TOP STORIES:

ಡಾ. ಯೋಗೀಶ್ ಕೈರೋಡಿ ಎಂಬ ವಿದ್ವತ್ ಪ್ರತಿಭೆ


ಹುಲ್ಲಿನಷ್ಟು ಸಾಧನೆ ಮಾಡಿ ಬೆಟ್ಟದಷ್ಟು ಪ್ರಚಾರ ಪಡೆಯುವ ಕಾಲವಿದು. ಕೊಡುಗೆಗಿಂತ ಪ್ರಚಾರವೇ ಅಧಿಕವಾದರೆ ಬಹಳ ಕಾಲ ಉಳಿಯದು. ಕೆಲವರದ್ದು ಹಾಗಲ್ಲ, ಅವರ ಕೆಲಸವೇ ಮಾತನಾಡುತ್ತದೆ. ಬಹುಕಾಲ ಉಳಿಯುತ್ತದೆ. ಅಂತಹ ಪ್ರತಿಭಾ ಸಂಪನ್ನ ಡಾ. ಯೋಗೀಶ್ ಕೈರೋಡಿರವರು . ನಾನು ಇವರ ಬಗ್ಗೆ ಬಹುಕಾಲದಿಂದ ಬಲ್ಲೆ. ನಿಮ್ಮ ಬಗ್ಗೆ ಬರೆಯುತ್ತೇನೆಂದಾಗ ಮುಗುಳ್ನಕ್ಕು ನಿರಾಕರಿಸುತ್ತಲೇ, ಬಂದರು. ಕೈರೋಡಿಯವರ ಬಗ್ಗೆ ಬರೆಯಲೇಬೇಕೆಂಬ ತುಡಿತದ ಫಲವೇ ಈ ಲೇಖನ.ಬಹುತೇಕ ಎಲ್ಲರಂತೆ ತುಳು ನಾಟಕ ಯಕ್ಷಗಾನ ನೋಡುತ್ತಲೇ, ವಿದ್ಯಾರ್ಥಿ ಜೀವನ ಸಮೃದ್ಧಗೊಳಿಸಿದವರು. ಸಾಂಪ್ರದಾಯಿಕ ಬೇಸಾಯದ ಗದ್ದೆಯ ಪರಿಮಳ ಅನುಭವಿಸುತ್ತಲೇ, ಬಾಲ್ಯದ ಸವಿ ಉಂಡವರು. ಊರ ಹೃದಯ ಭಾಗದಲ್ಲಿದ್ದ. ತನ್ನ ತಂದೆಯ ಹೊಟೇಲಿಗೆ ಬರುವ ವಿವಿಧ ಭಾವಭಂಗಿ, ಮಾತುಕತೆಗಳ ತಿರುಳು ಸ್ವಾರಸ್ಯದ ಜೀವನ ಶಿಕ್ಷಣದ ತಳಹದಿಯಲ್ಲಿ, ಬೆಳೆದ ಕೈರೋಡಿಯವರ ಪ್ರತಿಭೆಯ ವಿಕಾಸಕ್ಕೆ ವಿಸ್ತಾರ ಅವಕಾಶಗಳು ಒದಗಿಬಂತು.

ತುಳು ನಾಟಕಗಳಲ್ಲಿ ಹಾಸ್ಯ ಪಾತ್ರ ನಿರ್ವಹಿಸಿ ಪ್ರೇಕ್ಷಕ ಸಮೂಹವನ್ನು ನಗೆಗಡಲಲ್ಲಿ ತೇಲಿಸಿದರು. ಯಕ್ಷಗಾನದಲ್ಲಿ ಕಿರೀಟ ವೇಷಧಾರಿಯಾಗಿ, ರಾಜಗಾಂಭಿರ್ಯದ ಮಾತುಗಾರಿಕೆಯ ಮೂಲಕ ಕಣ್ಮನ ಸೆಳೆದರು.

ರಂಗಸ್ಥಳದ ನಡೆನುಡಿಯ ಸೊಬಗನ್ನು ಕಂಡವರೆಲ್ಲಾ ಕೈರೋಡಿಯವರು ಮುಂದೊಂದು ದಿನ ನಾಟಕ, ಯಕ್ಷಗಾನದ ಮೇರು ಕಲಾವಿದರಾಗುತ್ತಾರನೆಂದೇ ಭಾವಿಸಿದ್ದರು. ಪದವಿ ವಿದ್ಯಾರ್ಥಿ ಯಾಗಿದ್ದಾಗಲೇ, ಅವರು ಬರೆದ ಬಂಗಾರ್ದ ಬಲೆ ತುಳು ನಾಟಕದ ಸನ್ನಿವೇಶಗಳು ಹಿಂದಿಗೂ ಜನಮನದಲ್ಲಿ ಹಸಿರಾಗಿ ಉಳಿದಿದೆ.ಸಹಕಾರಿ ಮಹಾಮಂಡಳ ಬೆಂಗಳೂರಿನಲ್ಲಿ, ಆಯೋಜಿಸಿದ್ದ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ಪುರಸ್ಕಾರ ಪಡೆದವರು.

ಸ್ನಾತಕೋತ್ತರ ಪದವಿ ಪಡೆದ ಯೋಗೀಶ್ ಕೈರೋಡಿಯವರು ಕಾಲೇಜು ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು.ತನ್ನ ಕಾರ್ಯ ಕ್ಷೇತ್ರವನ್ನು ತರಗತಿಯ ಕೊಠಡಿಗೆ ಸೀಮಿತಗೊಳಿಸದೆ ಸಾರ್ವಜನಿಕ ಸಭೆ ಸಮಾರಂಭಗಳ ನಿರೂಪಕರಾಗಿ, ಮುಖ್ಯ ಭಾಷಣಕಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ದಶಕಗಳಕಾಲ ಜಿಲ್ಲೆಯಾದ್ಯಂತ ತೊಡಗಿಸಿಕೊಂಡು ಚಿರಪರಿಚಿತರಾದರು. ಪ್ರಚಲಿತ ವಿಷಯ ಆಧರಿಸಿ ಬರೆದ ಲೇಖನಗಳು ಉದಯವಾಣಿ, ಪ್ರಜಾವಾಣಿಯಲ್ಲಿ, ಪ್ರಕಟವಾಗಿದೆ. ಮಾತು ಮತ್ತು ಬರಹವನ್ನು ತನ್ನ ಅಭಿವ್ಯಕ್ತಿಯ ಪ್ರಧಾನ ಮಾಧ್ಯಮವನ್ನಾಗಿಸಿ
ಬೆಳೆದರು.

ವಿವಿಧ ವಿಷಯ ಮತ್ತು ಪ್ರಕಾರಗಳಿಗೆ ಸಂಬಂಧಿಸಿದ ಆರು ಕೃತಿಗಳು ಪ್ರಕಟಗೊಂಡಿದೆ. ಇವರ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯು (2011)ರಲ್ಲಿ ದೊರೆತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕಿರು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಪದವಿ ಕನ್ನಡ ಹಾಗೂ ತುಳು ಭಾಷಾ ಪಠ್ಯಪುಸ್ತಕಗಳ ಸಂಪಾದಕರಾಗಿಯೂ, ಕಾರ್ಯನಿರ್ವಹಿಸಿದ್ದಾರೆ.ಕೆಲ ಕಾಲ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಸಂಶೋಧನಾ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಣ ಪಡೆದ ಯುವಕರಿಗೆ ಬೇಸಾಯವೆಂದರೆ ಅಲರ್ಜಿ. ಆದರೆ ಕೈರೋಡಿ ಹಾಗಲ್ಲ, ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿಭೂಮಿಯಲ್ಲಿ ಭತ್ತದ ಬೇಸಾಯ ಮಾಡುತ್ತಾರೆ.ಅಡಿಕೆಯೊಂದಿಗೆ ಮಿಶ್ರ ಬೆಳೆಯ ಕಡೆಗೂ ಆಸಕ್ತಿ ತೋರಿಸಿದ್ದಾರೆ. ಸಾಧ್ಯವಾದಷ್ಟು ಆಹಾರ ಸ್ವಾಲಂಬನೆ ಆಗಬೇಕೆಂಬುದು ಅವರ ಸಂಕಲ್ಪ.

ಕೆಲವು ವರ್ಷಗಳ ಹಿಂದೆ ಸಮಾಜಸೇವಾ ಸಂಘ-ಸಂಸ್ಥೆಗಳ ಚಟುವಟಿಕೆಯಲ್ಲಿ ಕೈರೋಡಿ ಮುಂಚೂಣಿಯಲ್ಲಿ ಕಂಡುಬರುತ್ತಿದ್ದರು.ನೇರ – ನಿರರ್ಗಳ ಸ್ವಾರಸ್ಯಕರ ಮಾತಿನ ಮೋಡಿಯಲ್ಲಿ ಸಭಿಕರನ್ನು ಮಂತ್ರಮುಗ್ಧಗೊಳಿಸುತ್ತಿದರು.

ಸಮಾಜದ ಉನ್ನತಿಗೆ ರಚನಾತ್ಮಕ ಕಾರ್ಯಗಳಾಗಬೇಕು ಚಿಂತನ- ಮಂಥನಗಳಾಗಬೇಕೆಂದು ನಿರ್ಧಾರಕ್ಕೆ ಬಂದ ಕೈರೋಡಿಯವರು ಸಾರ್ವಜನಿಕ ವೈಭವ ಹಾಗೂ ಭಾಷಣದ ಮೇಲಿನ ನಂಬಿಕೆ ಕಳೆದುಕೊಂಡರು. ಆದರೆ ಇವರು ಕೈಕಟ್ಟಿ ಕುಳಿತುಕೊಂಡಿಲ್ಲ. ಸಮಾಜದ ಒಳಿತಿಗೆ ತನ್ನ ಪಾಲಿನ ಕೊಡುಗೆ ನೀಡುತ್ತಲೆ ಇದ್ದಾರೆ. ಯುವಕರು ದಾರಿ ತಪ್ಪಿದ್ದಾರೆ ಎಂದು ಸಾರ್ವಜನಿಕ ವೇದಿಕೆಯಲ್ಲಿ, ಕೂಗಾಡುವುದು ನಿರರ್ಥಕ. ಯುವಕರ ಮನಸ್ಸನ್ನು ಸಕರಾತ್ಮಕವಾಗಿ ರೂಪಿಸುವ ರಚನಾತ್ಮಕ ಕಾರ್ಯಗಳಾಗಬೇಕೆಂದು ಇವರ ನಂಬಿಕೆ. ಆರೋಗ್ಯಪೂರ್ಣ ಮನಸ್ಸು ರೂಪಿಸಿದರೆ ಉಳಿದೆಲ್ಲವೂ ಸಾಧಿತವಾಗುತ್ತದೆ. ಎಂಬುದು ಇವರ ಚಿಂತನೆ. ಇವರು ಮೌನವಾಗಿ ರೂಪಿಸಿದ್ದ ಮದ್ಯಮುಕ್ತ ಮದರಂಗಿ ಜಿಲ್ಲೆಯಲ್ಲಿ ಉಂಟುಮಾಡಿದ ಕ್ರಾಂತಿಕಾರಿ ಬದಲಾವಣೆ ಸದ್ದುಗದ್ದಲವಿಲ್ಲದ ಸಮಾಜಪರ ಕಾಳಜಿಗೆ ಸಾಕ್ಷಿ.

ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಉಪನ್ಯಾಸಕ, ಕಲಾವಿದ, ಸಾಹಿತಿ, ಸಂಶೋಧಕ, ಸಮಾಜಪರ ಚಿಂತಕ ಡಾ.ಯೋಗೀಶ್ ಕೈರೋಡಿಯವರ ಸಾಧನೆಯ ಹಾದಿಗೆ ಇವಿಷ್ಟು ಅಕ್ಷರದ ಮಾಲಾರ್ಪಣೆ.

Credits: ಪಟ್ಲ ಯತೀನ್ ಪೂಜಾರಿ ಕಡೇಶಿವಾಲಯ

Email us: billavaswarriors@gmail.com

www.billavaswarriors.com


Related Posts

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »