TOP STORIES:

FOLLOW US

ಸಮಾಜದ ಸಮಸ್ಯೆಗಳ ಧ್ವನಿಯಾಗುವ ಪೊಲೀಸ್ ಅಧಿಕಾರಿ ಶ್ರೀಮತಿ ರೀನಾ ಸುವರ್ಣ ACP


ನೊಂದವರ ಕಣ್ಣೀರು ಒರೆಸಿ, ಸ್ನೇಹಭಾವದ ಬೀಜವನ್ನು ಬಿತ್ತಿ, ಹಿಂಸಾಚಾರ ತಡೆಯುವಲ್ಲಿ ರಕ್ಷಾಕವಚವಾಗಿ, ನ್ಯಾಯ ನೀತಿ ಧರ್ಮವನ್ನು ಪೋಷಿಸಿ, ಅನ್ಯಾಯವನ್ನು ಮೆಟ್ಟಿ, ಸಮಸ್ಯೆಗಳನ್ನು ಸಹನೆ ತಾಳ್ಮೆಯಿಂದ ಸ್ವೀಕರಿಸಿ ಜನರ ಸೇವೆಗೈವ ನಿಷ್ಠಾವಂತ ಪೊಲೀಸ್ ಅಧಿಕಾರಿಣಿ ಯೇ ನಮ್ಮ “ಶ್ರೀಮತಿ ರೀನಾ ಸುವರ್ಣ. ಎನ್. ”

ವಿಶ್ವ ಕಂಡ ಮಹಾನ್ ಸಾಹಿತಿ ಲಿಯೋ ಟಾಲಸ್ಟಾಯ್ ಹೇಳುತ್ತಾರೆ. “ಜೀವನದಲ್ಲಿ ಅತ್ಯಂತ ಶ್ರೇಯಸ್ಕರವಾದುದು ಎಂದರೆ ಮನುಕುಲದ ಒಳಿತಿಗಾಗಿ ಶ್ರಮಿಸುವುದು. “ಎಂದು. ಜನರ ಸೇವೆಯ ಜೊತೆಗೆ ಸಮಾಜದ ಕೆಲವು ಸಮಸ್ಯೆಗಳಿಗೆ ಧ್ವನಿಯಾಗಿ ಪರಿಹರಿಸಲು “ಅಧಿಕಾರ ” ಮತ್ತು “ಜವಾಬ್ದಾರಿ ” ಇರಲೇಬೇಕು. ಎಂಬ ನಿಲುವಲ್ಲಿ ಇವರು ಪೊಲೀಸ್ ಅಧಿಕಾರಿಯಾಗಿದ್ದು ಹೆಮ್ಮೆಯ ವಿಚಾರ.

ಶ್ರೀಮತಿ. ರೀನಾ ಸುವರ್ಣ.ಎನ್. ಡಿವೈ ಎಸ್ ಪಿ, ಸಿಐಡಿ ಬೆಂಗಳೂರು, ಕರ್ನಾಟಕ ರಾಜ್ಯ ಪೊಲೀಸ್ ಸೇವೆ. ಇವರು ವಿದ್ಯಾರ್ಥಿ ಜೀವನದಲ್ಲಿಯೇ ಪ್ರತಿಭಾನ್ವಿತೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಮ್. ಎ. ಪದವಿಯಲ್ಲಿ, “ಚಿನ್ನದ ಪದಕ” ಗಳಿಸಿದ ಇವರು, ಮೌಂಟ್ ಕಾರ್ಮೆಟ್ ಕಾಲೇಜಿನಲ್ಲಿ ಬಿ.ಎ ಯಲ್ಲಿ “ಕಾಲೇಜಿನ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ “ಎಂಬ ಪ್ರಶಸ್ತಿಗೆ ಭಾಜನರು.

ಬಾಲ್ಯದಿಂದಲೂ ಪುಸ್ತಕಗಳಲ್ಲಿದ್ದ ಅಪಾರ ಪ್ರೇಮ, ಓದುವ ಛಲವೇ ಇವರನ್ನು ಇಂದು ಅತ್ಯಂತ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಎಂದರೆ ತಪ್ಪಲ್ಲ..

“ಹಗಲೆನ್ನದೆ ಇರುಳೆನ್ನದೆ, ಉಪಚಾರಗಳ ಹಂಗಿಲ್ಲದೆ ಜನರಿಗಾಗಿ ದುಡಿವ ಮಹಿಳಾ ಪೊಲೀಸ್ ಅಧಿಕಾರಿ ಎಲ್ಲರಿಗೂ ಸ್ಪೂರ್ತಿಯ ಸೆಲೆ. “ಇವರ ಕಾರ್ಯವೈಖರಿ ಅದ್ಭುತವೇ ಸರಿ.

2014 ರಲ್ಲಿ ಡಿವೈಎಸ್ಸ್ಪಿ ಯಾಗಿ ಕರ್ತವ್ಯಕ್ಕೆ ಸೇರಿದ ಇವರು ” ಬೆಂಗಳೂರು ಗ್ರಾಮೀಣ ಪ್ರೊಬೆಷನರಿ ಐಜಿ ದಕ್ಷಿಣ ಶ್ರೇಣಿ “ಯಿಂದ ಮೂರು ಮೆಚ್ಚುಗೆ ಪತ್ರಗಳನ್ನು ಗಳಿಸಿರುತ್ತಾರೆ.

ಹೊಸಕೋಟೆ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ ಕೇವಲ ಎರಡೇ ತಿಂಗಳಲ್ಲಿ 11 ಕಾಣೆಯಾದ ಪ್ರಕರಣಗಳನ್ನು ಪತ್ತೆ ಮಾಡಿರುತ್ತಾರೆ. ಅನೇಕಲ್ ಅಟ್ಟಿಬೆಲೆಯಲ್ಲಿ 280 ಕಿ.ಗ್ರಾ ಗಾಂಜಾವನ್ನು ವಶಪಡಿಸಿಕೊಂಡಿದ್ದೂ ನಮ್ಮ ಮಹಿಳಾ ಸಾಧಕಿ “ಶ್ರೀಮತಿ.ರೀನಾ ಸುವರ್ಣ” ರವರೆ. ತಾನು ಉರಿದು ಸೇವೆಯೇ ಸರ್ವಸ್ವವೆಂದು ಕರ್ತವ್ಯ ನಿರ್ವಹಿಸುವ ಇವರು ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಬಹಳ ಶ್ರಮ ಪಟ್ಟಿರುತ್ತಾರೆ..

ಜಿಗಾನಿಯಲ್ಲಿ ಅರ್ಧ ದಿನದಲ್ಲಿ ಗುರುತಿಸಲೂ ಆಗದ ಮೃತದೇಹವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಅಂದಿನ ಉಡುಪಿ ಎಸ್.ಪಿ ಲಕ್ಷ್ಮಣ ನಿಂಬರ್ಗಿ ಯವರಿಂದ ಮೆಚ್ಚುಗೆ ಪಡೆದವರು ನಮ್ಮ ಶ್ರೀಮತಿ. ರೀನಾ ಸುವರ್ಣ ರವರು.

ಇದಲ್ಲದೆ ಹೊಸ್ಕೊಟ್ ನಲ್ಲಿ 6 ಗಂಟೆಯ ಒಳಗೆ “ಪೊಕ್ಸೋ ” ಪ್ರಕರಣವನ್ನು ಪತ್ತೆಹಚ್ಚಿದ ಅದ್ಭುತ ಪತ್ತೇದಾರಿ ಪೊಲೀಸ್ ಇವರು.
“ಆರಕ್ಷಕರಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವೇ ಹೇಳಿ???. ಸೇವೆಯುದ್ದಕ್ಕೂ ಸವಾಲುಗಳೇ, ಸಾವಿನಂಚಿಗೂ ತಲುಪುವ ಕ್ಲಿಷ್ಟ ಕಠಿಣ ಪ್ರಕರಣಗಳೇ, ದುರ್ವಿಧಿಯ ಸನ್ನಿವೇಶಗಳೇ.. ”

ಹೆಣ್ಣು ಬಲಹೀನ, ದುರ್ಬಲಳು, ಅವಲಂಬಕಿ ಎನ್ನುವ ಈ ಸಮಾಜಕ್ಕೆ ತಕ್ಕ ಪ್ರತಿ ಉತ್ತರವೇ ಡಿವೈ ಎಸ್ ಪಿ,ಶ್ರೀಮತಿ ರೀನಾ ಸುವರ್ಣ, ಎನ್.

ನಗರಸಭೆಯ ಬೆಂಬಲದೊಂದಿಗೆ ಹೊಸ್ಕೊಟ್ ನ ಪ್ರಮುಖ ಜಂಕ್ಷನ್ ಗಳಲ್ಲಿ ಸಿ.ಸಿ. ಟಿ. ವಿ. ಯನ್ನು ಅಳವಡಿಸಿ ಅನ್ಯಾಯಕ್ಕೆ ಪ್ರತಿಧ್ವನಿಯಾದವರು ಇವರು. ಅದಷ್ಟೇ ಅಲ್ಲದೇ, ಡ್ರಗ್ಸ್ ಮಾಫಿಯಾ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮತ್ತು ಮಾನವ ಕಳ್ಳ ಸಾಗಣೆ ವಿರುದ್ಧ ಛಲಬಿಡದೆ ಹೋರಾಡುವ ಧೀಮಂತ ಪೊಲೀಸ್ ನಮ್ಮ ರೀನಾ ಸುವರ್ಣ.

ಒತ್ತಡಗಳನ್ನು, ಸವಾಲುಗಳನ್ನು ತನಗಿರುವ ಅವಕಾಶಗಳೆಂದು ಸ್ವೀಕರಿಸಿ ದುಡಿಯುವ ಇವರು ಪ್ರಸ್ತುತ ಎಸಿಪಿ ಯಾಗಿ ಜೆಸಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

“ಆಡಿಕೊಳ್ಳುವವರ ಮುಂದೆ ಜಾರಿ ಬೀಳದೆ ತಲೆಯೆತ್ತಿ ನಡೆದು ಕೆಚ್ಚೆದೆಯಿಂದ ನಡೆಯುತ, ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿ ಬದುಕಿಗೊಂದು ಸಾರ್ಥಕತೆ ಒದಗಿಸಿಕೊಡಬೇಕು. ಆಗಲೇ ಬದುಕಿಗೊಂದು ಬೆಲೆಯೂ, ನೆಲೆಯೂ… ”

“ಪೊಲೀಸ್ ಸ್ವಸ್ಥ ಸಮಾಜದ ಭದ್ರತೆ ವಹಿಸಿ ಹಗಲಲ್ಲಿ ಸೂರ್ಯನಂತೆ, ರಾತ್ರಿ ಚಂದ್ರನಂತೆ ಸಮಾಜಕ್ಕಾಗಿ ದುಡಿಯುವ ಏಕೈಕ ಸರ್ಕಾರಿ ನೌಕರ.. ”
.
ಎಲ್ಲಾ ನಿಷ್ಠಾವಂತ ಪೊಲೀಸ್ ರಿಗೆ, ಮುಂದೆ “ಪೊಲೀಸ್ ಅಧಿಕಾರಿಣಿ ” ಯಾಗುವ ಛಲತೊಟ್ಟ ಹುಡುಗಿಯಿಂದ ಈ ಬರಹ ಅರ್ಪಣೆ..

Credits: ಚೈತ್ರ ಕಬ್ಬಿನಾಲೆ

Email us: billavaswarriors@gmail.com

www.billavaswarriors.com


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »