TOP STORIES:

FOLLOW US

ಹಾಸ್ಯ ಎಂದರೆ ಬೋಳಾರ್ – ಬೋಳಾರ್ ಎಂದರೆ ಹಾಸ್ಯ, ಅರವಿಂದ್ ಬೋಳಾರ್ ಅವರನ್ನು ಮೀರಿಸುವ ನಟರು ಸದ್ಯಕ್ಕೆ ಯಾರೂ ಇಲ್ಲ


ಅಭಿಪ್ರಾಯ ಸಂಗ್ರಹ

ದೈಜಿವರ್ಲ್ಡ್ ಟಿವಿಯ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮ ಟಿವಿ ಮುಖ್ಯಸ್ಥ, ಜನಪ್ರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ಹಾಗೂ ತುಳುನಾಡ ತಲೈವ ಅರವಿಂದ್ ಬೋಳಾರ್ ನಡೆಸಿಕೊಡುವ ಕಾರ್ಯಕ್ರಮ. ನಟನೆಯ ಬಗ್ಗೆ ಮಾತನಾಡುವುದಾರೆ ತುಳುನಾಡಿನಲ್ಲಿ ಅರವಿಂದ್ ಬೋಳಾರ್ ಅವರನ್ನು ಮೀರಿಸುವ ನಟರು ಸದ್ಯಕ್ಕೆ ಯಾರೂ ಇಲ್ಲ. ತುಳುನಾಡಿನಲ್ಲಿ ಇದೀಗ ಹಾಸ್ಯ ಎಂದರೆ ಬೋಳಾರ್ ಹಾಗೂ ಬೋಳಾರ್ ಎಂದರೆ ಹಾಸ್ಯ ಎಂಬ ಸ್ಥಿತಿಯುಂಟಾಗಿದೆ.

ಅರವಿಂದ್ ಬೋಳಾರ್ ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಕಾರಣ ಅವರ ಪ್ರತಿಭೆ ಹಾಗೂ ಲಕ್ಷಾಂತರ ಅಭಿಮಾನಿಗಳ ಆಶೀರ್ವಾದ. ಇದೀಗ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಬರೋಣ. ಕಾರ್ಯಕ್ರಮದ ಹದಿನಾಲ್ಕು ಸಂಚಿಕೆಗಳು ಈಗಾಗಲೇ ಮುಗಿದಿವೆ. ಈ ಸರಣಿಯಲ್ಲಿ ಇನ್ನು ಎಷ್ಟು ಸಂಚಿಕೆಗಳು ಬಾಕಿ ಇವೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಹದಿನಾಲ್ಕು ಸಂಚಿಕೆಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಬೋಳಾರರು ತನ್ನನ್ನು ಯಾಕೆ ತುಳುನಾಡ ಮಾಣಿಕ್ಯ ಅಥವಾ ತುಳುನಾಡ ತಲೈವ ಎಂಬ ಎಂದು ವೀಕ್ಷಕರು ಕರೆಯುತ್ತಾರೆ ಎಂದು ಸಾಬೀತುಪಡಿಸಿದ್ದಾರೆ. ಫಿಲೋಸಫಿ ಹಾಗೂ ಉತ್ತಮ ಸಂದೇಶಗಳೊಂದಿಗಿನ ಸ್ಕ್ರಿಪ್ಟ್ ಹೊಂದಿದ ಈ ಕಾರ್ಯಕ್ರಮದಲ್ಲಿ ಬೋಳಾರರು ನೂರಕ್ಕೆ ನೂರು ಶತಮಾನ ಹೊಸತನವನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಕಳೆದ ವಾರ ಅವರು ಮಾಡಿದ Double Act ಅಂತೂ ಸ್ಥಳೀಯ ವಾಹಿನಿಗಳ ಇತಿಹಾಸದಲ್ಲಿ ಹೊಸ ಧಾಕಲೆಯನ್ನೇ ರಚಿಸಿದೆ. ಆಷ್ಟೊಂದು Perfection ಅದರಲ್ಲಿ ಇತ್ತು.

ಹಳೆ ಮಧ್ಯವನ್ನು ಹೊಸ ಬಾಟ್ಲಿಯಲ್ಲಿ ತುಂಬಿಸಿಕೊಟ್ಟಂತೆ ಪದೇ ಪದೇ ಹಳೆಯ ಹಾಸ್ಯ ಸಂಭಾಷಣೆ, ಕಲಾವಿದರ ಪೋಷಕರ ಹೆಸರು ಉಲ್ಲೇಖಿಸಿ “ ನಿನ್ನ ಅಮ್ಮೆ..ಎನ್ನ ಅಮ್ಮೆ” ಎಂದು ಅವರ ತೇಜೋವಧೆ ಮಾಡಿ, ಅಶ್ಲೀಲ ಮಾತುಗಳೊಂದಿಗೆ, ಸ್ಕ್ರಿಪ್ಟಿ ಬಗ್ಗೆ ಏನೆಂದು ಗೊತ್ತಿರದ, ಇನ್ನೂ Update ಆಗದ ಕೆಲವರು ಮಾಡುವ ಹಾಸ್ಯ ಕಾರ್ಯಕ್ರಮಗಳು ಜನರಿಂದ ತಿರಸ್ಕಾರಗೊಳ್ಳಲು ಆರಂಭವಾಗಿವೆ. ಕೆಲ ಕಾರ್ಯಕ್ರಮಗಳಿಗೆ ವೀಕ್ಷಕರಿಂದ ದೊರಕುವ ನೀರಸ ಪ್ರತಿಕ್ರಿಯೆಯೇ ಇದನ್ನು ತೋರಿಸುತ್ತದೆ. ಆದರೆ ಬೋಳಾರ್ ಕಾರ್ಯಕ್ರಮಗಳು ಮಾತ್ರ ವೀಕ್ಷಕರನ್ನು ಹಿಡಿದು ನಿಲ್ಲಿಸುವಲ್ಲಿ ಸಫಲವಾಗುತ್ತಿವೆ. ಕಾರಣ ಬೋಳಾರರು ಹೊಸತನವನ್ನು ನೀಡುತ್ತಿದಾರೆ. ಅವರ ಹಾಸ್ಯಗಳಲ್ಲಿ ಪ್ರಸ್ತುತ ವಿದ್ಯಾಮಾನಗಳ ಆಗುಹೋಗುಗಳು ನೇರವಾಗಿ ಪ್ರತಿಫಲಿಸುತ್ತಿವೆ.

ಉತ್ತಮ ಸ್ಕ್ರಿಪ್ಟ್ ಹಾಗೂ ತಾಂತ್ರಿಕ ವರ್ಗವನ್ನು ಅವರು ಬಳಸುತ್ತಿದ್ದಾರೆ. ಫತಿಫಲವೆಂಬಂತೆ ದಿನೇ ದಿನೇ ವೀಕ್ಷಕರನ್ನು ಮನಬಿಚ್ಚಿ ನಗಿಸುವ ಜೊತೆಗೆ , ಸಮಾಜಿಕವಾಗಿ ಚಿಂತಿಸಲೂ ಅವರು ಪ್ರೇರೇಪಿಸುತ್ತಾರೆ. ಸಮಾಜದಲ್ಲಿ ಓರ್ವ ಜವಬ್ದಾರಿಯುತ ಕಲಾವಿದನಾಗಿ ಬೋಳಾರ್ ಮಿಂಚಲು ಇದು ಕಾರಣವಾಗಿರಬಹುದು. ಚಿಂತನೆಯೊಂದಿಗೆ ನಮ್ಮನ್ನು ನಗಿಸುವ ಬೋಳಾರ್ ಅವರಿಗೆ ಧನ್ಯವಾದಗಳು.

ತುಳುನಾಡಿನ Updated ಕಲಾಭಿಮಾನಿಗಳ ಪರವಾಗಿ,


Share:

More Posts

Category

Send Us A Message

Related Posts

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »