TOP STORIES:

FOLLOW US

ಇನ್ಮುಂದೆ ಓರ್ವ ವ್ಯಕ್ತಿ ಇಷ್ಟೇ ಸಿಮ್ ಹೊಂದಿರಬೇಕೆಂಬ ಸರ್ಕಾರದ ಹೊಸ ನಿಯಮ!


ದೂರ ಸಂಪರ್ಕ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ದೂರಸಂಪರ್ಕ ಇಲಾಖೆಯು ಇದೀಗ ಮತ್ತೊಮ್ಮೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಓರ್ವ ವ್ಯಕ್ತಿ ಎಷ್ಟು ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು?, ಅಪ್ರಾಪ್ತ ವಯಸ್ಕರಿಗೆ ಸಿಮ್ ಖರೀದಿಸಲು ಅವಕಾಶವನ್ನು ನೀಡದಂತೆ ಟೆಲಿಕಾಂ ಕಂಪೆನಿಗಳು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದು ಸೇರಿದಂತೆ ಹಲವು ಬದಲಾವಣೆಗಳನ್ನು ಟೆಲಿಕಾಂ ವ್ಯವಸ್ಥೆಯಲ್ಲಿ ತಂದಿದೆ.

ದೂರ ಸಂಪರ್ಕ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ದೂರಸಂಪರ್ಕ ಇಲಾಖೆಯು ಇದೀಗ ಮತ್ತೊಮ್ಮೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಓರ್ವ ವ್ಯಕ್ತಿ ಎಷ್ಟು ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು?, ಅಪ್ರಾಪ್ತ ವಯಸ್ಕರಿಗೆ ಸಿಮ್ ಖರೀದಿಸಲು ಅವಕಾಶವನ್ನು ನೀಡದಂತೆ ಟೆಲಿಕಾಂ ಕಂಪೆನಿಗಳು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದು ಸೇರಿದಂತೆ ಹಲವು ಬದಲಾವಣೆಗಳನ್ನು ಟೆಲಿಕಾಂ ವ್ಯವಸ್ಥೆಯಲ್ಲಿ ತಂದಿದೆ. ಇದರಿಂದ ಟೆಲಿಕಾಂ ಕಂಪೆನಿಗಳು ನಿರ್ದಿಷ್ಟ ಮಾನದಂಡಗಳನ್ನು ಹೊಂದಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ದೂರಸಂಪರ್ಕ ಇಲಾಖೆಯ ನೂತನ ನಿಯಮಗಳ ಪ್ರಕಾರ, ಭಾರತದಲ್ಲಿ ಇನ್ಮುಂದೆ ಹೊಸ ಸಿಮ್ ಖರೀದಿಸಲು ಗ್ರಾಹಕ ಸ್ವಾಧೀನ ನಮೂನೆ ಎಂಬ ಫಾರ್ಮ್ ಅನ್ನು ಭರ್ತಿ ಮಾಡಬೇಕು ಎಂಬ ಮಾನದಂಡವನ್ನು ತರಲಾಗಿದೆ. ಈ ನಿಯಮದ ಪ್ರಕಾರ, ಹೊಸ ಫಾರ್ಮ್ ಒಂದನ್ನು ಗ್ರಾಹಕರು ಮತ್ತು ಟೆಲಿಕಾಂ ಆಪರೇಟರ್‌ಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಕೆಲವು ನಿಯಮ ಮತ್ತು ಷರತ್ತುಗಳಲ್ಲಿ ಬಂದಿರುವ ಈ ನಿಯಮಗಳಿಗೆ ಗ್ರಾಹಕರು ಅರ್ಹರಾಗಿರಬೇಕಿದ್ದು, ಇದು ಗ್ರಾಹಕರು ಮತ್ತು ಟೆಲಿಕಾಂಗಳ ನಡುವಿನ ಒಪ್ಪಂದವಾಗಿರಲಿದೆ ಎಂದು ಹೇಳಲಾಗಿದೆ.

ಹಾಗೆಯೇ, ಭಾರತದಲ್ಲಿ ಓರ್ವ ವ್ಯಕ್ತಿ ಎಷ್ಟು ಸಿಮ್ ಹೊಂದಬಹುದು ಎಂಬುದನ್ನು ಸಹ ದೂರ ಸಂಪರ್ಕ ಇಲಾಖೆ ತಿಳಿಸಿದ್ದು, ಹೊಸ ನಿಯಮದಂತೆ, ದೇಶದ ಓರ್ವ ಪ್ರಜೆಯು ತನ್ನ ಹೆಸರಿನಲ್ಲಿ ( ಅವನು ಮತ್ತು ಅವಳ) ಒಟ್ಟು 18 ಸಿಮ್‌ಗಳನ್ನು ಖರೀದಿಸಬಹುದು ಎಂದು ಇಲಾಖೆ ತಿಳಿಸಿದೆ. ಈ 18 ಸಿಮ್‌ಗಳಲ್ಲಿ ಸಾಮಾನ್ಯ ಸಂವಹನಕ್ಕಾಗಿ 9 ಸಿಮ್‌ಗಳನ್ನು ಖರೀದಿಸಬಹುದು ಹಾಗೂ M2M ಸಂವಹನಕ್ಕಾಗಿ 9 ಸಿಮ್‌ಗಳನ್ನು ಖರೀದಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಗ್ರಾಹಕರು ತಮ್ಮ ಡಿವೈಸ್‌ ಬದಲಾಯಿಸಿದರೆ ಹೊಸ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ಅಂದರೆ, ಇದೀಗ ಓರ್ವ ವ್ಯಕ್ತಿ ಇದೀಗ ತನ್ನ ಹೆಸರಿನಲ್ಲಿ ಸಾಮಾನ್ಯ ಕೆಲಸಗಳಿಗೆ 9 ಸಿಮ್‌ಗಳನ್ನು ಹೊಂದಬಹುದಾಗಿದೆ. ಹಾಗೂ M2M (ಮಷಿನ್ ಟು ಮಷಿನ್) ಸಿಮ್ ಪಡೆಯಲು ಗ್ರಾಹಕರು ಪರಿಶೀಲನಾ ನಮೂನೆಯನ್ನು ಸಲ್ಲಿಸಬೇಕು ಎಂದು ಹೇಳಲಾಗಿದೆ. ಹಾಗೆಯೇ, ಅಪ್ರಾಪ್ತ ವಯಸ್ಕರಿಗೆ ಸಿಮ್ ಪಡೆಯಲು ಯಾವುದೇ ಅವಕಾಶವನ್ನು ಇದೀಗ ತೆಗೆದುಹಾಕಲಾಗಿದೆ. ಇದರರ್ಥ ಯಾವುದೇ ಗ್ರಾಹಕರು 18 ವರ್ಷಕ್ಕಿಂತ ಕಡಿಮೆ ಇದ್ದರೆ, ಟೆಲಿಕಾಂ ಆಪರೇಟರ್‌ಗಳಿಂದ ಸಿಮ್ ಖರೀದಿಸಲು ಸಾಧ್ಯವಿಲ್ಲ. ಹಾಗೂ ಸ್ಥಿರಲೈನ್ ಸಂಪರ್ಕಕ್ಕೂ ಸಹ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಇಲಾಖೆಯು ಇಂತಹ ಮಾನದಂಡಗಳನ್ನು ತರಲು ಹೆಚ್ಚುತ್ತಿರುವ ಸಿಮ್ ಕಾರ್ಡ್‌ ವಂಚನೆ ಪ್ರಕರಣಗಳು ಕಾರಣ ಎನ್ನಲಾಗಿದೆ. ಹಾಗೂ ಗ್ರಾಹಕರು ತಮ್ಮ ಹೆಸರುಗಳಲ್ಲಿನ ಸಿಮ್ ಅನಧಿಕೃತ ಬಳಕೆಯಾಗುತ್ತಿದೆಯಾ ಎಂಬುದನ್ನು ಪರೀಕ್ಷಿಸಲು ಹೊಸ ಕ್ರಮವನ್ನು ನೀಡಲಾಗಿದೆ. ನೀವು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೋಡಲು ಇದೀಗ ಅನುಮತಿಸಿದ್ದು, tafcop.dgtelecom.gov.in ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಲಗ್ಗತ್ತಿಸಿ ಸಿಮ್ ದುರುಪಯೋಗ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.


Share:

More Posts

Category

Send Us A Message

Related Posts

ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಸಂಘದ ನೂತನ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶರತ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 26.02.2025 ರಂದು ಕತಾರ್ ನ ಐ. ಸಿ. ಸಿ. ಮುಂಬೈ ಹಾಲ್ ನಲ್ಲಿ  ಶ್ರೀ


Read More »

ಸೌದಿ ಬಿಲ್ಲವಾಸ್ ದಮ್ಮಾಮ್ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ದಮ್ಮಾಮ್: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 5 ರವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೌದಿ ಬಿಲ್ಲವಾಸ್ ದಮ್ಮಾಮ್ ವತಿಯಿಂದ ಸೌದಿಯ


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ


Share       ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.21ರಿಂದ 28ರವರೆಗೆ ಜರುಗುವ ವಾರ್ಷಿಕ ಮಹೋತ್ಸವ ಮತ್ತು ಮಹಾ ಶಿವರಾತ್ರಿ ಮಹೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನೆರವೇರುವ ಮೂಲಕ ಚಾಲನೆ ನೀಡಲಾಯಿತು. ಶುಕ್ರವಾರ ಗುರು ಪ್ರಾರ್ಥನೆ, ಪುಣ್ಯಾಹ ಹೋಮ,


Read More »

ಬಿಲ್ಲವ ಸಮಾಜ ಸೇವಾ ಸಂಘ ಪುಣೆ  ಆಶ್ರಯದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ “ವಿಶ್ವ ಬಿಲ್ಲವ ಕ್ರಿಕೆಟ್” ಪಂದ್ಯಾಟದ


Share       ಪುಣೆ : ಫೆ.19,ಬಿಲ್ಲವ ಸಮಾಜ ಸೇವಾ ಸಂಘ (ರಿ) ಪುಣೆ ಇದರ  ಆಶ್ರಯದಲ್ಲಿ ಮುಂಬರುವ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವವಿಶ್ವ ಬಿಲ್ಲವ ಕ್ರಿಕೆಟ್ಪಂದ್ಯಾಟದ  ತಯಾರಿಯ ಬಗ್ಗೆ  ಎರಡನೇ ಪೂರ್ವಭಾವಿ ಸಭೆಯು ಇಂದು ಫೆ. 19ನೇ


Read More »

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ಸಂದೀಪ್ ಸಾಲಿಯಾನ್ ರವರಿಗೆ ವಿನಯಪೂರ್ವಕ ಬೀಳ್ಕೊಡುಗೆ


Share       ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ದಿನಾಂಕ ೮.೨.೨೦೨೫ ರಂದು ಎಂ. ಆರ್. ಎ, ಸಲ್ವ ರೋಡ್, ಕತಾರ್, ಔತಣಕೂಟ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀ ಸಂದೀಪ್


Read More »

ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ


Share       ಮಂಗಳೂರು: ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ. MRPL ಸಂಸ್ಥೆಯ ಉದ್ಯೋಗಿ ಆಗಿರುವ ಪ್ರಮೀಳ ದೀಪಕ್ ಪೆರ್ಮುದೆ ಇವರಿಗೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಪರಿಕಲ್ಪನೆಯಡಿ “ Woman


Read More »