TOP STORIES:

ಹೀಗೆ ಮಾಡಿ, ಒಂದು ತಿಂಗಳು ಬರುವ ಗ್ಯಾಸ್ ಎರಡು ತಿಂಗಳು ಬರುತ್ತೆ!


ಅಡುಗೆ ಅನಿಲದ ಬೆಲೆಯು ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಇದು ಜನಸಾಮಾನ್ಯರ ಮೇಲೆ ತೀವ್ರ ಹೊಡೆತ ಹಾಕಿದೆ. ಹೀಗಾಗಿ ಅಡುಗೆ ಗ್ಯಾಸ್ ಬಳಕೆ ಮಾಡುವ ಜನರು ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭ ಆದಷ್ಟು ಗ್ಯಾಸ್ ಉಳಿತಾಯ ಮಾಡಲು ಪ್ರಯತ್ನಿಸಬೇಕು.

ಗ್ಯಾಸ್ ನ್ನು ಉಳಿತಾಯ ಮಾಡಿದರೆ ಅದರಿಂದ ಹಣದ ಉಳಿತಾಯವು ಆಗುವುದು. ಹಾಗಾದರೆ ಗ್ಯಾಸ್ ಉಳಿಸುವುದು ಅಷ್ಟು ಸುಲಭವೇ ಎನ್ನುವ ಪ್ರಶ್ನೆಯು ಬರಬಹುದು. ಗ್ಯಾಸ್ ಉಳಿಸಲು ಏನು ಮಾಡಬೇಕು ಎಂದು ನೀವು ತಿಳಿಯಿರಿ.

​ಬರ್ನರ್ ಶುಚಿಯಾಗಿರಬೇಕು

ಗ್ಯಾಸ್ ನ್ನು ಉಳಿತಾಯ ಮಾಡಲು ನಿಯಮಿತವಾಗಿ ಬರ್ನರ್ ನ್ನು ಶುಚಿ ಮಾಡುತ್ತಲಿರಬೇಕು. ಬೆಂಕಿಯ ಬಣ್ಣವನ್ನು ಗಮನಿಸಿ ಮತ್ತು ಅದು ನೀಲಿ ಇದ್ದರೆ ಆಗ ಸರಿಯಾಗಿದೆ ಎಂದು ಹೇಳಬಹುದು.
ಆದರೆ ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ದರೆ, ಆಗ ಅದು ಸರಿಯಾಗಿ ಉರಿಯುತ್ತಿಲ್ಲ ಎಂದರ್ಥ.ಬರ್ನರ್ ನ್ನು ನಿಯಮಿತವಾಗಿ ಶುಚಿ ಮಾಡುತ್ತಲಿದ್ದರೆ, ಅದರಿಂದ ಬೆಂಕಿಯ ಬಣ್ಣವು ನೀಲಿ ಆಗಿರುವುದು. ಇದರಿಂದ ಗ್ಯಾಸ್ ನಷ್ಟವಾಗುವುದು ತಪ್ಪುವುದು.

​ಪಾತ್ರೆಗಳನ್ನು ಒರೆಸಿ

ಕೆಲವರು ಕುಕ್ಕರ್, ಪಾತ್ರೆ ಇತ್ಯಾದಿಗಳನ್ನು ತೊಳೆದು ನೇರವಾಗಿ ಗ್ಯಾಸ್ ಮೇಲೆ ಇಟ್ಟುಬಿಡುವರು. ಆಧರೆ ಇದರಿಂದ ಗ್ಯಾಸ್ ವೆಚ್ಚವಾಗುವುದು.
ಇದಕ್ಕಾಗಿ ಪಾತ್ರೆಯನ್ನು ತೊಳೆದ ಬಳಿಕ ಸ್ವಲ್ಪ ಒರೆಸಿಕೊಳ್ಳಿ. ಇದರಿಂದ ಪಾತ್ರೆ ಬೇಗ ಬಿಸಿ ಆಗುವುದು ಹಾಗೂ ಗ್ಯಾಸ್ ವೆಚ್ಚವಾಗುವುದು ತಪ್ಪುವುದು.
ಮೊದಲೇ ತಯಾರಿಸಿಡಿ

ಅಡುಗೆ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳನ್ನು ನೀವು ಮೊದಲೇ ತಯಾರು ಮಾಡಿಟ್ಟುಕೊಂಡು ಇದರ ಬಳಿಕ ಗ್ಯಾಸ್ ಉರಿಸಿ. ಗ್ಯಾಸ್ ಉರಿಸಿದ ಬಳಿಕ ತರಕಾರಿ ಕತ್ತರಿಸುವುದು ಸರಿಯಲ್ಲ. ಬೇಕಾಗುವಂತಹ ಸಾಮಗ್ರಿಗಳನ್ನು ಪಕ್ಕದಲ್ಲೇ ಇಟ್ಟುಕೊಂಡು ಅಡುಗೆ ಮಾಡಿ.

​ಪಾತ್ರೆಯ ಮುಚ್ಚಳ ಹಾಕಿಡಿ

ನೀವು ಯಾವುದೇ ಆಡುಗೆ ಮಾಡುತ್ತಲಿದ್ದರೂ ಆಗ ಪಾತ್ರೆಯ ಮುಚ್ಚಳ ಹಾಕಿಟ್ಟರೆ ಅದರಿಂದ ಬೇಗ ಬೇಯುವುದು ಹಾಗೂ ಅದರಿಂದ ಗ್ಯಾಸ್ ಕೂಡ ಉಳಿತಾಯ ಆಗುವುದು. ಪಾತ್ರೆಯ ಮುಚ್ಚಳವನ್ನು ಮುಚ್ಚಿಟ್ಟರೆ ಅದರಿಂದ ಹಬೆಯು ನಿರ್ಮಾಣವಾಗಿ ಆಹಾರ ಬೇಗ ಬೇಯುವುದು.

ಧಾನ್ಯ ಮತ್ತು ಅಕ್ಕಿ ನೆನೆಸಿಡಿ

ಕೆಲವೊಂದು ಧಾನ್ಯಗಳು ಬೇಯಲು ತುಂಬಾ ಸಮಯ ಬೇಕಾಗುವುದು. ಹೀಗಾಗಿ ಧಾನ್ಯಗಳು ಮತ್ತು ಅಕ್ಕಿಯನ್ನು ಕೆಲವು ಗಂಟೆಗಳ ಕಾಲ ನೆನೆಯಲು ಹಾಕಿ. ಇದರಿಂದ ಬೇಗನೆ ಬೇಯಲು ನೆರವಾಗುವುದು ಹಾಗೂ ಗ್ಯಾಸ್ ಉಳಿತಾಯವಾಗುವುದು.

​ಕೆಲವು ನಿಮಿಷ ಬಳಿಕ ಗ್ಯಾಸ್ ಕಡಿಮೆ ಮಾಡಿ

ಒಮ್ಮೆ ಪಾತ್ರೆಯು ಬಿಸಿಯಾದ ಬಳಿಕ ಗ್ಯಾಸ್ ಬೆಂಕಿ ಕಡಿಮೆ ಮಾಡಿ. ಆಹಾರ ಕುದಿಯಲು ಆರಂಭಿಸಿದ ವೇಳೆ ತುಂಬಾ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ತರಕಾರಿಗಳಲ್ಲಿ ಪೋಷಕಾಂಶಗಳು ಹಾಗೆ ಉಳಿಯುವುದು ಹಾಗೂ ಗ್ಯಾಸ್ ಬಳಕೆ ಕಡಿಮೆ ಆಗುವುದು.

​ಕುಕ್ಕರ್ ಬಳಸಿ

ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಬೇಗ ಆಗುವುದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಗ್ಯಾಸ್ ಖರ್ಚು ಕಡಿಮೆ ಮಾಡಲು ಕುಕ್ಕರ್ ನ್ನು ಬಳಸಿ. ಇದು ಸಮಯ ಹಾಗೂ ಗ್ಯಾಸ್ ಎರಡನ್ನು ಉಳಿತಾಯ ಮಾಡುವುದು.

ಅಗಲವಾದ ಪಾತ್ರೆ ಬಳಸಿ

ಕೆಲವರು ತುಂಬಾ ಸಣ್ಣ ಪಾತ್ರೆಗಳನ್ನು ಗ್ಯಾಸ್ ನಲ್ಲಿ ಇಡುವರು. ಇದರಿಂದ ಗ್ಯಾಸ್ ಹೊರಭಾಗಕ್ಕೆ ಬರುವುದು. ಗ್ಯಾಸ್ ನಲ್ಲಿ ಅಗಲವಾದ ಪಾತ್ರೆಗಳನ್ನು ಇಡಬೇಕು. ಇದರಿಂದ ಗ್ಯಾಸ್ ಹೊರಗೆ ಬರುವುದು ತಪ್ಪುವುದು ಹಾಗೂ ಗ್ಯಾಸ್ ನ ಉಳಿತಾಯ ಕೂಡ ಆಗುವುದು.

​ಲೀಕ್ ಇದೆಯಾ ಎಂದು ನೋಡಿ

ಬರ್ನರ್, ಪೈಪ್ ಮತ್ತು ರೆಗ್ಯೂಲೇಟರ್ ನಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎಂದು ನೋಡಿ. ಮೂಗಿನ ಮೂಲಕ ಸೋರಿಕೆ ಪತ್ತೆ ಮಾಡಬಹುದು. ಯಾವುದೇ ಲೀಕ್ ಇದ್ದರೆ ಆಗ ನೀವು ಬೇಗನೆ ಇದನ್ನು ಪತ್ತೆ ಮಾಡಿ.
ಗ್ಯಾಸ್ ನ ವಾಸನೆ ಬರುತ್ತಲಿದ್ದರೆ, ಆಗ ಲೀಕ್ ಇದೆ ಎಂದು ಅರ್ಥ ಮಾಡಿಕೊಳ್ಳಿ. ಕೆಲವೊಂದು ಸಲ ಇದು ಅಪಾಯಕಾರಿ ಕೂಡ ಆಗಬಹುದು. ಹೀಗಾಗಿ ಪದೇ ಪದೇ ಇದನ್ನು ಗಮನಿಸುತ್ತಿರಬೇಕು.
ಸೂಕ್ತ ಸರಬರಾಜುದಾರರಿಂದ ಪಡೆಯಿರಿ: ನೀವು ಸೂಕ್ತ ಸರಬರಾಜುದಾರರಿಂದ ಗ್ಯಾಸ್ ಖರೀದಿ ಮಾಡಿ. ಅನಧಿಕೃತ ಗ್ಯಾಸ್ ಬಳಕೆ ಮಾಡಬೇಡಿ. ಇದರ ತೂಕವನ್ನು ಸರಿಯಾಗಿ ಗಮನಿಸಿ ಪಡೆಯಿರಿ.

​ಕೊನೆ ಮಾತು

ನಿಮಗೆ ಈಗ ಗ್ಯಾಸ್ ಉಳಿತಾಯದ ಬಗ್ಗೆ ತಿಳಿದಿದೆ. ಇನ್ನು ನೀವು ಇದನ್ನು ಪಾಲಿಸಿಕೊಂಡು ಹೋಗಿ ನಿಮಗಾಗಿ ಹಾಗೂ ಕುಟುಂಬಕ್ಕಾಗಿ ಗ್ಯಾಸ್ ಉಳಿತಾಯ ಮಾಡಿ.
ಗ್ಯಾಸ್ ಉಳಿತಾಯವು ಪ್ರತಿನಿತ್ಯವೂ ಏನೂ ಬದಲಾವಣೆ ಉಂಟು ಮಾಡದು, ಆದರೆ ಇದು ತಿಂಗಳಲ್ಲಿ ಹಣ ಉಳಿತಾಯ ಮಾಡುವುದು. ಸಣ್ಣ ಸಣ್ಣ ಪ್ರಮಾಣದಲ್ಲಿನ ಉಳಿತಾಯವು ದೊಡ್ಡದಾಗುವುದು.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »