TOP STORIES:

ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ -ವಸಂತ್ ಗಿಳಿಯಾರ್


ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ
-ವಸಂತ್ ಗಿಳಿಯಾರ್

ಇವತ್ತು ಚಾಂಪ ಪೂಜಾರಿಯವರಿಲ್ಲ! ಆದರೆ ಅವರ ಹೆಸರು ಉಳಿದಿದೆ, ಧರ್ಮಸ್ಥಳ ಎಂದರೆ ನಮ್ಮ ಭಾಗದಲ್ಲಿ ಎಂದಿಗೂ ನೆನಪಾಗುವ ಹೆಸರದು. ಧರ್ಮಸ್ಥಳದ ಸತ್ಯ, ಧರ್ಮ,ನ್ಯಾಯ,ನೀತಿ ಎಂಬ ಆಶಯಗಳನ್ನೇ ಬದುಕಿ ತನ್ನ ಬದುಕನ್ನೇ ಸತ್ಯವೃತವಾಗಿಸಿಕೊಂಡು ಕಾಯವನ್ನ ಗಂದದ ಕೊರಡಿನಂತೆ ಸವೆಸಿದ ಕೀರ್ತಿಶೇಷರು ಚಾಂಪ ಪೂಜಾರಿ.

ಆ ಕಾಲದಲ್ಲಿ ಈ ಊರಿನಿಂದ ಧರ್ಮಸ್ಥಳಕ್ಕೆ ಹೋಗಬೇಕಿದ್ದರೆ, ಖಾವಂದರ ನ್ಯಾಯ ಛಾವಡಿಯಲ್ಲಿ ವಾಗ್ ಕಲಹ ಪರಿಹಾರವಾಗಬೇಕಿದ್ದರೆ, ಸಸೂತ್ರವಾಗಿ ಮಂಜುನಾಥ ಸ್ವಾಮಿಯ ದರ್ಶನವಾಗಬೇಕಿದ್ದರೆ, ಯಾವ ದಿನ ಬೇಕಿದ್ದರೂ ಧರ್ಮಸ್ಥಳಕ್ಕೆ ಹೋಗಿ ಸುರಕ್ಷಿತವಾಗಿ ಮರಳ ಬಲ್ಲೆ ಎಂಬ ವಿಶ್ವಾಸ ಆ ಕಾಲದ ಭಕ್ತ ಕುಟುಂಬಗಳಿಗೆ ಬಂದದ್ದಿದ್ದರೆ ಈ ಭಾಗದಲ್ಲಿ ಅದೆಲ್ಲದಕ್ಕೂ ಏಕೈಕ ಹೆಸರು ಬನ್ನಾಡಿ ಚಾಂಪ ಪೂಜಾರಿಯವರದ್ದು.

ಚಾಂಪ ಫುಜಾರಿ ಎಂದರೆ ತೆಂಕಣದ ಧರ್ಮದೊಡೆಯನ ಹೃದಯ ಮಂದಿರದಲ್ಲಿಟ್ಟು ಪೂಜಿಸಿದ ಪುಣ್ಯಾತ್ಮ. ಅವರಿಗೆ ಪೂಜ್ಯ ಖಾವಂದರೆಂದರೆ ರಾಮನ ಮುಂದೆ ಹನುಮ ಭಾಗಿದಂತಹ ನಿಷ್ಠೆ, ಅವರದ್ದು ನಿಷ್ಕಳಂಕ ಮನಸ್ಸು, ಪರಿಶುಭ್ರ ಚಾರಿತ್ರ್ಯ. ಬನ್ನಾಡಿ ಗರೋಡಿಯ ಪೂಜೆಯವರಾಗಿದ್ದ ಚಾಂಪ ಫೂಜಾರಿಯವರ ಪೂಜೆಗೆ, ಯಾವ ದೈವವೂ ನಲಿದು, ಒಲಿದು ಬರಬೇಕು, ಅಂಥಹ ತಾದಾತ್ಮ್ಯತೆ

ಚಾಂಪ ಪೂಜಾರಿ ತನ್ನ ವ್ಯಾನಿನ ಮೂಲಕ ಬನ್ನಾಡಿ, ಗಿಳಿಯಾರು,ಕಾವಡಿ, ವಡ್ಡರ್ಸೆ,ಕೋಟ, ಪಡುಕರೆ,ಉಪ್ಲಾಡಿ ಹೀಗೆ ಪುಟ್ಟ ಪುಟ್ಟ ಊರಿನ ದಾರಿಗಳೂ ಧರ್ಮಸ್ಥಳಕ್ಕೆ ಬೆಸೆಯುವ ಸೇತುವೆಯಾದವರು.ಧರ್ಮಸ್ಥಳದ ಪೂಜ್ಯ ಖಾವಂದರಿಗೆ ಇಂದಿಗೂ ಚಾಂಪ ಪೂಜಾರಿಯವರ ಮೇಲೆ ಅಪಾರ ಪ್ರೀತಿ ನೆನೆಕೆ, ಖಾವಂದರ ಹೃದಯ ಗೆದ್ದವರು ಚಾಂಪ ಪೂಜಾರಿ. ಅವರ ನಗೆಯೇ ಒಂದು ಪ್ರೀತಿಯ ಕಡಲು ಈ ಪೋಟೋದಲ್ಲೆ ನೋಡಿ ಅವರ ಮುಖದಲ್ಲಿನ ತೇಜೋಪೂರ್ಣ ವರ್ಚಸ್ಸು.

ಚಾಂಪ ಪೂಜಾರಿ ಒಂದರ್ಥದಲ್ಲಿ ಅಕ್ಷರವಿಲ್ಲದ, ಜಗದ ಅರಿವಿಲ್ಲದ ಆ ಕಾಲದ ಮುಗ್ದ ಕುಟುಂಬದ ಪಾಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಮ್ಮ ಭಾಗದ ದ್ವಾರವೇ ಆಗಿದ್ದರು. ನಾಡಿದ್ದು ಅಭಿಮತ ಸಂಭ್ರಮಕ್ಕೆ ನೀವು ಬರುವುದಾದರೆ ’ಬನ್ನಾಡಿ ಚಾಂಪ ಪೂಜಾರಿ ಮಹಾದ್ವಾರದ ಮೂಲಕವೇ ಬರಬೇಕು. ಹೌದು, ಅಭಿಮತ ಸಂಭ್ರಮದ ಮಹಾದ್ವಾರಕ್ಕೆ ಚಾಂಪ ಪೂಜಾರಿಯವರ ಹೆಸರನ್ನ ಇರಿಸಲಿದ್ದೇವೆ. ಇದು ನಾವು ಅವರನ್ನ ಗೌರವದಿಂದ ನೆನೆಯುವ ಪರಿ. ಬರುತ್ತೀರಿ ತಾನೆ?

ಬನ್ನಿ ಗಿಳಿಯಾರಿಗೆ;ತೀರ ನಿಮ್ಮದೇ ಎನಿಸುವ ಊರಿಗೆ !

ಫೋಟೋ ಕೃಪೆ, ಅವರ ಮೊಮ್ಮಗ ಬಿಗ್ ಬಾಸ್ Dhanraj Cm ❤

Vasanth Giliyar


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »