TOP STORIES:

FOLLOW US

ಅವರು ನಾರಾಯಣ ಗುರುಗಳನ್ನು ಹಿಂದೆಯೂ ತಿರಸ್ಕರಿಸಿದ್ದರು, ಮುಂದೆಯೂ ತಿರಸ್ಕರಿಸುತ್ತಾರೆ-ದಿನೇಶ್ ಅಮೀನ್ ಮಟ್ಟು


ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಮೂರ್ತಿ ಇದ್ದ ಸ್ಥಬ್ದಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದನ್ನು ಯಾರೂ ವಿರೋಧಿಸಬೇಕಾಗಿಲ್ಲ, ಬದಲಿಗೆ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿಯ ಪ್ರಾಮಾಣಿಕ ನಡವಳಿಕೆಗಾಗಿ ಎಲ್ಲರೂ ಅಭಿನಂದಿಸಬೇಕು.
ಇದೇ ರೀತಿಯ ಪ್ರಾಮಾಣಿಕತೆಯಿಂದ ಬುದ್ದ,ಬಸವ, ಅಂಬೇಡ್ಕರ್, ಕನಕ, ಕಬೀರ, ವಾಲ್ಮೀಕಿಯೂ ಸೇರಿದಂತೆ ಎಲ್ಲ ಮಹಾ ಪುರುಷರ ಬಗೆಗಿನ ತಮ್ಮ ವಿರೋಧವನ್ನು ಬಿಜೆಪಿ ಮತ್ತು ಅದರ ಸರ್ಕಾರಗಳು ಮುಕ್ತವಾಗಿ ದಾಖಲಿಸಬೇಕು ಎಂದು ನಾವೆಲ್ಲರೂ ಕೂಡಿ ಒತ್ತಾಯಿಸಬೇಕು.
ಸಾವರ್ಕರ್, ಗೋಲ್ವಾಲ್ಕರ್, ಹೆಗಡೆವಾರ್ , ಗೋಡ್ಸೆ ಸೇರಿದಂತೆ ರಾಜಕೀಯ ಹಿಂದುತ್ವದ ಪ್ರಚಾರಕರ ವಿರುದ್ದ ನಮ್ಮ ವಿರೋಧವನ್ನು ನಾವು ಹೇಗೆ ಮುಕ್ತವಾಗಿ ಮಂಡಿಸುತ್ತೇವೆಯೋ ಹಾಗೆ ಅವರು ಆತ್ಮವಂಚನೆ ಮಾಡಿಕೊಳ್ಳದೆ ನಾವು ಆದರ್ಶಪ್ರಾಯರೆಂದು ತಿಳಿದುಕೊಂಡ ಮತ್ತು ಅವರು ಮನಸ್ಸಿನೊಳಗೆ ವಿರೋಧಿಸುತ್ತಿರುವ ಮಹಾಪುರುಷರ ವಿರುದ್ದದ ತಮ್ಮ ಅಭಿಪ್ರಾಯವನ್ನು ಪ್ರಾಮಾಣಿಕತೆಯಿಂದ ಮುಕ್ತವಾಗಿ ಹೇಳಿಕೊಳ್ಳಬೇಕು.
ನಡೆಯಲಿ ಇಂತಹದ್ದೊಂದು ಸೈದ್ದಾಂತಿಕ ಸಂಘರ್ಷ. ಗಟ್ಟಿಯಾಗಿರುವುದು ಉಳಿಯುತ್ತದೆ, ಉಳಿದದ್ದು ಇತಿಹಾಸದ ಕಸದ ಬುಟ್ಟಿಗೆ ಸೇರುತ್ತದೆ. ಹೊಡೆದು, ಬಡಿದು, ಕಡಿದು ಯಾವ ಸಿದ್ದಾಂತವನ್ನೂ ನೆಲೆ ಗೊಳಿಸಲಾಗುವುದಿಲ್ಲ.
ಇಂತಹದ್ದೊಂದು ದಾರಿಯನ್ನು ಹೇಳಿಕೊಟ್ಟವರೇ ನಾರಾಯಣ ಗುರುಗಳು. ಅವರು ತನ್ನ ಜನರಿಗೆ ಉಳಿದ ಸಮಾಜ ಸುಧಾರಕರಂತೆ ದೇವಸ್ಥಾನದೊಳಗೆ ಪ್ರವೇಶ ನೀಡಿ ಎಂದು ಅಂಗಲಾಚಲಿಲ್ಲ. ಅಲ್ಲಿಯೇ ಇದ್ದ ನದಿಯೊಳಗೆ ಧುಮುಕಿ ಶಿವಲಿಂಗವನ್ನು ಎದೆಗಪ್ಪಿಕೊಂಡು ಬಂದು ಅರವಿಪುರಂನಲ್ಲಿ ಸ್ಥಾಪಿಸಿ ಇದು ನಿಮ್ಮ ಶಿವ ಎಂದು ತನ್ನ ಜನರಿಗೆ ಹೇಳಿದರು.
ಪ್ರಶ್ನಿಸಿದ ಪುರೋಹಿತರಿಗೆ ‘ನಿಮ್ಮ ಶಿವ ನಿಮ್ಮಲ್ಲಿಯೇ ಇದ್ದಾನೆ, ಇದು ಈಳವರ ಶಿವ. ನೀವು ನಿಮ್ಮ ಪಾಡಿಗೆ ನಿಮ್ಮ ದೇವರನ್ನು ಪೂಜಿಸಿ, ನನ್ನ ಜನ ಅವರು ನಂಬಿದ ದೇವರನ್ನು ಪೂಜಿಸುತ್ತಾರೆ.. ’’ ಎಂದು ಬಾಯಿ ಮುಚ್ಚಿಸಿದ್ದರು.
ಅವರು ದೇವಾಲಯದೊಳಗೆ ಜನರನ್ನು ನುಗ್ಗಿಸಲಿಲ್ಲ, ದೇವರಮೂರ್ತಿಯನ್ನು ಒಡೆದುಹಾಕಲಿಲ್ಲ, ಅರ್ಚಕರನ್ನು ಪ್ರಶ್ನಿಸಲೂ ಇಲ್ಲ.. ಇದು ಯುದ್ಧದಲ್ಲಿ ಶಸ್ತ್ರ ಪ್ರಯೋಗ ಮಾಡದೆ ಶತ್ರುವನ್ನು ನಿಶಸ್ತ್ರಗೊಳಿಸುವ ಅಪರೂಪದ ಹೋರಾಟ.
ತಿರುವಾಂಕೂರು ಸಂಸ್ಥಾನದಲ್ಲಿ ಇಂದು ಕೇಂದ್ರ ಸರ್ಕಾರದಲ್ಲಿರುವಂತಹರದ್ದೇ ಪ್ರಭುತ್ವ ಇತ್ತು. ಅವರೊಡನೆ ನಾರಾಯಣ ಗುರುಗಳು ಸಂಘರ್ಷಕ್ಕಿಳಿದಿರಲಿಲ್ಲ. ವೈಕಂ ನಲ್ಲಿ ದೇವಸ್ಥಾನದ ಎದುರಿನ ಹಾದಿಯಲ್ಲಿ ನಡೆದುಕೊಂಡು ಹೋಗುವ ಸ್ವಾತಂತ್ರ್ಯಕ್ಕಾಗಿ ನಡೆದ ಸತ್ಯಾಗ್ರಹದ ಬಗ್ಗೆಯೂ ನಾರಾಯಣ ಗುರುಗಳ ವಿರೋಧ ಇತ್ತು. ‘’ಅವರು ಕಟ್ಟಿಕೊಂಡ ದೇವಸ್ಥಾನ, ಅದರ ಎದುರಿನ ಹಾದಿಯನ್ನು ಕಟ್ಟಿಕೊಂಡು ನೀವ್ಯಾಕೆ ಬಡಿದಾಡಿಕೊಳ್ಳುತ್ತೀರಿ,ನಿಮ್ಮ ದೇವಸ್ಥಾನವನ್ನು ನೀವೇ ಕಟ್ಟಿಕೊಳ್ಳಿ’’, ಎಂದು ಹೇಳುತ್ತಿದ್ದರು ನಾರಾಯಣ ಗುರುಗಳು.
ಆದರೆ ನಾರಾಯಣ ಗುರುಗಳು ಕಟ್ಟಿದ ದೇವಸ್ಥಾನಗಳನ್ನಷ್ಟೇ ಉಳಿಸಿಕೊಂಡಿರುವ ಅವರ ಅನುಯಾಯಿಗಳು ಅವರು ಹೇಳಿಕೊಟ್ಟಿರುವ ಚಿಂತನೆಯ ಪಾಠವನ್ನು ಮರೆತುಬಿಟ್ಟಿದ್ದಾರೆ.
ಮಂಗಳೂರಿನ ಕುದ್ರೋಳಿಯಲ್ಲಿ ಅಸ್ಪೃಶ್ಯ ಬಿಲ್ಲವರಿಗಾಗಿ ನಾರಾಯಣ ಗುರುಗಳೂ ಬಂದು ಸ್ಥಾಪಿಸಿದ್ದ ದೇವಸ್ಥಾನವನ್ನು ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಆದರೆ ಬಿಲ್ಲವರು ಧಾರ್ಮಿಕ ಪ್ರವಾಸಕ್ಕೆ ಹೋದ ರೀತಿ ಅಲ್ಲಿಗೆ ಹೋಗಿ ಕೊಂಡಾಡಿ ಸೆಲ್ಪಿ ತೆಗೆಸಿಕೊಂಡು ಬರುತ್ತಾರೆ. ಅಲ್ಲಿಂದ ಉಡುಪಿ ಮಠ, ಕಟೀಲು, ಧರ್ಮಸ್ಥಳಗಳಿಗೆ ಹೋಗಿ ತಾವು ಕಷ್ಟ ಪಟ್ಟು ದುಡಿದ ದುಡ್ಡನ್ನು ಸುರಿದು ಬರುತ್ತಾರೆ.
ಉಡುಪಿ ಮಠದ ಸ್ವಾಮಿಗಳು, ಕಟೀಲಿನ ಆಸ್ರಣ್ಣರು ಮತ್ತು ಧರ್ಮಸ್ಥಳದ ಹೆಗಡೆಯವರು ಇಲ್ಲವೆ ಅವರ ಸಮುದಾಯದವರು ಎಂದಾದರೂ ಕುದ್ರೋಳಿ ದೇವಸ್ಥಾನಕ್ಕೆ ಭಕ್ತರಂತೆ ಬಂದು ಕೈಮುಗಿದು ನಾರಾಯಣ ಗುರುಗಳಿಗೆ ನಮಿಸಿ ಹೋಗಿದ್ದಾರೆಯೇ?
ಮತ್ತೆ ಯಾಕೆ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ಥಬ್ದಚಿತ್ರವನ್ನು ತಿರಸ್ಕರಿಸಿದ್ದಾರೆ ಎಂದು ಗೋಳು ಹೋಯ್ಕೊಳ್ತೀರಿ? ಅವರು ನಾರಾಯಣ ಗುರುಗಳನ್ನು ಹಿಂದೆಯೂ ತಿರಸ್ಕರಿಸಿದ್ದರು, ಮುಂದೆಯೂ ತಿರಸ್ಕರಿಸುತ್ತಾರೆ. ಅವರನ್ನು ವಿರೋಧಿಸುವುದನ್ನು ಬಿಟ್ಟು ನಾರಾಯಣ ಗುರುಗಳ ಅನುಯಾಯಿಗಳು ನಿಜವಾಗಿ ತಮ್ಮನ್ನು ತಾವೇ ಪ್ರಶ್ನೆ ಮಾಡಬೇಕಾಗಿದೆ. ನಾರಾಯಣ ಗುರುಗಳನ್ನು ತಿರಸ್ಕರಿಸಿದವರನ್ನು ನಾವು ಯಾಕೆ ಪುರಸ್ಕರಿಸುತ್ತಿದ್ದೇವೆ? ಎಂದು.
ಇದಕ್ಕಾಗಿಯೇ ಕುವೆಂಪು “…ಹುಲಿಗೆ ಗುಂಡು ಹೊಡೆಯುವ ಮೊದಲು ನಿಮ್ಮ ಮೆದುಳಿಗೆ ಹೊಡೆಯಬೇಕು..” ಹೇಳಿದ್ದು.

Share:

More Posts

Category

Send Us A Message

Related Posts

ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಸಂಘದ ನೂತನ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶರತ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 26.02.2025 ರಂದು ಕತಾರ್ ನ ಐ. ಸಿ. ಸಿ. ಮುಂಬೈ ಹಾಲ್ ನಲ್ಲಿ  ಶ್ರೀ


Read More »

ಸೌದಿ ಬಿಲ್ಲವಾಸ್ ದಮ್ಮಾಮ್ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ದಮ್ಮಾಮ್: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 5 ರವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೌದಿ ಬಿಲ್ಲವಾಸ್ ದಮ್ಮಾಮ್ ವತಿಯಿಂದ ಸೌದಿಯ


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ


Share       ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.21ರಿಂದ 28ರವರೆಗೆ ಜರುಗುವ ವಾರ್ಷಿಕ ಮಹೋತ್ಸವ ಮತ್ತು ಮಹಾ ಶಿವರಾತ್ರಿ ಮಹೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನೆರವೇರುವ ಮೂಲಕ ಚಾಲನೆ ನೀಡಲಾಯಿತು. ಶುಕ್ರವಾರ ಗುರು ಪ್ರಾರ್ಥನೆ, ಪುಣ್ಯಾಹ ಹೋಮ,


Read More »

ಬಿಲ್ಲವ ಸಮಾಜ ಸೇವಾ ಸಂಘ ಪುಣೆ  ಆಶ್ರಯದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ “ವಿಶ್ವ ಬಿಲ್ಲವ ಕ್ರಿಕೆಟ್” ಪಂದ್ಯಾಟದ


Share       ಪುಣೆ : ಫೆ.19,ಬಿಲ್ಲವ ಸಮಾಜ ಸೇವಾ ಸಂಘ (ರಿ) ಪುಣೆ ಇದರ  ಆಶ್ರಯದಲ್ಲಿ ಮುಂಬರುವ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವವಿಶ್ವ ಬಿಲ್ಲವ ಕ್ರಿಕೆಟ್ಪಂದ್ಯಾಟದ  ತಯಾರಿಯ ಬಗ್ಗೆ  ಎರಡನೇ ಪೂರ್ವಭಾವಿ ಸಭೆಯು ಇಂದು ಫೆ. 19ನೇ


Read More »

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ಸಂದೀಪ್ ಸಾಲಿಯಾನ್ ರವರಿಗೆ ವಿನಯಪೂರ್ವಕ ಬೀಳ್ಕೊಡುಗೆ


Share       ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ದಿನಾಂಕ ೮.೨.೨೦೨೫ ರಂದು ಎಂ. ಆರ್. ಎ, ಸಲ್ವ ರೋಡ್, ಕತಾರ್, ಔತಣಕೂಟ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀ ಸಂದೀಪ್


Read More »

ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ


Share       ಮಂಗಳೂರು: ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ. MRPL ಸಂಸ್ಥೆಯ ಉದ್ಯೋಗಿ ಆಗಿರುವ ಪ್ರಮೀಳ ದೀಪಕ್ ಪೆರ್ಮುದೆ ಇವರಿಗೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಪರಿಕಲ್ಪನೆಯಡಿ “ Woman


Read More »