TOP STORIES:

ಫ್ರೆಂಡ್ಸ್ ಬಲ್ಲಾಳ್ ಬಾಗ್ “ಬಿರುವೆರ್ ಕುಡ್ಲದ ” ಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ..


ಒಂದೇ ಜಾತಿ ಒಂದೇ ಮತ ಒಂದೇ ದೇವರುಎಂಬ ನೀತಿ ಸಂದೇಶವನ್ನು ವಿಶ್ವಕ್ಕೆ ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶವನ್ನು ಪಾಲಿಸಿಕೊಂಡು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಕರುಣೆ ಮಮತೆಯ ದೀವಿಗೆಯಾಗಿ ಸಮಾಜಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು ಪರರ ನೋವು ನಲಿವುಗಳಿಗೆ ಧ್ವನಿಯಾಗಿ ಕಷ್ಟ ಎಂದು ಕಂಬನಿ ಮಿಡಿಯುವ ಮನಗಳಿಗೆಅವರ ಕಣ್ಣೀರೋರೆಸಿ ಮನ  ಮನೆಯಲ್ಲಿ ನಂದಾದೀಪ ಬೆಳಗಿಸಿದವೇ ನಮ್ಮ ಪ್ರೀತಿಯ ಬಿರುವೆರ್ ಕುಡ್ಲ ಸಂಘಟನೆಯ ರೂವಾರಿಉದಯ ಪೂಜಾರಿ ಬಲ್ಲಾಳ್ ಬಾಗ್.

ಆಡಡೆಲೆ ಮಾಡುವವನು ರೂಢಿಯೊಳಗುತ್ತಮಎನ್ನುವ ಸರ್ವಜ್ಞನ ಸಾರದಂತೆ ಯಾವುದೇ ಸದ್ದುಗದ್ದಲವಿಲ್ಲದೆ ಸಮಾಜದಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು. ಮಾತ್ರವಲ್ಲದೆ ಸಮಾಜ ಒದಗಿಸಿರೋ ಅವಕಾಶವನ್ನು ಸಮಾಜದ ಸೇವೆಗಾಗಿಮೀಸಲಾಗಿಟ್ಟವರು.

ಬಿರುವೆರ್ ಕುಡ್ಲ ಸ್ಥಾಪನೆಯಾಗಿ 7ವರ್ಷ ಕಳೆದಿಲ್ಲ ಆದರೆ ಕಡಿಮೆ ಅವಧಿಯಲ್ಲಿ ಮಹತ್ತರವಾದ ಸೇವೆಯ ಮುಖೇನ ಸುಮಾರು20 ಘಟಕಗಳನ್ನು ಸ್ಥಾಪಿಸಿ  ಕೋಟ್ಯಾತರ ರೂಪಾಯಿ ಮೊತ್ತದ  ಸಹಾಯಹಸ್ತವನ್ನು ಸಮಾಜದ ಬಡ ಜನರಿಗಾಗಿ ನೀಡಿರುವುದುಮಾತ್ರವಲ್ಲದೆ ಕೊರೊನಾ ಮಹಾಮಾರಿಯಿಂದ ಜನತೆ ತತ್ತರಿಸುತ್ತಿರುವ ಸಂಧರ್ಭದಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ಆಂಬುಲೆನ್ಸ್ನ್ನು ಜನರ ಸೇವೆಗಾಗಿ ನೀಡಿದ್ದು ಒಂದು ದಾಖಲೆಯೇ ಸರಿ. ಇಂತಹ ಸಮಾಜಮುಖಿ ಚಿಂತನೆಯ ಫ್ರೆಂಡ್ಸ್ ಬಲ್ಲಾಳ್ ಬಾಗ್ಬಿರುವೆರ್ ಕುಡ್ಲ ಸಂಘಟನೆಯ  ಕೀರ್ತಿ,  ಶ್ರೇಯಸ್ಸನ್ನು ಕಂಡು ಕೆಲವರಿಗೆ ಸಹಿಸಲಾಗಲಿಲ್ಲವೋ ಏನೋ, ಅದಕ್ಕಾಗಿಯೇ ಸಂಚುರೂಪಿಸಿ ಸಂಘಟನೆಯ ಹೆಸರಿಗೆ ಕಪ್ಪು ಚುಕ್ಕಿ ತರುವ ಪ್ರಯತ್ನ ಮಾಡುತ್ತಿರುವುದು ಅವರ ಕೀಳು ಮನಸ್ಥಿತಿಯನ್ನು ಎತ್ತಿತೋರಿಸುತ್ತದೆ.

ನಿಟ್ಟಿನಲ್ಲಿ ಶರಣ್ ಪಂಪ್ ವೆಲ್ ಅವರು ಬಿರುವೆರ್ ಕುಡ್ಲದ ಸಾಧನೆ  ಸೇವೆ ಕಣ್ಣಿಗೆ ಬಿದ್ದರೂ ಅರಗಿಸಿಕೊಳ್ಳಲಾಗಲ್ಲಿವೇನೋಅನಿಸುತ್ತಿದೆ. ಶರಣ್ ಅಣ್ಣ ನಿಮ್ಮ ಹಿಂದೂಪರ ಹೋರಾಟದ ಬಗ್ಗೆ ನಮಗೆ ತುಂಬಾ ಅಭಿಮಾನ ಹೆಮ್ಮೆ ಇತ್ತು.. ಗೌರವ ಇತ್ತು.. ಆದರೆಈಗ ನೀವು ಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಪ್ರತಿಭಟಿಸುದನ್ನು ಕಂಡು ಅದೆಲ್ಲವನ್ನೂಕಳೆದಕೊಂಡಿರಿ..

ಒಂದು ಜಾತಿ ಧರ್ಮ, ಸಮುದಾಯವನ್ನು ಮೀರಿ ಬೆಳೆದು ನಿಂತು ಎಲ್ಲಾ ಸಮಾಜದ ಪ್ರೀತಿಗೆ ಪಾತ್ರರಾದ ಬಿರುವೆರ್ ಕುಡ್ಲಸಂಘಟನೆಯ ಬಗ್ಗೆ ಅನವಶ್ಯಕವಾಗಿ ಆರೋಪ ಮಾಡಿದ ಹಿನ್ನಲೆಯಲ್ಲಿ  ಅದರ ಹಿಂದಿರುವ ಕಾಣದ ಕೈಗಳ ಕೈವಾಡಖಂಡಿತವಾಗಿಯೂ ಒಂದಲ್ಲ ಒಂದು ದಿನ ಜನರ ಮುಂದೆ ಬರುತ್ತದೆ.

ಪಂಪ್ ವೆಲ್ ರವರೆ ಒಮ್ಮೆ ಯೋಚಿಸಿ ಶುಭ ಮಂಗಳ ಕಾರ್ಯದ ಸಮಯದಲ್ಲಿಉದಯಣ್ಣ ಸ್ಥಾನದಲ್ಲಿ ನೀವಿರುತ್ತಿದ್ದರೆಹೇಗಾಗುತ್ತಿತ್ತು!!!!!!!! ಎಂದು. ಕನಿಷ್ಠ ಮಾನವೀಯತೆಯನ್ನೂ ಮರೆತು ನೀವು ರೀತಿ ಮಾಡುತ್ತಿರುವುದು ಬಿರುವೆರ್ ಕುಡ್ಲಸಂಘಟನೆ ಮಾತ್ರವಲ್ಲ ಲಕ್ಷಾಂತರ ತುಳು ಕನ್ನಡಿಗ ಉದಯಣ್ಣನ ಅಭಿಮಾನಿ ಬಳಗಕ್ಕೆ ಅತೀವ ನೋವಾಗಿದೆ.

ಶರಣ್ ರವರೆ,…. ಹಣ ಅಧಿಕಾರ ಅಂತಸ್ತು ಯಾವುದೂ ಶಾಶ್ವತವಲ್ಲ ಆದರೇ ಎಲ್ಲಕ್ಕಿಂತ ಮಿಗಿಲಾದುದು ಮಾನವೀಯತೆ, ಮಾನವೀಯ ಮೌಲ್ಯಗಳುಅದನ್ನು ತುಳಿದು ನಡೆಯಬೇಡಿ….

ನಮ್ಮಂತಹ ನೂರಾರು ಜನರಿಗೆ ನಿಮ್ಮ ಮೇಲೆ ಗೌರವ ಅಭಿಮಾನ ವಿತ್ತು ಆದರೆ ಅರ್ಹತೆಯನ್ನು ನಿಮ್ಮ ಕೀಳುಮಟ್ಟದರಾಜಕಾರಣದಿಂದ ಮಣ್ಣುಪಾಲು ಮಾಡಿದಿರಿ.. ಎಲ್ಲದಕ್ಕೂ ಭಗವಂತ ಹಾಗೂ ತುಳುನಾಡಿನ ಸತ್ಯಗಳು ನಿಮಗೆ ಒಳ್ಳೆಯ ಬುದ್ದಿನೀಡಲಿ ಎಂದು ಆಶಿಸುತ್ತೇವೆ.

ಉದಯಣ್ಣ ಸತ್ಯಕ್ಕೆ ಜಯವಿದೆ.

ನಿಮ್ಮೊಂದಿಗೆ ನಾವಿದ್ದೇವೆ

ಪ್ರೀತಿ ಅಭಿಮಾನ ಗೌರವ ಅನವರತ….

ಜೈ ಬಿರುವೆರ್ ಕುಡ್ಲ ಜೈ ಉದಯಣ್ಣ..

✒️ಪ್ರಭಾಕರ ಬೆಳುವಾಯಿ

(ನಮನ ಫ್ರೆಂಡ್ಸ್ ಮುಂಬಯಿ)


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »