TOP STORIES:

FOLLOW US

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ


ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ

ತೊಂಭತ್ತರ ದಶಕದಿಂದ ಸನ್ಮಾನ್ಯ ಜನಾರ್ದನ ಪೂಜಾರಿಯವರು ತನ್ನ ಅಪೂರ್ವ ಇಚ್ಛಾಶಕ್ತಿಯಿಂದ ಚಿಕ್ಕ ದೇವಸ್ಥಾನವಾಗಿದ್ದ ಶೀಗೋಕರ್ಣನಾಥ ಕ್ಷೇತ್ರವನ್ನು ಅಭೂತಪೂರ್ವವಾಗಿ ನವೀಕರಿಸಿ, ಇಡೀ ವಿಶ್ವದ ಗಮನವನ್ನು ಶ್ರೀಕ್ಷೇತ್ರದತ್ತ ಸೆಳೆಯುವಂತೆ ಅಭಿವೃದ್ಧಿ ಪಡಿಸಿದರು.ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕರೂ ರಾಷ್ಟ್ರ ಮಟ್ಟದ ರಾಜಕೀಯ ಮತ್ಸದ್ಧಿಯೂ ಆಗಿರುವ  ಶ್ರೀ ಬಿ ಜನಾರ್ದನ ಪೂಜಾರಿ ಯವರಿಗೆ ಬಹುಶಃ  ಶ್ರೀ ನಾರಾಯಣ ಗುರುಗಳೇ ನೀಡಿದ ಪ್ರೇರಣೆಯೋ ಶ್ರೀ ಗೋಕರ್ಣನಾಥನ ಇಚ್ಛೆಯೋ?  ಅಥವಾ ಹಿಂದುಳಿದ ವರ್ಗದ ಸಮಸ್ತ ಜನತೆಯ ಆಶೋತ್ತರವೋ ಎಂಬಂತೆ ಇಚ್ಛಾಶಕ್ತಿಯೊಂದು ಹೃದಯಾಂತರಾಳದಿಂದ ಮೂಡಿ ಸಾಕಾರ ಗೊಂಡಿತು. ಈ ಕ್ಷೇತ್ರವನ್ನು ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ಸಾಮಾಜಿಕ ಸುಧಾರಣಾ ಕೇಂದ್ರವಾಗಿ ಜಾತ್ಯಾತೀತ ಕ್ಷೇತ್ರವಾಗಿ ನವನಿರ್ಮಾಣ ಮಾಡಲು ಪೂಜಾರಿಯವರು ಸಂಕಲ್ಪ ಮಾಡಿದರು.

ಇಂದು ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಸನ್ನಿಧಾನವು ದೇವಲೋಕವೇ ಧರೆಗಿಳಿದಂತೆ ಸೌಂದರ್ಯವನ್ನು ತುಂಬಿಕೊಂಡು, ಭಕ್ತರ ಹೃದಯದಲ್ಲಿ ಭಕ್ತಿಯ ಆಲೆಯನ್ನು ಸೃಷ್ಟಿಸಿ, ಭಕ್ತರು, ಜಿಜ್ಞಾಸುಗಳು ಪ್ರವಾಸಿಗರು ಸೇರಿದಂತೆ ಕೋಟ್ಯಾಂತರ ಮಂದಿಯನ್ನು ಆಕರ್ಷಿಸುತ್ತಿದೆಯೆಂದರೆ, ಅದರ ಹಿಂದಿರುವ ಅಗಾಧ ಸಂಕಲ್ಪ ಶಕ್ತಿ, ಚೇತನ ಶಕ್ತಿ ಸನ್ಮಾನ್ಯ ಜನಾರ್ದನ ಪೂಜಾರಿಯೆಂದರೆ ಅತಿಶಯೋಕ್ತಿಯಲ್ಲ. ಸುಮಾರು 34 ವರ್ಷಗಳ ಹಿಂದೆ ಶ್ರೀಕ್ಷೇತ್ರದ ನವೀಕರಣಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಢೀಕರಿಸಿ ಕೇವಲ ಅಲ್ಪ ಅವಧಿಯಲ್ಲೇ ನವೀಕರಣದ ಕೆಲಸ ಕಾರ್ಯ ಮುಗಿಯುವಂತೆ ನೋಡಿಕೊಂಡು, 1991 ರಲ್ಲಿ ನವೀಕರಣಗೊಂಡು ಪವಾಡಸದೃಶವಾಗಿ ಶ್ರೀಕ್ಷೇತ್ರ ಕಂಗೊಳಿಸುವಂತೆ ಮಾಡಿದ ಸನ್ಮಾನ್ಯ ಜನಾರ್ದನ ಪೂಜಾರಿಯವರ ಅವಿರತ ಪರಿಶ್ರಮ, ಸಮಗ್ರ ಚಿಂತನೆ, ಅದಕ್ಕೆ ಬೇಕಾದ ಯೋಜನೆಯನ್ನು ರೂಪಿಸಿದ ಪರಿ ಭಕ್ತರನ್ನು ವಿಸ್ಮಯಗೊಳಿಸಿದೆ. ಕ್ಷೇತ್ರ ದಿನಗಳೆದಂತೆ ಭಕ್ತ ಸಮೂಹವನ್ನು ದೇಶ ವಿದೇಶಗಳಿಂದ ತನ್ನೆಡೆಗೆ ಆಕರ್ಷಿಸತೊಡಗಿದ್ದು ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.   ನವರಾತ್ರಿ ಸಂದರ್ಭದ ದಸರಾ ಮಹೋತ್ಸವವು ಇಂದು ಮಂಗಳೂರು ದಸರಾವೆಂದು ಜಗದ್ವಿಖ್ಯಾತವಾಗಿದೆ.

✍️ರಾಜೇಂದ್ರ ಚಿಲಿಂಬಿ


Share:

More Posts

Category

Send Us A Message

Related Posts

ದುಬೈಯಲ್ಲಿ ಶಿಕ್ಷಣ ಪಡೆಯುತ್ತಿರುವ ಬಹುಮುಖ ಪ್ರತಿಭೆ ಪ್ರಿಷ ಪೂಜಾರಿ ಬೆಳ್ವಾಯಿ…


Share       ಬಹುಮುಖ ಪ್ರತಿಭೆ ಪ್ರಿಷ ಪೂಜಾರಿ ಬೆಳ್ವಾಯಿ… ಇತ್ತೀಚಿನ ಕಾಲಗಟ್ಟದಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್‌  ಟಿವಿ ಇಂಟರ್ನೆಟ್ ಗಳ ಜೊತೆಗೆ ಕಾಲ‌ ಕಳೆಯುತ್ತಿರುವಾಗ, ಇಳ್ಳೊಬ್ಬಲು ತನ್ನ ರಜಾದಿನಗಳನ್ನು ಯಕ್ಷಗಾನ ಭಜನೆ, ಇನ್ನು‌ ಅನೇಕ‌ ನೃತ್ಯಗಳ


Read More »

ಛಲ ಬಿಡದೆ ಹೋರಾಡಿ ವಿರೋಧಿಗಳ ಕುತಂತ್ರವನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾದ ಮಹೇಶ್ ಕೋಟ್ಯಾನ್


Share       lಮಂಗಳೂರು SEZ ಸಂತ್ರಸ್ತರ ನಡುವಿನ ಛಲ ಬಿಡದ ಹೋರಾಟಗಾರ ಆತ ಆಗ ಹದಿಹರೆಯದ ಹುಡುಗ, ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜೀವನೋಪಾಯಕ್ಕಾಗಿ ಕುಟುಂಬದ 16 ಎಕರೆ ಜಾಗದಲ್ಲಿ ವಾಣಿಜ್ಯ ಕೃಷಿ ಬೆಳೆಯುವ


Read More »

ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ


Share       ಉಡುಪಿ: ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಇನ್ನು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಂಬೈ ಲೋನಾವಾಲದ ಉದ್ಯಮಿ ಲೋಹಿತ್ ಪೂಜಾರಿ ಅವರೊಂದಿಗೆ 


Read More »

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ


Share       ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ ಬಂಟ್ವಾಳ : ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ ನಾಮ


Read More »

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »