TOP STORIES:

ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ.! ಈ ಕುರಿತು ವೈದ್ಯರಿಂದ ಮಹತ್ವದ ಮಾಹಿತಿ


ಬಹಳ ದಿನಗಳಿಂದ ಇದ್ದ ಭಯವೊಂದು ನಿಧಾನವಾಗಿ ವಾಸ್ತವದ ರೂಪ ತಾಳುತ್ತಿದ್ದು, 40 ವರ್ಷ ವಯಸ್ಸಿನ ಒಳಗಿನ ಮಂದಿಯಲ್ಲೂ ಹೃದಯಾಘಾತವಾಗುವ ಸಾಧ್ಯತೆಗಳು ದಿನೇ ದಿನೇ ಹೆಚ್ಚುತ್ತಲೇ ಇದೆ.

ಪುರುಷರಲ್ಲಿ ಸಾಮಾನ್ಯವಾಗಿ 50ರ ಹರೆಯದಲ್ಲಿ ಹಾಗೂ ಮಹಿಳೆಯರಲ್ಲಿ 60ರ ಹರೆಯದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಆಧುನಿಕ ವೈದ್ಯಕೀಯ ಲೋಕ ಲೆಕ್ಕಾಚಾರ ಮಾಡುತ್ತಿದ್ದ ನಡುವೆಯೇ ಈ ರೀತಿಯ ಹೊಸದೊಂದು ಆತಂಕ ಬೇರು ಬಿಡುತ್ತಿದೆ.

“40ಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗುವುದನ್ನು ನೋಡುವುದು ಬಹಳ ಅಪರೂಪವಾಗಿತ್ತು. ಈಗ ಆಗುತ್ತಿರುವುದನ್ನು ನೋಡಿದರೆ ನಾವೆಲ್ಲೊ ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನಿಸುತ್ತಿದೆ,” ಎಂದು ಬೋಸ್ಟನ್‌ನಲ್ಲಿರುವ ಹಾರ್ವಡ್‌ ವೈದ್ಯಕೀಯ ಶಾಲೆಯ ಪ್ರೊಫೆಸರ್‌ ರಾನ್ ಬ್ಲಾಂಕ್‌ಸ್ಟೀನ್ ತಿಳಿಸಿದ್ದಾರೆ.

ಈ ಸಮಸ್ಯೆ ಕೇವಲ ಪಾಶ್ಚಾತ್ಯ ಜಗತ್ತಿಗೆ ಮಾತ್ರವೇ ಸೀಮಿತವಾಗಿಲ್ಲ. ಭಾರತದಲ್ಲೂ ಸಹ ಈ ರೀತಿ ದಿಢೀರ್‌ ಹೃದಯಾಘಾತಗಳಿಂದ ಸಾವು ಸಂಭವಿಸುವುದು ಬಲು ಸಾಮಾನ್ಯವಾಗುತ್ತಿದೆ. ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್‌ ಶುಕ್ಲಾ ಈ ಪಟ್ಟಿಗೆ ಸೇರಿದ ಹೊಸ ಹೆಸರಾಗಿದೆ ಅಷ್ಟೇ.

ಈ ಬಗ್ಗೆ ವಿವರಣೆ ಕೊಡುವ ಮುಂಬೈ ಗ್ಲೋಬಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಚರಣ್ ಲಂಜೇವಾರ್‌, “ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಲು ಹಲವಾರು ಕಾರಣಗಳಿವೆ. ನಿಷ್ಕ್ರಿಯ ಜೀವನಶೈಲಿ, ದೈಹಿಕ ವ್ಯಾಯಾಮದ ಕೊರತೆಗಳು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಲು ಮುಖ್ಯ ಕಾರಣಗಳಾಗುತ್ತವೆ” ಎಂದಿದ್ದಾರೆ.

“ತಮ್ಮ 20ರ ವಯೋಮಾನದಲ್ಲೇ ಹೃದಯಾಘಾತಕ್ಕೆ ತುತ್ತಾಗುವ ಮಂದಿ, ಮಹಿಳೆಯರನ್ನೂ ಒಳಗೊಂಡು, ಹೆಚ್ಚಾಗುತ್ತಿದ್ದಾರೆ. ದಶಕದ ಹಿಂದೆ ಹೀಗೆಲ್ಲಾ ಆಗುತ್ತಿರಲಿಲ್ಲ. ಜೊತೆಗೆ ಈ ಕೋವಿಡ್ ಸಾಂಕ್ರಮಿಕದ ಕಾಲಘಟ್ಟದಲ್ಲಿ ಹೃದಯಾಘಾತಗಳ ಕೇಸ್‌ಗಳು ಇನ್ನಷ್ಟು ಹೆಚ್ಚಾಗಿರುವುದನ್ನು ಕಂಡಿದ್ದೇವೆ,” ಎನ್ನುತ್ತಾರೆ ಚರಣ್.

“ಶಿಸ್ತಿನ ಪಥ್ಯ, ವಾಸ್ತವಿಕ ಹಾಗೂ ಸುದೀರ್ಘವಾಧಿಗೆ ಮಾಡಬಹುದಾದ ವ್ಯಾಯಾಮದ ಅಭ್ಯಾಸ, ಒತ್ತಡ ರಹಿತ ಜೀವನಗಳು ಕಡಿಮೆ ವಯಸ್ಸಿನಲ್ಲಿ ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡುವ ಉತ್ತಮ ಕ್ರಮಗಳು. ಪ್ರತಿಯೊಬ್ಬ ವಯಸ್ಕನೂ ಸಹ ದೈಹಿಕ ತಜ್ಞರ ಬಳಿ ತಪಾಸಣೆಗೆ ಒಳಪಟ್ಟು, 30ರ ವಯಸ್ಸಿಗೆ ಕಾಲಿಡುವ ಮುನ್ನವೇ ನಿರ್ದಿಷ್ಟ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ರಕ್ತ ಪರೀಕ್ಷೆಯಲ್ಲಿ ಲಿಪಿಡ್ ಹಾಗೂ ಸಕ್ಕರೆ ಅಂಶವನ್ನು ಪರಿಶೀಲನೆ ಮಾಡಬೇಕು,” ಎಂದು ವಿವರಿಸಿದ್ದಾರೆ ಚರಣ್.

ನಡಿಗೆ ಹಾಗೂ ಸೈಕ್ಲಿಂಗ್‌ಗಳಿಂದಾಗಿ ಹೃದಯಾಘಾತದ ಸಾಧ್ಯತೆಯು ಬ್ರಿಟನ್‌ನ 4.3 ಕೋಟಿ ಮಂದಿಯಲ್ಲಿ ಕಡಿಮೆಯಾಗಿದೆ ಎಂದು ಬ್ರಿಟನ್‌ನ ಲೀಡ್ಸ್‌ ವಿವಿಯ ಅಧ್ಯಯನವೊಂದು ತಿಳಿಸಿದೆ.

“ನಿಮ್ಮ ಕೆಲಸದ ಸ್ಥಳಕ್ಕೆ ತಲುಪಬೇಕಾದಲ್ಲಿ ನಡಿಗೆ ಹಾಗೂ ಸೈಕ್ಲಿಂಗ್ ಮಾಡಬೇಕಾದ ಅಗತ್ಯ ಹೆಚ್ಚಾದಲ್ಲಿ ಖುಷಿ ಪಡಿ. ನಮ್ಮ ಬ್ಯುಸಿ ಜೀವನದಲ್ಲಿ ವ್ಯಾಯಾಮ ಮಾಡಲು ಸಮಯ ಸಿಗದೇ ಇರಬಹುದು. ಆದರೆ ವ್ಯಾಯಾಮ ಮಾಡಲು ನೀವು ಜಿಮ್‌ಗೆ ಹೋಗಿ ಗಂಟೆಗಟ್ಟಲೇ ಟ್ರೆಡ್‌ಮಿಲ್ ಮೇಲೆ ಕಳೆಯಬೇಕೆಂದೇನಿಲ್ಲ,” ಎನ್ನುವ ಬ್ರಿಟಿಷ್ ಹಾರ್ಟ್ ಫೌಂಡೇಶನ್‌ನ ನಿರ್ದೇಶಕ ಮೆಟಿನ್ ಅವ್ಕಿರನ್, “ನಿಮ್ಮ ಸಂಚಾರಕ್ಕೆ ಬೈಸಿಕಲ್ ಅವಲಂಬಿಸಿದಲ್ಲಿ, ನಿಮ್ಮ ಹೃದಯ ಬಡಿತಕ್ಕೆ ಉತ್ತಮ. ಇದು ಆಯ್ಕೆಯಲ್ಲ, ಕೆಲ ಬೀದಿಗಳ ಹಿಂದೆಯೇ ನಿಮ್ಮ ವಾಹನ ಪಾರ್ಕ್ ಮಾಡುವುದು ಅಥವಾ ಕೆಲ ಸ್ಟಾಪ್‌ಗಳ ಹಿಂದೆಯೇ ಬಸ್‌ನಿಂದ ಇಳಿಯುವುದು ಇನ್ನಷ್ಟು ಆರೋಗ್ಯಕರ ಜೀವನಕ್ಕೆ ನೆರವಾಗಬಲ್ಲವು,” ಎಂದಿದ್ದಾರೆ.


Related Posts

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »