TOP STORIES:

FOLLOW US

ಹಾಸ್ಯ ಎಂದರೆ ಬೋಳಾರ್ – ಬೋಳಾರ್ ಎಂದರೆ ಹಾಸ್ಯ, ಅರವಿಂದ್ ಬೋಳಾರ್ ಅವರನ್ನು ಮೀರಿಸುವ ನಟರು ಸದ್ಯಕ್ಕೆ ಯಾರೂ ಇಲ್ಲ


ಅಭಿಪ್ರಾಯ ಸಂಗ್ರಹ

ದೈಜಿವರ್ಲ್ಡ್ ಟಿವಿಯ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮ ಟಿವಿ ಮುಖ್ಯಸ್ಥ, ಜನಪ್ರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ಹಾಗೂ ತುಳುನಾಡ ತಲೈವ ಅರವಿಂದ್ ಬೋಳಾರ್ ನಡೆಸಿಕೊಡುವ ಕಾರ್ಯಕ್ರಮ. ನಟನೆಯ ಬಗ್ಗೆ ಮಾತನಾಡುವುದಾರೆ ತುಳುನಾಡಿನಲ್ಲಿ ಅರವಿಂದ್ ಬೋಳಾರ್ ಅವರನ್ನು ಮೀರಿಸುವ ನಟರು ಸದ್ಯಕ್ಕೆ ಯಾರೂ ಇಲ್ಲ. ತುಳುನಾಡಿನಲ್ಲಿ ಇದೀಗ ಹಾಸ್ಯ ಎಂದರೆ ಬೋಳಾರ್ ಹಾಗೂ ಬೋಳಾರ್ ಎಂದರೆ ಹಾಸ್ಯ ಎಂಬ ಸ್ಥಿತಿಯುಂಟಾಗಿದೆ.

ಅರವಿಂದ್ ಬೋಳಾರ್ ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಕಾರಣ ಅವರ ಪ್ರತಿಭೆ ಹಾಗೂ ಲಕ್ಷಾಂತರ ಅಭಿಮಾನಿಗಳ ಆಶೀರ್ವಾದ. ಇದೀಗ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಬರೋಣ. ಕಾರ್ಯಕ್ರಮದ ಹದಿನಾಲ್ಕು ಸಂಚಿಕೆಗಳು ಈಗಾಗಲೇ ಮುಗಿದಿವೆ. ಈ ಸರಣಿಯಲ್ಲಿ ಇನ್ನು ಎಷ್ಟು ಸಂಚಿಕೆಗಳು ಬಾಕಿ ಇವೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಹದಿನಾಲ್ಕು ಸಂಚಿಕೆಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಬೋಳಾರರು ತನ್ನನ್ನು ಯಾಕೆ ತುಳುನಾಡ ಮಾಣಿಕ್ಯ ಅಥವಾ ತುಳುನಾಡ ತಲೈವ ಎಂಬ ಎಂದು ವೀಕ್ಷಕರು ಕರೆಯುತ್ತಾರೆ ಎಂದು ಸಾಬೀತುಪಡಿಸಿದ್ದಾರೆ. ಫಿಲೋಸಫಿ ಹಾಗೂ ಉತ್ತಮ ಸಂದೇಶಗಳೊಂದಿಗಿನ ಸ್ಕ್ರಿಪ್ಟ್ ಹೊಂದಿದ ಈ ಕಾರ್ಯಕ್ರಮದಲ್ಲಿ ಬೋಳಾರರು ನೂರಕ್ಕೆ ನೂರು ಶತಮಾನ ಹೊಸತನವನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಕಳೆದ ವಾರ ಅವರು ಮಾಡಿದ Double Act ಅಂತೂ ಸ್ಥಳೀಯ ವಾಹಿನಿಗಳ ಇತಿಹಾಸದಲ್ಲಿ ಹೊಸ ಧಾಕಲೆಯನ್ನೇ ರಚಿಸಿದೆ. ಆಷ್ಟೊಂದು Perfection ಅದರಲ್ಲಿ ಇತ್ತು.

ಹಳೆ ಮಧ್ಯವನ್ನು ಹೊಸ ಬಾಟ್ಲಿಯಲ್ಲಿ ತುಂಬಿಸಿಕೊಟ್ಟಂತೆ ಪದೇ ಪದೇ ಹಳೆಯ ಹಾಸ್ಯ ಸಂಭಾಷಣೆ, ಕಲಾವಿದರ ಪೋಷಕರ ಹೆಸರು ಉಲ್ಲೇಖಿಸಿ “ ನಿನ್ನ ಅಮ್ಮೆ..ಎನ್ನ ಅಮ್ಮೆ” ಎಂದು ಅವರ ತೇಜೋವಧೆ ಮಾಡಿ, ಅಶ್ಲೀಲ ಮಾತುಗಳೊಂದಿಗೆ, ಸ್ಕ್ರಿಪ್ಟಿ ಬಗ್ಗೆ ಏನೆಂದು ಗೊತ್ತಿರದ, ಇನ್ನೂ Update ಆಗದ ಕೆಲವರು ಮಾಡುವ ಹಾಸ್ಯ ಕಾರ್ಯಕ್ರಮಗಳು ಜನರಿಂದ ತಿರಸ್ಕಾರಗೊಳ್ಳಲು ಆರಂಭವಾಗಿವೆ. ಕೆಲ ಕಾರ್ಯಕ್ರಮಗಳಿಗೆ ವೀಕ್ಷಕರಿಂದ ದೊರಕುವ ನೀರಸ ಪ್ರತಿಕ್ರಿಯೆಯೇ ಇದನ್ನು ತೋರಿಸುತ್ತದೆ. ಆದರೆ ಬೋಳಾರ್ ಕಾರ್ಯಕ್ರಮಗಳು ಮಾತ್ರ ವೀಕ್ಷಕರನ್ನು ಹಿಡಿದು ನಿಲ್ಲಿಸುವಲ್ಲಿ ಸಫಲವಾಗುತ್ತಿವೆ. ಕಾರಣ ಬೋಳಾರರು ಹೊಸತನವನ್ನು ನೀಡುತ್ತಿದಾರೆ. ಅವರ ಹಾಸ್ಯಗಳಲ್ಲಿ ಪ್ರಸ್ತುತ ವಿದ್ಯಾಮಾನಗಳ ಆಗುಹೋಗುಗಳು ನೇರವಾಗಿ ಪ್ರತಿಫಲಿಸುತ್ತಿವೆ.

ಉತ್ತಮ ಸ್ಕ್ರಿಪ್ಟ್ ಹಾಗೂ ತಾಂತ್ರಿಕ ವರ್ಗವನ್ನು ಅವರು ಬಳಸುತ್ತಿದ್ದಾರೆ. ಫತಿಫಲವೆಂಬಂತೆ ದಿನೇ ದಿನೇ ವೀಕ್ಷಕರನ್ನು ಮನಬಿಚ್ಚಿ ನಗಿಸುವ ಜೊತೆಗೆ , ಸಮಾಜಿಕವಾಗಿ ಚಿಂತಿಸಲೂ ಅವರು ಪ್ರೇರೇಪಿಸುತ್ತಾರೆ. ಸಮಾಜದಲ್ಲಿ ಓರ್ವ ಜವಬ್ದಾರಿಯುತ ಕಲಾವಿದನಾಗಿ ಬೋಳಾರ್ ಮಿಂಚಲು ಇದು ಕಾರಣವಾಗಿರಬಹುದು. ಚಿಂತನೆಯೊಂದಿಗೆ ನಮ್ಮನ್ನು ನಗಿಸುವ ಬೋಳಾರ್ ಅವರಿಗೆ ಧನ್ಯವಾದಗಳು.

ತುಳುನಾಡಿನ Updated ಕಲಾಭಿಮಾನಿಗಳ ಪರವಾಗಿ,


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »