TOP STORIES:

FOLLOW US

ಬ್ರಹ್ಮ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ದಿನ ಸೆಪ್ಟೆಂಬರ್21 ಇಂದು


ಮ. ವ.1104 ರ ಕನ್ನಿ 5ನೇ ದಿನ ಬೆಳಗಿನಿಂದಲೇ ಆಕಾಶವು ತೆಳುವಾದ ಮೊಡದಿಂದ ಕೂಡಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ತುಂತುರು ಹನಿಗಳು ಬೀಳಲಾರಂಭಿಸಿದವು. ಗುರುಗಳು ಮಹಾನಿರ್ವಾಣಕ್ಕೆ ಪ್ರಾಪ್ತಿಯಾಗುವುದನ್ನು ಪ್ರಕೃತಿ ಸೂಚಿಸುವಂತೆ ತೋರುತ್ತಿತ್ತು. ಗುರುಗಳು ಪ್ರಸನ್ನರಾಗಿಯೇ ಇದ್ದರು. ಗುರುದೇವರು ಮೊದಲೇ ಸೂಚಿಸಿದ್ದಂತೆ ಆಶ್ರಮದಲ್ಲಿದ್ದ ಎಲ್ಲರಿಗೂ ಊಟವನ್ನು ಬಡಿಸಿದರು. ಪ್ರತಿಯೊಬ್ಬರ ಊಟವೂ ಆಯಿತು. ಕೆಲವು ದಿನಗಳಿಂದ ಹೆಚ್ಚಾಗಿ ಮೌನದಲ್ಲಿದ ಅವರು ಮಧ್ಯಾಹ್ನ ಶಿಷ್ಯರೊಂದಿಗೆ ಸ್ವಲ್ಪ ಮಾತನಾಡಿದರು. 3 ಗಂಟೆಯ ಸಮಯ ಆಗುತ್ತಿದ್ದಂತೆ ಶಿಷ್ಯರೊಂದಿಗೆ ತನಗೆ ಸಂಪೂರ್ಣ ಶಾಂತಿಯ ಅನುಭವ ವಾಗುತ್ತಿದೆ ಎಂದರು. ಅನೇಕ ಶಿಷ್ಯರು ಮಂತ್ರ ಪಠಣ ಮತ್ತು ಪ್ರಾರ್ಥನೆಗಳಲ್ಲಿ ನಿರತರಾಗಿದ್ದರು. 3.15 ಕ್ಕೆ ಗುರುಗಳು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೆ ಬಳಿಯಲಿದ್ದವರ ಸಹಾಯದಿಂದ ಪದ್ಮಾಸನದಲ್ಲಿ ಕುಳಿತರು. ಶಿಷ್ಯರೆಲ್ಲರಿಗೂ ದೈವದಶಕವನ್ನು ಹಾಡಲು ಹೇಳಿದರು ದೈವದಶಕವನ್ನು ಹಾಡುತ್ತಿದ್ದಂತೆಯೇ ಹಾಗೆಯೇ ಧ್ಯಾನಸ್ಥರಾಗಿ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿದರು. ಪದ್ಮಾಸನದಲ್ಲಿ ಧ್ಯಾನಸ್ಥರಾಗಿ ಯೋಗದಲ್ಲಿದ್ದ ಗುರುದೇವರು ಶಾಂತ ಚಿತ್ತದಿಂದ ಮಹಾಸಮಾಧಿಗೆ ಪ್ರಾಪ್ತರಾದರು.

ಮಹಾ ಸಮಾಧಿಯ ಈ ದಿನ ಕೇರಳದಲ್ಲಿ ಸಾರ್ವತ್ರಿಕ ರಜಾದಿನ. ವಿಶ್ವಾದ್ಯಂತ ಇಂದು ಸಾತ್ವಿಕ ಆಹಾರವನ್ನು ಸೇವಿಸಿ ಪೂಜೆ ಪ್ರಾರ್ಥನೆಯ ಮೂಲಕ ಗುರುಸ್ಮರಣೆ ಮಾಡುತ್ತಾರೆ ನಾವೂ ಕೂಡ ಈ ಪುಣ್ಯ ಕಾರ್ಯವನ್ನು ಮಾಡುವ.

ಥಿಯೋಸೊಫಿಕಲ್ ಸೊಸೈಟಿಯ ಎನ್ನಿಬೆಸಂಟ್ ತಮ್ಮ ಅಧಿಕೃತ ವರ್ತಮಾನ ಪತ್ರಿಕೆಯಾದ ಸನಾತನ ಧರ್ಮದಲ್ಲಿ ನಾರಾಯಣ ಗುರುಗಳು ಸಮಾಧಿಯಾದಾಗ ಹೀಗೆ ಬರೆಯುತ್ತಾರೆ. ” ಅವರೊಬ್ಬರು ಪ್ರಕಾಶಮಯ ಪೂರ್ಣ ಸೂರ್ಯನೇ ಆಗಿದ್ದರೆ… ಅವರು ಯೋಗದಲ್ಲಿ ಪತಂಜಲಿ. ಜ್ಞಾನದಲ್ಲಿ ಶಂಕರ, ತ್ಯಾಗದಲ್ಲಿ ಬುದ್ಧ, ಸ್ಥಿರತೆಯಲ್ಲಿ ನಭಿ, ಮಾನವ ಸೇವೆಯಲ್ಲಿ ಜೀಸಸ್,… ಅವರು ದೇವರು. ಮನುಷ್ಯ ರೂಪಧಾರಣೆ ಮಾಡಿದ ಅವತಾರ ಪುರುಷರಾದ ಅವರು ಮಹಿಮಾಯುಕ್ತ ತೇಜಸ್ಸಿನ ತನ್ನ ಜೀವನೊದ್ಧೇಶಗಳನ್ನು ಪೂರೈಸಿ, ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ….ನಿಜವಾಗಿಯೂ ಅವರೊಬ್ಬ ಅವತಾರಿ. ಮನುಷ್ಯರಲ್ಲಿ ದೇವರು. ಭವಿಷತ್ತಿನ ಭಾರತ ಅವರನ್ನು ದೇವರಾಗಿ ಪೂಜಿಸುವುದು.”

(ಆಧಾರ ಶ್ರೀ ನಾರಾಯಣ ಗುರು ವಿಜಯ ದರ್ಶನ: ಬಾಬು ಶಿವಪೂಜಾರಿ)

✍ ರಾಜೇಂದ್ರ ಚಿಲಿಂಬಿ


Share:

More Posts

Category

Send Us A Message

Related Posts

ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ


Share       ಉಡುಪಿ: ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಇನ್ನು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಂಬೈ ಲೋನಾವಾಲದ ಉದ್ಯಮಿ ಲೋಹಿತ್ ಪೂಜಾರಿ ಅವರೊಂದಿಗೆ 


Read More »

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ


Share       ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ ಬಂಟ್ವಾಳ : ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ ನಾಮ


Read More »

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »