TOP STORIES:

FOLLOW US

ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.


ಉಸಿರು ಇರೋ ತನಕ ನಾವು ಪ್ರಪಂಚ ನೋಡ ಬಹುದು, ಉಸಿರು ನಿಂತ ನಂತರ ಜನ ನಮ್ಮನು ನೋಡಬೇಕಾದರೆ ನಾವು ಮಾಡುವ ಸಾಧನೆ ಹಾಗೆ ಇರಬೇಕು.

ಇಲ್ಲೊಬ್ಬರು ಸಕಲ ಕಲಾ ವಲ್ಲಭ ಸಾಧನೆಯ ಪಣ ತೊಟ್ಟು ಹಂತ ಹಂತವಾಗಿ ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.

ಕಾಟಿಪಳ್ಳದ ಚಂದ್ರಹಾಸ್ ಕುಕ್ಯಾನ್ ಮತ್ತು ರತ್ನ ಕೋಟ್ಯಾನ್ ದಂಪತಿಗಳ ಮಗ.

ಇವರು ಎಸ್ ಎಸ್ ಎಲ್ ಸಿ ಮಾಡಿರುವ ಇವರಿಗೆ ಎಸ್ಟಿಡಿ ಡ್ರೀಮ್ ಕಲಾವಿದ ಆಗುವ ಬಹು ದೊಡ್ಡ ಕನಸಿದೆ.

ಇವರು ತನ್ನ ಪ್ರಾಥಮಿಕ ವಿದ್ಯಾಬ್ಯಾಸ ವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು

ಸಂಗೀತ, ಚಿತ್ರಕಲೆ, ಮರುಳಾಕೃತಿ, ನಿರೂಪಣೆ, ನಟನೆ ಎಲ್ಲಾದರಲ್ಲಿಯೂ ಆಸಕ್ತಿ ಹೊಂದಿರುವ ಇವರಿಗೆ ಇವರ ಗುರುಗಳಾದ ಪದ್ಮನಾಭ ಸುರತ್ಕಲ್, ಬೆನ್ನೆಲುಬಾಗಿ ನಿಂತವರು. ಸಂಪೂರ್ಣ ಸಹಕಾರ ನೀಡಿದವರು ಪ್ರಮೀಳಾ ದೀಪಕ್ ಪೆರ್ಮುದೆ, ಸತೀಶ್ ಮುಂಡ್ಕೂರು ಮುಂಬೈ,ಹಾಗೆಯೇ ತಂದೆ ತಾಯಿಯ,ಮಡದಿ,ಮಕ್ಕಳ ಸಂಪೂರ್ಣ ಪ್ರೋತ್ಸಾಹ ಬೆಂಬಲವಿದೆ.

ಇವರ ಕೈಯಿಂದ ಅನೇಕ ಗಣ್ಯ ವ್ಯೆಕ್ತಿಗಳ ಪ್ರತಿರೂಪಗಳು ಅದ್ಭುತವಾಗಿ ಮೂಡಿ ಬಂದಿದೆ ” ಮರಳಾಕೃತಿಯಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿ ತನ್ನ ಮುಡಿಗೆರಿಸಿ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು.

ಕಾರ್ಕಳ ಜೈನ ಸ್ವಾಮೀಜಿ, ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶ ಪುರ, ಕರವಳಿ ಫ್ರೆಂಡ್ಸ್ ಕ್ಲಬ್,ಕರ್ನಾಟಕ ಸೇವಾ ವೃಂದ ಸುರತ್ಕಲ್, ಮಣಿಪಾಲದ ಕಾರ್ಯಕ್ರಮದಲ್ಲಿ, ವಿನಾಯಕ ಮಂದಿರ ಕಾಟಿಪಳ್ಳ, ಕುಳಾಯಿ ನಾರಾಯಣ ಗುರು ಸಮಾಜ ಸೇವಾ ಸಂಘ, ರಾಮಾಂಜನೇಯ ವ್ಯಾಯಾಮ ಶಾಲೆ ಕಾಟಿಪಳ್ಳ, ಕುವೈಟ್, ಮುಂಬೈ, ಪಡುಬಿದ್ರೆ, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ, ಹಿಂದೂ ಧಾರ್ಮಿಕ ಸೇವಾ ಸಮಿತಿ ಗಣೇಶ ಪುರ,ಕೊಟ್ಟಾರ ಕುಕ್ಯಾನ್ ಕುಟುಂಬ, ತ್ರಿಶೂಲ್ ಡ್ಯಾನ್ಸ್ ಕಾಟಿಪಳ್ಳ, ಮುಂಬೈ ಗರಡಿ, ಮಂಗಲಪೇಟೆ, ಕುದ್ರೋಳಿ ದಸರಾ,ಗಣೇಶ ಪುರ ಆದರ್ಶ ಯುವಕ ಮಂಡಲ ಕೈಕಂಬ ಮತ್ತು ಕುಡು ಅರಿ ಸಿನಿಮಾ. ಅನೇಕ ಕಡೆ ಇವರ ಪ್ರತಿಭೆಗೆ ಸನ್ಮಾನಗಳು ಆಗಿದೆ.

ಇವರ ಈ ಪ್ರತಿಭೆ ಅನೇಕ ಪ್ರಶಸ್ತಿ ಪುರಸ್ಕಾರ ದೊರತಿವೆ, ಕಡು ಅರಿ ಮತ್ತು ಕುರು ಕುರು ಎಂಬ ಎರಡು ಆಲ್ಬಮ್ ಸಾಂಗ್ ಹಾಡಿ ಜನ ಮನ ಗೆದ್ದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕೇವಲ ಹಾಡು ಚಿತ್ರ ಕಲೆ ಮಾತ್ರ ಅಲ್ಲದೆ ನಟನೆಯಲ್ಲಿಯೂ ತನ್ನ ಪ್ರತಿಭೇನ ತೋರಿಸಿದ್ದಾರೆ,ಇವರು ಆ ಒಂದು ಕೆರೆ ಎಂಬ ತುಳು ಕಿರು ಚಿತ್ರ  ಸಂಪೂರ್ಣ ನಾಯಕನಾಗಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ, ಸಾವಿರಾರು ವೇದಿಕೆ ಹಾಡಿ ದ ಕೀರ್ತಿ ಇವರದು 2000 ಕ್ಕೂ ಹೆಚ್ಚು ರಸಮಂಜರಿ ಕಾರ್ಯಕ್ರಮ, 60 ಕ್ಕೂ ಹೆಚ್ಚು ಕಲಾ ಕುಂಚದಿಂದ ಜನರ ಮನವನ್ನು ಮಂತ್ರ ಮುಗ್ದವಾಗಿಸಿದ ಮಾಂತ್ರಿಕ.

ಇವರು ಹಾಡಿರುವ ಕುಡು ಅರಿ ಹಾಡಿಗೆ ಉತ್ತಮ ಗಾಯಕ ಎಂಬ ಪ್ರಶಸ್ತಿ ಇವರಿಗೆ ದೊರಕಿದೆ. ಹೊರದೇಶಗಳಲ್ಲಿ ತನ್ನ ಗಾಯನ ಹಾಗೂ ಚಿತ್ರ ಕಲೆಯನ್ನು ಪ್ರದರ್ಶಿಸಿ ತುಳುನಾಡಿನ ಹೆಮ್ಮೆಯ ಮಗ ಎಣಿ ಸಿಕೊಂದ್ದಾರೆ.

ಇವರು ಹಾಡಿರುವ ಕೊರಗಜ್ಜ ತುಳು ಭಕ್ತಿ ಗೀತೆ “ಭಕ್ತಿದ ಅಸರ್ “ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.

ಇಷ್ಟೇ ಅಲ್ಲದೆ ವಾಹನಗಳಿಗೆ ಸ್ಟಿಕರ್ ಕಟ್ಟಿಗ್ ಬ್ಯಾನರ್ ಬರೆಯುದು ಇವರ ವೃತ್ತಿ ಆಗಿದೆ .

ಇಂತಹ ಒಬ್ಬ ಅದ್ಭುತ ಪ್ರತಿಭೆಯ ಬಗ್ಗೆ ಎಷ್ಟು ಬರೆದರು ಅದು ಮುಗಿಯದ ಅದ್ಯಾಯ , ಎಸ್ ಪಿ ಬಾಲಸುಬ್ರಮಣ್ಯ ಮತ್ತು ಎಸ್ ಜಾನಕಿ ಯವರಿಂದಲೇ ಭೇಷ್ ಎಣಿಸಿಕೊಂಡ ದೇವಿ ಕಿರಣ್ ಇವರ ಕಲಾ ಬದುಕಿಗೆ ಸರಸ್ವತಿ ದೇವಿಯ ಅನುಗ್ರಹ ಸದಾ ಇರಲಿ ಇವರ ಕನಸು ನನಸಾಗಲಿ ಎಂದು ಹಾರೈಸುವ.

✍️ ಪ್ರಶಾಂತ್ ಅಂಚನ್ ಮಸ್ಕತ್ತ್

 


Share:

More Posts

Category

Send Us A Message

Related Posts

ಬಹರೈನ್ ನಲ್ಲಿ ನಡೆದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ


Share       ಮುಂಬಯಿ, (ಆರ್‌ಬಿಐ) ಜ.೧೧ : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ


Read More »

ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ


Share       ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ  ಆಮಂತ್ರಣ ಬಿಡುಗಡೆ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಯುವವಾಹಿನಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್


Read More »

26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ಕೇಶವ ಕೋಟ್ಯಾನ್ ಅವರಿಗೆ ಆಹ್ವಾನ


Share       ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ. 80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ


Read More »

ಭರತನಾಟ್ಯದಲ್ಲಿ ವಿಧುಷಿ ಎಂಬ ಗೌರವ ಪಡೆದ ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು


Share       ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು  ನಿತ್ಯಾನಂದ ಮತ್ತು ತುಳಸಿಯವರ ಪುತ್ರಿ ಗುರು ವಿಧುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಭರತಾಂಜಲಿ (ಆರ್) ಕೊಟ್ಟಾರದಲ್ಲಿ ಕಲಿಕೆ ಅದಿತಿ ಅವರು


Read More »

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”


Share       ಮುಂಬಯಿ:- ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ,


Read More »

ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಉಮೇಶ್ ಬಂಟ್ವಾಳ್ ಆಯ್ಕೆ


Share       ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.   ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರ‌‌ವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ


Read More »