TOP STORIES:

FOLLOW US

ಮೊಗೆದಷ್ಟು ಮುಗಿಯದ.. ಬಗೆದಷ್ಟು ಅಳಕ್ಕಿರುವ ಪರ್ಪಲೆಯ ರಹಸ್ಯ.


ಮೊಗೆದಷ್ಟು ಮುಗಿಯದ.. ಬಗೆದಷ್ಟು ಅಳಕ್ಕಿರುವ ಪರ್ಪಲೆಯ ರಹಸ್ಯ.


15ನೇ ಶತಮಾನದ ಒಂದು ಸಂಜೆ ಪಾಂಡ್ಯ ನಗರಿ ಕಾರ್ಕಳ ತನ್ನ ದಿನದ ವಹಿವಾಟನ್ನು ಮುಗಿಸಿ ಪಡುಗಡಲ ಸೆರಗಲ್ಲಿ ಮರೆಯಾಗುತ್ತಿದ್ದ ನೇಸರ ನನ್ನೇ ದಿಟ್ಟಿಸುತ್ತಿತ್ತು. ಅಷ್ಟರಲ್ಲೇ ಕೇಳಿಬಂತು ಎಲ್ಲೆಲ್ಲೂ ಹಾಹಾಕಾರ.. ಹೋ ಎಂದು ಬೆಚ್ಚಿ ಬೆದರಿ ಓಡುವ ಜನಮಂದೆಯ ಬೊಬ್ಬೆ ಗಲಾಟೆ. ನೋಡುವುದೇನು?
ಆಗಸದೆತ್ತರಕ್ಕೆ ಧೂಳೆಬ್ಬಿಸುತ್ತ ಹೂಂಕರಿಸುತ್ತಾ ಘೀಳಿಡುತ್ತಾ ಪರ್ವತ ಗಾತ್ರದ ಅರಸನ ಪಟ್ಟದ ಆನೆ ಇಡೀ ಪಟ್ಟಣವನ್ನೇ ಪುಡಿ ಗಟ್ಟುವ ಹುಮ್ಮಸ್ಸಿನಲ್ಲಿ ಮುನ್ನುಗ್ಗಿ ಬರುತ್ತಿತ್ತು. ಅರಮನೆಯ ಲಾಯದಲ್ಲಿ ಕಾಲಿಗೆ ಕಟ್ಟಿದ ಕಬ್ಬಿಣದ ಸಂಕೋಲೆಯನ್ನು ತುಂಡರಿಸಿಕೊಂಡು ಮದ ಏರಿದ ಆನೆ ಪೇಟೆಯ ಕಡೆಗೆ ನುಗ್ಗಿತ್ತು. ಒಂದಷ್ಟು ಕಟ್ಟಾಳುಗಳು ಆನೆಯನ್ನು ಕಟ್ಟಿ ಹಾಕುವ ಭರದಲ್ಲಿ ಮುನ್ನುಗ್ಗಿದರು. ಅವರಲ್ಲಿ ಕೆಲವರು ಸೊಂಡಿಲಿಗೆ ಸಿಕ್ಕಿ ಕಬ್ಬಿನ ಜಲ್ಲೆಯಂತೆ ನೆಲಕ್ಕೆ ಒಗೆಯಲ್ಪಟ್ಟರು. ಇನ್ನು ಕೆಲವರು ಆನೆಯ ಕಾಲಡಿಗೆ ಸಿಕ್ಕಿ ಕುಂಬಳಕಾಯಿಯಂತೆ ತಲೆ ಒಡೆಸಿಕೊಂಡರು. ಈ ರುದ್ರ ಭಯಾನಕ ದೃಶ್ಯ ಕಂಡ ನಗರದ ಜನರು ಆನೆಯನ್ನು ಹಿಡಿಯುವ ಯತ್ನವನ್ನು ಬಿಟ್ಟು ತಮ್ಮ ಮನೆ ಮಠ ಸ್ವತ್ತು ಸಾಮಗ್ರಿಗಳನ್ನು ಉಳಿಸುವ ಧಾವಂತಕ್ಕೆ ಬಿದ್ದರು. ತೆಂಗಿನ ಸೋಗೆಗಳನ್ನು ಸುಟ್ಟು ಆನೆಯನ್ನು ತಮ್ಮ ಬೀದಿಗೆ ಬರದಂತೆ ತಡೆದರು. ದೊಂದಿ ರಾಳಗಳನ್ನು ಹಿಡಿದು ಆನೆಯನ್ನು ಕಾಡಿಗಟ್ಟುವ ಪ್ರಯತ್ನದಲ್ಲಿ ತೊಡಗಿದರು. ಬೆಂಕಿ ಕಂಡು ಬೆದರಿದ ಆನೆ ಪರ್ಪಲೆಯ ತಪ್ಪಲಿಗೆ ಬಂತು. ಅಲ್ಲಿಂದ ಮುಂದೆ ಪರ್ಪಲೆ ಗುಡ್ಡೆ ಹತ್ತಿ ಕಾಣೆಯಾಯಿತು.
ಪಟ್ಟದ ಆನೆಗೆ ಮದ ಏರಿದ ಚಿಂತೆಯಲ್ಲಿ ಅರಸನಿದ್ದರೆ, ಮದ ಏರಿದ ಆನೆ ಪೇಟೆ ಬಿಟ್ಟು ಪರ್ಪಲೆಯ ಗುಡ್ಡ ಹತ್ತಿದ ನೆಮ್ಮದಿಯಲ್ಲಿ ಜನರು ನಿದ್ದೆ ಮಾಡಿದರು.
ಕಾಡಿನಲ್ಲಿ ಅಲೆದು ಮರಗಳ ಮೇಲೆ ಸಿಟ್ಟು ತೋರಿಸಿ ಸುಸ್ತಾದ ಆನೆ ಮರುದಿನ ಮದ ಇಳಿದು ಬಾಯರಿ ನೀರನ್ನು ಅರಸಿಕೊಂಡು ಮೆಲ್ಲನೆ ಪರ್ಪಲೆ ಗುಡ್ಡದ ಪೂರ್ವಕ್ಕೆ ಇಳಿದು ಆನೆಕೆರೆಯ ಕಡೆಗೆ ಹೆಜ್ಜೆ ಹಾಕಿತು. ನಗರದ ಜನರು ಮತ್ತೆ ಸೇರಿದರು. ಮಾವುತನಿಗೆ ಸುದ್ದಿ ಮುಟ್ಟಿಸಿದರು. ಆನೆ ಸಹಜ ಸ್ಥಿತಿಗೆ ಬಂದಿತ್ತು. ಮಾವುತನನ್ನು ಹಿಂಬಾಲಿಸುತ್ತ ಏನೂ ಆಗಿಲ್ಲವೆಂಬಂತೆ ಅರಮನೆಯ ಕಡೆಗೆ ಹೆಜ್ಜೆ ಹಾಕಿತು.
ಅರಮನೆಯ ಬಳಿ ಬಂದು ಗಜ ಲಾಯದ ಗೂಟದ ಸಂಕೋಲೆಯನ್ನು ಆನೆಯ ಕಾಲಿಗೆ ಕಟ್ಟಬೇಕು ಎಂದು ಮಾವುತ ಬಗ್ಗಿದಾಗ ನೋಡುವುದೇನು?
ಆನೆಯ ಕಾಲಿನಲ್ಲಿದ್ದ ಕಬ್ಬಿಣದ ತುಂಡು ಸರಪಳಿ ಬಂಗಾರವಾಗಿದೆ!
ಅಷ್ಟಕ್ಕೂ ಆನೆಯ ಕಾಲಿನಲ್ಲಿದ್ದ ಕಬ್ಬಿಣದ ಸರಪಳಿ ಬಂಗಾರ ವಾಗಿದ್ದು ಹೇಗೆ ?
ಕಬ್ಬಿಣವನ್ನು ಬಂಗಾರ ಮಾಡಿದ ಆ ರಸಬಾವಿ ಅಥವಾ ಸ್ಪರ್ಶಮಣಿ ಪರ್ಪಲೆ ಗುಡ್ಡದಲ್ಲಿ ಎಲ್ಲಿದೆ ?
ಆ ಇಡಿ ರಾತ್ರಿ ಆನೆ ಅಲೆದಾಡಿದ ಪ್ರದೇಶದಲ್ಲಿ ಕಾಲ ಕಬ್ಬಿಣದ ಸರಪಳಿಗೆ ಸ್ಪರ್ಶಿಸಿದ ಆ ಚಮತ್ಕಾರಿ ವಸ್ತು ಯಾವುದು?
ಇತಿಹಾಸದ ಅನೇಕ ಪುಟಗಳಲ್ಲಿ ಬಂದು ಹೋಗುವ ರಸವಿದ್ಯೆಯನ್ನು ಕರಗತ ಮಾಡಿಕೊಂಡ ಯೋಗಿಗಳು ಈ ಗುಡ್ಡದ ಮೇಲಿದ್ದರೇ?
5 ಶತಮಾನಗಳಿಂದ ಜನರ ಬಾಯಿಂದ ಬಾಯಿಗೆ ಹರಡಿ ಕೊಂಡು ಬಂದ ಈ ದಂತ ಕಥೆಯ ಹಿಂದಿನ ರೋಚಕ ಸತ್ಯವೇನು?
ಮೊನ್ನೆ ಅಷ್ಟಮಂಗಲ ಪ್ರಶ್ನೆ ಇರಿಸಿದ ಪಯ್ಯನ್ನೂರಿನ ನಾರಾಯಣ ಪೊದುವಾಲರು.. ಇದ್ ಭೂಮಿ ಸ್ವರ್ಣ ಮಯಿ…ಈ ಭೂಮಿಕ್ಕ್ ಸ್ವರ್ಣ ಸೃಷ್ಟಿಕ್ಕಿನ ಶಕ್ತಿ ಇಂಡ್ ಎಂದಾಗ ನಮ್ಮೆಲ್ಲರ ಮೈ ಮುಳ್ಳೆದ್ದಿದ್ದು ಇದೇ ಕಾರಣಕ್ಕೆ..
ಆವತ್ತಿನ ಅಷ್ಟಮಂಗಲ ಪ್ರಶ್ನೆಯಲ್ಲಿ ಇಂತಹ ಅನೇಕ ಮುಖ್ಯ ಬಿಂದುಗಳು ದೈವಜ್ಞರ ಗಮನಕ್ಕೆ ಬಂದರೂ ಅದನ್ನು ವಿಸ್ತರಿಸುವ ಕೆಲಸ ನಡೆದಿರಲಿಲ್ಲ
ಅರಸನ ಆನೆಯ ಸರಪಳಿ ಬಂಗಾರವಾದ ಕಥೆ ನನಗೆ ತಿಳಿದಿದ್ದು ಅಷ್ಟಮಂಗಲ ಪ್ರಶ್ನೆ ಮುಗಿದು ಒಂದು ವಾರದ ಬಳಿಕ. ಯಾರೋ ಒಬ್ಬರು ಹಿರಿಯ ಜೈನ ಇಂದ್ರರ ಮೂಲಕ
ಕಾಲದ ಚಿಪ್ಪಿನೊಳಗೆ ಭದ್ರವಾಗಿ ಕುಳಿತಿರುವ ಅನೇಕ ಸಂಗತಿಗಳು ಆ ಶಕ್ತಿಗಳ ಅಪೇಕ್ಷೆಗನುಗುಣವಾಗಿ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಪರ್ಪಲೆಯ ಸತ್ಯ ಸಾನಿಧ್ಯ ನಿತ್ಯ ನಿರಂತರ ಬೆಳಗುತ್ತಿರಲಿ
ಜೈ ಮಹಾಕಾಲ್

credits: beauty of tulunadu


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »