TOP STORIES:

ಪುತ್ತೂರು: ಕೋಟಿ ಚೆನ್ನಯರ ಹುಟ್ಟೂರ ಗೆಜ್ಜೆಗಿರಿ ಮೂಲಸ್ಥಾನದ ಈ ಗ್ರಾಮದ ಶಾಲೆಯಲ್ಲಿ ಅಷ್ಟ ಅವಳಿ ಮಕ್ಕಳು


ಪುತ್ತೂರು: ಈ ಶಾಲಾ ವಠಾರದಲ್ಲಿ ಓಡಾಡಿದರೆ ತತ್‌ಕ್ಷಣ

ನಿಮ್ಮ ಕಣ್ಣಿಗೆ ಆಗಾಗ ಒಬ್ಬರಂತೆಯೇ ಇರುವ ಇನ್ನೊಬ್ಬ ಮಕ್ಕಳು ಕಂಡರೆ ಅಚ್ಚರಿಪಡಬೇಡಿ. ಯಾಕೆಂದರೆ, ಈ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಎಂಟು ಅವಳಿಗಳು ಇದ್ದಾರೆ!

ಕೆಲವು ದಿನಗಳ ಹಿಂದೆ ಎಣ್ಣೂರಿನ ಶಾಲೆಯಲ್ಲಿ ಪಂಚ ಅವಳಿಗಳಿರುವ ಸುದ್ದಿ ಸದ್ದು ಮಾಡಿತ್ತು. ಈಗ ಈಶ್ವರಮಂಗಲದ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಅವಳಿಗಳ ಕಥೆ. ವಿಶೇಷವೆಂದರೆ ಎಣ್ಣೂರು ಮತ್ತು ಈ ಶಾಲೆ ಇರುವ ಊರು ಎರಡಕ್ಕೂ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯ್ಯರ ನಂಟಿದೆ!

ಅವಳಿ ವೀರರ ಗ್ರಾಮ..!

ಕೋಟಿ-ಚೆನ್ನೆಯ ಅವರ ಹುಟ್ಟೂರಿನ ನೆಲೆಗಳು, ಅವರು ಇರುವಿಕೆಯ ಕುರುಹು ಗಳು ಹರಡಿಕೊಂಡಿರುವ ಪಡವನ್ನೂರು – ಬಡಗನ್ನೂರು ಗ್ರಾಮಗಳಲ್ಲಿ ಒಂದಾಗಿ ರುವ ಪಡವನ್ನೂರು ಗ್ರಾಮದಲ್ಲಿ ಈ ಶಾಲೆ ಇದೆ. ಪಡವನ್ನೂರು, ಬಡಗನ್ನೂರು ಕೋಟಿ ಚೆನ್ನಯರ ಹುಟ್ಟೂರು. ಇವರ ಜನ್ಮದಾತೆ ದೇಯಿ ಬೈದೇತಿಯ ಸಮಾಧಿ ಇರುವ ಪುಣ್ಯ ಭೂಮಿ. ಈ ಕಾರಣಿಕ ಶಕ್ತಿಗಳು ನಡೆದಾಡಿದ ಹಲವು ಐತಿಹ್ಯಗಳು ಇಲ್ಲಿ ಈಗಲೂ ಇವೆ. ಕೋಟಿ ಚೆನ್ನಯ ಜನ್ಮಸ್ಥಳ, ಗೆಜ್ಜೆಗಿರಿ ಮೂಲಸ್ಥಾನಗಳು ಈ ಗ್ರಾಮದಲ್ಲಿ ಇವೆ.

ಹೇಗಿದ್ದಾರೆ ಇಲ್ಲಿನ ಅವಳಿಗಳು?

ಈಶ್ವರ ಮಂಗಲ ಶಾಲೆಯಲ್ಲಿರುವ ಎಂಟು ಅವಳಿ ಗಳಲ್ಲಿ 3 ಜೋಡಿಗಳು ಹುಡುಗರಾಗಿದ್ದರೆ, ಇನ್ನು 3 ಅವಳಿ ಹುಡುಗಿಯರು. ಎರಡು ಜೋಡಿಗಳು ಹುಡುಗ ಮತ್ತು ಹುಡುಗಿ. ಹೀಗೆ 3 ವಿಭಾಗದಲ್ಲಿಯು ಇರುವ ಈ ಪುಟಾಣಿಗಳ ಪೈಕಿ 2 ಜೋಡಿಗಳು ಒಂದೇ ತರಗತಿಯ ಸಹಪಾಠಿಗಳು. ಉಳಿದವರು ಬೇರೆ ತರಗತಿಯವರು.

ಇವರೇ ನೋಡಿ ಅವಳಿಗಳು! ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆ ಈಶ್ವರಮಂಗಲ:

ಚರಿತ್ ರೈ ಮತ್ತು ಚಾರ್ವಿಕ್ ರೈ- ಪ್ರಿಕೆಜಿ (ಹೆತ್ತವರು: ಸನತ್ ಕುಮಾರ್ ರೈ ಎಂ. ಹಾಗೂ ಹರ್ಷಿತಾ )

ಚತುಷ್ಕ.ಎಂ.ಕೆ ಮತ್ತು ಚರಿಷ್ಮ ಎಂ. ಕೆ.-ಎಲ್‌ಕೆಜಿ (ಮನೋಜ್ ಕುಮಾರ್ ಕೆ. ಮತ್ತು ಪೂಜಿತ ಎಂ.ವಿ)

ಯಶಸ್ ಡಿ.ಆರ್. ಹಾಗೂ ಶ್ರೇಯಸ್ ಡಿ.ಆರ್.- 1ನೇ ತರಗತಿ (ರಾಜೇಶ್ ಡಿ.ಬಿ ಮತ್ತು ಸುಹಾಸಿನಿ ಎನ್)

ವಂಶಿಕ ಎ. ಮತ್ತು ವಿಶ್ಚಿಕ – 2ನೇ ತರಗತಿ (ಆನಂದ ನಾಯ್ಕ ಎ. ಮತ್ತು ಪ್ರಮೀಳಾ ಕೆ ಆರ್)

ಆಸಿಯತ್ ಶಫಾನ ಮತ್ತು ಮರಿಯಂ ಶಿಫಾನ – 3ನೇ ತರಗತಿ (ಕೆ.ವಿ. ಹೈದರಾಲಿ ಮತ್ತು ಆಯುಷತ್‌ ಸುಮಿಯ)

ಅನ್ವಿತ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ- 5ನೇ ತರಗತಿ (ಉದಯ ಶೆಟ್ಟಿ ಮತ್ತು ರೂಪ)

ನವ್ಯ ಬಿ. ಮತ್ತು ನಿತಿನ್ ಬಿ.- 5ನೇ ತರಗತಿ (ಸುದೇಶ ಮತ್ತು ಪ್ರಫುಲ್ಲ)

ಸಾನ್ವಿ ಎಂ.ಪಿ. ಮತ್ತು ಶ್ರಾವ್ಯ ಎಂ.ಪಿ -8 ತರಗತಿ (ಮನಮೋಹನ ಎಂ. ಮತ್ತು ಪುಷ್ಪಾವತಿ ಟಿ


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »