TOP STORIES:

ಸಮಾಜದ ಸಮಸ್ಯೆಗಳ ಧ್ವನಿಯಾಗುವ ಪೊಲೀಸ್ ಅಧಿಕಾರಿ ಶ್ರೀಮತಿ ರೀನಾ ಸುವರ್ಣ ACP


ನೊಂದವರ ಕಣ್ಣೀರು ಒರೆಸಿ, ಸ್ನೇಹಭಾವದ ಬೀಜವನ್ನು ಬಿತ್ತಿ, ಹಿಂಸಾಚಾರ ತಡೆಯುವಲ್ಲಿ ರಕ್ಷಾಕವಚವಾಗಿ, ನ್ಯಾಯ ನೀತಿ ಧರ್ಮವನ್ನು ಪೋಷಿಸಿ, ಅನ್ಯಾಯವನ್ನು ಮೆಟ್ಟಿ, ಸಮಸ್ಯೆಗಳನ್ನು ಸಹನೆ ತಾಳ್ಮೆಯಿಂದ ಸ್ವೀಕರಿಸಿ ಜನರ ಸೇವೆಗೈವ ನಿಷ್ಠಾವಂತ ಪೊಲೀಸ್ ಅಧಿಕಾರಿಣಿ ಯೇ ನಮ್ಮ “ಶ್ರೀಮತಿ ರೀನಾ ಸುವರ್ಣ. ಎನ್. ”

ವಿಶ್ವ ಕಂಡ ಮಹಾನ್ ಸಾಹಿತಿ ಲಿಯೋ ಟಾಲಸ್ಟಾಯ್ ಹೇಳುತ್ತಾರೆ. “ಜೀವನದಲ್ಲಿ ಅತ್ಯಂತ ಶ್ರೇಯಸ್ಕರವಾದುದು ಎಂದರೆ ಮನುಕುಲದ ಒಳಿತಿಗಾಗಿ ಶ್ರಮಿಸುವುದು. “ಎಂದು. ಜನರ ಸೇವೆಯ ಜೊತೆಗೆ ಸಮಾಜದ ಕೆಲವು ಸಮಸ್ಯೆಗಳಿಗೆ ಧ್ವನಿಯಾಗಿ ಪರಿಹರಿಸಲು “ಅಧಿಕಾರ ” ಮತ್ತು “ಜವಾಬ್ದಾರಿ ” ಇರಲೇಬೇಕು. ಎಂಬ ನಿಲುವಲ್ಲಿ ಇವರು ಪೊಲೀಸ್ ಅಧಿಕಾರಿಯಾಗಿದ್ದು ಹೆಮ್ಮೆಯ ವಿಚಾರ.

ಶ್ರೀಮತಿ. ರೀನಾ ಸುವರ್ಣ.ಎನ್. ಡಿವೈ ಎಸ್ ಪಿ, ಸಿಐಡಿ ಬೆಂಗಳೂರು, ಕರ್ನಾಟಕ ರಾಜ್ಯ ಪೊಲೀಸ್ ಸೇವೆ. ಇವರು ವಿದ್ಯಾರ್ಥಿ ಜೀವನದಲ್ಲಿಯೇ ಪ್ರತಿಭಾನ್ವಿತೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಮ್. ಎ. ಪದವಿಯಲ್ಲಿ, “ಚಿನ್ನದ ಪದಕ” ಗಳಿಸಿದ ಇವರು, ಮೌಂಟ್ ಕಾರ್ಮೆಟ್ ಕಾಲೇಜಿನಲ್ಲಿ ಬಿ.ಎ ಯಲ್ಲಿ “ಕಾಲೇಜಿನ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ “ಎಂಬ ಪ್ರಶಸ್ತಿಗೆ ಭಾಜನರು.

ಬಾಲ್ಯದಿಂದಲೂ ಪುಸ್ತಕಗಳಲ್ಲಿದ್ದ ಅಪಾರ ಪ್ರೇಮ, ಓದುವ ಛಲವೇ ಇವರನ್ನು ಇಂದು ಅತ್ಯಂತ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಎಂದರೆ ತಪ್ಪಲ್ಲ..

“ಹಗಲೆನ್ನದೆ ಇರುಳೆನ್ನದೆ, ಉಪಚಾರಗಳ ಹಂಗಿಲ್ಲದೆ ಜನರಿಗಾಗಿ ದುಡಿವ ಮಹಿಳಾ ಪೊಲೀಸ್ ಅಧಿಕಾರಿ ಎಲ್ಲರಿಗೂ ಸ್ಪೂರ್ತಿಯ ಸೆಲೆ. “ಇವರ ಕಾರ್ಯವೈಖರಿ ಅದ್ಭುತವೇ ಸರಿ.

2014 ರಲ್ಲಿ ಡಿವೈಎಸ್ಸ್ಪಿ ಯಾಗಿ ಕರ್ತವ್ಯಕ್ಕೆ ಸೇರಿದ ಇವರು ” ಬೆಂಗಳೂರು ಗ್ರಾಮೀಣ ಪ್ರೊಬೆಷನರಿ ಐಜಿ ದಕ್ಷಿಣ ಶ್ರೇಣಿ “ಯಿಂದ ಮೂರು ಮೆಚ್ಚುಗೆ ಪತ್ರಗಳನ್ನು ಗಳಿಸಿರುತ್ತಾರೆ.

ಹೊಸಕೋಟೆ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ ಕೇವಲ ಎರಡೇ ತಿಂಗಳಲ್ಲಿ 11 ಕಾಣೆಯಾದ ಪ್ರಕರಣಗಳನ್ನು ಪತ್ತೆ ಮಾಡಿರುತ್ತಾರೆ. ಅನೇಕಲ್ ಅಟ್ಟಿಬೆಲೆಯಲ್ಲಿ 280 ಕಿ.ಗ್ರಾ ಗಾಂಜಾವನ್ನು ವಶಪಡಿಸಿಕೊಂಡಿದ್ದೂ ನಮ್ಮ ಮಹಿಳಾ ಸಾಧಕಿ “ಶ್ರೀಮತಿ.ರೀನಾ ಸುವರ್ಣ” ರವರೆ. ತಾನು ಉರಿದು ಸೇವೆಯೇ ಸರ್ವಸ್ವವೆಂದು ಕರ್ತವ್ಯ ನಿರ್ವಹಿಸುವ ಇವರು ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಬಹಳ ಶ್ರಮ ಪಟ್ಟಿರುತ್ತಾರೆ..

ಜಿಗಾನಿಯಲ್ಲಿ ಅರ್ಧ ದಿನದಲ್ಲಿ ಗುರುತಿಸಲೂ ಆಗದ ಮೃತದೇಹವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಅಂದಿನ ಉಡುಪಿ ಎಸ್.ಪಿ ಲಕ್ಷ್ಮಣ ನಿಂಬರ್ಗಿ ಯವರಿಂದ ಮೆಚ್ಚುಗೆ ಪಡೆದವರು ನಮ್ಮ ಶ್ರೀಮತಿ. ರೀನಾ ಸುವರ್ಣ ರವರು.

ಇದಲ್ಲದೆ ಹೊಸ್ಕೊಟ್ ನಲ್ಲಿ 6 ಗಂಟೆಯ ಒಳಗೆ “ಪೊಕ್ಸೋ ” ಪ್ರಕರಣವನ್ನು ಪತ್ತೆಹಚ್ಚಿದ ಅದ್ಭುತ ಪತ್ತೇದಾರಿ ಪೊಲೀಸ್ ಇವರು.
“ಆರಕ್ಷಕರಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವೇ ಹೇಳಿ???. ಸೇವೆಯುದ್ದಕ್ಕೂ ಸವಾಲುಗಳೇ, ಸಾವಿನಂಚಿಗೂ ತಲುಪುವ ಕ್ಲಿಷ್ಟ ಕಠಿಣ ಪ್ರಕರಣಗಳೇ, ದುರ್ವಿಧಿಯ ಸನ್ನಿವೇಶಗಳೇ.. ”

ಹೆಣ್ಣು ಬಲಹೀನ, ದುರ್ಬಲಳು, ಅವಲಂಬಕಿ ಎನ್ನುವ ಈ ಸಮಾಜಕ್ಕೆ ತಕ್ಕ ಪ್ರತಿ ಉತ್ತರವೇ ಡಿವೈ ಎಸ್ ಪಿ,ಶ್ರೀಮತಿ ರೀನಾ ಸುವರ್ಣ, ಎನ್.

ನಗರಸಭೆಯ ಬೆಂಬಲದೊಂದಿಗೆ ಹೊಸ್ಕೊಟ್ ನ ಪ್ರಮುಖ ಜಂಕ್ಷನ್ ಗಳಲ್ಲಿ ಸಿ.ಸಿ. ಟಿ. ವಿ. ಯನ್ನು ಅಳವಡಿಸಿ ಅನ್ಯಾಯಕ್ಕೆ ಪ್ರತಿಧ್ವನಿಯಾದವರು ಇವರು. ಅದಷ್ಟೇ ಅಲ್ಲದೇ, ಡ್ರಗ್ಸ್ ಮಾಫಿಯಾ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮತ್ತು ಮಾನವ ಕಳ್ಳ ಸಾಗಣೆ ವಿರುದ್ಧ ಛಲಬಿಡದೆ ಹೋರಾಡುವ ಧೀಮಂತ ಪೊಲೀಸ್ ನಮ್ಮ ರೀನಾ ಸುವರ್ಣ.

ಒತ್ತಡಗಳನ್ನು, ಸವಾಲುಗಳನ್ನು ತನಗಿರುವ ಅವಕಾಶಗಳೆಂದು ಸ್ವೀಕರಿಸಿ ದುಡಿಯುವ ಇವರು ಪ್ರಸ್ತುತ ಎಸಿಪಿ ಯಾಗಿ ಜೆಸಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

“ಆಡಿಕೊಳ್ಳುವವರ ಮುಂದೆ ಜಾರಿ ಬೀಳದೆ ತಲೆಯೆತ್ತಿ ನಡೆದು ಕೆಚ್ಚೆದೆಯಿಂದ ನಡೆಯುತ, ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿ ಬದುಕಿಗೊಂದು ಸಾರ್ಥಕತೆ ಒದಗಿಸಿಕೊಡಬೇಕು. ಆಗಲೇ ಬದುಕಿಗೊಂದು ಬೆಲೆಯೂ, ನೆಲೆಯೂ… ”

“ಪೊಲೀಸ್ ಸ್ವಸ್ಥ ಸಮಾಜದ ಭದ್ರತೆ ವಹಿಸಿ ಹಗಲಲ್ಲಿ ಸೂರ್ಯನಂತೆ, ರಾತ್ರಿ ಚಂದ್ರನಂತೆ ಸಮಾಜಕ್ಕಾಗಿ ದುಡಿಯುವ ಏಕೈಕ ಸರ್ಕಾರಿ ನೌಕರ.. ”
.
ಎಲ್ಲಾ ನಿಷ್ಠಾವಂತ ಪೊಲೀಸ್ ರಿಗೆ, ಮುಂದೆ “ಪೊಲೀಸ್ ಅಧಿಕಾರಿಣಿ ” ಯಾಗುವ ಛಲತೊಟ್ಟ ಹುಡುಗಿಯಿಂದ ಈ ಬರಹ ಅರ್ಪಣೆ..

Credits: ಚೈತ್ರ ಕಬ್ಬಿನಾಲೆ

Email us: billavaswarriors@gmail.com

www.billavaswarriors.com


Related Posts

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »