TOP STORIES:

ಹಾಸ್ಯ ಎಂದರೆ ಬೋಳಾರ್ – ಬೋಳಾರ್ ಎಂದರೆ ಹಾಸ್ಯ, ಅರವಿಂದ್ ಬೋಳಾರ್ ಅವರನ್ನು ಮೀರಿಸುವ ನಟರು ಸದ್ಯಕ್ಕೆ ಯಾರೂ ಇಲ್ಲ


ಅಭಿಪ್ರಾಯ ಸಂಗ್ರಹ

ದೈಜಿವರ್ಲ್ಡ್ ಟಿವಿಯ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮ ಟಿವಿ ಮುಖ್ಯಸ್ಥ, ಜನಪ್ರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ಹಾಗೂ ತುಳುನಾಡ ತಲೈವ ಅರವಿಂದ್ ಬೋಳಾರ್ ನಡೆಸಿಕೊಡುವ ಕಾರ್ಯಕ್ರಮ. ನಟನೆಯ ಬಗ್ಗೆ ಮಾತನಾಡುವುದಾರೆ ತುಳುನಾಡಿನಲ್ಲಿ ಅರವಿಂದ್ ಬೋಳಾರ್ ಅವರನ್ನು ಮೀರಿಸುವ ನಟರು ಸದ್ಯಕ್ಕೆ ಯಾರೂ ಇಲ್ಲ. ತುಳುನಾಡಿನಲ್ಲಿ ಇದೀಗ ಹಾಸ್ಯ ಎಂದರೆ ಬೋಳಾರ್ ಹಾಗೂ ಬೋಳಾರ್ ಎಂದರೆ ಹಾಸ್ಯ ಎಂಬ ಸ್ಥಿತಿಯುಂಟಾಗಿದೆ.

ಅರವಿಂದ್ ಬೋಳಾರ್ ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಕಾರಣ ಅವರ ಪ್ರತಿಭೆ ಹಾಗೂ ಲಕ್ಷಾಂತರ ಅಭಿಮಾನಿಗಳ ಆಶೀರ್ವಾದ. ಇದೀಗ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಬರೋಣ. ಕಾರ್ಯಕ್ರಮದ ಹದಿನಾಲ್ಕು ಸಂಚಿಕೆಗಳು ಈಗಾಗಲೇ ಮುಗಿದಿವೆ. ಈ ಸರಣಿಯಲ್ಲಿ ಇನ್ನು ಎಷ್ಟು ಸಂಚಿಕೆಗಳು ಬಾಕಿ ಇವೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಹದಿನಾಲ್ಕು ಸಂಚಿಕೆಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಬೋಳಾರರು ತನ್ನನ್ನು ಯಾಕೆ ತುಳುನಾಡ ಮಾಣಿಕ್ಯ ಅಥವಾ ತುಳುನಾಡ ತಲೈವ ಎಂಬ ಎಂದು ವೀಕ್ಷಕರು ಕರೆಯುತ್ತಾರೆ ಎಂದು ಸಾಬೀತುಪಡಿಸಿದ್ದಾರೆ. ಫಿಲೋಸಫಿ ಹಾಗೂ ಉತ್ತಮ ಸಂದೇಶಗಳೊಂದಿಗಿನ ಸ್ಕ್ರಿಪ್ಟ್ ಹೊಂದಿದ ಈ ಕಾರ್ಯಕ್ರಮದಲ್ಲಿ ಬೋಳಾರರು ನೂರಕ್ಕೆ ನೂರು ಶತಮಾನ ಹೊಸತನವನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಕಳೆದ ವಾರ ಅವರು ಮಾಡಿದ Double Act ಅಂತೂ ಸ್ಥಳೀಯ ವಾಹಿನಿಗಳ ಇತಿಹಾಸದಲ್ಲಿ ಹೊಸ ಧಾಕಲೆಯನ್ನೇ ರಚಿಸಿದೆ. ಆಷ್ಟೊಂದು Perfection ಅದರಲ್ಲಿ ಇತ್ತು.

ಹಳೆ ಮಧ್ಯವನ್ನು ಹೊಸ ಬಾಟ್ಲಿಯಲ್ಲಿ ತುಂಬಿಸಿಕೊಟ್ಟಂತೆ ಪದೇ ಪದೇ ಹಳೆಯ ಹಾಸ್ಯ ಸಂಭಾಷಣೆ, ಕಲಾವಿದರ ಪೋಷಕರ ಹೆಸರು ಉಲ್ಲೇಖಿಸಿ “ ನಿನ್ನ ಅಮ್ಮೆ..ಎನ್ನ ಅಮ್ಮೆ” ಎಂದು ಅವರ ತೇಜೋವಧೆ ಮಾಡಿ, ಅಶ್ಲೀಲ ಮಾತುಗಳೊಂದಿಗೆ, ಸ್ಕ್ರಿಪ್ಟಿ ಬಗ್ಗೆ ಏನೆಂದು ಗೊತ್ತಿರದ, ಇನ್ನೂ Update ಆಗದ ಕೆಲವರು ಮಾಡುವ ಹಾಸ್ಯ ಕಾರ್ಯಕ್ರಮಗಳು ಜನರಿಂದ ತಿರಸ್ಕಾರಗೊಳ್ಳಲು ಆರಂಭವಾಗಿವೆ. ಕೆಲ ಕಾರ್ಯಕ್ರಮಗಳಿಗೆ ವೀಕ್ಷಕರಿಂದ ದೊರಕುವ ನೀರಸ ಪ್ರತಿಕ್ರಿಯೆಯೇ ಇದನ್ನು ತೋರಿಸುತ್ತದೆ. ಆದರೆ ಬೋಳಾರ್ ಕಾರ್ಯಕ್ರಮಗಳು ಮಾತ್ರ ವೀಕ್ಷಕರನ್ನು ಹಿಡಿದು ನಿಲ್ಲಿಸುವಲ್ಲಿ ಸಫಲವಾಗುತ್ತಿವೆ. ಕಾರಣ ಬೋಳಾರರು ಹೊಸತನವನ್ನು ನೀಡುತ್ತಿದಾರೆ. ಅವರ ಹಾಸ್ಯಗಳಲ್ಲಿ ಪ್ರಸ್ತುತ ವಿದ್ಯಾಮಾನಗಳ ಆಗುಹೋಗುಗಳು ನೇರವಾಗಿ ಪ್ರತಿಫಲಿಸುತ್ತಿವೆ.

ಉತ್ತಮ ಸ್ಕ್ರಿಪ್ಟ್ ಹಾಗೂ ತಾಂತ್ರಿಕ ವರ್ಗವನ್ನು ಅವರು ಬಳಸುತ್ತಿದ್ದಾರೆ. ಫತಿಫಲವೆಂಬಂತೆ ದಿನೇ ದಿನೇ ವೀಕ್ಷಕರನ್ನು ಮನಬಿಚ್ಚಿ ನಗಿಸುವ ಜೊತೆಗೆ , ಸಮಾಜಿಕವಾಗಿ ಚಿಂತಿಸಲೂ ಅವರು ಪ್ರೇರೇಪಿಸುತ್ತಾರೆ. ಸಮಾಜದಲ್ಲಿ ಓರ್ವ ಜವಬ್ದಾರಿಯುತ ಕಲಾವಿದನಾಗಿ ಬೋಳಾರ್ ಮಿಂಚಲು ಇದು ಕಾರಣವಾಗಿರಬಹುದು. ಚಿಂತನೆಯೊಂದಿಗೆ ನಮ್ಮನ್ನು ನಗಿಸುವ ಬೋಳಾರ್ ಅವರಿಗೆ ಧನ್ಯವಾದಗಳು.

ತುಳುನಾಡಿನ Updated ಕಲಾಭಿಮಾನಿಗಳ ಪರವಾಗಿ,


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »