯಾಮ ಅಥವಾ ನೀರು ಕಡಿಯುವುದು ಕೂಡ ನಿದ್ರಾಹೀನತೆಗೆ ಕಾರಣವಾಗಲಿದೆ. ಅನೇಕ ಜನರು ಮಲಗುವ ಮುನ್ನ ಕೆಲವು ಸಮಯ ನೀರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಇದರಿಂದ ಪದೆ ಪದೇ ಎಚ್ಚರವಾಗುವುದು ತಪ್ಪುತ್ತದೆ ಎಂಬ ಲೆಕ್ಕಾಚಾರ ನಡೆಸುತ್ತಾರೆ. ಆದರೆ ಇದು ಕೂಡ ತಪ್ಪು ಅಭ್ಯಾಸ ಇದರಿಂದ ದೇಹ ನಿರ್ಜಲೀಕರಣಗೊಂಡು, ಎಚ್ಚರಗೊಳ್ಳುವಂತೆ ಮಾಡುತ್ತದೆ.

ಆರು ಗಂಟೆಗಿಂತ ಕಡಿಮೆ ನಿದ್ದೆ ಮಾಡುವ , 9ಗಂಟೆಗಿಂತಲೂ ಹೆಚ್ಚಿನ ಅವಧಿ ನಿದ್ದೆ ಮಾಡುವುದು ಅನೇಕ ಸಮಸ್ಯೆಗಳಿಗೆ ನಿಮ್ಮನ್ನು ತುತ್ತು ಮಾಡುವ ಸಾಧ್ಯತೆ ಇದೆ. ಆರು ಗಂಟೆಗಿಂತ ಕಡಿಮೆ ನಿದ್ದೆ ಅಥವಾ ನಿದ್ರಾಹೀನತೆ ಹೊಂದಿರುವವರು ಅನೇಕ ಗಂಭೀರ ಆರೋಗ್ಯಕರ ಸಮಸ್ಯೆ ಎದುರಿಸುವಂತೆ ಆಗುತ್ತದೆ. ಈ ಹಿನ್ನೆಲೆ ಸರಿಯಾದ ನಿದ್ರೆ ಸಮಯವನ್ನು ಪಾಲಿಸುವುದು ಅಗತ್ಯವಾಗಿದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಡೆಂಘೀ ರೋಗ ನಿಯಂತ್ರಣಕ್ಕೆ ಪಪ್ಪಾಯ ಎಲೆ ಸಹಾಯಕವಾಗುತ್ತದೆಯಾ?


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »