TOP STORIES:

ಬಿಲ್ಲವರಲ್ಲಿ ನಡೆಯುತ್ತಿದ್ದ ಕೈ ಪತ್ತವುನಿ ಎನ್ನುವ ಕ್ರಮದ ಮದುವೆ


ಮೂಲ:- ಅಮಣಿ ಅಮ್ಮ ಅಗತ್ತಾಡಿ ದೋಲ ಬಾರಿಕೆ

ಬರಹ:- ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

 

ಮದುವೆ ಎನ್ನುವುದು ಎರಡು ಜೀವಗಳನ್ನು ಬೆಸೆಯುವುದರ ಜೊತೆಗೆ ಸಂತಾನಾಭಿವೃದ್ಧಿಯ ದ್ಯೋತಕವು ಹೌದು. ತುಳುನಾಡಿನ ಪ್ರತಿಯೊಂದು ಜಾತಿಗಳು ಅವರದೇ ಆದ ಕ್ರಮಗಳಲ್ಲಿ ಮದುವೆಗಳನ್ನು ನಡೆಸುತ್ತಿದ್ದರು, ಇನ್ನೊಂದು ಜಾತಿ ಬೇರೆ ಜಾತಿಗಳ ಕ್ರಮಗಳಲ್ಲಿ ಮೂಗು ತೂರಿಸಿದ ಉದಾಹರಣೆಗಳು ಇಲ್ಲ. ಮಾತೃ ಪ್ರಧಾನ ಜಾತಿಗಳಾದ ಬಿಲ್ಲವ, ಬಂಟ, ಕುಲಾಲ, ಗಾಣಿಗ ಮತ್ತು ಮೊಗವೀರ ಜಾತಿಗಳಲ್ಲಿ ಸಾಮಾನ್ಯವಾಗಿ ಕೆಲವೊಂದು ಕ್ರಮಗಳನ್ನು ಹೊರತು ಪಡಿಸಿ ಎಲ್ಲಾ ಕ್ರಮಗಳಲ್ಲಿ ಒಂದು ರೀತಿಯ ಹೋಲಿಕೆ ಇತ್ತು. ಬಿಲ್ಲವರು ತಮ್ಮ ಎಲ್ಲಾ ಕ್ರಮಗಳಲ್ಲಿ ತಮ್ಮದೇ ಆದ ಅಧಿಪತ್ಯವನ್ನು ಹೊಂದಿದ್ದವರು.

ಎಲ್ಲವೂ ಕೂಡ ಈ‌ ಹಿಂದೆ ಹೇಳಿದಂತೆ ಗುರಿಕಾರನ( ಬೋಂಟ್ರ) ಮುಖಾಂತರ ನಡೆಯುತ್ತಿತ್ತು. ನಾನು ಇಲ್ಲಿ ಹೇಳಹೊರಟಿರುವುದು ವಿಧವೆ ಮತ್ತು ಎರಡನೇ ಮದುವೆಯಾಗ ಹೊರಟ ಗಂಡಿನ ಮದುವೆಯ ಬಗ್ಗೆ. ಸಾಮಾನ್ಯವಾಗಿ ಮೊದಲನೇ ಮದುವೆಯಾದರೆ ಕೈಧಾರೆ ಬುಡುದಾರೆಗಳ ಕ್ರಮಗಳು ಮಡಿವಾಳರ ಪೌರೋಹಿತ್ಯದಲ್ಲಿ ಆಗುತ್ತಿದ್ದರೆ, ಈ ಕೈ ಪತ್ತವುನಿ ಕ್ರಮದಲ್ಲಿ ಮದುವೆಯಾಗುವ ಸಮಯದಲ್ಲಿ ಮಡಿವಾಳ ಪೌರೋಹಿತ್ಯ ಇರುವುದಿಲ್ಲ. ಎಲ್ಲವೂ ಕೂಡ ಗುರಿಕಾರನ ಮುಂದಾಳತ್ವದಲ್ಲಿ ಕೆಲವೇ ಸಂಬಂಧಿಕರ ಸಮ್ಮಖದಲ್ಲಿ ನಡೆಯುತ್ತಿತ್ತು. ಹೊರಗಿನವರ ಉಪಸ್ಥಿತಿ ಇಲ್ಲಿ ನಿಶಿಧ್ದವಾಗಿತ್ತು. ಮುಖ್ಯವಾಗಿ ಈ ಮದುವೆ ನಡೆಯುತ್ತಿದ್ದಿದ್ದೇ ಸಂಜೆಯ ಇಳಿ ಹೊತ್ತಿನಲ್ಲಿ ಹೆಣ್ಣಿನ ಮನೆಯಲ್ಲಿ. ಗಂಡಿನ ದಿಬ್ಬಣ ಹೆಣ್ಣಿನ ಮನೆಗೆ ಸೂರ್ಯ ಅಸ್ತಮಿಸುವ ಮುನ್ನ ಬಂದು ಸೇರುತ್ತಿತ್ತು. ಮದುವೆಯ ಹೆಣ್ಣು ಈ ಮೊದಲೇ ವಿಧವೆಯಾಗಿರುವುದರಿಂದ ಆಕೆಗೆ ಬೇರೊಬ್ಬರು ಅಲಂಕಾರ ಮಾಡುವ ಕ್ರಮ ಇರಲಿಲ್ಲ. ಆಕೆಯೆ ಒಂದು ಮರದ ಮಣೆಯಲ್ಲಿ ಕುಳಿತು ತನಗೆ ಬೇಕಾದ ಅಲಂಕಾರಗಳನ್ನು ತಾನೇ ಮಾಡಿಕೊಳ್ಳಬೇಕು ಮತ್ತು ಸೀರೆಯು ಕೂಡ ತಾನೇ ಉಟ್ಟುಕೊಳ್ಳಬೇಕು.

ಅದೇ ರೀತಿ ಕರಿಮಣಿಯನ್ನು ತಾನೇ ಕಟ್ಟಿಕೊಳ್ಳಬೇಕು, ಸಾಮಾನ್ಯವಾದ ಮದುವೆಯಲ್ಲಿ ಆದರೆ ಹೆಣ್ಣಿನ ತಾಯಿ ಅಥವ ಗುರಿಕಾರ್ತಿ ಕಟ್ಟುವ ಕ್ರಮ ಇರುತ್ತದೆ. ಅದೇ ರೀತಿ ಇಲ್ಲಿ ಗಂಡಿನ ಅಲಂಕಾರದಲ್ಲಿ ಮಾತ್ರ ಈ ರೀತಿಯ ಕಟ್ಟುಪಾಡು ಇರಲಿಲ್ಲ ಆತನಿಗೆ ಕಚ್ಚೆ ಹಾಕಲು ಇನ್ನೊಬ್ಬರ ಸಹಾಯ ಪಡೆದುಕೊಳ್ಳಬಹುದಿತ್ತು. ತದನಂತರ ಮದುವೆ ಗಂಡು ಮತ್ತು ಹೆಣ್ಣನ್ನು ಮನೆಯ ಚಾವಡಿಯಲ್ಲಿ ಎದುರು ಬದುರಾಗಿ ನಿಲ್ಲಿಸಿ ಅವರ ಮಧ್ಯದಲ್ಲಿ ಬಿಳಿ‌ ಬಟ್ಟೆಯನ್ನು ಅಡ್ಡವಾಗಿ ಮುಖ ಕಾಣದ ರೀತಿಯಲ್ಲಿ ಹಿಡಿಯುತ್ತಾರೆ, ಅವರ ಮಧ್ಯದಲ್ಲಿ ಗುರಿಕಾರ ನಿಂತು ಹೆಣ್ಣಿನ ಕೈಗೆ ಗಂಡಿನ ಕೈಯನ್ನು ಬಟ್ಟೆಯ ಮೇಲಿಂದ ಹಿಡಿಸುತ್ತಾನೆ. ಕೈಯನ್ನು ಹಿಡಿಸುವಾಗ ಲೆತ್ತ್ ಪನ್ಪುನಿ ಎನ್ನುವ ಕ್ರಮ ಇದೆ. ಅದು ಈ ರೀತಿಯಾಗಿ ಇದೆ. ಜಾತಿ ಸಂಗತೆರೆಡ, ಜಾತಿ ಬುದ್ಯಂತೆರೆಡ ಪೊಣ್ಣನ ಕೈನ್ ಆನನ ಕೈಟ್ ಪತ್ತಾವ ಅಂತ ಮೂರು ಸಲ ಕೂಗಿ ಹೇಳಿ ಕೈ ಹಿಡಿಸುತ್ತಾರೆ.

ಇಲ್ಲಿ ಹೆಣ್ಣಿನ ಕಡೆಯ ಗುರಿಕಾರನ ಮೂಲಕ ಈ ಕ್ರಮಗಳು ನಡೆಯುತ್ತವೆ. ನಂತರ ಗಂಡು ಹೆಣ್ಣನ್ನು ಕೂರಿಸಿ ಸೇಸೆ ಹಾಕುತ್ತಾರೆ. ಆದರೆ ಇಲ್ಲಿ ಬಂದವರೆಲ್ಲ ಮುಯ್ಯಿ ( ಹಣ ನೀಡುವ ಕ್ರಮ) ಮಾಡುವ ಕ್ರಮ ಇರಲಿಲ್ಲ. ಅದು ಮೊದಲನೇ ಮದುವೆಗೆ ಮಾತ್ರ ಸೀಮಿತವಾಗಿತ್ತು. ಇಲ್ಲಿ ಮದುವೆ ಮಾಡಿಸುವ ಮುಖ್ಯವಾದ ಉದ್ದೇಶ ಏನೆಂದರೆ ಹೆಣ್ಣಿಗೊಂದು ರಕ್ಷಣೆ ಇರಲಿ ಎನ್ನುವ ಉದ್ದೇಶ ಮಾತ್ರ ಆಗಿತ್ತು. ಮತ್ತು ಇದು ಅಷ್ಟೊಂದು ಪ್ರಚಾರವನ್ನು ಪಡೆದುಕೊಳ್ಳದೆ ಕೇವಲ ಕೆಲವೇ ಸಂಬಂಧಿಕರ ಉಪಸ್ಥಿತಿಯಲ್ಲಿ ಆಗುವ ಕ್ರಮಗಳಾಗಿದ್ದವು. ಊಟವು ಅಷ್ಟೆ ಕಡ್ಲೆ ಬಲ್ಯಾರಿನ ಸಮಾರಾಧನೆ ಆಗಿತ್ತು. ಯಾವುದೇ ಕಾರಣಕ್ಕೂ ಇದನ್ನು ಹಗಲಿನ ಹೊತ್ತಿನಲ್ಲಿ ನಡೆಸುತ್ತಿರಲಿಲ್ಲ. ಆದರೆ ಅಪರೂಪಕ್ಕೆ ಮತ್ತು ಅನುಕೂಲಕ್ಕಾಗಿ ಕೆಲವೊಂದು ಆಗಿದ್ದ ಉದಾಹರಣೆಯು ಇದಿಯಂತೆ.

ಇಲ್ಲಿ ಈ ಹಿಂದೆ ಹುಡುಗಿಗೆ ಮೊದಲ ಗಂಡನಲ್ಲಿ ಮಕ್ಕಳಿದಲ್ಲಿ ಆ ಮಕ್ಕಳನ್ನು ಎರಡನೇ ಗಂಡನೆ ತನ್ನ ಮನೆಗೆ ಕರೆದುಕೊಂಡು ಹೋಗಿ ಸಾಕುವ ಪರಿಪಾಠವು ಇತ್ತು. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ವಿಧವಾ ವಿವಾಹಕ್ಕೆ ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಇದ್ದಂತಹ ಪ್ರೋತ್ಸಾಹ. ಈಗ ಈ ರೀತಿಯ ಕ್ರಮದ ಅವಶ್ಯಕತೆಯಿಲ್ಲ ಯಾಕೆಂದರೆ ಕ್ರಮಪ್ರಕಾರವಾಗಿ ಎರಡನೇ ಮದುವೆಯು ಕೂಡ ಮೊದಲನೇಯ ಮದುವೆ ರೀತಿಯಲ್ಲೇ ಆಗುತ್ತಿದೆ. ಆದರೆ ಈ ಕೈ ಪತ್ತವುನಿ ಕ್ರಮದ ಮದುವೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆಯನ್ನು ಕಾಯ್ದುಕೊಂಡಿದೆ.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »