TOP STORIES:

ನಿಸ್ವಾರ್ಥ ಸೇವಾ ಚತುರ ಅಮಿತ್ ರಾಜ್


ನಿಸ್ವಾರ್ಥ ಸೇವಾ ಚತುರ ಅಮಿತ್ ರಾಜ್  ಹಿಂದೂ ಸಂಘಟನೆಯಲ್ಲಿ ನಾನಾ ಜವಾಬ್ದಾರಿ ನಿರ್ವಹಿಸಿದ್ದು, ಈ ಮೊದಲು ಉರ್ವಾಸ್ಟೋರ್ ವಾರ್ಡಿನ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ, ನಂತರ ಬಿಜೆಪಿ ಯುವಮೋರ್ಚಾ ಮಂಡಲ ಉಪಾಧ್ಯಕ್ಷರಾಗಿ, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿರುತ್ತಾರೆ.
ಸಾಕಷ್ಟು ಕಡೆ ಅಮಿತ್ ರಾಜ್ ಅನ್ನೋ ಹೆಸರನ್ನ ನೀವು ಕೇಳಿರುವಿರಿ. ಅದೆಷ್ಟೋ ಜನ ಅಮಿತ್ ರಾಜ್ ರವರ ಬಗ್ಗೆ ಹೇಳುವ ಮಾತು… ಅವರೊಂದು ಶಕ್ತಿ!!ಹಿಂದುತ್ವಗೋಸ್ಕರ ದುಡಿಯುವಂತಹ ಪ್ರಾಮಾಣಿಕ ನಾಯಕ, ಹಾಗೆ ಬಡವರ ಸೇವೆ ಮಾಡುವಂತಹ ಸಮಾಜಸೇವಕ..
ತನ್ನ ಬಾಲ್ಯಜೀವನದಿಂದಲೇ “ರಾಷ್ಟ್ರೀಯ ಸ್ವಯಂ ಸೇವಕ ಸಂಘದ ” ಸಂಘ ಶಿಕ್ಷಣ ಪಡೆದು ಸ್ವಯಂ ಸೇವಕರಾಗಿದ್ದು, ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು.
ಬಾಲ್ಯದಿಂದಲೇ ಒಂದು ಆಸೆಯನ್ನ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದರು. ಸಮಾಜದಲ್ಲಿ ನಾನು ಮತ್ತೊಬ್ಬರಿಗೆ ಒಳ್ಳೆಯದನ್ನ ಮಾಡಬೇಕು, ಸಮಾಜಕ್ಕೆ ಒಳಿತಿನ ಹಸ್ತವಾಗಿ ದುಡಿಯಬೇಕು ಎಂಬ ಮನಸ್ಥಿತಿಯಲ್ಲಿ ಬೆಳೆದು ತಾನು ಅಂದುಕೊಂಡ ಹಾಗೆ ಬದುಕುತ್ತಿದ್ದಾರೆ.
ಅಮಿತ್ ಅಣ್ಣ ನಂತರದ ದಿನಗಳಲ್ಲಿ ಬಡವರ ಸೇವೆಯನ್ನ ಮಾಡಲು ಮುಂದಾದರು. ಇವತ್ತಿಗೂ ಅದೆಷ್ಟೋ ಬಡವರ ಕಷ್ಟಕ್ಕೆ ಮರುಗಿ, ಅವರ ಕಣ್ಣೀರ ನೋವಿಗೆ ಆಸರೆಯಾಗಿರೋದು ನಿಜಕ್ಕೂ ಶ್ಲಾಘನೀಯ ವಿಚಾರ. ಪ್ರಾಮಾಣಿಕತೆಗೆ ಮತ್ತೊಂದು ಪ್ರತೀಕವೆನ್ನಬಹುದು.
“ಅಮಿತ್ ಅಣ್ಣ”ನಿಗೆ ಅದೆಷ್ಟೇ ಹೆಸರಿದ್ದರೂ ಯಾವತ್ತು ತನ್ನ ಕಾರ್ಯಕರ್ತರ ಜೊತೆ ನಾಯಕನಂತೆ ಮೆರೆಯದೆ, ಅಹಂಕಾರವನ್ನ ತೋರದೆ ಸಾಮಾನ್ಯವಾಗಿ ಅವರೊಂದಿಗೆ ಕೆಲಸ ಮಾಡೋ ಆ ಕಾರಣಕ್ಕಾಗಿ ಅಭಿಮಾನಗಳು ಹುಟ್ಟಿಕೊಂಡಿವೆ. ನಿಜಕ್ಕೂ ಎಂತಹ ಸಾರ್ಥಕ ಜೀವನ…ಅವರ ನಿಲುವು ಹಾಗೆ!! ಅವರ ಮಾರ್ಗದರ್ಶನದ ಪ್ರತಿಯೊಂದು ಹೆಜ್ಜೆಯಲ್ಲೂ ಅರ್ಥವಿದೆ..

ಸಮಾಜಕ್ಕಾಗಿ ಅಮಿತ್ ಅಣ್ಣ  ಎಂದರೆ ಏನು?

ಅವರ ನೇತೃತ್ವದಲ್ಲಿ ಬಡಮಕ್ಕಳ ಶಾಲೆಗೆ ಭೇಟಿ ನೀಡಿ ಹಾಗೂ ಹಲವಾರು ಅಶಕ್ತ ಕುಟುಂಬದ ಮನೆಗೆ ಭೇಟಿ ನೀಡಿ ಅವರಿಗೆ ಸಹಾಯ ಮಾಡುವುದರೊಂದಿಗೆ ಅನೇಕ ಸಮಾಜಮುಖಿ ‌ಕೆಲಸ ಮಾಡಿರುತ್ತಾರೆ.

ಅಲ್ಲದೆ 26-01-2018 ಮಂಗಳೂರಿನಲ್ಲಿ ಸುಮಾರು ನೂರು ಜನರ ನೇತ್ರದಾನ ಸಂಕಲ್ಪ ಮಾಡಿಸುವ ಮೂಲಕ #ನೇತ್ರದಾನ_ಶಿಬಿರ ನಡೆಸಿರುತ್ತಾರೆ..
ಇದಕ್ಕಿಂತ ಪುಣ್ಯದ ಕೆಲಸ ಬೇರೇನಿದೆ..ಇವೆಲ್ಲ ಸಮಾಜಕ್ಕೆ ಪ್ರಾಮುಖ್ಯತೆ ನೀಡೋ ಕೆಲಸವಾದರೆ ಇನ್ನು ಪರದೆಯ ಹಿಂದೆ ಅದೆಷ್ಟೋ ಒಳಿತಿನ ಸಹಾಯವನ್ನ ಇವರು ಮಾಡುತ್ತಲೇ ಬರುತ್ತಿದ್ದಾರೆ..ಕಾರಣವಿಷ್ಟೇ… ತಾನು ಮಾಡೋ ಕೆಲಸ ದೇವರಿಗೆ ಗೊತ್ತಾದರೆ ಸಾಕು ಸಮಾಜಕ್ಕೆ ಬೇಡ ಎಂಬ ಅರ್ಥದೊಳು ಕೆಲಸ ಮಾಡೋ ಸರಳತೆಯ ನಾಯಕನೇ ಇವರು.

ಹೆಚ್ಚು ಹೇಳಬೇಕೆಂದರೆ

ಅತ್ತಾಗ ಕಣ್ಣೀರು ಒರೆಸೋ ನಾಯಕ
ಸೋತಾಗ ಹೆಗಲು ಕೊಡೊ ನಾಯಕ
ಬಡವರ ನೋವಿಗೆ ಶಕ್ತಿ ತುಂಬೋ ನಾಯಕ
ಕಾರ್ಯಕರ್ತರಿಗೆ ಧೈರ್ಯ ತುಂಬೋ ನಾಯಕ ಎಲ್ಲೇ ಯಾರಿಗೂ ತೊಂದರೆಯಾದರೂ ಕ್ಷಣ ಮಾತ್ರದಲ್ಲಿ ಸ್ಪಂದಿಸೋ ನಾಯಕ
ಅನ್ಯಾಯದ ವಿರುದ್ಧ ಗರ್ಜಿಸೋ ನಾಯಕ
ನೊಂದ ಜೀವಕ್ಕೆ ಆಸರೆಯಾಗೋ ನಾಯಕ
ಪ್ರಾಮಾಣಿಕ ಸಿದ್ದಾಂತಕ್ಕೆ ಸೈ ಎನ್ನೋ ನಾಯಕ
ಸರಳತೆಯಲ್ಲಿ ಬದುಕೋ ನಾಯಕ
ಒಟ್ಟಿನಲ್ಲಿ ನಾಯಕ ಅನ್ನೋ ಪದಗಳಿಗೆ ಅರ್ಹತೆಯ ಮಡಿಲು ತುಂಬೋ ನಿಸ್ವಾರ್ಥ ವ್ಯಕ್ತಿ
ಅನ್ಯಾಯ ಮಾಡುವರನ್ನ ಹತ್ತಿರವೂ ಸೇರಿಸದೆ ನ್ಯಾಯದ ಪರ ಕೆಲಸ ಮಾಡೋ ಜನರ ಜೊತೆ ಬೆರೆತು ನಾನಿದ್ದೇನೆ ಎಂಬ ಭರವಸೆಯ ಶಕ್ತಿಯಾಗಿ ದುಷ್ಟರಿಗೆ ಅಂಜದೆ, #ದೈವ_ದೇವರುಗಳ ಆಶೀರ್ವಾದ ಪಡೆದು ಹಿಂದೂ ಧರ್ಮದ ತತ್ವಗಳನ್ನ ಪಾಲಿಸುತ್ತ,
ಹಿಂದೂಭದ್ರಕೋಟೆಗೆ ಕಾವಲಿರೋ ಈ ನಾಯಕನ ಬಗ್ಗೆ ಅದೆಷ್ಟೇ ಮಾತುಗಳ ವರ್ಣನೆ ನೀಡಿದರು ಅದು ಕಡಿಮೆಯೇ..
ಇಲ್ಲಿಯವರೆಗೆ ನಾ ಇವರನ್ನ ಭೇಟಿಯಾಗಿಲ್ಲ..ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ #ನಿಜ!! ಆದರೆ ಭೇಟಿಯಾಗದಿದ್ದರು ಹತ್ತಿರದಿಂದ ನೋಡಿದ್ದೇನೆ ಎಂಬ ಅರಿವು ಅಭಿಮಾನಿಗಳ ಮಾತುಗಳಿಂದ ಹಾಗು ಅವರ ಕೆಲಸದಿಂದ ಗೊತ್ತಾಗುತ್ತದೆ..
ಸ್ವಾರ್ಥ ತುಂಬಿರೋ ಈ ಪ್ರಪಂಚದಲ್ಲಿ ಇಂತಹ ನಾಯಕರು ಹಲವರಿಗೆ ಮಾದರಿಯಾಗಬೇಕು..”#ಅಮಿತ್_ಅಣ್ಣ” ವೇದಿಕೆಯ ಮುಂಭಾಗ ನಿಂತು ಕೆಲಸ ಮಾಡುವರಲ್ಲ, ಪರದೆಯ ಹಿಂದೆ ದುಡಿಯುವಂತಹ ಕಾಯಕ..
ಹಾಗೆ “ಅಮಿತ್ ಅಣ್ಣ” “ರಾಷ್ಟ್ರೀಯ ಸ್ವಯಂಸೇವಕ ಸಂಘದ” ಸಂಘ ಶಿಕ್ಷಣ ಪಡೆದು RSS ನಲ್ಲಿ ಬಹಳ ಒಲವನ್ನು ಇಟ್ಟುಕೊಂಡವರು..ಆರ್ ಎಸ್ ಎಸ್ ಪ್ರಮುಖ ಅಂಶಗಳನ್ನ ತನ್ನೊಳಗೆ ಅಳವಡಿಸಿ ಹಿಂದೂರಾಷ್ಟ್ರದ ಭಗವಧ್ವಜ ಪತಾಕೆ ಬಹಳ ಎತ್ತರಕ್ಕೆ ಹಾರಲಿ ಎಂಬ ಕನಸು ಕಂಡವರು..
ಅಣ್ಣ ನೀವು ಹಿಂದೂ ಸಮಾಜಗೋಸ್ಕರ ಕೊಟ್ಟಿರೋ ಕೊಡುಗೆಗೆ ಬೆಲೆಕಟ್ಟಲಾಗದು..ನಿಮ್ಮಿಂದ ಇನ್ನು ಅನೇಕ ಒಳಿತಿನ ವಿಚಾರಗಳು ಮೂಡಿ ಬರೆಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..ನಿಮ್ಮ ಹೊಸ ಪಯಣದ ಆರಂಭ ಅದೆಷ್ಟೋ ಜನರಿಗೆ ಪ್ರೇರಣೆಯಾಗಲಿ..ಸದಾ ನಿಮ್ಮ ವ್ಯಕ್ತಿತ್ವದ ಅಭಿಮಾನಿ ನಾ

ಬರಹ-ಪ್ರವೀಣ್ ಪೂಜಾರಿ


Related Posts

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »