TOP STORIES:

ನಿಸ್ವಾರ್ಥ ಸೇವಾ ಚತುರ ಅಮಿತ್ ರಾಜ್


ನಿಸ್ವಾರ್ಥ ಸೇವಾ ಚತುರ ಅಮಿತ್ ರಾಜ್  ಹಿಂದೂ ಸಂಘಟನೆಯಲ್ಲಿ ನಾನಾ ಜವಾಬ್ದಾರಿ ನಿರ್ವಹಿಸಿದ್ದು, ಈ ಮೊದಲು ಉರ್ವಾಸ್ಟೋರ್ ವಾರ್ಡಿನ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ, ನಂತರ ಬಿಜೆಪಿ ಯುವಮೋರ್ಚಾ ಮಂಡಲ ಉಪಾಧ್ಯಕ್ಷರಾಗಿ, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿರುತ್ತಾರೆ.
ಸಾಕಷ್ಟು ಕಡೆ ಅಮಿತ್ ರಾಜ್ ಅನ್ನೋ ಹೆಸರನ್ನ ನೀವು ಕೇಳಿರುವಿರಿ. ಅದೆಷ್ಟೋ ಜನ ಅಮಿತ್ ರಾಜ್ ರವರ ಬಗ್ಗೆ ಹೇಳುವ ಮಾತು… ಅವರೊಂದು ಶಕ್ತಿ!!ಹಿಂದುತ್ವಗೋಸ್ಕರ ದುಡಿಯುವಂತಹ ಪ್ರಾಮಾಣಿಕ ನಾಯಕ, ಹಾಗೆ ಬಡವರ ಸೇವೆ ಮಾಡುವಂತಹ ಸಮಾಜಸೇವಕ..
ತನ್ನ ಬಾಲ್ಯಜೀವನದಿಂದಲೇ “ರಾಷ್ಟ್ರೀಯ ಸ್ವಯಂ ಸೇವಕ ಸಂಘದ ” ಸಂಘ ಶಿಕ್ಷಣ ಪಡೆದು ಸ್ವಯಂ ಸೇವಕರಾಗಿದ್ದು, ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು.
ಬಾಲ್ಯದಿಂದಲೇ ಒಂದು ಆಸೆಯನ್ನ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದರು. ಸಮಾಜದಲ್ಲಿ ನಾನು ಮತ್ತೊಬ್ಬರಿಗೆ ಒಳ್ಳೆಯದನ್ನ ಮಾಡಬೇಕು, ಸಮಾಜಕ್ಕೆ ಒಳಿತಿನ ಹಸ್ತವಾಗಿ ದುಡಿಯಬೇಕು ಎಂಬ ಮನಸ್ಥಿತಿಯಲ್ಲಿ ಬೆಳೆದು ತಾನು ಅಂದುಕೊಂಡ ಹಾಗೆ ಬದುಕುತ್ತಿದ್ದಾರೆ.
ಅಮಿತ್ ಅಣ್ಣ ನಂತರದ ದಿನಗಳಲ್ಲಿ ಬಡವರ ಸೇವೆಯನ್ನ ಮಾಡಲು ಮುಂದಾದರು. ಇವತ್ತಿಗೂ ಅದೆಷ್ಟೋ ಬಡವರ ಕಷ್ಟಕ್ಕೆ ಮರುಗಿ, ಅವರ ಕಣ್ಣೀರ ನೋವಿಗೆ ಆಸರೆಯಾಗಿರೋದು ನಿಜಕ್ಕೂ ಶ್ಲಾಘನೀಯ ವಿಚಾರ. ಪ್ರಾಮಾಣಿಕತೆಗೆ ಮತ್ತೊಂದು ಪ್ರತೀಕವೆನ್ನಬಹುದು.
“ಅಮಿತ್ ಅಣ್ಣ”ನಿಗೆ ಅದೆಷ್ಟೇ ಹೆಸರಿದ್ದರೂ ಯಾವತ್ತು ತನ್ನ ಕಾರ್ಯಕರ್ತರ ಜೊತೆ ನಾಯಕನಂತೆ ಮೆರೆಯದೆ, ಅಹಂಕಾರವನ್ನ ತೋರದೆ ಸಾಮಾನ್ಯವಾಗಿ ಅವರೊಂದಿಗೆ ಕೆಲಸ ಮಾಡೋ ಆ ಕಾರಣಕ್ಕಾಗಿ ಅಭಿಮಾನಗಳು ಹುಟ್ಟಿಕೊಂಡಿವೆ. ನಿಜಕ್ಕೂ ಎಂತಹ ಸಾರ್ಥಕ ಜೀವನ…ಅವರ ನಿಲುವು ಹಾಗೆ!! ಅವರ ಮಾರ್ಗದರ್ಶನದ ಪ್ರತಿಯೊಂದು ಹೆಜ್ಜೆಯಲ್ಲೂ ಅರ್ಥವಿದೆ..

ಸಮಾಜಕ್ಕಾಗಿ ಅಮಿತ್ ಅಣ್ಣ  ಎಂದರೆ ಏನು?

ಅವರ ನೇತೃತ್ವದಲ್ಲಿ ಬಡಮಕ್ಕಳ ಶಾಲೆಗೆ ಭೇಟಿ ನೀಡಿ ಹಾಗೂ ಹಲವಾರು ಅಶಕ್ತ ಕುಟುಂಬದ ಮನೆಗೆ ಭೇಟಿ ನೀಡಿ ಅವರಿಗೆ ಸಹಾಯ ಮಾಡುವುದರೊಂದಿಗೆ ಅನೇಕ ಸಮಾಜಮುಖಿ ‌ಕೆಲಸ ಮಾಡಿರುತ್ತಾರೆ.

ಅಲ್ಲದೆ 26-01-2018 ಮಂಗಳೂರಿನಲ್ಲಿ ಸುಮಾರು ನೂರು ಜನರ ನೇತ್ರದಾನ ಸಂಕಲ್ಪ ಮಾಡಿಸುವ ಮೂಲಕ #ನೇತ್ರದಾನ_ಶಿಬಿರ ನಡೆಸಿರುತ್ತಾರೆ..
ಇದಕ್ಕಿಂತ ಪುಣ್ಯದ ಕೆಲಸ ಬೇರೇನಿದೆ..ಇವೆಲ್ಲ ಸಮಾಜಕ್ಕೆ ಪ್ರಾಮುಖ್ಯತೆ ನೀಡೋ ಕೆಲಸವಾದರೆ ಇನ್ನು ಪರದೆಯ ಹಿಂದೆ ಅದೆಷ್ಟೋ ಒಳಿತಿನ ಸಹಾಯವನ್ನ ಇವರು ಮಾಡುತ್ತಲೇ ಬರುತ್ತಿದ್ದಾರೆ..ಕಾರಣವಿಷ್ಟೇ… ತಾನು ಮಾಡೋ ಕೆಲಸ ದೇವರಿಗೆ ಗೊತ್ತಾದರೆ ಸಾಕು ಸಮಾಜಕ್ಕೆ ಬೇಡ ಎಂಬ ಅರ್ಥದೊಳು ಕೆಲಸ ಮಾಡೋ ಸರಳತೆಯ ನಾಯಕನೇ ಇವರು.

ಹೆಚ್ಚು ಹೇಳಬೇಕೆಂದರೆ

ಅತ್ತಾಗ ಕಣ್ಣೀರು ಒರೆಸೋ ನಾಯಕ
ಸೋತಾಗ ಹೆಗಲು ಕೊಡೊ ನಾಯಕ
ಬಡವರ ನೋವಿಗೆ ಶಕ್ತಿ ತುಂಬೋ ನಾಯಕ
ಕಾರ್ಯಕರ್ತರಿಗೆ ಧೈರ್ಯ ತುಂಬೋ ನಾಯಕ ಎಲ್ಲೇ ಯಾರಿಗೂ ತೊಂದರೆಯಾದರೂ ಕ್ಷಣ ಮಾತ್ರದಲ್ಲಿ ಸ್ಪಂದಿಸೋ ನಾಯಕ
ಅನ್ಯಾಯದ ವಿರುದ್ಧ ಗರ್ಜಿಸೋ ನಾಯಕ
ನೊಂದ ಜೀವಕ್ಕೆ ಆಸರೆಯಾಗೋ ನಾಯಕ
ಪ್ರಾಮಾಣಿಕ ಸಿದ್ದಾಂತಕ್ಕೆ ಸೈ ಎನ್ನೋ ನಾಯಕ
ಸರಳತೆಯಲ್ಲಿ ಬದುಕೋ ನಾಯಕ
ಒಟ್ಟಿನಲ್ಲಿ ನಾಯಕ ಅನ್ನೋ ಪದಗಳಿಗೆ ಅರ್ಹತೆಯ ಮಡಿಲು ತುಂಬೋ ನಿಸ್ವಾರ್ಥ ವ್ಯಕ್ತಿ
ಅನ್ಯಾಯ ಮಾಡುವರನ್ನ ಹತ್ತಿರವೂ ಸೇರಿಸದೆ ನ್ಯಾಯದ ಪರ ಕೆಲಸ ಮಾಡೋ ಜನರ ಜೊತೆ ಬೆರೆತು ನಾನಿದ್ದೇನೆ ಎಂಬ ಭರವಸೆಯ ಶಕ್ತಿಯಾಗಿ ದುಷ್ಟರಿಗೆ ಅಂಜದೆ, #ದೈವ_ದೇವರುಗಳ ಆಶೀರ್ವಾದ ಪಡೆದು ಹಿಂದೂ ಧರ್ಮದ ತತ್ವಗಳನ್ನ ಪಾಲಿಸುತ್ತ,
ಹಿಂದೂಭದ್ರಕೋಟೆಗೆ ಕಾವಲಿರೋ ಈ ನಾಯಕನ ಬಗ್ಗೆ ಅದೆಷ್ಟೇ ಮಾತುಗಳ ವರ್ಣನೆ ನೀಡಿದರು ಅದು ಕಡಿಮೆಯೇ..
ಇಲ್ಲಿಯವರೆಗೆ ನಾ ಇವರನ್ನ ಭೇಟಿಯಾಗಿಲ್ಲ..ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ #ನಿಜ!! ಆದರೆ ಭೇಟಿಯಾಗದಿದ್ದರು ಹತ್ತಿರದಿಂದ ನೋಡಿದ್ದೇನೆ ಎಂಬ ಅರಿವು ಅಭಿಮಾನಿಗಳ ಮಾತುಗಳಿಂದ ಹಾಗು ಅವರ ಕೆಲಸದಿಂದ ಗೊತ್ತಾಗುತ್ತದೆ..
ಸ್ವಾರ್ಥ ತುಂಬಿರೋ ಈ ಪ್ರಪಂಚದಲ್ಲಿ ಇಂತಹ ನಾಯಕರು ಹಲವರಿಗೆ ಮಾದರಿಯಾಗಬೇಕು..”#ಅಮಿತ್_ಅಣ್ಣ” ವೇದಿಕೆಯ ಮುಂಭಾಗ ನಿಂತು ಕೆಲಸ ಮಾಡುವರಲ್ಲ, ಪರದೆಯ ಹಿಂದೆ ದುಡಿಯುವಂತಹ ಕಾಯಕ..
ಹಾಗೆ “ಅಮಿತ್ ಅಣ್ಣ” “ರಾಷ್ಟ್ರೀಯ ಸ್ವಯಂಸೇವಕ ಸಂಘದ” ಸಂಘ ಶಿಕ್ಷಣ ಪಡೆದು RSS ನಲ್ಲಿ ಬಹಳ ಒಲವನ್ನು ಇಟ್ಟುಕೊಂಡವರು..ಆರ್ ಎಸ್ ಎಸ್ ಪ್ರಮುಖ ಅಂಶಗಳನ್ನ ತನ್ನೊಳಗೆ ಅಳವಡಿಸಿ ಹಿಂದೂರಾಷ್ಟ್ರದ ಭಗವಧ್ವಜ ಪತಾಕೆ ಬಹಳ ಎತ್ತರಕ್ಕೆ ಹಾರಲಿ ಎಂಬ ಕನಸು ಕಂಡವರು..
ಅಣ್ಣ ನೀವು ಹಿಂದೂ ಸಮಾಜಗೋಸ್ಕರ ಕೊಟ್ಟಿರೋ ಕೊಡುಗೆಗೆ ಬೆಲೆಕಟ್ಟಲಾಗದು..ನಿಮ್ಮಿಂದ ಇನ್ನು ಅನೇಕ ಒಳಿತಿನ ವಿಚಾರಗಳು ಮೂಡಿ ಬರೆಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..ನಿಮ್ಮ ಹೊಸ ಪಯಣದ ಆರಂಭ ಅದೆಷ್ಟೋ ಜನರಿಗೆ ಪ್ರೇರಣೆಯಾಗಲಿ..ಸದಾ ನಿಮ್ಮ ವ್ಯಕ್ತಿತ್ವದ ಅಭಿಮಾನಿ ನಾ

ಬರಹ-ಪ್ರವೀಣ್ ಪೂಜಾರಿ


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »