TOP STORIES:

FOLLOW US

ತುಳು ಸತ್ಯ ಅನಾವರಣದ ಮಹಾಶಕ್ತಿ ಡಾ. ವೆಂಕಟರಾಜ ಪುಣಿಂಚಿತ್ತಾಯ!


ತುಳುವರಿಗೆ ಕುವೆಂಪು, ದ. ರಾ. ಬೇಂದ್ರೆ, ಮಾಸ್ತಿ ಇಂತಹ ಕನ್ನಡ ಕವಿಗಳ ಹೆಸರು ಚಿರಪರಿಚಿತ. ಆಗಾಗ ಅವರ ಕವಿತೆಗಳನ್ನು, ಸಾಹಿತ್ಯಗಳನ್ನು ಓದಿ ಖುಷಿ ಪಡುತ್ತೇವೆ. ಅದರೆ ತುಳು ಕವಿಗಳ ಬಗ್ಗೆ ಕೇಳಿದರೆ ಮಾತ್ರ ಯಾಕೋ ಮುಖ ಮುಖ ನೋಡುತ್ತೇವೆ.

ಯಾರೊಬ್ಬರ ಪರಿಚಯವೂ ನಮಗಿಲ್ಲ. ಅವರ ಬರಹಗಳು ಕವಿತೆಗಳನ್ನಂತೂ ನೋಡಿಯೇ ಇರಲಿಕ್ಕಿಲ್ಲ. ಅನೇಕ ಕವಿಗಳು ಅಥವಾ ಸಾಹಿತಿಗಳು ತುಳು ಭಾಷೆಯಲ್ಲಿ ತುಳು ಭಾಷೆಗಾಗಿ ಅನರ್ಘ್ಯ ಸೇವೆ ಸಲ್ಲಿಸಿದ್ದಾರೆ. ಅಂಥವರಲ್ಲೇ ಒಬ್ಬರು ಡಾ. ವೆಂಕಟರಾಜ ಪುಣಿಚಿತ್ತಾಯ!

ಪುಣಿಚಿತ್ತಾಯರು ಸಾಹಿತಿ ಮಾತ್ರವಲ್ಲ ಸಂಶೋಧಕರು. ತುಳು ಸಾಹಿತ್ಯ ಸಂಶೋಧನೆಯಲ್ಲಿ ಅಗಾಧ ಸಾಧನೆ ಮಾಡಿರುವ ಪುಣಿಂಚಿತ್ತಾಯರು ತುಳುವಿನಲ್ಲಿ ಶಿಷ್ಟ ಸಾಹಿತ್ಯ ಪರಂಪರೆಯೇ ಇರಲಿಲ್ಲ ಎಂಬ ವಾದವನ್ನು ಅಲ್ಲಗಳೆದು 4 ಅತಿ ಪ್ರಾಚೀನ ತಾಡವಾಲೆ ಗ್ರಂಥಗಳನ್ನು ಪತ್ತೆಹಚ್ಚಿ ಅವುಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿ ವಿಸ್ತಾರವಾದ ಪೀಠಿಕೆ, ಅಡಿಟಿಪ್ಪಣಿ, ಅರ್ಥ ಕೋಶಗಳೊಂದಿಗೆ ಸಂಪಾದಿಸುವ ಮೂಲಕ ತುಳು ಭಾಷೆಗೆ ಭಾರತದ ಇತರ 20 ಭಾಷೆಗಳ ಸಾಲಿನಲ್ಲಿ ಸಮಾನ ಸ್ಥಾನವನ್ನು ದೊರಕಿಸಿಕೊಟ್ಟ ಶ್ರೇಯಸ್ಸು ಹೊಂದಿದ್ದಾರೆ. ಶ್ರೀ ಭಾಗವತೊ, ಕಾವೇರಿ, ದೇವಿ ಮಹಾತ್ಮೆ, ತುಳು ಮಹಾಭಾರತೋ ಈ ಪ್ರಾಚೀನ ತುಳು ಗ್ರಂಥಗಳಾಗಿವೆ. ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳ ಬೆನ್ನು ಹತ್ತಿ ಹೋಗಿ ತುಳುವಿಗೂ ಲಿಪಿ ಇದೆ ಎಂದು ತೋರಿಸಿದ ಡಾ. ವೆಂಕಟರಾಜ ಪುಣಿಂಚಿತ್ತಾಯರ ಸಾಧನೆ ತುಳುನಾಡು ಯಾವತ್ತೂ ಮರೆಯಲಾಗದ್ದು.

ಎಲ್ಲ ದ್ರಾವಿಡ ಭಾಷೆಗಳಂತೆ ಸಂಶೋಧನೆಯ ಶಾಸ್ತ್ರೀಯ ಚೌಕಟ್ಟಿನಲ್ಲಿ ತುಳುವಿನ ಬಗ್ಗೆ ಮೊದಲು ಆಸಕ್ತಿ ತೋರಿಸಿದ್ದು ಇಂಗ್ಲಿಷರು. ಆದರೆ, ತುಳುವಿನ ಮೂಲದ ಜಾಡು ಹುಡುಕಿ ಹೊರಟವರು ಪುಣಿಂಚಿತ್ತಾಯರು.

ಅವರನ್ನು ಸಂಶೋಧಕರನ್ನಾಗಿಸಿದ್ದು ಹೊರಗಿನದ್ದಲ್ಲ, ಒಳಗಿನ ಒತ್ತಡ. ಗದ್ದೆಯಲ್ಲಿ ಕಾಯಕ ನಡೆಸುತ್ತಿದ್ದ ಹತ್ತಾರು ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳು ಅವರಲ್ಲಿ ಮೂಡಿಸಿದ ಆಸಕ್ತಿ ‘ಶ್ರೀ ಭಾಗವತೋ’ದಂಥ ಪ್ರಾಚೀನ ತುಳು ಕಾವ್ಯದ ಹುಡುಕಾಟ ಸತತ ಸಂಶೋಧನ ಕಾಯಕದ ವರೆಗೆ ತಂದು ನಿಲ್ಲಿಸಿತು.

ಸಂಶೋಧನೆ ಸ್ವಭಾವವನ್ನು ಮೂಲಭೂತವಾಗಿಯೇ ಹೊಂದಿದ್ದ ಪುಣಿಂಚಿತ್ತಾಯರನ್ನು ಪಂಚ ದ್ರಾವಿಡ ಭಾಷೆಗಳ ಪೆಕಿ ತುಳುವನ್ನು ಉಳಿದು ಮಿಕ್ಕ 4ಕ್ಕೂ ಲಿಪಿಯಿದೆ. ಹಾಗಿದ್ದರೆ ತುಳುವಿಗೂ ಲಿಪಿ ಇದ್ದಿರಲೇಬೇಕು ಎಂಬ ಜಿಜ್ಞಾಸೆ ಕಾಡುತ್ತಲೇ ಇತ್ತು. ಪುಣಿಂಚಿತ್ತಾಯರು ಒಮ್ಮೆ ಮಧೂರಿನ ಶಿವನಾರಾಯಣ ಸರಳಾಯ ಅವರ ನಿವಾಸಕ್ಕೆ ತೆರಳಿದ್ದ ವೇಳೆ ಮಾತಿನ ನಡುವೆ ಸರಳಾಯರು ತಂದು ತೋರಿದ ತಾಡವಾಲೆ ಗ್ರಂಥವೇ ಹೊಸ ಅಧ್ಯಾಯ ಬರೆಯಿತು. ಆ ಕೃತಿ ತುಳು ಮಹಾಕಾವ್ಯ ‘ಶ್ರೀಭಾಗವತೋ’.

16ನೇ ಶತಮಾನದ ಅಂದಾಜಿನಲ್ಲಿ ಕವಿ ವಿಷ್ಣುತುಂಗ ಈ ಕತಿ ರಚಿಸಿದ್ದರು. ಇದರ ಜಾಡು ಹಿಡಿದು ಹೋದ ವರು ಕೋಯಿಕೋಡ್ ವಿವಿ ಸಂಸ್ಕೃತ ಗ್ರಂಥಾಲಯದಲ್ಲಿ ಅನಾಥವಾಗಿದ್ದ ತುಳು ಕಾವ್ಯ ‘ಕಾವೇರಿ’ಯನ್ನು ಪತ್ತೆ ಹಚ್ಚಿದರು. ನಂತರ ದೇವಿ ಮಹಾತ್ಮೆ, ನಾಟಿ ವೆದ್ಯ ಪದ್ಧತಿಯ ಚರ್ಚೆಗಳಿರುವ ಗ್ರಂಥವೊಂದನ್ನೂ ಹುಡುಕಿದರು.

ತುಳು ಪಾಡ್ದನಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದು ತುಳು ಜಾನಪದ ಲೋಕದಲ್ಲಿ ಅಜರಾಮರರನ್ನಾಗಿಸಿದೆ.

Inputs: Beauty of Tulunadu


Share:

More Posts

Category

Send Us A Message

Related Posts

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »