TOP STORIES:

ಎ ಜರ್ನಿ ಫ್ರಮ್ ‘ಪಾರ್ವತಿ’ ಟು ‘ಅನ್ವಿತಾ’


ನಿರೂಪಣೆ ಎಂಬ ಮೊದಲ ಘಟ್ಟ ಹತ್ತಿ, ತಂಪಿಂಪಿನ ಕಂಪು ಹರಡಿಸಿ, ಔಟ್ ಆಫ್ ಸಿಲೇಬಸ್ ಅನ್ನೋ ನಟನೆ ಎಂಬ ಪ್ರಶ್ನೆಗೆ ಉತ್ತರಿಸಿ ,’ದಂಡ್’ ನ ಎರಡನೇ ಲೀಡ್ ಆಗಿ, ‘ಗಟ್ಟಿಮೇಳ’ದ ಮೊದಲನೇ ಮದುಮಗಳಾಗಿ, ಪಾರ್ವತಿಯಿಂದ ಅನ್ವಿತಾ ಎಂದು ಪುನರ್ ನಾಮಕರಿಸಿ, ಅಗ್ರಜನ ಮುದ್ದಿನ ತಂಗಿಯಾಗಿ, ನಮ್ಮ ನಿಮ್ಮೆಲ್ಲರ ಮನದಲ್ಲಿ ‘ಆಧ್ಯಾ’ಳ ಛಾಪನ್ನು ಮೂಡಿಸಿ ಮನೆಮಾತಾಗಿರುವವರು ಸಾಗರದ ಬೆಡಗಿ ‘ಅನ್ವಿತಾ ಸಾಗರ್’.

   (Copyrights owned by: billavaswarriors.com )

ಬಣ್ಣದ ಜಗತ್ತಿಗೆ ಕಾಲಿಟ್ಟ ನಂತರ ಪಾರ್ವತಿಯಿಂದ ಅನ್ವಿತಾ ಸಾಗರ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡ ಇವರು ,ಉದ್ಯಮಿ ಹೇಮಚಂದ್ರ ಮತ್ತು ಭಾರತಿ ದಂಪತಿಯ ಸುಪುತ್ರಿ, ನಟ ಅನೂಪ್ ಸಾಗರ್ ರವರ ಮುದ್ದಿನ ತಂಗಿ.ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು,ಬಿ.ಬಿ.ಎ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮಂಗಳೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.ಬಿ.ಬಿ.ಎ ಪದವಿ ಪಡೆದ ಮೇಲೆ ಇವರು ನಮ್ಮ ಟವಿ ಚಾನಲ್ ನಲ್ಲಿ ನಾಲ್ಕು ವರುಷಗಳ ಕಾಲ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು.

ರಂಜಿತ್ ಬಜ್ಪೆ ನಿರ್ದೇಶನದ ‘ದಂಡ್’ ಎಂಬ ತುಳು ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಿಸಿದ ಇವರು ನಟನೆ ಹೊರತು ನೃತ್ಯ-ಗಾನಕಲೆ, ಪಾಕಕ್ರಿಯೆ ಮತ್ತು ಮಹಾಕಾವ್ಯಗಳನ್ನು ಓದುವ ಹವ್ಯಾಸವನ್ನು ಹೊಂದಿದ್ದಾರೆ.

   (Copyrights owned by: billavaswarriors.com )

‘ವೇದ’ ‘ಪ್ರಿಯ’ಪಾತ್ರಗಳಲ್ಲಿ ಮಿಂಚಿದ ಅನ್ವಿತಾ:

ಬಣ್ಣದ ಜಗತ್ತಿಗೆ ದಂಡ್ ಸಿನಿಮಾದ ಮೂಲಕ ಕಾಲಿಟ್ಟ ಇವರು ಮೊದಲ ಟೇಕ್ ನಲ್ಲೇ ನಿರ್ದೇಶಕ ರಂಜಿತ್ ಬಜ್ಪೆಯವರಿಂದ ಸಯ್ ಎಂದೆನಿಸಿಕೊಂಡಿದ್ದರು. ನಂತರ ಒಮ್ಮೆ ಹಚ್ಚಿದ ಬಣ್ಣವನ್ನು ಗುಂದಲು ಬಿಡದೆ ನಟಿಸಲು ಮುನ್ನಡೆದ ಇವರು ‘ಬಲೆ ಪುದರ್ ದೀಕ ಈ ಪ್ರೀತಿಗ್'(ಶಾನ್ವಿ),’ಪೆಟ್ಕಮ್ಮಿ'(ಪ್ರಿಯ) ಎಂಬ ತುಳು ಸಿನಿಮಾಗಳಲ್ಲಿ ಹಾಗೇ ‘ಬಣ್ಣ ಬಣ್ಣದ ಬದುಕು'(ಶಾಯಿದಾ), ‘ಜೀವನ ಯಜ್ಞ’, ‘ಮಾಯಾ ಕನ್ನಡಿ'(ಮಧು) ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ತುಳುನಾಡಿನ ಹಳ್ಳಿ ಹುಡ್ಗಿಯ ಪಾತ್ರದಲ್ಲಿ ‘ತಂಬಿಲ'(ವೇದ) – ತುಳು ಸಿನಿಮಾದಲ್ಲಿ , ‘ವಿರಾಟ ಪರ್ವ'(ಖುಷಿ) ಎಂಬ ಕನ್ನಡ ಸಿನಿಮಾದಲ್ಲಿ ಪಾತ್ರವಹಿಸಿದ್ದಾರೆ. ಇವು ಮುಂಬರುವ ಚಿತ್ರಗಳು.ಹಾಗೇ ಪ್ರಸ್ತುತವಾಗಿ ‘ಗಟ್ಟಿಮೇಳ’ ಎಂಬ ಧಾರವಾಹಿಯಲ್ಲಿ ಆಧ್ಯಾಳ ಪಾತ್ರ ವಹಿಸಿ ಎಲ್ಲರ ಜನಮನ ಗೆದ್ದಿದ್ದಾರೆ.

ಅನ್ವಿತಾರ ಮನದ ಮಾತು:

‘ಬಿ.ಬಿ.ಎ ಮಗ್ಸಿದ್ ಮೇಲೆ ಕೇವಲ ನಿರೂಪಕಿಯಾಗಿ ಕೆಲ್ಸ ಮಾಡುತ್ತಿದ್ದೆ.ನಟನೆ ತನಗೆ ಔಟ್ ಆಫ್ ಸಿಲೇಬಸ್ ಕ್ವೆಶನ್ ತರ ಬಂದಿದ್ದು,ಅದರ ಬಗ್ಗೆ ಗಂಧ ಗಾಳಿನೂ ಗೊತ್ತಿರದ ತನಗೆ ಮೊದಲನೇ ಬಾರಿಯ ಆಡಿಷನ್ ನಲ್ಲಿ, ಫಸ್ಟ್ ಟೇಕ್ ನಲ್ಲೇ ಸಯ್ ಅನ್ಸಿದ್ದು ತುಂಬಾನೇ ಖುಷಿ ಕೊಟ್ಟಿದೆ. ತನ್ನ ಪ್ರತಿ ಕಾರ್ಯದಲ್ಲಿ ತನ್ನ ಹೆತ್ತವರ ಅದರಲ್ಲೂ ಅಜ್ಜ ಮತ್ತು ಅಣ್ಣ ಸದಾ ಬೆನ್ನೆಲುಬಾಗಿದ್ದರಿಂದ ಈ ಎಲ್ಲಾ ಸಾಧನೆಗಳು ಬೆಳಕಿಗೆ ಬಂದಿವೆ’ ಎನ್ನುತ್ತಾರೆ ಅನ್ವಿತಾ.

ಗಟ್ಟಿಮೇಳದ ಮೊದಲನೇ ಮದುಮಗಳಾಗಿ ಕಿರುತೆರೆಗೆ ಪಾದಾರ್ಪಿಸಿದ ಪಾರ್ವತಿ:

ನಾಲ್ಕು ವರ್ಷಗಳ ಕಾಲ ತುಳುಚಿತ್ರರಂಗದಲ್ಲಿ ಮಿಂಚಿದ ಅನ್ವಿತಾರಿಗೆ ಗಟ್ಟಿಮೇಳ ಎಂಬ ಧಾರವಾಹಿಯಲ್ಲಿ ನಟಿಸಲು ಸಿಕ್ಕಿದ ಅವಕಾಶವು, ತನ್ನ ಜೀವನದ ಟರ್ನಿಂಗ್ ಸಿಚುವೇಷನ್ ಎಂದು ಅಭಿವ್ಯಕ್ತಪಡಿಸುತ್ತಾರೆ. ಇದೀಗ ಅಗ್ರಜನ ಮುದ್ದಿನ ತಂಗಿಯಾಗಿ ,ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಲ್ಲಿ ಜನರಿಂದ ತುಂಬಾನೇ ಒಳ್ಳೆ ಪ್ರತಿಕ್ರಿಯೆ ಬಂದಿದೆ ಎಂಬುದು ಅನ್ವಿತಾರ ಅಭಿಪ್ರಾಯ.

   (Copyrights owned by: billavaswarriors.com )

ಸಂದ ಗೌರವಗಳು:

ಚಿತ್ರರಂಗದಲ್ಲಿನ ಇವರ ಅಪೂರ್ವ ಸಾಧನೆಯನ್ನು ಗಮನಿಸಿ ಇವರಿಗೆ ಬಿಲ್ಲವ ಹಾಗೂ ಹಲವಾರು ಸಂಘಗಳ ವತಿಯಿಂದ ಸನ್ಮಾನಿಸಲಾಗಿದೆ.ಹಾಗೇ‌ ದಂಡ್ ಸಿನಿಮಾದ‌ ನಂತರ ‘ತುಳುಚಿತ್ರರಂಗದ ಪಟಾಕಿ’ ಅನ್ನೋ ಬಿರುದನ್ನು ಇವರು ಹೊಂದಿದ್ದಾರೆ.

ಮೊಗದಲ್ಲಿ ಸದಾ ಮುಗುಳ್ನಗೆಯನ್ನು ಚೆಲ್ಲುತ್ತಾ ,ಕಿವಿಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸುವ ನಿಮ್ಮ ಮಾತುಗಳು ಹೀಗೆ ಶಾಶ್ವತವಾಗಿದ್ದು ಹಾಗೇ ನಿಮ್ಮ ಕಲಾ ಜೀವನವು ಇನ್ನಷ್ಟು ಬಣ್ಣಗಳಿಂದ ತುಂಬಿ ರಂಗೇರಲಿ ಎಂದು ಆಶಯಿಸುತ್ತಾ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ

   (Copyrights owned by: billavaswarriors.com )


Related Posts

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »