TOP STORIES:

ಸಿಐಎಸ್‌ಎನಲ್ಲಿ ವಿಶ್ವಕ್ಕೆ ಅಗ್ರಸ್ಥಾನಿ ಗ್ರಾಮೀಣ ಪ್ರತಿಭೆ ಹೆಬ್ರಿ ಸಪ್ನಾ ಪೂಜಾರಿ ಸಾಧನೆ ಯುವ ಸಮುದಾಯಕ್ಕೆ ಮಾದರಿ


ಸಿಐಎಸ್‌ಎನಲ್ಲಿ ವಿಶ್ವಕ್ಕೆ ಅಗ್ರಸ್ಥಾನಿ

ಗ್ರಾಮೀಣ ಪ್ರತಿಭೆ ಹೆಬ್ರಿ ಸಪ್ನಾ ಪೂಜಾರಿ ಸಾಧನೆ | ಯುವ ಸಮುದಾಯಕ್ಕೆ ಮಾದರಿ

ಬದುಕಿನಲ್ಲಿ ಆಶಾವಾದವೇ ಛಲಕ್ಕೆ ಮೂಲ ಕಾರಣ. ಛಲವುಳ್ಳ ಬದುಕು ಸಾಧನೆಯ ಮೊದಲ ಹೆಜ್ಜೆ. ಅಂತಹ ಸಾಧನೆಯನ್ನು ಬೆನ್ನತ್ತಿಯಶಸ್ವಿಯಾದವರು ಹೆಬ್ರಿಯ ಸಪ್ನಾ ಪೂಜಾರಿ.

ಹೆಬ್ರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯೊಬ್ಬಳು ಅಂತಾರಾಷ್ಟಿçà ಸಂಸ್ಥೆಯಾದ ಐಸಾಕನಡೆಸಿದ 2022ನೇ ಸಾಲಿನಲ್ಲಿ ಸರ್ಟಿಫೈಡ್ ಇನ್ ಫಾರ್ಮೇಶನ್ ಸಿಸ್ಟಮ್ ಅಡಿಟರ್ (ಸಿಐಎಸ್‌ಎ) ಪರೀಕ್ಷೆಯಲ್ಲಿ ವಿಶ್ವಕ್ಕೆ ಟಾಪರ್ಆಗಿ ಹೊರಹೊಮ್ಮಿದ್ದಾರೆ. ಇಂತಹ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಮೆರಿಕಾದಬೋಸ್ಟನ್‌ನಲ್ಲಿ ಇತ್ತೀಚೆಗೆ ನಡೆದ ಡಿಜಿಟಲ್ ಟ್ರಸ್ಟ್ ವರ್ಲ್ಡ್ ಕಾನ್ಪರೆನ್ಸ್ ನಲ್ಲಿ ಇವರ ಸಾಧನೆಗೆ ಗೌರವ ಸನ್ಮಾನ ಲಭಿಸಿದೆ.

ಉಡುಪಿ ಜಿಲ್ಲೆ ಹೆಬ್ರಿಯ ಲೀಲಾವತಿ ಮತ್ತು ಭೋಜ ಪೂಜಾರಿ ದಂಪತಿಗಳ ಪುತ್ರಿಯಾದ ಸಪ್ನಾ ಅವರ ಹುಟ್ಟೂರು ಪೆರ್ಡೂರಿನಬೆಳ್ಳರ್ಪಾಡಿಯಲ್ಲಿ ಹಾಗೂ ಬೆಳೆದದ್ದು ಹೆಬ್ರಿ ಜರ್ವತ್ತಿನ ಕೂಡು ಕುಟುಂಬದಲ್ಲಿ. ಆರಂಭಿಕ ಪ್ರಾಥಮಿಕ ಶಿಕ್ಷಣವನ್ನು ಊರಿನ ಸರಕಾರಿಶಾಲೆಯಲ್ಲಿ ಪಡೆದರು. ಬಳಿಕ ಮುದ್ರಾಡಿಯ ಎಂಎನ್‌ಡಿಎಸ್‌ಎAನಲ್ಲಿ ಹೈಸ್ಕೂಲ್, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿಪದವಿಪೂರ್ವ ಶಿಕ್ಷಣ, ಬೆಂಗಳೂರಿನ ಪೆಸಿಟ್‌ನಲ್ಲಿ ಬಿಇ ಶಿಕ್ಷಣ ಮುಗಿಸಿದರು. ಇವರ ಶಿಕ್ಷಣಕ್ಕೆ ಇಡೀ ಕುಟುಂಬ ಸಾಥ್ ನೀಡಿತ್ತು. ಬೆಂಗಳೂರಿಗೆ ತೆರಳಿದ ಸಂದರ್ಭ ಅಮ್ಮ ಕೂಡಾ ಜತೆಯಲ್ಲೇ ವಾಸ್ತವ್ಯ ಹೂಡಿ ಮಗಳ ವಿದ್ಯಾಭ್ಯಾಸಕ್ಕೆ ಬೆನ್ನಲುಬಾಗಿ ನಿಂತಿದ್ದರು. ಸಹೋದರ ಪ್ರಸನ್ನ ಕುಮಾರ್ ಅವರ ಮಾರ್ಗದರ್ಶನದಂತೆ ಶಿಕ್ಷಣದ ಬಳಿಕ ವೃತ್ತಿ ಜೀವನಕ್ಕೆ ಆಯ್ಕೆ ಮಾಡಿಕೊಂಡಿರುವುದು ಐಟಿಕಂಪನಿ.

ಮತ್ತಷ್ಟು ಸಾಧನೆ ತವಕ: ನಾರಾವಿ ತಿರ್ತೊಟ್ಟು ದಿ. ಬಾಬು ಪೂಜಾರಿ ಅವರ ಮೊಮ್ಮಗ ಪ್ರವೀಣ್ ಪೂಜಾರಿ ಅವರನ್ನು ಸಪ್ನಾವಿವಾಹವಾದರು. ಸಾಮಾನ್ಯವಾಗಿ ಉದ್ಯೋಗ ಸಿಕ್ಕ ಬಳಿಕ ಬಹುತೇಕ ಮಂದಿ ನಿರಾಳರಾಗುತ್ತಾರೆ. ಅದರಲ್ಲೂ ಮದುವೆಯಾದಬಳಿಕ ಸಾಕು ಎಂಬ ಭಾವನೆ ಮೂಡುತ್ತದೆ. ಆದರೆ ಸಪ್ನಾ ಅವರಿಗೆ ಮತ್ತಷ್ಟು ಕಲಿಯಬೇಕು, ಹೊಸತನಕ್ಕೆ ತೆರೆದುಕೊಳ್ಳಬೇಕು, ಸಾಧನೆಯ ಮತ್ತೊಂದು ಮಗ್ಗುಲು ಮುಟ್ಟಬೇಕು ಎಂಬ ಕನಸು ಮತ್ತಷ್ಟು ಚಿಗುರೊಡೆಯಿತು. ಇದಕ್ಕೆ ತಂದೆ, ತಾಯಿ, ಗಂಡ, ಅತ್ತೆ, ಮಾವ ಸೇರಿದಂತೆ ಸಂಪೂರ್ಣ ಕುಟುಂಬ ಬೆನ್ನೆಲುಬಾಗಿ ನಿಂತಿತು. ಇದಕ್ಕೆ ಪೂರಕವಾಗಿ ಉದ್ಯೋಗ ಮಾಡುತ್ತಿದ್ದ ಐಟಿ ಅಡಿಟಿಂಗ್ಕ್ಷೇತ್ರದಲ್ಲೇ ಮತ್ತಷ್ಟು ಅಧ್ಯಯನಕ್ಕೆ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಪ್ನಾ, ಅಧ್ಯಯನದಲ್ಲಿತೊಡಗಿಸಿಕೊಂಡರು. ಸರ್ಟಿಫೈಡ್ ಇನ್ ಫಾರ್ಮೇಶನ್ ಸಿಸ್ಟಮ್ ಅಡಿಟರ್ (ಸಿಐಎಸ್‌ಎ) ಪರೀಕ್ಷೆಗೆ ಸಿದ್ಧತೆ ನಡೆಸಿದರು. ಪರೀಕ್ಷೆಯು ಕಠಿಣ ಹಾಗೂ ಕ್ಲಿಷ್ಟಕರವಾಗಿರುವುದರಿಂದ ವಿಶ್ವದಲ್ಲಿ ಕೆಲವೇ ಕೆಲವು ಮಂದಿ ಬರೆಯುತ್ತಾರೆ. ಪರೀಕ್ಷೆಯಲ್ಲಿ ಸಪ್ನಾಅವರು ವಿಶ್ವಕ್ಕೆ ಟಾಪರ್ ಆಗಿ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ. 2022ರಲ್ಲಿ ಇವರ ಜತೆ ಜರ್ಮನಿಯ ಯುವಕನೊಬ್ಬಟಾಪರ್ ಸ್ಥಾನ ಹಂಚಿಕೊAಡಿದ್ದಾರೆ.

ಯುವ ಸಮುದಾಯಕ್ಕೆ ಮಾದರಿ: ಸಪ್ನಾ ಅವರು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪರೀಕ್ಷೆಯ ಬಗ್ಗೆ ಮಾಹಿತಿಕಲೆಹಾಕಿ, ಬಿಡುವಿನ ಸಮಯದಲ್ಲಿ ತಜ್ಞರಿಂದ ಮಾರ್ಗದರ್ಶನ ಪಡೆದರು. ಒಂದೆಡೆ ಗಂಡ, ಮಕ್ಕಳನ್ನೊಳಗೊಂಡ ಕುಟುಂಬ, ಇನ್ನೊಂದೆಡೆ ಉದ್ಯೋಗ. ಇವೆರಡರ ಮಧ್ಯೆ ಉನ್ನತ ಶಿಕ್ಷಣವನ್ನು ಮುಂದುವರಿಸಿ ಯಶಸ್ಸು ಕಂಡ ಅವರ ಸಾಧನೆ ಯುವ ಸಮಾಜಕ್ಕೆಮಾದರಿಯಾಗಿದೆ.

ನನಗೆ ಬಾಲ್ಯದಿಂದಲೂ ಒಳ್ಳೆಯದಾಗಿ ಕಲಿತು ಸಾಧನೆ ಮಾಡಬೇಕೆಂಬ ಹಂಬಲ ಇತ್ತು. ಅದಕ್ಕೆ ಸರಿಯಾಗಿ ಪ್ರಾಥಮಿಕ ಮತ್ತುಪ್ರೌಢಶಿಕ್ಷಣ ಭದ್ರ ಅಡಿಪಾಯ ಒದಗಿಸಿತು. ಐಟಿ ಕ್ಷೇತ್ರಕ್ಕೆ ಹೋದ ಬಳಿಕ ಸಿಐಎಸ್‌ಎ ಪರೀಕ್ಷೆ ಬಗ್ಗೆ ಆಸಕ್ತಿ ಹುಟ್ಟಿತು. ಕುಟುಂಬ, ಮನೆಯವರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ಇಂದಿನ ಯುವ ಸಮಾಜಕ್ಕೂ ನನ್ನ ಸಲಹೆ ಅವಕಾಶಗಳನ್ನುಬಳಸಿಕೊಂಡು ಸಾಧನೆ ಮಾಡೋಣ. ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಅದರಲ್ಲಿ ಒಳ್ಳೆಯ ಅಂಶಸ್ವೀಕರಿಸಿದಾಗ ಯಾವುದೇ ಕ್ಷೇತ್ರದಲ್ಲಿ ಮುನ್ನಡೆದಾಗ ಯಶಸ್ಸು ನಿಶ್ಚಿತ.

ಸಪ್ನಾ ಪೂಜಾರಿ ಹೆಬ್ರಿ, ಸಿಐಎಸ್‌ಎ ಟಾಪರ್


Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »