TOP STORIES:

FOLLOW US

ತುಳುವಿನಲ್ಲೂ ಸೈ ಎನಿಸಿಕೊಂಡ ’ಕೊಂಕಣಿ ಕೋಮೆಡಿ ಪ್ರಿನ್ಸ್’ ಪ್ರದೀಪ್ ಬಾರ್ಬೋಜಾ


ಮಹೇಶ್, ಅಕಾಶ್ ಭವನ್

ಮಂಗಳೂರು: ಕಳೆದ ವರ್ಷಾಂತ್ಯಕ್ಕೆ ಕರಾವಳಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸೋಡಾ ಶರ್ಬತ್ ಹೊಸ ವರ್ಷದ ಶುಭಾರಂಭದಲ್ಲೂ ತನ್ನ ಜೈತ್ರಯಾತ್ರೆಯನ್ನು ಮುಂದುವರೆಸಿದೆ. ಬಹಳ ಸಮಯದ ನಂತರ ಉತ್ತಮ ಕಥಾಹಂದರವನ್ನು ಹೊಂದಿದ ಚಿತ್ರವೊಂದು ಬಿಡುಗಡೆಯಾದದ್ದು ಸಿನಿಪ್ರಿಯರನ್ನು ಚಿತ್ರಮಂದಿರಗಳಿಗೆ ಆಕರ್ಷಿಸುವಂತೆ ಮಾಡಿದೆ. ಇದಕ್ಕಿಂತಲೂ ಮಿಗಿಲಾಗಿ ಸೋಡಾ ಶರ್ಬತ್ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪ್ರತಿಭಾವಂತ ನಿರ್ದೇಶಕ ಹಾಗೂ ನಟನೋರ್ವನ ಪ್ರವೇಶವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಮೂಡಬಿದಿರೆ ಸಮೀಪದ ಪಾಲಡ್ಕ ನಿವಾಸಿಯಾದ ಪ್ರದೀಪ್ ಬರ್ಬೋಜಾ ಉಧ್ಯೋಗ ನಿಮಿತ್ತ ಕಳೆದ ಹದಿನೈದು ವರ್ಷಗಳಿಂದ ಯುಎಇಯಲ್ಲಿ ವಾಸವಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಾಟಕ ರಚನೆ ಹಾಗೂ ಅಭಿನಯದ ಗೀಳು ಹಚ್ಚಿಸಿಕೊಂಡ ಪ್ರದೀಪ್ ಮೂಡಬಿದ್ರೆ ಪರಿಸರದ ಸಾಂಸ್ಕೃತಿಕ ರಂಗದಲ್ಲಿ ಅತೀ ಕಿರಿವಯಸ್ಸಿನಲ್ಲಿಯೇ ವಿಶೇಷ ಸದ್ದು ಮಾಡಿದ್ದರು. ಅವರು ಬರೆದು ನಿರ್ದೇಶಿಸಿದ ತುಳು ನಾಟಕ ’ಬಂಡಲ್ ಭಾಸ್ಕರೆ’ ವಿಶೇಷ ಜನಮನ್ನಣೆಗೆ ಪಾತ್ರವಾಗಿತ್ತು. ಯುಎಇಗೆ ತಲುಪಿದ ನಂತರ ಅಲ್ಲೂ ನಾಟಕ ರಂಗದಲ್ಲಿ ಸಕ್ರೀಯವಾಗಿದ್ದ ಪ್ರದೀಪ್ ಹಲವಾರು ಕೊಂಕಣಿ ನಾಟಕಗಳನ್ನು ರಚಿಸಿ ನಿರ್ದೇಶಿದ್ದಾರೆ. ವಿದೇಶದಲ್ಲಿ ನೂರಕ್ಕಿಂತಲೂ ಹೊಸ ಕಲಾವಿದರಿಗೆ ರಂಗಕಲೆಯ ಬಗ್ಗೆ ತರಬೇತಿಯನ್ನಿತ್ತು ರಂಗಭೂಮಿಯಲ್ಲಿ ನಂತರ ಸೀರಿಯಲ್/ಸಿನೆಮಾ ಕ್ಷೇತ್ರದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಪ್ರದೀಪ್ ಅವರಿಗೆ ಸಲ್ಲುತ್ತದೆ.

ಈ ಮಧ್ಯೆ 2016ರಲ್ಲಿ ’ಏಕ್ ಅಸ್ಲ್ಯಾರ್ ಏಕ್ ನಾ’ ಎಂಬ ಕೊಂಕಣಿ ಸಿನೆಮಾವನ್ನು ನಿರ್ದೇಶಿಸಿ ಅಧಿಕೃತವಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಪ್ರದೀಪ್ ಅವರ ಮೊದಲ ಕೊಂಕಣಿ ಸಿನೆಮಾವು ಕೊಂಕಣಿ ಚಿತ್ರರಂಗದ ಅಯಾಮನ್ನೇ ಬದಲಿಸಿತು ಎಂದು ಹೇಳಬಹುದು. ನಾಟಕ ಹಾಗೂ ನಾಟಕೀಯತೆಯನ್ನು ಚಿತ್ರೀಕರಣ ಮಾಡಿ ಸಿನೆಮಾ ಎಂದು ತೋರಿಸುತ್ತಿದ್ದ ಕೊಂಕಣಿ ಜಗತ್ತಿನಲ್ಲಿ ಪ್ರದೀಪ್ ಅವರ ’ಏಕ್ ಅಸ್ಲ್ಯಾರ್ ಏಕ್ ನಾ’ ನೈಜ ಸಿನೆಮಾದತ್ತ ಮುಖಮಾಡುವಂತೆ ಮಾಡಿತು. ಕೊಂಕಣಿ ಮೂಲಭಾಷೆಯಾಗಿದ್ದುಕೊಂಡು ತುಳು-ಕನ್ನಡ ಚಿತ್ರರಂಗಲ್ಲಿ ನಟರೆನಿಸಿಕೊಂಡ ಹೆಚ್ಚಿನ ಮುಖಗಳು ಪ್ರದೀಪ್ ಬಾರ್ಬೋಜಾ ಅವರ ಕೈಕೆಳಗೆ ಪಳಗಿದವರೇ.

ಕೊಂಕಣಿ ಚಿತ್ರದ ನಂತರ ಕೆಲ ಕನ್ನಡ-ತುಳು ಚಿತ್ರಗಳಲ್ಲಿ ನಟಿಸಿದ ಪ್ರದೀಪ್ ಅವರಿಗೆ ತುಳುವಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಕನಸಿತ್ತು. ಇದೀಗ ಸೋಡಾ ಶರ್ಬತ್ ಮೂಲಕ ಈ ಕನಸು ಈಡೇರಿದಂತಾಗಿದೆ. ಚಿತ್ರದುದ್ದಕ್ಕೂ ತನ್ನ ವಿಭಿನ್ನ ಶೈಲಿಯ ನಟನೆಯೊಂದಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರದೀಪ್ ತುಳು ಚಿತ್ರರಂಗದಲ್ಲೂ ಸೈ ಎನಿಸಿಕೊಂಡಿದ್ದಾರೆ. ಸದಭಿರುಚಿಯ ಚಿತ್ರಗಳ ಕೊರತೆ ಎದ್ದು ಕಾಣುತ್ತಿದ್ದ ಸಂದರ್ಭದಲ್ಲಿ ಪ್ರದೀಪ್ ಅವರು ಇಡೀ ಸಮಾಜೆವೇ ಚರ್ಚಿಸುವಂತಹ ಸಿನೆಮಾವೊಂದನ್ನು ಮಾಡಿ ತನ್ನ ಚಾಕಚಕ್ಯತೆ ಮೆರೆದಿದ್ದಾರೆ. ಪಾಲಡ್ಕ ಎಂಬ ಪುಟ್ಟ ಹಳ್ಳಿಯಿಂದ ಬಂದ ಪ್ರತಿಭೆ ಮುಂದೊಂದು ದಿನ ತುಳು ಚಿತ್ರರಂಗದಲ್ಲಿ ಇಷ್ಟೊಂದು ಅಬ್ಬರದ ಎಂಟ್ರಿ ಕೊಡಬಹುದು ಎಂದು ಯಾರೂ ನಂಬಿರಲಿಕ್ಕಿಲ್ಲ. ಆದರೆ ಛಲವಾದಿಯಾದ ಪ್ರದೀಪ್ ಅದನ್ನು ಮಾಡಿ ತೋರಿಸಿದ್ದಾರೆ. ಸೋಡಾ ಶರ್ಬತಿನ ಗೆಲುವು ಪ್ರದೀಪ್ ಹಾಗೂ ತಂಡಕ್ಕೆ ಮಾತ್ರವಲ್ಲದೆ ತುಳುಚಿತ್ರರಂಗಕ್ಕೂ ದಕ್ಕಿದ ಗೆಲುವಾಗಿದೆ. ಮೊದಲ ಪ್ರಯತ್ನದಲ್ಲೇ ತುಳು ಸಿನಿಪ್ರಿಯರ ಹೃದಯಗಳನ್ನು ಗೆದ್ದ ಪ್ರದೀಪ್ ಅವರಿಂದ ಇನ್ನೂ ಹೆಚ್ಚಿನ ಚಿತ್ರಗಳು ಮೂಡಿಬರಲಿ ಎಂದು ಆಶಿಸೋಣ.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »