TOP STORIES:

FOLLOW US

ತುಳು ಸತ್ಯ ಅನಾವರಣದ ಮಹಾಶಕ್ತಿ ಡಾ. ವೆಂಕಟರಾಜ ಪುಣಿಂಚಿತ್ತಾಯ!


ತುಳುವರಿಗೆ ಕುವೆಂಪು, ದ. ರಾ. ಬೇಂದ್ರೆ, ಮಾಸ್ತಿ ಇಂತಹ ಕನ್ನಡ ಕವಿಗಳ ಹೆಸರು ಚಿರಪರಿಚಿತ. ಆಗಾಗ ಅವರ ಕವಿತೆಗಳನ್ನು, ಸಾಹಿತ್ಯಗಳನ್ನು ಓದಿ ಖುಷಿ ಪಡುತ್ತೇವೆ. ಅದರೆ ತುಳು ಕವಿಗಳ ಬಗ್ಗೆ ಕೇಳಿದರೆ ಮಾತ್ರ ಯಾಕೋ ಮುಖ ಮುಖ ನೋಡುತ್ತೇವೆ.

ಯಾರೊಬ್ಬರ ಪರಿಚಯವೂ ನಮಗಿಲ್ಲ. ಅವರ ಬರಹಗಳು ಕವಿತೆಗಳನ್ನಂತೂ ನೋಡಿಯೇ ಇರಲಿಕ್ಕಿಲ್ಲ. ಅನೇಕ ಕವಿಗಳು ಅಥವಾ ಸಾಹಿತಿಗಳು ತುಳು ಭಾಷೆಯಲ್ಲಿ ತುಳು ಭಾಷೆಗಾಗಿ ಅನರ್ಘ್ಯ ಸೇವೆ ಸಲ್ಲಿಸಿದ್ದಾರೆ. ಅಂಥವರಲ್ಲೇ ಒಬ್ಬರು ಡಾ. ವೆಂಕಟರಾಜ ಪುಣಿಚಿತ್ತಾಯ!

ಪುಣಿಚಿತ್ತಾಯರು ಸಾಹಿತಿ ಮಾತ್ರವಲ್ಲ ಸಂಶೋಧಕರು. ತುಳು ಸಾಹಿತ್ಯ ಸಂಶೋಧನೆಯಲ್ಲಿ ಅಗಾಧ ಸಾಧನೆ ಮಾಡಿರುವ ಪುಣಿಂಚಿತ್ತಾಯರು ತುಳುವಿನಲ್ಲಿ ಶಿಷ್ಟ ಸಾಹಿತ್ಯ ಪರಂಪರೆಯೇ ಇರಲಿಲ್ಲ ಎಂಬ ವಾದವನ್ನು ಅಲ್ಲಗಳೆದು 4 ಅತಿ ಪ್ರಾಚೀನ ತಾಡವಾಲೆ ಗ್ರಂಥಗಳನ್ನು ಪತ್ತೆಹಚ್ಚಿ ಅವುಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿ ವಿಸ್ತಾರವಾದ ಪೀಠಿಕೆ, ಅಡಿಟಿಪ್ಪಣಿ, ಅರ್ಥ ಕೋಶಗಳೊಂದಿಗೆ ಸಂಪಾದಿಸುವ ಮೂಲಕ ತುಳು ಭಾಷೆಗೆ ಭಾರತದ ಇತರ 20 ಭಾಷೆಗಳ ಸಾಲಿನಲ್ಲಿ ಸಮಾನ ಸ್ಥಾನವನ್ನು ದೊರಕಿಸಿಕೊಟ್ಟ ಶ್ರೇಯಸ್ಸು ಹೊಂದಿದ್ದಾರೆ. ಶ್ರೀ ಭಾಗವತೊ, ಕಾವೇರಿ, ದೇವಿ ಮಹಾತ್ಮೆ, ತುಳು ಮಹಾಭಾರತೋ ಈ ಪ್ರಾಚೀನ ತುಳು ಗ್ರಂಥಗಳಾಗಿವೆ. ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳ ಬೆನ್ನು ಹತ್ತಿ ಹೋಗಿ ತುಳುವಿಗೂ ಲಿಪಿ ಇದೆ ಎಂದು ತೋರಿಸಿದ ಡಾ. ವೆಂಕಟರಾಜ ಪುಣಿಂಚಿತ್ತಾಯರ ಸಾಧನೆ ತುಳುನಾಡು ಯಾವತ್ತೂ ಮರೆಯಲಾಗದ್ದು.

ಎಲ್ಲ ದ್ರಾವಿಡ ಭಾಷೆಗಳಂತೆ ಸಂಶೋಧನೆಯ ಶಾಸ್ತ್ರೀಯ ಚೌಕಟ್ಟಿನಲ್ಲಿ ತುಳುವಿನ ಬಗ್ಗೆ ಮೊದಲು ಆಸಕ್ತಿ ತೋರಿಸಿದ್ದು ಇಂಗ್ಲಿಷರು. ಆದರೆ, ತುಳುವಿನ ಮೂಲದ ಜಾಡು ಹುಡುಕಿ ಹೊರಟವರು ಪುಣಿಂಚಿತ್ತಾಯರು.

ಅವರನ್ನು ಸಂಶೋಧಕರನ್ನಾಗಿಸಿದ್ದು ಹೊರಗಿನದ್ದಲ್ಲ, ಒಳಗಿನ ಒತ್ತಡ. ಗದ್ದೆಯಲ್ಲಿ ಕಾಯಕ ನಡೆಸುತ್ತಿದ್ದ ಹತ್ತಾರು ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳು ಅವರಲ್ಲಿ ಮೂಡಿಸಿದ ಆಸಕ್ತಿ ‘ಶ್ರೀ ಭಾಗವತೋ’ದಂಥ ಪ್ರಾಚೀನ ತುಳು ಕಾವ್ಯದ ಹುಡುಕಾಟ ಸತತ ಸಂಶೋಧನ ಕಾಯಕದ ವರೆಗೆ ತಂದು ನಿಲ್ಲಿಸಿತು.

ಸಂಶೋಧನೆ ಸ್ವಭಾವವನ್ನು ಮೂಲಭೂತವಾಗಿಯೇ ಹೊಂದಿದ್ದ ಪುಣಿಂಚಿತ್ತಾಯರನ್ನು ಪಂಚ ದ್ರಾವಿಡ ಭಾಷೆಗಳ ಪೆಕಿ ತುಳುವನ್ನು ಉಳಿದು ಮಿಕ್ಕ 4ಕ್ಕೂ ಲಿಪಿಯಿದೆ. ಹಾಗಿದ್ದರೆ ತುಳುವಿಗೂ ಲಿಪಿ ಇದ್ದಿರಲೇಬೇಕು ಎಂಬ ಜಿಜ್ಞಾಸೆ ಕಾಡುತ್ತಲೇ ಇತ್ತು. ಪುಣಿಂಚಿತ್ತಾಯರು ಒಮ್ಮೆ ಮಧೂರಿನ ಶಿವನಾರಾಯಣ ಸರಳಾಯ ಅವರ ನಿವಾಸಕ್ಕೆ ತೆರಳಿದ್ದ ವೇಳೆ ಮಾತಿನ ನಡುವೆ ಸರಳಾಯರು ತಂದು ತೋರಿದ ತಾಡವಾಲೆ ಗ್ರಂಥವೇ ಹೊಸ ಅಧ್ಯಾಯ ಬರೆಯಿತು. ಆ ಕೃತಿ ತುಳು ಮಹಾಕಾವ್ಯ ‘ಶ್ರೀಭಾಗವತೋ’.

16ನೇ ಶತಮಾನದ ಅಂದಾಜಿನಲ್ಲಿ ಕವಿ ವಿಷ್ಣುತುಂಗ ಈ ಕತಿ ರಚಿಸಿದ್ದರು. ಇದರ ಜಾಡು ಹಿಡಿದು ಹೋದ ವರು ಕೋಯಿಕೋಡ್ ವಿವಿ ಸಂಸ್ಕೃತ ಗ್ರಂಥಾಲಯದಲ್ಲಿ ಅನಾಥವಾಗಿದ್ದ ತುಳು ಕಾವ್ಯ ‘ಕಾವೇರಿ’ಯನ್ನು ಪತ್ತೆ ಹಚ್ಚಿದರು. ನಂತರ ದೇವಿ ಮಹಾತ್ಮೆ, ನಾಟಿ ವೆದ್ಯ ಪದ್ಧತಿಯ ಚರ್ಚೆಗಳಿರುವ ಗ್ರಂಥವೊಂದನ್ನೂ ಹುಡುಕಿದರು.

ತುಳು ಪಾಡ್ದನಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದು ತುಳು ಜಾನಪದ ಲೋಕದಲ್ಲಿ ಅಜರಾಮರರನ್ನಾಗಿಸಿದೆ.

Inputs: Beauty of Tulunadu


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »