TOP STORIES:

FOLLOW US

ಶ್ರೀ ಗೆಜ್ಜೆಗಿರಿ ಮೇಳದ ಮುಂಬೈಯ ವ್ಯವಸ್ಥಾಪಕರಾಗಿ ಶ್ರೀ ನವೀನ್ ಪೂಜಾರಿ ಪಡು ಇನ್ನಾ, ಮುಂಬೈ


ಮಾಯಾನಗರಿ ಮುಂಬೈಯಲ್ಲಿ ಚತುರ ಸಂಘಟಕನಾಗಿ, ನಾಟಕ, ಯಕ್ಷಗಾನ ಮತ್ತು ಚಲನ ಚಿತ್ರ ಸಂಚಾಲಕರಾಗಿ  ಮಿನುಗುತ್ತಿರುವಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ, ಕಮಲ ಕಲಾ ವೇದಿಕೆ ಮುಂಬಯಿಯ ರೂವಾರಿ  ನಮ್ಮ ತುಳುನಾಡ ಪ್ರತಿಭೆ, ಕ್ಯಾಂಟಿನ್ ಉದ್ಯಮಿ ಶ್ರೀ ನವೀನ್ ಪಡು ಇನ್ನಾ, ಮುಂಬೈ ಅವರು ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ಪಡು ಇನ್ನಾ ಗ್ರಾಮದವರು ತನ್ನಭವಿಷ್ಯದ ಹೊಂಗನಸನ್ನು ಸಾಕಾರಗೊಳಿಸಲು ಮಾಯಾನಗರಿ ಮುಂಬೈಗೆ ಆಗಮಿಸಿ ಫೋರ್ಟ್ ನಲ್ಲಿರುವ ಕನ್ನಡ ಭವನಜ್ಯೂನಿಯರ್ ಕಾಲೇಜಿನಲ್ಲಿ ವಿಧ್ಯಾಭ್ಯಾಸವನ್ನು ಮಾಡುತ್ತಾ ಕ್ಯಾಂಟೀನ್ ಕಾರ್ಮಿಕನಾಗಿ ದುಡಿದು ಮಾಲೀಕರ ಪ್ರೀತಿ ವಿಶ್ವಾಸವನ್ನುಗಳಿಸಿ ನಂತರ ಎಲ್ಲರೊಂದಿಗೆ ಆತ್ಮೀಯತೆಯ ಒಡನಾಟ ಮತ್ತು  ಸಹಕಾರವನ್ನು ಸೂಕ್ತವಾಗಿ ಬಳಸಿಕೊಂಡು ನಗರದಲ್ಲಿ ಯುವಕ್ಯಾಂಟೀನ್ ಉದ್ಯಮಿಯಾಗಿ ತನನ್ನು ಪರಿಚಯಿಸಿಕೊಂಡರು.  ಶ್ರೀ ನವೀನ್ ರವರು ದೈವ ದೇವರ ಧಾರ್ಮಿಕ ಕಾರ್ಯಗಳಲ್ಲೂಕೂಡಾ ತುಂಬಾ ಆಸಕ್ತಿಯನ್ನು ಹೊಂದಿ ತನ್ನ ಶಾಲಾ ದಿನಗಳಿಂದಲೇ ಸಂಘಟನಾ ಚಾತುರ್ಯ ಹಾಗೂ ಕ್ರೀಡಾ ನಾಯಕತ್ವದಗುಣಗಳಿಂದ ಮಾಯಾನಗರಿ  ಮುಂಬಯಿಯಲ್ಲಿ ನವೀನ್ ಪಡು ಇನ್ನಾ ಎಂದೇ ಪರಿಚಿತರಾಗಿ, ಕಲಾಪ್ರೇಮಿ ಯಾಗಿ ಕಳೆದ ಹತ್ತುವರ್ಷಗಳಿಂದ ತನ್ನ ಅಜ್ಜಿಯ ಹೆಸರಲ್ಲಿ ಕಮಲ ಕಲಾ ವೇದಿಕೆ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಸಂಚಾಲಕತ್ವ ವನ್ನು ವಹಿಸಿ ಸಾಂಸ್ಕ್ರತಿಕಕಾರ್ಯಕ್ರಮಗಳ ಮುಖೇನ ನಾಟಕದ ಪ್ರದರ್ಶನಗಳನ್ನು ಯಶಸ್ವಿಯಾಗಿಆಯೋಜಿಸಿಕೊಂಡು *ತವರೂರ ಹಾಗೂ ನಗರದಸುಮಾರು 50 ಕ್ಕೂ ಹೆಚ್ಚಿನ ಕಲಾವಿದರನ್ನು, ಸಮಾಜ ಸೇವಕರನ್ನು  ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಿದಹೆಗ್ಗಳಿಕೆಗೆ ಪಾತ್ರರಾಗಿದ್ದಾರೆಇವರ ಸಾಮಾಜಿಕ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯು ಆರ್ಯಭಟಅಂತರಾಷ್ಟ್ರೀಯ ಪ್ರಶಸ್ತಿ -2017 ನ್ನು ನೀಡಿ ಗೌರವಿಸಿದೆಇಷ್ಟು ಮಾತ್ರವಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ “ಮದಿಪು” ತುಳುಚಿತ್ರವನ್ನು ತನ್ನ ಚೊಚ್ಚಲ ಸಂಚಾಲಕತ್ವದಲ್ಲಿ  ಮಹಾರಾಷ್ಟ್ರದಾದ್ಯಂತ ಬಿಡುಗಡೆ ಗೊಳಿಸಿ ಸುಮಾರು 20 ಕ್ಕೂ ಮಿಕ್ಕಿದಪ್ರದರ್ಶನಗಳ್ಳನ್ನು ನೀಡಿದ ಕೀರ್ತಿಯನ್ನೂ ಗಳಿಸಿದ್ದಾರೆ.

ಬಾಲ್ಯದಿಂದಲೇ ಪ್ರತಿಭಾವಂತರಾದ ಇವರಿಗೆ ಎಮ್. ವಿ. ಶಾಸ್ತ್ರಿ ಆಯುರ್ವೇದ ಭೂಷಣ ಹೈಸ್ಕೂಲ್ ಇನ್ನಾ ವು ಯುವರತ್ನ ಬಿರುದು, ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ರಿಂದ  ಚತುರ ಸಂಘಟಕ‘, ಸಮಾಜಪರಕಲಾ ಸೇವೆಗಾಗಿ ನಮನ ಫ್ರೆಂಡ್ಸ್ ಮುಂಬಯಿ, ಬಿಲ್ಲವರ ಎಸೋಸಿಯೇಶನ್ ಅಂಧೇರಿ ಸ್ಥಳೀಯ ಕಛೇರಿ, ಫ್ರೆಂಡ್ಸ್ ಸರ್ಕಲ್ ಕಣಂಜಾರು  ಮುಂಬಯಿ, ನಮ್ಮ ಕಲಾವಿದೆರ್ ಬೆದ್ರ  ತಂಡದವರಿಂದ ‘ಉತ್ತಮ ಸಂಘಟಕ‘ ಬಿರುದನ್ನು ನೀಡಿರುತ್ತಾರೆ.  ಸಮಾಜದಲ್ಲಿಎಲ್ಲರೊಂದಿಗೂ ಬೆರೆಯುವ ಸ್ವಭಾವದೊಂದಿಗೆ ಹಲವು ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಶ್ರೀ ವಿಠಲಪ್ರತಿಷ್ಠಾಪನೆ ಮುಂಬಯಿ ಇದರ ಯುವ ವಿಭಾಗದ ಸಂಚಾಲಕ ರಾಗಿ, ಶಿವಾಯ್ ಫೌಂಡೇಶನ್ ಮುಂಬಯಿ ಮತ್ತು ರಂಗಮಿಲನ ಮುಂಬಯಿ   ಉಪಾಧ್ಯಕ್ಷ ರಾಗಿ, ಶ್ರೀ ಬ್ರಹ್ಮಶ್ರೀ ಗುರುನಾರಾಯಣ ಭಕ್ತವ್ರಂದ ಇದರ ಗೌ. ಕೋಶಾಧಿಕಾರಿ ಯಾಗಿ, ಇನ್ನಾ ಹಿತವರ್ಧಕ ಸಂಘ ಮುಂಬಯಿ  ಜೊತೆ ಕೋಶಾಧಿಕಾರಿ ಯಾಗಿ, ಯಂಗ್ ಫ್ರೆಂಡ್ಸ್ ಮುಂಬಯಿ ಯ ಸ್ಥಾಪಕ ರಾಗಿ, ಉಮೇಶ್ ಮಿಜಾರ್ ರವರ ನಮ್ಮ ಕಲಾವಿದೆರ್ ಬೆದ್ರ  ಹಾಗೂ ತುಳುವೆರ್ ಉಡಲ್ ಜೋಡುಕಲ್ಲು ನಾಟಕತಂಡಗಳ ಮುಂಬಯಿ ಸಂಚಾಲಕ ರಾಗಿ, ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಂಘ ಬೇಲಾಪುರ್ ಹಾಗೂ ಸಪ್ತಸ್ವರ ಕಲ್ಚರಲ್ಎಸೋಸಿಯೇಶನ್(ರಿಇದರ ಸಕ್ರಿಯ ಕಾರ್ಯಕರ್ತ  ನಾಗಿ ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು. ಕೋರೋನಾ  ಮಹಾಮಾರಿಯ ಸಂಕಟದ ಪರಿಸ್ಥಿತಿಯಲ್ಲಿ ತಮ್ಮ  ಸಂಸ್ಥೆ ಕಮಲಾ ಕಲಾ ವೇದಿಕೆ  ಆಶ್ರಯದಲ್ಲಿ ದಾನಿಗಳಸಹಾಯದಿಂದ ಸುಮಾರು 200 ಕ್ಕೂ  ಹೆಚ್ಚಿನ ಬಡ ಕುಟುಂಬಗಳಿಗೆ ಸಹಾಯ ಮಾಡಿರುವುದು ನಿಜವಾಗಲೂ ವಂದನೀಯ.

ನವೀನ್ ಪಡು ಇನ್ನಾ ರವರು ತನ್ನ ಬಾಳ ಸಂಗಾತಿ ಜ್ಯೋತಿ ಯವರೊಂದಿಗೆ ದಿನಾಂಕ 29/11/2017 ರಂದು ಸಪ್ತಪದಿ ತುಳಿದುಇದೀಗ ಮುದ್ದು ಕಂದ ಅಧ್ವಿಕ್  ನೊಂದಿಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ.

ಇದೀಗ ತೆಂಕುತಿಟ್ಟಿನ ನೂತನ ಮೇಳ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇದರ ಶ್ರೀಗೆಜ್ಜೆಗಿರಿ ಯಕ್ಷಗಾನ ಮೇಳದ ಮುಂಬೈಯ ವ್ಯವಸ್ಥಾಪಕರಾಗಿ ಆಯ್ಕೆಯಾಗಿರುವ ಶ್ರೀಯುತ ಶ್ರೀ ನವೀನ್ ಪೂಜಾರಿ ಪಡು ಇನ್ನಾ ಅವರಿಗೆ ಕ್ಷೇತ್ರದ ವತಿಯಿಂದ ಅಭಿನಂದನೆಗಳೊಂದಿಗೆ ತಮ್ಮ ಮುಂಬೈಯ ವ್ಯವಸ್ಥಾಪಕತ್ವದಲ್ಲಿ ಮಾಯಾನಗರಿ ಮುಂಬೈನಲ್ಲಿ ಶ್ರೀಗೆಜ್ಜೆಗಿರಿ ಮೇಳದ ಗೆಜ್ಜೆಸೇವೆಯ ಹೆಚ್ಚಿನ ಯಕ್ಷಗಾನವನ್ನು ಪ್ರದರ್ಶಿಸುವಂತಾಗಲಿ.  ಶ್ರೀ ಕ್ಷೇತ್ರದ ಸರ್ವ ಶಕ್ತಿಗಳು ಉತ್ತಮ ಆರೋಗ್ಯಭಾಗ್ಯವನ್ನು ಕರುಣಿಸಿ ನಿಮ್ಮ ಎಲ್ಲಾ ಇಷ್ಟಾರ್ಥ ನೆರವೇರಿಸಲಿ ಎಂದು ಪ್ರಾರ್ಥಿಸುತ್ತೇವೆ.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ(ರಿ) ಮತ್ತು ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »