TOP STORIES:

FOLLOW US

ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.


ಉಸಿರು ಇರೋ ತನಕ ನಾವು ಪ್ರಪಂಚ ನೋಡ ಬಹುದು, ಉಸಿರು ನಿಂತ ನಂತರ ಜನ ನಮ್ಮನು ನೋಡಬೇಕಾದರೆ ನಾವು ಮಾಡುವ ಸಾಧನೆ ಹಾಗೆ ಇರಬೇಕು.

ಇಲ್ಲೊಬ್ಬರು ಸಕಲ ಕಲಾ ವಲ್ಲಭ ಸಾಧನೆಯ ಪಣ ತೊಟ್ಟು ಹಂತ ಹಂತವಾಗಿ ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.

ಕಾಟಿಪಳ್ಳದ ಚಂದ್ರಹಾಸ್ ಕುಕ್ಯಾನ್ ಮತ್ತು ರತ್ನ ಕೋಟ್ಯಾನ್ ದಂಪತಿಗಳ ಮಗ.

ಇವರು ಎಸ್ ಎಸ್ ಎಲ್ ಸಿ ಮಾಡಿರುವ ಇವರಿಗೆ ಎಸ್ಟಿಡಿ ಡ್ರೀಮ್ ಕಲಾವಿದ ಆಗುವ ಬಹು ದೊಡ್ಡ ಕನಸಿದೆ.

ಇವರು ತನ್ನ ಪ್ರಾಥಮಿಕ ವಿದ್ಯಾಬ್ಯಾಸ ವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು

ಸಂಗೀತ, ಚಿತ್ರಕಲೆ, ಮರುಳಾಕೃತಿ, ನಿರೂಪಣೆ, ನಟನೆ ಎಲ್ಲಾದರಲ್ಲಿಯೂ ಆಸಕ್ತಿ ಹೊಂದಿರುವ ಇವರಿಗೆ ಇವರ ಗುರುಗಳಾದ ಪದ್ಮನಾಭ ಸುರತ್ಕಲ್, ಬೆನ್ನೆಲುಬಾಗಿ ನಿಂತವರು. ಸಂಪೂರ್ಣ ಸಹಕಾರ ನೀಡಿದವರು ಪ್ರಮೀಳಾ ದೀಪಕ್ ಪೆರ್ಮುದೆ, ಸತೀಶ್ ಮುಂಡ್ಕೂರು ಮುಂಬೈ,ಹಾಗೆಯೇ ತಂದೆ ತಾಯಿಯ,ಮಡದಿ,ಮಕ್ಕಳ ಸಂಪೂರ್ಣ ಪ್ರೋತ್ಸಾಹ ಬೆಂಬಲವಿದೆ.

ಇವರ ಕೈಯಿಂದ ಅನೇಕ ಗಣ್ಯ ವ್ಯೆಕ್ತಿಗಳ ಪ್ರತಿರೂಪಗಳು ಅದ್ಭುತವಾಗಿ ಮೂಡಿ ಬಂದಿದೆ ” ಮರಳಾಕೃತಿಯಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿ ತನ್ನ ಮುಡಿಗೆರಿಸಿ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು.

ಕಾರ್ಕಳ ಜೈನ ಸ್ವಾಮೀಜಿ, ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶ ಪುರ, ಕರವಳಿ ಫ್ರೆಂಡ್ಸ್ ಕ್ಲಬ್,ಕರ್ನಾಟಕ ಸೇವಾ ವೃಂದ ಸುರತ್ಕಲ್, ಮಣಿಪಾಲದ ಕಾರ್ಯಕ್ರಮದಲ್ಲಿ, ವಿನಾಯಕ ಮಂದಿರ ಕಾಟಿಪಳ್ಳ, ಕುಳಾಯಿ ನಾರಾಯಣ ಗುರು ಸಮಾಜ ಸೇವಾ ಸಂಘ, ರಾಮಾಂಜನೇಯ ವ್ಯಾಯಾಮ ಶಾಲೆ ಕಾಟಿಪಳ್ಳ, ಕುವೈಟ್, ಮುಂಬೈ, ಪಡುಬಿದ್ರೆ, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ, ಹಿಂದೂ ಧಾರ್ಮಿಕ ಸೇವಾ ಸಮಿತಿ ಗಣೇಶ ಪುರ,ಕೊಟ್ಟಾರ ಕುಕ್ಯಾನ್ ಕುಟುಂಬ, ತ್ರಿಶೂಲ್ ಡ್ಯಾನ್ಸ್ ಕಾಟಿಪಳ್ಳ, ಮುಂಬೈ ಗರಡಿ, ಮಂಗಲಪೇಟೆ, ಕುದ್ರೋಳಿ ದಸರಾ,ಗಣೇಶ ಪುರ ಆದರ್ಶ ಯುವಕ ಮಂಡಲ ಕೈಕಂಬ ಮತ್ತು ಕುಡು ಅರಿ ಸಿನಿಮಾ. ಅನೇಕ ಕಡೆ ಇವರ ಪ್ರತಿಭೆಗೆ ಸನ್ಮಾನಗಳು ಆಗಿದೆ.

ಇವರ ಈ ಪ್ರತಿಭೆ ಅನೇಕ ಪ್ರಶಸ್ತಿ ಪುರಸ್ಕಾರ ದೊರತಿವೆ, ಕಡು ಅರಿ ಮತ್ತು ಕುರು ಕುರು ಎಂಬ ಎರಡು ಆಲ್ಬಮ್ ಸಾಂಗ್ ಹಾಡಿ ಜನ ಮನ ಗೆದ್ದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕೇವಲ ಹಾಡು ಚಿತ್ರ ಕಲೆ ಮಾತ್ರ ಅಲ್ಲದೆ ನಟನೆಯಲ್ಲಿಯೂ ತನ್ನ ಪ್ರತಿಭೇನ ತೋರಿಸಿದ್ದಾರೆ,ಇವರು ಆ ಒಂದು ಕೆರೆ ಎಂಬ ತುಳು ಕಿರು ಚಿತ್ರ  ಸಂಪೂರ್ಣ ನಾಯಕನಾಗಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ, ಸಾವಿರಾರು ವೇದಿಕೆ ಹಾಡಿ ದ ಕೀರ್ತಿ ಇವರದು 2000 ಕ್ಕೂ ಹೆಚ್ಚು ರಸಮಂಜರಿ ಕಾರ್ಯಕ್ರಮ, 60 ಕ್ಕೂ ಹೆಚ್ಚು ಕಲಾ ಕುಂಚದಿಂದ ಜನರ ಮನವನ್ನು ಮಂತ್ರ ಮುಗ್ದವಾಗಿಸಿದ ಮಾಂತ್ರಿಕ.

ಇವರು ಹಾಡಿರುವ ಕುಡು ಅರಿ ಹಾಡಿಗೆ ಉತ್ತಮ ಗಾಯಕ ಎಂಬ ಪ್ರಶಸ್ತಿ ಇವರಿಗೆ ದೊರಕಿದೆ. ಹೊರದೇಶಗಳಲ್ಲಿ ತನ್ನ ಗಾಯನ ಹಾಗೂ ಚಿತ್ರ ಕಲೆಯನ್ನು ಪ್ರದರ್ಶಿಸಿ ತುಳುನಾಡಿನ ಹೆಮ್ಮೆಯ ಮಗ ಎಣಿ ಸಿಕೊಂದ್ದಾರೆ.

ಇವರು ಹಾಡಿರುವ ಕೊರಗಜ್ಜ ತುಳು ಭಕ್ತಿ ಗೀತೆ “ಭಕ್ತಿದ ಅಸರ್ “ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.

ಇಷ್ಟೇ ಅಲ್ಲದೆ ವಾಹನಗಳಿಗೆ ಸ್ಟಿಕರ್ ಕಟ್ಟಿಗ್ ಬ್ಯಾನರ್ ಬರೆಯುದು ಇವರ ವೃತ್ತಿ ಆಗಿದೆ .

ಇಂತಹ ಒಬ್ಬ ಅದ್ಭುತ ಪ್ರತಿಭೆಯ ಬಗ್ಗೆ ಎಷ್ಟು ಬರೆದರು ಅದು ಮುಗಿಯದ ಅದ್ಯಾಯ , ಎಸ್ ಪಿ ಬಾಲಸುಬ್ರಮಣ್ಯ ಮತ್ತು ಎಸ್ ಜಾನಕಿ ಯವರಿಂದಲೇ ಭೇಷ್ ಎಣಿಸಿಕೊಂಡ ದೇವಿ ಕಿರಣ್ ಇವರ ಕಲಾ ಬದುಕಿಗೆ ಸರಸ್ವತಿ ದೇವಿಯ ಅನುಗ್ರಹ ಸದಾ ಇರಲಿ ಇವರ ಕನಸು ನನಸಾಗಲಿ ಎಂದು ಹಾರೈಸುವ.

✍️ ಪ್ರಶಾಂತ್ ಅಂಚನ್ ಮಸ್ಕತ್ತ್

 


Share:

More Posts

Category

Send Us A Message

Related Posts

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »