TOP STORIES:

FOLLOW US

ಹಲವಾರು ಕ್ಷೇತ್ರದಲ್ಲಿ ತನ್ನ ಚಾಪನ್ನು ಮೂಡಿಸಿದ ಬಾಲ ಪ್ರತಿಭೆ ಸೋಹನ ಶಂಕರ್ ಉಡುಪಿ


ಸೋಹನ ಇವರು ಶಂಕರ್ ಎಸ್ ಪೂಜಾರಿ ಮತ್ತು ನಾಗರತ್ನ ಶಂಕರ ಪೂಜಾರಿ ಯವರ ದ್ವಿತೀಯ ಪುತ್ರಿ. ಪ್ರಸ್ತುತ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ಅಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ .

ಕಲಿಕೆಯಲ್ಲಿ ಮಾತ್ರವಲ್ಲದೆ ಕ್ರಾಫ್ಟ್ , ಡ್ರಾಯಿಂಗ್, ಭಕ್ತಿಗೀತೆ , ಮತ್ತು ನೃತ್ಯದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ತನ್ನ ಬಾಲ್ಯದಲ್ಲಿ ಯೇ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಇವರು ದೂರದಶ೯ನದಲ್ಲಿ ಬರುವಂತಹ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು಼.

ತನ್ನ 4ನೇ ವಯಸ್ಸಿನಲ್ಲಿ ನೃತ್ಯಭ್ಯಾಸವನ್ನು ಪ್ರಾರಂಭಿಸಿದ ಇವರು ಹೆಸರಂತ ನೃತ್ಯ ಸಂಸ್ಥೆಯಾದ ಎಕ್ಸ್ಟ್ರೀಮ್ ಡಾನ್ಸ್ ಅಕಾಡೆಮಿಯಲ್ಲಿ ಗುರುಗಳಾದ ಮಂಜಿತ್ ಶೆಟ್ಟಿ ಇವರಲ್ಲಿ ನೃತ್ಯ ವನ್ನು ಕಲಿಯುತ್ತಿದ್ದಾರೆ. ಭರತ ನಾಟ್ಯದಲ್ಲಿ ಆಸಕ್ತಿ ಹೊಂದಿರುವ ಇವರು ಭರತ ನಾಟ್ಯವನ್ನು ಶ್ರೀರಕ್ಷ ಮತ್ತು ಅನನ್ಯ ಇವರಲ್ಲಿ ಕಲಿಯುತ್ತಿದ್ದಾರೆ. ಮಾತ್ರವಲ್ಲದೆ ಯಕ್ಷಗಾನದಲ್ಲು ಮಿಂಚುತ್ತಿರುವ ಈ ಪ್ರತಿಭೆ ಯಕ್ಷಗಾನವನ್ನು ಗುರುಗಳಾದ ನರಸಿಂಹ ತುಂಗ ಸಾಲಿಗ್ರಾಮ ಇವರಲ್ಲಿ ಕಳೆಯುತ್ತಿದ್ದಾರೆ.

ಬಾಲ್ಯದಲ್ಲಿ ಶ್ರೀ ಕೃಷ್ಣ ವೇಷ ಸ್ಪಧೆ೯ಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಗರಿಮೆ ಇವರದ್ದು. ತನ್ನ ನೃತ್ಯ ತಂಡದೊಂದಿಗೆ ಹಲವಾರು ಕಡೆಗಳಲ್ಲಿ ನೃತ್ಯ ಪ್ರದಶ೯ನವನ್ನು ನೀಡಿ ಜನರ ಮನಸ್ಸನ್ನು ಗೆದ್ದು ತನ್ನದೆ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಜಿಲ್ಲಾ ಮಟ್ಟ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲು ಬಹುಮಾನವನ್ನು ಗಳಿಸಿದ ಕೀತಿ೯ ಇವರದು.

2018 -19 ರಲ್ಲಿ ಡೖೆಜಿ ವಲ್ಡ್ ಚಾನೇಲ್ ನಲ್ಲಿ ನಡೆದ ಜೂನಿಯರ್ ಮಸ್ತೀ ಸೀಜನ್ ೨ ನಲ್ಲಿ ಸೆಮಿ ಪೆೃನಲ್ ವರೆಗೆ ತಲುಪಿ. ಉತ್ತಮ ನೃತ್ಯ ಎಕ್ಸ್ ಪ್ರೇಶನ್ ನೀಡಿ ತೀಪು೯ಗಾರರ ಮೆಚ್ಚುಗೆ ಗಳಿಸಿದ್ದಾರೆ. ದೈಜಿ ವಲ್ಡ್೯ ಚಾನೆಲ್ ಗ್ರಾಂಡ್ ಫಿನಾಲೆಯಲ್ಲಿ “QUEEN OF DANCE JUNIOR MASTI SESON 2 “ಎಂಬ ಬಿರುದು ನೀಡಿ ಗೌರವಿಸಿದ್ದಾರೆ.

ಸ್ಪಂದನ ಟಿವಿಯಲ್ಲಿ ನಡೆಯುತ್ತಿದ್ದ ‘Coffee time with sony’ ಯಲ್ಲಿ ಭಾಗವಹಿಸಿದ್ದಾರೆ ಬೇರೆ ರಾಜ್ಯಗಳಲ್ಲಿ ತನ್ನ ತಂಡದೊಂದಿಗೆ ನೃತ್ಯ ಪ್ರದಶ೯ವನ್ನು ನೀಡಿರುತ್ತಾರೆ.

ಇತೀಚಿಗೆ ಬಿಡುಗಡೆಯಾದ ನಿವಿುಷ ಕಲಾವಿದರು ಕಟಪಾಡಿ ಇವರ ಪ್ರಸ್ತುತ ಪಡಿಸಿದ ಮೊದಲ ‘ Me and She’ musical ಆಲ್ಬಂನಲ್ಲಿ ನಟಿಸಿ ಸಮ್ಮಾನಕ್ಕೆ ಪಾತ್ರರಾಗಿದ್ದಾರೆ.

ಈ ಬಾಲ ಪ್ರತಿಭೆ ಇನ್ನಷ್ಟು ಉತ್ತುಂಗಕ್ಕೆರಲು ಕಲಾ ಮಾತೆಯ ಕೃಪೆ , ತಂದೆ ತಾಯಿಯ ಆಶಿರ್ವಾದ ಸದಾ ಇರಲಿ .

Credits: ಲಾವಣ್ಯ ಪೂಜಾರಿ ಸುಂಕದಕಟ್ಟೆ


Share:

More Posts

Category

Send Us A Message

Related Posts

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »

“ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ” ಪ್ರತಿಭಾ ಕುಳಾಯಿ ಆಯ್ಕೆ 


Share       ಮಂಗಳೂರು: ಸಮಾಜ ಸೇವೆಗಾಗಿ ಕುಳಾಯಿ ಫೌಂಡೇಶನ್ ರಚಿಸಿ ೫೦೦ಕ್ಕೂ ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿರುವ, ಯುವ ರಾಜಕಾರಣಿ ಪ್ರತಿಭಾ ಕುಳಾಯಿ, ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ. ರಷ್ಯಾದ


Read More »

ವಿದೇಶದ ಇಸ್ರೇಲ್ ನಲ್ಲಿದ್ದು ತುಳುನಾಡಿನ ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ ವ್ಯಕ್ತಿ ದಿನಕರ ಪೂಜಾರಿ


Share       ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ  ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ. ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ


Read More »

ಬಿಲ್ಲವ ಸಮಾಜಕ್ಕಾಗಿ ಪಂದ್ಯಾಟದ ಜೊತೆಗೆ ಆರ್ಥಿಕ ಯೋಜನೆಯನ್ನು ರೂಪಿಸಿದ ರುವಾರಿ ವಿಶ್ವನಾಥ ಪೂಜಾರಿ ಕಡ್ತಲ


Share       ಆದರಣೀಯ ಕ್ಷಣಗಳನ್ನು ‌ಮತ್ತೊಮ್ಮೆ ಮರಳಿಸಿ ವಿದೇಶದ  ಮಣ್ಣಲ್ಲೂ ಬಿಲ್ಲವರನ್ನು ಒಗ್ಗೂಡಿಸಿಕೊಂಡು ಒಂದು ಪಂದ್ಯಾಟ ನಡೆಸುವುದು ಕಷ್ಟ ಎಂಬ ಸನ್ನಿವೇಶದಲ್ಲಿ ಮಾಡಿಯೇ ಸಿದ್ಧ ಎಂಬ ಸ್ಪಷ್ಟ ನಿಲುವಿನೊಂದಿಗೆ ಎಲ್ಲರಿಗೂ ಇಷ್ಟವಾಗಿಸಿದ ಕ್ರಿಕೆಟ್ ಪಂದ್ಯಾಟ ಮಾಡಿ


Read More »