TOP STORIES:

ಪುತ್ತೂರು: ಕೋಟಿ ಚೆನ್ನಯರ ಹುಟ್ಟೂರ ಗೆಜ್ಜೆಗಿರಿ ಮೂಲಸ್ಥಾನದ ಈ ಗ್ರಾಮದ ಶಾಲೆಯಲ್ಲಿ ಅಷ್ಟ ಅವಳಿ ಮಕ್ಕಳು


ಪುತ್ತೂರು: ಈ ಶಾಲಾ ವಠಾರದಲ್ಲಿ ಓಡಾಡಿದರೆ ತತ್‌ಕ್ಷಣ

ನಿಮ್ಮ ಕಣ್ಣಿಗೆ ಆಗಾಗ ಒಬ್ಬರಂತೆಯೇ ಇರುವ ಇನ್ನೊಬ್ಬ ಮಕ್ಕಳು ಕಂಡರೆ ಅಚ್ಚರಿಪಡಬೇಡಿ. ಯಾಕೆಂದರೆ, ಈ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಎಂಟು ಅವಳಿಗಳು ಇದ್ದಾರೆ!

ಕೆಲವು ದಿನಗಳ ಹಿಂದೆ ಎಣ್ಣೂರಿನ ಶಾಲೆಯಲ್ಲಿ ಪಂಚ ಅವಳಿಗಳಿರುವ ಸುದ್ದಿ ಸದ್ದು ಮಾಡಿತ್ತು. ಈಗ ಈಶ್ವರಮಂಗಲದ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಅವಳಿಗಳ ಕಥೆ. ವಿಶೇಷವೆಂದರೆ ಎಣ್ಣೂರು ಮತ್ತು ಈ ಶಾಲೆ ಇರುವ ಊರು ಎರಡಕ್ಕೂ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯ್ಯರ ನಂಟಿದೆ!

ಅವಳಿ ವೀರರ ಗ್ರಾಮ..!

ಕೋಟಿ-ಚೆನ್ನೆಯ ಅವರ ಹುಟ್ಟೂರಿನ ನೆಲೆಗಳು, ಅವರು ಇರುವಿಕೆಯ ಕುರುಹು ಗಳು ಹರಡಿಕೊಂಡಿರುವ ಪಡವನ್ನೂರು – ಬಡಗನ್ನೂರು ಗ್ರಾಮಗಳಲ್ಲಿ ಒಂದಾಗಿ ರುವ ಪಡವನ್ನೂರು ಗ್ರಾಮದಲ್ಲಿ ಈ ಶಾಲೆ ಇದೆ. ಪಡವನ್ನೂರು, ಬಡಗನ್ನೂರು ಕೋಟಿ ಚೆನ್ನಯರ ಹುಟ್ಟೂರು. ಇವರ ಜನ್ಮದಾತೆ ದೇಯಿ ಬೈದೇತಿಯ ಸಮಾಧಿ ಇರುವ ಪುಣ್ಯ ಭೂಮಿ. ಈ ಕಾರಣಿಕ ಶಕ್ತಿಗಳು ನಡೆದಾಡಿದ ಹಲವು ಐತಿಹ್ಯಗಳು ಇಲ್ಲಿ ಈಗಲೂ ಇವೆ. ಕೋಟಿ ಚೆನ್ನಯ ಜನ್ಮಸ್ಥಳ, ಗೆಜ್ಜೆಗಿರಿ ಮೂಲಸ್ಥಾನಗಳು ಈ ಗ್ರಾಮದಲ್ಲಿ ಇವೆ.

ಹೇಗಿದ್ದಾರೆ ಇಲ್ಲಿನ ಅವಳಿಗಳು?

ಈಶ್ವರ ಮಂಗಲ ಶಾಲೆಯಲ್ಲಿರುವ ಎಂಟು ಅವಳಿ ಗಳಲ್ಲಿ 3 ಜೋಡಿಗಳು ಹುಡುಗರಾಗಿದ್ದರೆ, ಇನ್ನು 3 ಅವಳಿ ಹುಡುಗಿಯರು. ಎರಡು ಜೋಡಿಗಳು ಹುಡುಗ ಮತ್ತು ಹುಡುಗಿ. ಹೀಗೆ 3 ವಿಭಾಗದಲ್ಲಿಯು ಇರುವ ಈ ಪುಟಾಣಿಗಳ ಪೈಕಿ 2 ಜೋಡಿಗಳು ಒಂದೇ ತರಗತಿಯ ಸಹಪಾಠಿಗಳು. ಉಳಿದವರು ಬೇರೆ ತರಗತಿಯವರು.

ಇವರೇ ನೋಡಿ ಅವಳಿಗಳು! ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆ ಈಶ್ವರಮಂಗಲ:

ಚರಿತ್ ರೈ ಮತ್ತು ಚಾರ್ವಿಕ್ ರೈ- ಪ್ರಿಕೆಜಿ (ಹೆತ್ತವರು: ಸನತ್ ಕುಮಾರ್ ರೈ ಎಂ. ಹಾಗೂ ಹರ್ಷಿತಾ )

ಚತುಷ್ಕ.ಎಂ.ಕೆ ಮತ್ತು ಚರಿಷ್ಮ ಎಂ. ಕೆ.-ಎಲ್‌ಕೆಜಿ (ಮನೋಜ್ ಕುಮಾರ್ ಕೆ. ಮತ್ತು ಪೂಜಿತ ಎಂ.ವಿ)

ಯಶಸ್ ಡಿ.ಆರ್. ಹಾಗೂ ಶ್ರೇಯಸ್ ಡಿ.ಆರ್.- 1ನೇ ತರಗತಿ (ರಾಜೇಶ್ ಡಿ.ಬಿ ಮತ್ತು ಸುಹಾಸಿನಿ ಎನ್)

ವಂಶಿಕ ಎ. ಮತ್ತು ವಿಶ್ಚಿಕ – 2ನೇ ತರಗತಿ (ಆನಂದ ನಾಯ್ಕ ಎ. ಮತ್ತು ಪ್ರಮೀಳಾ ಕೆ ಆರ್)

ಆಸಿಯತ್ ಶಫಾನ ಮತ್ತು ಮರಿಯಂ ಶಿಫಾನ – 3ನೇ ತರಗತಿ (ಕೆ.ವಿ. ಹೈದರಾಲಿ ಮತ್ತು ಆಯುಷತ್‌ ಸುಮಿಯ)

ಅನ್ವಿತ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ- 5ನೇ ತರಗತಿ (ಉದಯ ಶೆಟ್ಟಿ ಮತ್ತು ರೂಪ)

ನವ್ಯ ಬಿ. ಮತ್ತು ನಿತಿನ್ ಬಿ.- 5ನೇ ತರಗತಿ (ಸುದೇಶ ಮತ್ತು ಪ್ರಫುಲ್ಲ)

ಸಾನ್ವಿ ಎಂ.ಪಿ. ಮತ್ತು ಶ್ರಾವ್ಯ ಎಂ.ಪಿ -8 ತರಗತಿ (ಮನಮೋಹನ ಎಂ. ಮತ್ತು ಪುಷ್ಪಾವತಿ ಟಿ


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »