TOP STORIES:

ಪ್ರಾತಃಸ್ಮರಣೀಯ ದೇಯಿಬೈದೆತಿ,ಕೋಟಿಚೆನ್ನಯರ ಕಾರ್ಣಿಕಕ್ಕೆ ಶರಣಾಗಿ .


ಅಗಣಿತ ಮಹಿಮಾನ್ವಿತರಾದ ಕೋಟಿ ಚೆನ್ನಯರು ಹಾಗೂ ಮಾತೆ ದೇಯಿ ಬೈದೆತಿಯ ಪುಣ್ಯ ನೆಲೆಯಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯು ಸಮಸ್ತ ಆಸ್ತಿಕ ಬಂಧುಗಳ ಭಕ್ತಿ,ಶ್ರದ್ದೆ,ಇಚ್ಚಾಶಕ್ತಿಯ ಕ್ಷೇತ್ರವೆನಿಸಿ ಅಭೂತಪೂರ್ವ ಜೀರ್ಣೊದ್ದಾರದೊಂದಿಗೆ ಕಂಗೊಳಿಸುತ್ತಿರುವುದು ಧನ್ಯ ಸಂಗತಿ.ವಿಶ್ವ ಬಿಲ್ಲವರ ಸ್ವಾಭಿಮಾನದ ಪ್ರತೀಕವೆಂಬಂತೆ ಈ ಸ್ಥಾನ ಬಿಂಬಿತಗೊಂಡಿದ್ದೂ ಹೆಮ್ಮೆಯ ಅಂಶ.ಸಮಸ್ತ ಭಕ್ತರ ಪವಿತ್ರ ತಾಣವಾಗಿ ದಿನದಿಂದ ದಿನಕ್ಕೆ ಉತ್ತುಂಗ ಸ್ಥಿತಿಯಲ್ಲಿದ್ದ ಇಲ್ಲಿ ಪ್ರಸಕ್ತ ಆಡಳಿತಾತ್ಮಕ ವಿಚಾರದಲ್ಲಿ ನ್ಯಾಯಾಲಯದವರೆಗೆ ಹೋಗಿರುವಂತದ್ದು ಖೇಧಕರ.
ಅಭಿಪ್ರಾಯ ವ್ಯತ್ಯಾಸ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಮತ್ತು ಎಲ್ಲರಲ್ಲಿ ಇರುವಂತದ್ದೆ.ಆದರೆ ಅದನ್ನೆ ಮುಖ್ಯವಾಗಿಸಿಕೊಂಡು ಹಠವಾದಿತನದ ಧೋರಣೆಯು ಸಮಸ್ತ ಭಕ್ತರಿಗೆ ಹಾಗೂ ಸಮಾಜಬಾಂಧವರಿಗೆ ನೋವಿನ ಸಂಗತಿ.ಇಡೀ ಸಮಾಜ ಹಲವಾರು ಒಳಿತಿನ ನಿರೀಕ್ಷೆಗಳನ್ನಿಟ್ಟುಕೊಂಡು ಮತ್ತು ಭಕ್ತಿಯ ನೆಲೆಯಲ್ಲಿ ತನುಮನಧನ ಸಹಕಾರ ನೀಡಿದ ಐತಿಹಾಸಿಕ ಸಂದರ್ಭಗಳನ್ನು ಮತ್ತು ಭವ್ಯ ಸಮಾರಂಭಗಳನ್ನು ಮರೆತು ಇದೀಗ ಪ್ರತಿಷ್ಠೆ ಮೆರೆಯಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.ನ್ಯಾಯಾಲಯ ಎಂದಾಕ್ಷಣ ಅಲ್ಲಿ ನಿಯಮಾನುಸಾರವಾಗಿ ವಾದ ಪ್ರತಿವಾದದ ಬೆಳವಣಿಗೆಗಳು ಯಾವ ದಿನ ಕೊನೆಯಾಗುತ್ತದೆ ಎಂಬುದು ಸ್ಪಷ್ಟವಿಲ್ಲದ ವಿಚಾರ.ಆದುದರಿಂದ ನಮ್ಮ ಮುಖಂಡರುಗಳಾಗಲಿ,ಸ್ಥಳಕ್ಕೆ ಸಂಬಂಧ ಪಟ್ಟವರಾಗಲಿ ಎಲ್ಲಾ ಆತುರ, ಆಕ್ರೋಶಗಳನ್ನು ಕರಗಿಸಿಕೊಂಡು ಪ್ರಾತಃಸ್ಮರಣೀಯ ದೇಯಿಬೈದೆತಿ,ಕೋಟಿಚೆನ್ನಯರ ಕಾರ್ಣಿಕಕ್ಕೆ ಶರಣಾಗಿ ಎಲ್ಲ ಭಿನ್ನಮತಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸಮಂಜಸವಾಗಿದೆ.ಒಂದಷ್ಟು ಗೊಂದಲ ಹಾಗೂ ತಪ್ಪು ಸಂದೇಶಗಳು ಸಾರ್ವತ್ರಿಕಗೊಳ್ಳುವ ಮುಂಚೆಯೆ ನಮ್ಮ ನಡುವಿನ,ಸಹಮತ, ಸಹೋದರತ್ವ ಸಾಬೀತಾಗಲಿ.ನಾವೆಲ್ಲರೂ ಒಗ್ಗೂಡಿಕೊಂಡು ಒಳ್ಳೆಯ ಬೆಳವಣಿಗೆಗೆ ಸಾಕ್ಷಿಯಾಗೋಣ

ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ).


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »