TOP STORIES:

FOLLOW US

ವಿಷ ಕಾರುವವರಿಗೆ “ವಿಷಯ”ಯುಕ್ತ ಕಾರ್ಕೋಟಕ ವಿಷದಿಂದ ಅರ್ಪಣೆ…


ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗು ಇವತ್ತು ನಿನ್ನೆಯದ್ದಲ್ಲ, ಸಮಾರು ವರುಷದಿಂದ ಕೇಳಿ ಬಂದ ಕೂಗು ಇದಾಗಿದೆ.


ಈ ಕೂಗಿಗೆ ನಾನು ಧ್ವನಿಯಾಗಿದ್ದೆ, ಆ ಧ್ವನಿ ಮೆಲ್ಲಗೆ ಗಡಸು ಧ್ವನಿಯಾಗುತ್ತ ಬೆಳೆದಿತ್ತು..!!
ಕರಾವಳಿಗರ ಒಕ್ಕೊರಲ ಅಭಿಪ್ರಾಯಕ್ಕೆ ಒಂದು ರೀತಿಯ ಬಲವು ನಿಧಾನವಾಗಿ ಬಲ ಸೇರುತ್ತಿತ್ತು.!
ಆದರೆ ಅದರ ಬಲವನ್ನು ಕುಗ್ಗಿಸುವ ಸಣ್ಣ ಧ್ವನಿಯು ಕೂಡ ಮೆಲ್ಲಗೆ ಏಳುತ್ತಿದೆ ಎಂಬುದನ್ನು ಹೇಳಲು ಭಯ ಪಡಬೇಕಾಗಿಲ್ಲ.


ಇತ್ತೀಚೆಗೆ ಮಾನ್ಯ ಸ್ವಾಮೀಜಿಗಳಿಂದ ಒಂದು ಹೇಳಿಕೆಯ ಮಾತು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿತ್ತು.! ಕೋಟಿ-ಚೆನ್ನಯರ ಹೆಸರಿಗೆ ಬದಲಾಗಿ ಇನ್ನೊಂದು ಹೆಸರನ್ನು ಸೂಚಿಸಿದ್ದರು.! ಒಂದು ವಿಚಿತ್ರ ಅನಿಸಿದ್ದು ಆ ಹೆಸರಿಗೆ ಖಂಡಿತ ನಮ್ಮ ವಿರೋಧವಿಲ್ಲ, ಆದರೆ ಇಷ್ಟು ದಿನ ಇಲ್ಲದ ಆ ಹೆಸರು ಬಲು ಬೇಗನೆ ಬಂದ ಕಾರಣ ಗೊತ್ತಾಗಬೇಕಿತ್ತು ಅಷ್ಟೇ!! ಶ್ರೀ ಗಳೇ ಕೋಟಿ ಚೆನ್ನಯರು ಹಿಂದುಗಳು ಅಲ್ಲವೇ, ಅಲ್ಲದಿದ್ದರೆ ನೇರವಾಗಿ ಹೇಳಿಬಿಡಿ! ಅಥವಾ ಕೋಟಿ ಚೆನ್ನಯರ ಹೆಸರಿಗೆ ಇರುವ ಬಲದ ಶಕ್ತಿಯನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿದಿರ, ಅಥವಾ ಇನ್ಯಾವುದೇ ಕುತಂತ್ರ ಶಕ್ತಿಗಳ ಒತ್ತಾಸೆಗೆ ಬಲಿಯಾದಿರಿ ಎಂಬುದು ನೀವೇ ಹೇಳಬೇಕಾಗಿದೆ..! ಕೋಟಿ ಚೆನ್ನಯರು ಮಾಡಿದ ಸಾಮಾಜಿಕ ಕಾರ್ಯದ ಬಗ್ಗೆ ಒಮ್ಮೆ ಗಮನ ಹರಿಸಿ ಬನ್ನಿ ಗುರುಗಳೇ..! ಇದನ್ನು ಗೌರವಯುತವಾಗಿಯೇ ಹೇಳುತ್ತಿದ್ದೇನೆ.

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರನ್ನು ಇಡಬಾರದೆಂದು ಹೇಳುವವರಲ್ಲಿ ಒಂದು ಸಣ್ಣ ಮನವಿ, ನೀವು ನೇರವಾಗಿ ಹೇಳಿಬಿಡಿ ಬೆಂಬಲವಿಲ್ಲ ಎಂದು, ಅದರ ಜೊತೆಗೆ ಕಾರಣವನ್ನು ತಿಳಿಸಿಬಿಡಿ ಅಷ್ಟೇ.

ಕೋಟಿ-ಚೆನ್ನಯರ ಹೆಸರನ್ನು ವಿರೋಧಿಸುವ ಅಥವಾ ಅವಮಾನಿಸುವ ವ್ಯಕ್ತಿಗಳು ಯಾರೇ ಇರಲಿ, ಯಾವುದೇ ಸಂಘಟನೆಯಿರಲಿ ಅಥವಾ ರಾಜಕೀಯ ಪಕ್ಷವೇ ಇರಲಿ ಅದು ನಿಮ್ಮ ಸಮಾಧಿಗೆ ನೀವೇ ತೋಡಿದ ಹೊಂಡದಂತೆ!

ರಾಜಕೀಯ ಪಕ್ಷಗಳ ಸ್ಥಿರತೆ ಅಸ್ಥಿರತೆಯ ಕಡೆಗೆ ಸಾಗುತ್ತದೆ ಅದು ಮಾತ್ರ ಸಣ್ಣಗೆ ನೆನಪಿರಲಿ.
ಮತ್ತೊಂದು ಬೇಸರದ ವಿಷಯವೆಂದರೆ ಯಾವುದೇ ಹಿಂದು ಸಂಘಟನೆಗಳು ಇದರ ಪರವಾದ ಮಾತುಗಳನ್ನೇ ಆಡಿಲ್ಲ, ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗಿಗೆ ಬಲವಾದ ಧ್ವನಿ ಆಗಲೇ ಇಲ್ಲ ಎಂಬುದು ನನ್ನಂತಹ ನೂರಾರು ಹಿಂದು ಕಾರ್ಯಕರ್ತರ ಮನದಾಳದ ಪ್ರಶ್ನೆಯಾಗಿಯೇ ಉಳಿದಿದೆ. ಹಿಂದು ಸಂಸ್ಕೃತಿಗೆ ಬೆಂಬಲವಾಗಿ ನಿಲ್ಲುವ ಬಾ.ಜ.ಪ ದಿಂದಲೂ ಇದಕ್ಕೆ ಸೂಕ್ತವಾದ ಬೆಂಬಲವೂ ಕೂಡ ವ್ಯಕ್ತವಾಗಿಲ್ಲ ಇದು ಕೂಡ ನನ್ನಂತಹ ಕಾರ್ಯಕರ್ತರಿಗೆ ಮೂಡಿದ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಮಿಥುನ್ ರೈ ಯವರು ಕೆಲ ದಿನಗಳ ಹಿಂದೆ ನಡೆಸಿದ ಪರ ಹೋರಾಟದ ದಾರಿ ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂತದ್ದೇ, ಆದರೆ ಇದು ರಾಜಕೀಯದ ಆಸೆಗಾಗಿ ಸಾಗಬಾರದಷ್ಟೇ..!

ಎಲ್ಲಾ ಗ್ರಾಮಗಳಲ್ಲೂ ಬಲಿಷ್ಟವಾಗಿರುವ ನಮ್ಮ ಬಿಲ್ಲವ ಸಂಘಟನೆಯ ಮುಖಂಡರೆಲ್ಲೀ..??
ಕಳೆದ ಎರಡು ಮೂರು ವಾರಗಳಿಂದ ಕಾರ್ಯ ಚಟುವಟಿಕೆಗಳು ಮಾತ್ರ ಕಣ್ಣಿಗೆ ಗೋಚರಿಸುತ್ತಿದೆ, ಅದಕ್ಕಿಂತ ಮೊದಲಿನ ಪರ ಕಾರ್ಯಗಳೇ ಇಲ್ಲಾ..!
ಕರಾವಳಿಯ ಎಂ.ಪಿ ಮತ್ತು ಎಂ.ಎಲ್.ಎಗಳು ಇದರ ಪರವಾದ ಒಂದು ಮಾತನ್ನು ಆಡುತ್ತಿಲ್ಲ..!? ಕಾರಣ ಏನೆಂದು ತಿಳಿಸುವಿರಾ..!?

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಮರು ನಾಮಕರಣ ಆಗಬೇಕೆಂಬ ಕೂಗು ಜಾತಿ, ಪಕ್ಷ ಮತ್ತು ಧರ್ಮಕ್ಕಿಂತ ಮೀರಿದ ಕೂಗು..! ನೆನಪಿರಲಿ ಇದು ಈಡೇರದಿದ್ದರೆ ಕರಾವಳಿಯ ರಾಜಕೀಯ ಚಿತ್ರಣವೇ ಬದಲಾದೀತು ಜೋಕೆ..!!

– ವಿಜೇತ್ ಪೂಜಾರಿ ಶಿಬಾಜೆ.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »