TOP STORIES:

ಸಾಧಕರ ಹಾದಿ ಜೊತೆ ಸ್ವರ್ಣ ಜ್ಯೋತ್ಸ್ನ ಎಮ್ ಮಾಣಿ ಇವರ ಸಾಧನೆಯ ಕಥೆ


ಸಾಧನೆಯ ಹಾದಿಯಲ್ಲಿ ಸಾಗುವುದು ಅಷ್ಟು ಸುಲಭದ ಮಾತಲ್ಲ. ನಮ್ಮ ಸರ್ವಸ್ವವನ್ನು ಅದಕ್ಕಾಗಿಯೇ ಮುಡಿಪಾಗಿಟ್ಟರೂ ಕಮ್ಮಿನೇ. ತನ್ನ ಸರ್ವಸ್ವವನ್ನೇ ನೃತ್ಯಕ್ಕಾಗಿ ಮುಡಿಪಾಗಿರಿಸಿಕೊಂಡು ಹಂತ ಹಂತ ವಾಗಿ ಬೆಳೆಯುತ್ತಿರುವ ಪ್ರತಿಭೆಯೇ ಈ ಸ್ವರ್ಣ ಜ್ಯೋತ್ಸ್ನಾ.


ಇವರು ಶ್ರೀಮತಿ  ರಮಾ ಮತ್ತು ಶ್ರೀ ದಿ| ಅಶೋಕ ಪೂಜಾರಿ ದಂಪತಿಗಳ ಒಬ್ಬಳೇ ಮಗಳಾಗಿ 23/05/2000ದಂದು ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಜನ್ಮ ಪಡೆದರು. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಣಿ, ಪ್ರೌಢ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ಹಾಗೂ ಫ್ಯಾಷನ್ ಡಿಸೈನಿಂಗನ್ನು ಪುತ್ತೂರು ಗ್ಲೋರಿಯಾ ಕಾಲೇಜ್ ಆಫ್ ಫ್ಯಾಷನ್ ಡಿಸೈನಿಂಗ್ ನಲ್ಲಿ Bsc ಪದವೀಧರೆಯಾಗಿದ್ದಾರೆ.

ಬಾಲ್ಯದಿಂದಲೇ ಈಕೆ ನೃತ್ಯ ಪ್ರವೀಣೆ. ತನ್ನ 2 ವರ್ಷ 9 ತಿಂಗಳು ಮಗುವಿನಿಂದಲೇ ಮೊದಲ ವೇದಿಕೆ ಏರಿದರು. ಸಾಧನೆಯ ಹಾದಿ  2500ಕ್ಕೂ ಹೆಚ್ಚು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ. ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ಹೀಗೆ ಕರ್ನಾಟಕದಾದ್ಯಂತ ನೃತ್ಯ ಪ್ರದರ್ಶನ ನೀಡಿರುತ್ತಾರೆ. ಮನೆಯಲ್ಲಿ ತೀರಾ ಬಡತನ ಇದ್ದರೂ ಇವರ ಛಲ ಸಾಧನೆಯಲ್ಲಿ ಕಡಿಮೆಯಿಲ್ಲ. ಇವರ ತಂದೆ ತಾಯಿ ಪ್ರೀತಿಸಿ ಮದುವೆಯಾಗಿದ್ದರು. ಮೊದ ಮೊದಲು ಜೀವನ ಸುಖವಾಗಿಯೇ ಇತ್ತು. ಆದರೆ, ತಂದೆಯ ತೀರಾ ಕುಡುಕತನ ನೆಮ್ಮದಿಯ ಜೀವನಕ್ಕೆ ಅಡಿಗಾಲಾಯಿತು. ತನ್ನ ತಾಯಿಗೆ ನೃತ್ಯ ಕಲೆ ತುಂಬಾ ಇಷ್ಟ. ಅದೇ ರೀತಿ ತನ್ನ ಒಬ್ಬಳೇ ಮಗಳನ್ನು ನೃತ್ಯ ಪ್ರವೀಣೆಯನ್ನಾಗಿಸಬೇಕು ಎಂಬ ಬಹುದೊಡ್ಡ ಕನಸು. ಇವರು ಕೂಡ ನೃತ್ಯ ಎಂದರೆ ಹಾಡು ಕೇಳಿದಾಗಲೆಲ್ಲ ಕುಣಿದಾಡುತ್ತಿದ್ದರು. ನೃತ್ಯ ತರಬೇತಿಗೆ ಸೇರಿಸೋಣ ಎಂದರೆ, ಆರ್ಥಿಕವಾಗಿ ಹಿಂದುಳಿದಿರುವುದಲ್ಲದೆ ತಂದೆಯ ಪ್ರೋತ್ಸಾಹವೂ ಸಿಗದಾಗಿತ್ತು. ಛಲ ಬಿಡದ ತಾಯಿ ತಾನು ಬಟ್ಟೆ ಹೊಲಿದು ಸಂಪಾದಿಸಿದ ಹಣದಲ್ಲಿ ಇವರನ್ನು ಚಿಕ್ಕ ಮಗುವಿನಲ್ಲೇ ಕದ್ದುಮುಚ್ಚಿ ನೃತ್ಯ ತರಬೇತಿಗೆ ಕಳುಹಿಸುತ್ತಾರೆ. ಇದು ತಂದೆಗೆ ಗೊತ್ತಾಗಿ ದೊಡ್ಡ ಜಗಳವೇ ಆಗುತ್ತದೆ. ಆದರೆ ತಾಯಿ ಎದೆಗುಂದದೆ ಮತ್ತೆ ಮಗಳಿಗೆ ಬೇಕಾದ ಪ್ರೋತ್ಸಾಹವನ್ನು ಧಾರೆ ಎರೆಯುತ್ತಾರೆ. ಇವರಿಗೆ ಒಂದೊಂದಾಗಿ ವೇದಿಕೆ ಸಿಗಲು ಶುರುವಾಯಿತು. ತಂದೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಬಿಡುತ್ತಿರಲಿಲ್ಲ. ಆದರೂ ಕನಸಿನ ಕೂಸನ್ನು ಇಬ್ಬರೂ ಬಿಡಲಾಗದೆ ಹಲವಾರು ವೆದಿಕೆಗಳಲ್ಲಿ ಮನರಂಜನೆ ನೀಡುತ್ತಾರೆ. ಇವರ ನೃತ್ಯವನ್ನು ನೋಡುತ್ತಾ ತಾಯಿಯ ಆ ಖುಷಿಗೆ ಮಿತಿಯೇ ಇರುತ್ತಿರಲಿಲ್ಲ. ಆದರೆ, ಕಾರ್ಯಕ್ರಮ ಮುಗಿದು ಮನೆಗೆ ಬಂದರೆ ತಂದೆ ಚಿಲಕ ಹಾಕಿಕೊಂಡು ಮಲಗಿರುತ್ತಾರೆ. ಎಷ್ಟೇ ಕೂಗಿದರೂ ಎಚ್ಚರವಾಗದಂತೆ ಮಲಗುತ್ತಿದ್ದರು. ತಾಯಿ ಮತ್ತು ಮಗಳು ಇಬ್ಬರೂ ಹೊರಗಡೆನೇ ಮಲಗಿ ಬೆಳಗಾಗಿಸುವ ಪರಿಸ್ಥಿತಿ. ಅದೆಷ್ಟೋ ಬಾರಿ ಹೀಗೆ ಅನುಭವಿಸಿದ್ದಾರೆ. ಅದಕ್ಕೆ ಸರಿಯಾಗಿ ಊರವರ ಕೀಳು ಮಾತುಗಳು. ಒಬ್ಬ ಬಡ ಹೆಣ್ಣುಮಗಳು ಸಾಧನೆಯ ಕನಸು ಕಂಡರೆ ನೋಡೋರೆಲ್ಲ ಹೀಗೇ ಏನೆನೋ ಅರ್ಥಗಳನ್ನು ಕಲ್ಪಿಸಿ ಕೊಡುವುದು ಈ ಸಮಾಜದ ಕೆಟ್ಟ ಚಟ ಅನ್ನಬಹುದು. ಹೀಗೆ ತಂದೆ ಜಗಳ ಆಡಿ ಆಡಿ ಕುಡಿದು ಕುಡಿದೇ ಒಂದು ದಿನ ಕೊನೆಯುಸಿರೆಳೆದರು. ಇವರ ಬಾಲ್ಯದಿಂದಲೂ ಬಂದ ಈ ಕಷ್ಟಗಳನ್ನು ನೆನೆಸಿಕೊಂಡರೆ ಯಾವ ಸಾಧನೆಯೂ ಬೇಡ ಅನ್ನುವ ರೀತಿ ಇತ್ತು. ಆದರೆ, ತಾಯಿಯ ಛಲದಿಂದ ಮಗಳು ಕೂಡ ಛಲ ಬಿಡದೆ ಕಷ್ಟಗಳನ್ನು ಕಣ್ಣೀರಲ್ಲಿ ಆಚೆಗೆರೆದು ಜಯಶಾಲಿಯಾಗಿ ನಿಂತಿದ್ದಾರೆ.

ಶಿಕ್ಷಣದ ವಿಷಯಕ್ಕೆ ಬಂದರೆ, ಇವರು 95% ಅಂಕಗಳಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿನಿ. ಇವರ ಅರ್ಧದಷ್ಟು ವಿದ್ಯಾಭ್ಯಾಸದ ಖರ್ಚನ್ನು ಖ್ಯಾತ ಉದ್ಯಮಿ “ಜಯಂತ್ ನಡುಬೈಲು” ಇವರು ಬರಿಸಿದ್ದಾರೆ ಅನ್ನೋದು ಇವರಿಗೆ ಖುಷಿಯ ವಿಚಾರ. ಹಾಗೇ ಇನ್ನಿತರ ಹಲವಾರು ಸಂಘ ಸಂಸ್ಥೆಗಳು ಆ ರೀತಿ  ಈ ರೀತಿ ಸಹಾಯ ಮಾಡ್ತೀವಿ ಅಂತ ನಾಲ್ಕು ಜನರ ಎದುರು ಹೇಳಿದ್ದಲ್ಲದೆ ಏನೂ ಸಹಾಯ ಮಾಡಿಲ್ಲ ಅನ್ನೋದು ಇವರಿಗೆ ಬೇಸರ ತಂದಿದೆ. ಇವರು ಯಾವುದೇ ಕಾರ್ಯಕ್ರಮಕ್ಕೆ ಇಂತಿಷ್ಟೇ ಸಂಭಾಷಣೆಗಳನ್ನು ಕೊಡಿ ಅಂತ ಕೇಳದೆ, ಬಂದ ಅವಕಾಶಗಳನ್ನು ತಿರಸ್ಕರಿಸಿದೆ, ಇಷ್ಟದಿಂದ ಭರತನಾಟ್ಯ ಪ್ರದರ್ಶನ ಕೊಡುತ್ತಿದ್ದರು. ಅವರು ಕೊಟ್ಟರೆ ಸಂಭಾವನೆ ತಗೋತಿದ್ರು. ಇಲ್ಲಾಂದ್ರೆ ಅವರು ಕೊಟ್ಟ ಗೌರವ ಕಾಣಿಕೆ ಹಿಡ್ಕೊಂಡು ಹಿಂದೆ ಬರ್ತಾ ಇದ್ರು. ಇಂತಹ ನೋವು ಅದೆಷ್ಟೋ ಕಲಾವಿದರು ಅನುಭವಿಸಿರುತ್ತಾರೆ. ಯಾವುದೇ ಸಂಘ ಸಂಸ್ಥೆಗಳಾಗಲಿ ಈ ರೀತಿ ಬಿಟ್ಟಿಯಾಗಿ ಕಲಾವಿದರನ್ನು ಬಳಸಿಕೊಂಡಾಗ ಸ್ವಲ್ಪ ಯೋಚನೆ ಮಾಡಿ. ಕಲಾವಿದರ ಜೀವನವೇ ಅವರ ಕಲೆಯಲ್ಲಿ ಆಧಾರಿತವಾಗಿ ಇರುತ್ತದೆ.

ಇವರು ವೇದಿಕೆಗೆ ಬಂದು ಭರತನಾಟ್ಯ ಪ್ರದರ್ಶನ ಕೊಡುತ್ತಿದ್ದರೆ ಸಿಲ್ಲೆ ಚಪ್ಪಾಳೆಗಳಿಗೆ ಕೊರತೆಯೇ ಇಲ್ಲ. ಯಾಕೆಂದ್ರೆ, ಇವರ ನಾಟ್ಯ ಶೈಲಿ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಅದಕ್ಕಾಗಿ ಇವರಿಗೆ ಸಂದ ಬಿರುದುಗಳು, ಕಲಾ ಜ್ಯೋತಿ, ಸಿರಿ ಗನ್ನಡ, ಪ್ರತಿಭಾ ಸಂಪನ್ನ, ಕಲಾ ಸರಸ್ವತಿ. ಅಲ್ಲದೆ ಡೆನ್ನಾನ ಡೆನ್ನಾನ ಎಂಬ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶ್ರೇಷ್ಠ ಕಲಾವಿದೆಯೆಂದು ಸನ್ಮಾನ ಪಡೆದಿರುತ್ತಾರೆ. ಭರತ ನಾಟ್ಯವನ್ನು “ಸುದರ್ಶನ್ ಭಟ್” ಹಾಗೂ ಸಂಗೀತವನ್ನು “ಶ್ಯಾಮಲಾ ಕುಂಟೂರು” ಇವರಿಂದ  ಕಲಿತು ಪ್ರಾಥಮಿಕ ಶಾಲಾ ಶಿಕ್ಷಕಿ “ಗೀತಾ ನಾರಾಯಣ್” ಬೆನ್ನೆಲುಬಾಗಿ ನಿಂತಿದ್ದು ಇವರ ಖುಷಿಗೆ ಕಾರಣವಾಗಿದೆ ಮತ್ತು ಇವರ ತಾಯಿಯೇ ಇವರ ಎಲ್ಲಾ ಕೆಲಸಗಳಿಗೆ ರೋಲ್ ಮಾಡೆಲ್.

ಇವರಿಗೆ ನೃತ್ಯ, ಹಾಡು ಎಂದರೆ ಎಲ್ಲಿಲ್ಲದ ಪ್ರೀತಿ. ತಾನು ಸದಾ ಅದರ ನೆರಳಲ್ಲೇ ಬದುಕುವ ದೊಡ್ಡ ಕನಸನ್ನು ಹೊಂದಿರುವ ಈ ಬಾಲಿಕೆಗೆ ಇನ್ನಷ್ಟು ಹತ್ತು ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವಂತೆ ದೇವರು ಕರುಣಿಸಲಿ. ಇವರ ಜೀವನ ಎಂದಿಗೂ ಸಂತೋಷದಿಂದ ಕೂಡಿ, ನಾಲ್ಕು ಜನರ ಪ್ರೀತಿಯಿಂದ ಬದುಕಲಿ ಎಂದು ಆಶಿಸೋಣ.

ನಮ್ಮ ಕಲಾವಿದರು ನಮ್ಮ ಹೆಮ್ಮೆ
✒ #ಸಾಯಿ_ದೀಕ್ಷಿತ್_ಪುತ್ತೂರು


Related Posts

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »