TOP STORIES:

FOLLOW US

ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.


ಉಸಿರು ಇರೋ ತನಕ ನಾವು ಪ್ರಪಂಚ ನೋಡ ಬಹುದು, ಉಸಿರು ನಿಂತ ನಂತರ ಜನ ನಮ್ಮನು ನೋಡಬೇಕಾದರೆ ನಾವು ಮಾಡುವ ಸಾಧನೆ ಹಾಗೆ ಇರಬೇಕು.

ಇಲ್ಲೊಬ್ಬರು ಸಕಲ ಕಲಾ ವಲ್ಲಭ ಸಾಧನೆಯ ಪಣ ತೊಟ್ಟು ಹಂತ ಹಂತವಾಗಿ ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.

ಕಾಟಿಪಳ್ಳದ ಚಂದ್ರಹಾಸ್ ಕುಕ್ಯಾನ್ ಮತ್ತು ರತ್ನ ಕೋಟ್ಯಾನ್ ದಂಪತಿಗಳ ಮಗ.

ಇವರು ಎಸ್ ಎಸ್ ಎಲ್ ಸಿ ಮಾಡಿರುವ ಇವರಿಗೆ ಎಸ್ಟಿಡಿ ಡ್ರೀಮ್ ಕಲಾವಿದ ಆಗುವ ಬಹು ದೊಡ್ಡ ಕನಸಿದೆ.

ಇವರು ತನ್ನ ಪ್ರಾಥಮಿಕ ವಿದ್ಯಾಬ್ಯಾಸ ವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು

ಸಂಗೀತ, ಚಿತ್ರಕಲೆ, ಮರುಳಾಕೃತಿ, ನಿರೂಪಣೆ, ನಟನೆ ಎಲ್ಲಾದರಲ್ಲಿಯೂ ಆಸಕ್ತಿ ಹೊಂದಿರುವ ಇವರಿಗೆ ಇವರ ಗುರುಗಳಾದ ಪದ್ಮನಾಭ ಸುರತ್ಕಲ್, ಬೆನ್ನೆಲುಬಾಗಿ ನಿಂತವರು. ಸಂಪೂರ್ಣ ಸಹಕಾರ ನೀಡಿದವರು ಪ್ರಮೀಳಾ ದೀಪಕ್ ಪೆರ್ಮುದೆ, ಸತೀಶ್ ಮುಂಡ್ಕೂರು ಮುಂಬೈ,ಹಾಗೆಯೇ ತಂದೆ ತಾಯಿಯ,ಮಡದಿ,ಮಕ್ಕಳ ಸಂಪೂರ್ಣ ಪ್ರೋತ್ಸಾಹ ಬೆಂಬಲವಿದೆ.

ಇವರ ಕೈಯಿಂದ ಅನೇಕ ಗಣ್ಯ ವ್ಯೆಕ್ತಿಗಳ ಪ್ರತಿರೂಪಗಳು ಅದ್ಭುತವಾಗಿ ಮೂಡಿ ಬಂದಿದೆ ” ಮರಳಾಕೃತಿಯಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿ ತನ್ನ ಮುಡಿಗೆರಿಸಿ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು.

ಕಾರ್ಕಳ ಜೈನ ಸ್ವಾಮೀಜಿ, ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶ ಪುರ, ಕರವಳಿ ಫ್ರೆಂಡ್ಸ್ ಕ್ಲಬ್,ಕರ್ನಾಟಕ ಸೇವಾ ವೃಂದ ಸುರತ್ಕಲ್, ಮಣಿಪಾಲದ ಕಾರ್ಯಕ್ರಮದಲ್ಲಿ, ವಿನಾಯಕ ಮಂದಿರ ಕಾಟಿಪಳ್ಳ, ಕುಳಾಯಿ ನಾರಾಯಣ ಗುರು ಸಮಾಜ ಸೇವಾ ಸಂಘ, ರಾಮಾಂಜನೇಯ ವ್ಯಾಯಾಮ ಶಾಲೆ ಕಾಟಿಪಳ್ಳ, ಕುವೈಟ್, ಮುಂಬೈ, ಪಡುಬಿದ್ರೆ, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ, ಹಿಂದೂ ಧಾರ್ಮಿಕ ಸೇವಾ ಸಮಿತಿ ಗಣೇಶ ಪುರ,ಕೊಟ್ಟಾರ ಕುಕ್ಯಾನ್ ಕುಟುಂಬ, ತ್ರಿಶೂಲ್ ಡ್ಯಾನ್ಸ್ ಕಾಟಿಪಳ್ಳ, ಮುಂಬೈ ಗರಡಿ, ಮಂಗಲಪೇಟೆ, ಕುದ್ರೋಳಿ ದಸರಾ,ಗಣೇಶ ಪುರ ಆದರ್ಶ ಯುವಕ ಮಂಡಲ ಕೈಕಂಬ ಮತ್ತು ಕುಡು ಅರಿ ಸಿನಿಮಾ. ಅನೇಕ ಕಡೆ ಇವರ ಪ್ರತಿಭೆಗೆ ಸನ್ಮಾನಗಳು ಆಗಿದೆ.

ಇವರ ಈ ಪ್ರತಿಭೆ ಅನೇಕ ಪ್ರಶಸ್ತಿ ಪುರಸ್ಕಾರ ದೊರತಿವೆ, ಕಡು ಅರಿ ಮತ್ತು ಕುರು ಕುರು ಎಂಬ ಎರಡು ಆಲ್ಬಮ್ ಸಾಂಗ್ ಹಾಡಿ ಜನ ಮನ ಗೆದ್ದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕೇವಲ ಹಾಡು ಚಿತ್ರ ಕಲೆ ಮಾತ್ರ ಅಲ್ಲದೆ ನಟನೆಯಲ್ಲಿಯೂ ತನ್ನ ಪ್ರತಿಭೇನ ತೋರಿಸಿದ್ದಾರೆ,ಇವರು ಆ ಒಂದು ಕೆರೆ ಎಂಬ ತುಳು ಕಿರು ಚಿತ್ರ  ಸಂಪೂರ್ಣ ನಾಯಕನಾಗಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ, ಸಾವಿರಾರು ವೇದಿಕೆ ಹಾಡಿ ದ ಕೀರ್ತಿ ಇವರದು 2000 ಕ್ಕೂ ಹೆಚ್ಚು ರಸಮಂಜರಿ ಕಾರ್ಯಕ್ರಮ, 60 ಕ್ಕೂ ಹೆಚ್ಚು ಕಲಾ ಕುಂಚದಿಂದ ಜನರ ಮನವನ್ನು ಮಂತ್ರ ಮುಗ್ದವಾಗಿಸಿದ ಮಾಂತ್ರಿಕ.

ಇವರು ಹಾಡಿರುವ ಕುಡು ಅರಿ ಹಾಡಿಗೆ ಉತ್ತಮ ಗಾಯಕ ಎಂಬ ಪ್ರಶಸ್ತಿ ಇವರಿಗೆ ದೊರಕಿದೆ. ಹೊರದೇಶಗಳಲ್ಲಿ ತನ್ನ ಗಾಯನ ಹಾಗೂ ಚಿತ್ರ ಕಲೆಯನ್ನು ಪ್ರದರ್ಶಿಸಿ ತುಳುನಾಡಿನ ಹೆಮ್ಮೆಯ ಮಗ ಎಣಿ ಸಿಕೊಂದ್ದಾರೆ.

ಇವರು ಹಾಡಿರುವ ಕೊರಗಜ್ಜ ತುಳು ಭಕ್ತಿ ಗೀತೆ “ಭಕ್ತಿದ ಅಸರ್ “ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.

ಇಷ್ಟೇ ಅಲ್ಲದೆ ವಾಹನಗಳಿಗೆ ಸ್ಟಿಕರ್ ಕಟ್ಟಿಗ್ ಬ್ಯಾನರ್ ಬರೆಯುದು ಇವರ ವೃತ್ತಿ ಆಗಿದೆ .

ಇಂತಹ ಒಬ್ಬ ಅದ್ಭುತ ಪ್ರತಿಭೆಯ ಬಗ್ಗೆ ಎಷ್ಟು ಬರೆದರು ಅದು ಮುಗಿಯದ ಅದ್ಯಾಯ , ಎಸ್ ಪಿ ಬಾಲಸುಬ್ರಮಣ್ಯ ಮತ್ತು ಎಸ್ ಜಾನಕಿ ಯವರಿಂದಲೇ ಭೇಷ್ ಎಣಿಸಿಕೊಂಡ ದೇವಿ ಕಿರಣ್ ಇವರ ಕಲಾ ಬದುಕಿಗೆ ಸರಸ್ವತಿ ದೇವಿಯ ಅನುಗ್ರಹ ಸದಾ ಇರಲಿ ಇವರ ಕನಸು ನನಸಾಗಲಿ ಎಂದು ಹಾರೈಸುವ.

✍️ ಪ್ರಶಾಂತ್ ಅಂಚನ್ ಮಸ್ಕತ್ತ್

 


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »