TOP STORIES:

ವಿಷ ಕಾರುವವರಿಗೆ “ವಿಷಯ”ಯುಕ್ತ ಕಾರ್ಕೋಟಕ ವಿಷದಿಂದ ಅರ್ಪಣೆ…


ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗು ಇವತ್ತು ನಿನ್ನೆಯದ್ದಲ್ಲ, ಸಮಾರು ವರುಷದಿಂದ ಕೇಳಿ ಬಂದ ಕೂಗು ಇದಾಗಿದೆ.


ಈ ಕೂಗಿಗೆ ನಾನು ಧ್ವನಿಯಾಗಿದ್ದೆ, ಆ ಧ್ವನಿ ಮೆಲ್ಲಗೆ ಗಡಸು ಧ್ವನಿಯಾಗುತ್ತ ಬೆಳೆದಿತ್ತು..!!
ಕರಾವಳಿಗರ ಒಕ್ಕೊರಲ ಅಭಿಪ್ರಾಯಕ್ಕೆ ಒಂದು ರೀತಿಯ ಬಲವು ನಿಧಾನವಾಗಿ ಬಲ ಸೇರುತ್ತಿತ್ತು.!
ಆದರೆ ಅದರ ಬಲವನ್ನು ಕುಗ್ಗಿಸುವ ಸಣ್ಣ ಧ್ವನಿಯು ಕೂಡ ಮೆಲ್ಲಗೆ ಏಳುತ್ತಿದೆ ಎಂಬುದನ್ನು ಹೇಳಲು ಭಯ ಪಡಬೇಕಾಗಿಲ್ಲ.


ಇತ್ತೀಚೆಗೆ ಮಾನ್ಯ ಸ್ವಾಮೀಜಿಗಳಿಂದ ಒಂದು ಹೇಳಿಕೆಯ ಮಾತು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿತ್ತು.! ಕೋಟಿ-ಚೆನ್ನಯರ ಹೆಸರಿಗೆ ಬದಲಾಗಿ ಇನ್ನೊಂದು ಹೆಸರನ್ನು ಸೂಚಿಸಿದ್ದರು.! ಒಂದು ವಿಚಿತ್ರ ಅನಿಸಿದ್ದು ಆ ಹೆಸರಿಗೆ ಖಂಡಿತ ನಮ್ಮ ವಿರೋಧವಿಲ್ಲ, ಆದರೆ ಇಷ್ಟು ದಿನ ಇಲ್ಲದ ಆ ಹೆಸರು ಬಲು ಬೇಗನೆ ಬಂದ ಕಾರಣ ಗೊತ್ತಾಗಬೇಕಿತ್ತು ಅಷ್ಟೇ!! ಶ್ರೀ ಗಳೇ ಕೋಟಿ ಚೆನ್ನಯರು ಹಿಂದುಗಳು ಅಲ್ಲವೇ, ಅಲ್ಲದಿದ್ದರೆ ನೇರವಾಗಿ ಹೇಳಿಬಿಡಿ! ಅಥವಾ ಕೋಟಿ ಚೆನ್ನಯರ ಹೆಸರಿಗೆ ಇರುವ ಬಲದ ಶಕ್ತಿಯನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿದಿರ, ಅಥವಾ ಇನ್ಯಾವುದೇ ಕುತಂತ್ರ ಶಕ್ತಿಗಳ ಒತ್ತಾಸೆಗೆ ಬಲಿಯಾದಿರಿ ಎಂಬುದು ನೀವೇ ಹೇಳಬೇಕಾಗಿದೆ..! ಕೋಟಿ ಚೆನ್ನಯರು ಮಾಡಿದ ಸಾಮಾಜಿಕ ಕಾರ್ಯದ ಬಗ್ಗೆ ಒಮ್ಮೆ ಗಮನ ಹರಿಸಿ ಬನ್ನಿ ಗುರುಗಳೇ..! ಇದನ್ನು ಗೌರವಯುತವಾಗಿಯೇ ಹೇಳುತ್ತಿದ್ದೇನೆ.

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರನ್ನು ಇಡಬಾರದೆಂದು ಹೇಳುವವರಲ್ಲಿ ಒಂದು ಸಣ್ಣ ಮನವಿ, ನೀವು ನೇರವಾಗಿ ಹೇಳಿಬಿಡಿ ಬೆಂಬಲವಿಲ್ಲ ಎಂದು, ಅದರ ಜೊತೆಗೆ ಕಾರಣವನ್ನು ತಿಳಿಸಿಬಿಡಿ ಅಷ್ಟೇ.

ಕೋಟಿ-ಚೆನ್ನಯರ ಹೆಸರನ್ನು ವಿರೋಧಿಸುವ ಅಥವಾ ಅವಮಾನಿಸುವ ವ್ಯಕ್ತಿಗಳು ಯಾರೇ ಇರಲಿ, ಯಾವುದೇ ಸಂಘಟನೆಯಿರಲಿ ಅಥವಾ ರಾಜಕೀಯ ಪಕ್ಷವೇ ಇರಲಿ ಅದು ನಿಮ್ಮ ಸಮಾಧಿಗೆ ನೀವೇ ತೋಡಿದ ಹೊಂಡದಂತೆ!

ರಾಜಕೀಯ ಪಕ್ಷಗಳ ಸ್ಥಿರತೆ ಅಸ್ಥಿರತೆಯ ಕಡೆಗೆ ಸಾಗುತ್ತದೆ ಅದು ಮಾತ್ರ ಸಣ್ಣಗೆ ನೆನಪಿರಲಿ.
ಮತ್ತೊಂದು ಬೇಸರದ ವಿಷಯವೆಂದರೆ ಯಾವುದೇ ಹಿಂದು ಸಂಘಟನೆಗಳು ಇದರ ಪರವಾದ ಮಾತುಗಳನ್ನೇ ಆಡಿಲ್ಲ, ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗಿಗೆ ಬಲವಾದ ಧ್ವನಿ ಆಗಲೇ ಇಲ್ಲ ಎಂಬುದು ನನ್ನಂತಹ ನೂರಾರು ಹಿಂದು ಕಾರ್ಯಕರ್ತರ ಮನದಾಳದ ಪ್ರಶ್ನೆಯಾಗಿಯೇ ಉಳಿದಿದೆ. ಹಿಂದು ಸಂಸ್ಕೃತಿಗೆ ಬೆಂಬಲವಾಗಿ ನಿಲ್ಲುವ ಬಾ.ಜ.ಪ ದಿಂದಲೂ ಇದಕ್ಕೆ ಸೂಕ್ತವಾದ ಬೆಂಬಲವೂ ಕೂಡ ವ್ಯಕ್ತವಾಗಿಲ್ಲ ಇದು ಕೂಡ ನನ್ನಂತಹ ಕಾರ್ಯಕರ್ತರಿಗೆ ಮೂಡಿದ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಮಿಥುನ್ ರೈ ಯವರು ಕೆಲ ದಿನಗಳ ಹಿಂದೆ ನಡೆಸಿದ ಪರ ಹೋರಾಟದ ದಾರಿ ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂತದ್ದೇ, ಆದರೆ ಇದು ರಾಜಕೀಯದ ಆಸೆಗಾಗಿ ಸಾಗಬಾರದಷ್ಟೇ..!

ಎಲ್ಲಾ ಗ್ರಾಮಗಳಲ್ಲೂ ಬಲಿಷ್ಟವಾಗಿರುವ ನಮ್ಮ ಬಿಲ್ಲವ ಸಂಘಟನೆಯ ಮುಖಂಡರೆಲ್ಲೀ..??
ಕಳೆದ ಎರಡು ಮೂರು ವಾರಗಳಿಂದ ಕಾರ್ಯ ಚಟುವಟಿಕೆಗಳು ಮಾತ್ರ ಕಣ್ಣಿಗೆ ಗೋಚರಿಸುತ್ತಿದೆ, ಅದಕ್ಕಿಂತ ಮೊದಲಿನ ಪರ ಕಾರ್ಯಗಳೇ ಇಲ್ಲಾ..!
ಕರಾವಳಿಯ ಎಂ.ಪಿ ಮತ್ತು ಎಂ.ಎಲ್.ಎಗಳು ಇದರ ಪರವಾದ ಒಂದು ಮಾತನ್ನು ಆಡುತ್ತಿಲ್ಲ..!? ಕಾರಣ ಏನೆಂದು ತಿಳಿಸುವಿರಾ..!?

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಮರು ನಾಮಕರಣ ಆಗಬೇಕೆಂಬ ಕೂಗು ಜಾತಿ, ಪಕ್ಷ ಮತ್ತು ಧರ್ಮಕ್ಕಿಂತ ಮೀರಿದ ಕೂಗು..! ನೆನಪಿರಲಿ ಇದು ಈಡೇರದಿದ್ದರೆ ಕರಾವಳಿಯ ರಾಜಕೀಯ ಚಿತ್ರಣವೇ ಬದಲಾದೀತು ಜೋಕೆ..!!

– ವಿಜೇತ್ ಪೂಜಾರಿ ಶಿಬಾಜೆ.


Related Posts

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »