TOP STORIES:

FOLLOW US

ನಾವು ಇವತ್ತು ಪರಿಚಯ ಮಾಡುವ ಯುವ ಪ್ರತಿಭೆ ಜಪ್ಪಿನ ಮೊಗರಿನ ಲಕ್ಷ್ಮೀಶ್ ಸುವರ್ಣ.


ನಾವು ಇವತ್ತು ಪರಿಚಯ ಮಾಡುವ ಯುವ ಪ್ರತಿಭೆ ಜಪ್ಪಿನ ಮೊಗರಿನ ತಿಮ್ಮಪ್ಪ ಪೂಜಾರಿ ಮತ್ತು ಶಶಿಕಲಾ ಟಿ ಸುವರ್ಣ ಇವರ ಮುದ್ದಿನ ಮಗ ಲಕ್ಷ್ಮೀಶ್ ಸುವರ್ಣ

ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು ಆದರೆ ಇವರಿಗೆ ಶಾಲಾ ದಿನಗಳಲ್ಲಿ ಯಾವುದೇ ರೀತಿಯ ಬೆಂಬಲ ಅಥವಾ ತಾವೇ ಮುಂದೆ ಹೋಗುವಷ್ಟು ಧೈರ್ಯ ಇರಲಿಲ್ಲ. ಹಾಡುಗಾರನಾಗಿ ಬೆಳೆಯಬೇಕು ಎಂಬ ಆಸೆಯೂ ನೆರವೇರಲಿಲ್ಲ . ಆದರೆ ನಿರೂಪಕನಾಗಿ ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು ಇವರ ಕಂಚಿನ ಕಂಠದ ಧ್ವನಿಯಿಂದ ಎಂಟು ವರ್ಷದಿಂದ ನಿರೂಪಣೆಯ ಹಾದಿಯಲ್ಲಿ ಮುಂದುವರಿದರು ಕರ್ನಾಟಕದ ಅನೇಕ ಕಡೆ ಮೈಸೂರ್, ಚಿಕ್ಕಮಂಗಳೂರು, ಶೃಂಗೇರಿ,ಕೊಪ್ಪ,ಉಡುಪಿ, ಮಂಗಳೂರು, ಜೈಪುರ್, ಬಾಳೆಹೊನ್ನೂರು, ಕಾಸರಗೋಡು, ಪುತ್ತೂರು, ಸುಳ್ಯ, ಮುಂಬೈಗಳಲ್ಲಿ ಕಾರ್ಯಕ್ರಮ ನೀಡಿ ತಮ್ಮ ವಾಕ್ ಚಾತುರ್ಯದಿಂದಲೇ ಜನ ಮನ ಗೆದ್ದಿದ್ದಾರೆ. ಓಮನ್ ಬಿಲ್ಲವಾಸ್ ಅವರು ಆಯೋಜಿಸಿದ ಬಲೇ ತೆಲಿಪಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತ್ತು ಆದರೆ ಕೋರೋನ ದ ಲಾಕ್ ಡೌನ್ ಕಾರಣ ಅವಕಾಶ ಕಳೆದುಕೊಂಡರು

ತನ್ನ ಪ್ರಾಥಮಿಕ ಶಿಕ್ಷಣವನ್ನು ಜೆಪ್ಪಿನಮೊಗರು ಗವರ್ನಮೆಂಟ್ ಸ್ಕೂಲ್ ಮತ್ತು ಪ್ರೌಢ ಶಿಕ್ಷಣವನ್ನು ಕ್ಯಾಸಿಯಾ ಹೈ ಸ್ಕೂಲ್ ನಲ್ಲಿ ಮಾಡಿ ಮುಗಿಸಿದರು.

ಜೀವನದಲ್ಲಿ ಏನಾದರೂ ಸಾಧಿಸಬೇಕು ತನ್ನನ್ನು ಎಲ್ಲರೂ ಗುರುತಿಸಬೇಕು ಎಂದು ಕೊಂಡಾಗ ಇವರ ಕೈ ಹಿಡಿದದ್ದು ಕಲಾ ಮಾತೆ ಇವರು ಕೇವಲ ನಿರೂಪಕರಾಗಿರದೆ ಅನೇಕ ತುಳು ಚಿತ್ರಗಳಲ್ಲಿ ನಟಿಸಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಇವರು ನಟಿಸಿದ ಸಿನಿಮಾ, (ತಂಬಿಲ, ಭೋಜರಾಜ್ ಎಮ್ ಬಿ ಬಿ ಎಸ್, ಭಟ್ಕಳ,)ಧಾರಾವಾಹಿ (ಅಜನೆ) ಮತ್ತು ಕಿರು ಚಿತ್ರ (ಪ್ಲಾನ್ –ಸಿ, ಆ ಒಂದು ಕೆರೆ) ಹೀಗೆ ತನ್ನಲ್ಲೂ ಒಬ್ಬ ಕಲಾವಿದ ಇದ್ದಾನೆ ಎಂದು ತೋರಿಸಿಕೊಟ್ಟಿದ್ದಾರೆ. ಜೀವನದಲ್ಲಿ ದೊಡ್ಡ ಕಲಾವಿದ ಆಗಬೇಕು, ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆಯಂತೆ. ಹಾಗೆಯೇ ನಿರೂಪಣೆ ಯಲ್ಲಿಯೂ ಒಳ್ಳೆಯ ಹೆಸರು ಮಾಡಬೇಕು ಮತ್ತು ಹೊರ ದೇಶದಲ್ಲಿಯೂ ವಾಕ್ ಚಾತುರ್ಯ ತೋರಿಸಬೇಕು ಎನ್ನುವ ಕನಸು ನನಸಾಗಲಿ ಇವರ ಈ ಎಲ್ಲಾ ಆಸೆಗೆ ಮನೆಯವರು ಪ್ರೋತ್ಸಾಹ ಮತ್ತು ಮಡದಿ ಶ್ರೀಮತಿ ಶುಭ ಲಕ್ಷ್ಮಿ ಯವರ ಸಂಪೂರ್ಣ ಪ್ರೋತ್ಸಾಹ, ಬೆಂಬಲ ಇದೆ.

ಪ್ರಸ್ತುತ ಈಗ ಇವರು ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ನಾಮಫಲಕ ಕಲಾಗಾರರ ಸಂಘದ ಅಧ್ಯಕ್ಷರಾಗಿ ಬಿರ್ವೆರ್ ಕುಡ್ಲ ವಕ್ತಾರೆ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ತನ್ನ ಜೀವನಕ್ಕಾಗಿ ತನ್ನದೇ ಆದ ಸುವರ್ಣ ಗ್ರಾಫಿಕ್ಸ್ ಸ್ಟುಡಿಯೋ ನಡೆಸಿಕೊಂಡು ಹೋಗುತ್ತಿದ್ದಾರೆ.(ಕಾರ್, ಬೈಕ್ ಇದರ ಗ್ರಾಫಿಕ್ಸ್, ಸ್ಟಿಕರ್ ಕಟ್ಟಿಂಗ್, ನೇಮ್ ಪ್ಲೇಟ್ )

ತಾನು ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎಂಬ ಇವರ ಕನಸು ಆದಷ್ಟು ಬೇಗ ಈಡೇರಲಿ.

ಕನ್ನಡ ತುಳು ಚಿತ್ರ ರಂಗದಲ್ಲಿ ಒಳ್ಳೆಯ ಅವಕಾಶ ಸಿಗಲಿ, ಕನ್ನಡದಲ್ಲಿ ಅಭಿನಯಿಸುವ ಆಸೆಯು ಬೇಗ ಫಲಿಸಲಿ, ಕಲಾಮಾತೆ ಮತ್ತು ತುಳುನಾಡಿನ ದೈವ ದೇವರುಗಳ ಅನುಗ್ರಹ ಸದಾ ಇರಲಿ ಒಳ್ಳೆಯದಾಗಲಿ ನಿಮಗೆ

 

ಬರಹ:✍ಪ್ರಶಾಂತ್ ಅಂಚನ್ ಮಸ್ಕತ್


Share:

More Posts

Category

Send Us A Message

Related Posts

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share       ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share       ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »