TOP STORIES:

FOLLOW US

ಪುಷ್ಪರಾಜ್ ಅಮಿನ್ ಮತ್ತು ತಂಡದಿಂದ ಮೈಕ್ರೋ ಲೈಟ್ ಸೀ ಪ್ಲೇನ್ ತಯಾರು – ಬೇಕಿದೆ ಸರಕಾರದ ಸಹಾಯ ಹಸ್ತ


ಉಡುಪಿ: ಒಂದೆಡೆ ಸರಕಾರಗಳು ದೇಶೀಯ ಉತ್ಪನ್ನ, ಸಂಶೋಧನೆಗಳಿಗೆ ಒತ್ತು ನೀಡಿ ಸ್ವದೇಶದಲ್ಲಿ ತಯಾರಾಗುವ ಅವಿಶ್ಕಾರಗಳಿಗೆ ವೇದಿಕೆ ಒಗದಿಸಲು ಚಿಂತನೆ ನಡೆಸುತ್ತಿದೆ. ಆದರೆ ಮತ್ತೊಂದೆಡೆ ಉಡುಪಿಯ ಹೆಜಮಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ದೇಶದಲ್ಲೇ ಮೊದಲು ಎನ್ನುವ ರೀತಿಯಲ್ಲಿ ಸಂಶೋಧನೆ ಒಂದು ನಡೆದಿದ್ದು ಸರಕಾರದ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ.

ಉಡುಪಿಯ ಗಡಿಭಾಗ ಹೆಜಮಾಡಿ ಎಂಬ ಪುಟ್ಟ ಗ್ರಾಮದಲ್ಲಿ ಉತ್ಸಾಹಿ ಯುವ ಪಡೆ ತಮ್ಮದೇ ಸ್ವಂತ ಬಂಡವಾಳದೊಂದಿಗೆ ದೇಶದಲ್ಲೇ ಮೊದಲು ಎಂಬಂತೆ ಮೈಕ್ರೋ ಲೈಟ್ ಸೀ ಪ್ಲೇನ್ ಒಂದನ್ನು ತಯಾರು ಮಾಡಿದ್ದಾರೆ. ಈ ಸೀ ಪ್ಲೇನ್ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಪುಷ್ಪರಾಜ್ ಅಮಿನ್ ಎಂಬವರು ಈ ಯೋಜನೆಯ ರೂವಾರಿ. 8 ಮಂದಿ ಯುವಕ ಯುವತಿಯರ ಜೊತೆ ಗೂಡಿ ಈ ಸೀ ಪ್ಲೇನ್ ಅನ್ನು ತಯಾರಿಸಿದ್ದು ಇಲ್ಲಿನ ಶಾಂಭವಿ ನದಿಯಲ್ಲಿ ಯಶಸ್ವಿ ಪ್ರಾಯೋಗಿಕ ಹಾರಾಟ ಕೂಡಾ ನಡೆದಿದೆ, 1 ವರ್ಷದ ಕಠಿಣ ಪರಿಶ್ರಮ ಮತ್ತು ಸಂಶೋಧನೆಯ ಫಲವಾಗಿ ಸೀ ಪ್ಲೇನ್ ನಿರ್ಮಾಣವಾಗಿದ್ದು ಸುಮಾರು 7 ರಿಂದ 8 ಲಕ್ಷ.ರೂ. ವೆಚ್ಚ ತಗುಲಿದೆ.

“ಸಣ್ಣದಿಂದಲೇ ನನಗೆ ವಿಮಾನ ಹಾರಿಸಬೇಕು ಎಂಬ ಆಸೆ ಇದ್ದಿತ್ತು. ಕಳೆದ ಕೆಲ ವರ್ಷಗಳಲ್ಲಿ ಸಣ್ಣ ಸಣ್ಣ ವಿಮಾನದ ಮಾಡೆಲ್‌‌ಗಳನ್ನು ಮಾಡಿದ್ದೇನೆ. ಹಲವಾರು ಮಕ್ಕಳಿಗೆ ತರಬೇತಿಯನ್ನು ಕೂಡಾ ನೀಡಿದ್ದೇನೆ. ಓರ್ವ ವ್ಯಕ್ತಿ ಕುಳಿತುಕೊಂಡು ಹೋಗುವಂತಹ ವಿಮಾನ ಮಾಡಬೇಕು ಎಂಬ ಆಸೆ ಇದ್ದಿತ್ತು. ಆದರೆ ವಿಮಾನ ಮಾಡುವುದು ತುಂಬಾ ಕಷ್ಟಕರ. ಆಕಾಶದಲ್ಲಿ ಹಾರುವ ವಿಮಾನ ತಯಾರಿಸಲು ಜಾಗದ ಕೊರತೆ ಮತ್ತು ಹಣದ ಅವಶ್ಯಕತೆ ಕೂಡಾ ಇತ್ತು ಹೀಗಾಗಿ ನೀರಿನಲ್ಲಿ ಹೋಗುವ ವಿಮಾನವನ್ನು ತಯಾರಿಸಿದೆವು. ನನ್ನ ಮನೆಯ ಹತ್ತಿರವೇ ನದಿ ಇರುವುದರಿಂದ ಇದರ ಪ್ರಾಯೋಗಿಕ ಪ್ರಯೋಗಕ್ಕೆ ಮತ್ತು ಇನ್ನಿತರ ಕೆಲಸಕ್ಕೆ ಕೂಡಾ ಸುಲಭವಾಗಿತ್ತು. ಈ ಯೋಜನೆಗೆ ಸಹಕಾರಿಯಾಗುವಂತೆ ಸರಕಾರ ನಮಗೆ ಒಂದು ಸಣ್ಣ ಮಟ್ಟದ ವರ್ಕ್ ಶಾಪ್ ಮತ್ತು ಅಗತ್ಯ ಸವಲತ್ತುಗಳನ್ನು ಒದಗಿಸಿ ಕೊಡಬೇಕು” ಎನ್ನುತ್ತಾರೆ ಈ ತಂಡದ ಮುಖ್ಯಸ್ಥರು ಮತ್ತು ಮಾರ್ಗದರ್ಶಕರು ಆದ ಪುಷ್ಪರಾಜ್ ಅಮಿನ್.

ಈ ಇಡೀ ಸೀ ಪ್ಲೇನ್ ತಯಾರಾದದ್ದು ಪುಷ್ಪರಾಜ್ ಅವರ ಮನೆಯ ಅಂಗಳ ಗದ್ದೆ, ಮತ್ತು ತೋಟದಲ್ಲಿ. ಯಾವುದೇ ದೊಡ್ಡ ವರ್ಕ್ ಶಾಪ್ ಇಲ್ಲದೇ, ಆಧುನಿಕ ಉಪಕಣಗಳು ಇಲ್ಲದೇ ತಮ್ಮಲ್ಲಿ ಲಭ್ಯವಿರುವ ಉಪಕರಣಗಳನ್ನು ಬಳಸಿ ಈ ಸೀ ಪ್ಲೇನ್ ಅನ್ನು ತಯಾರು ಮಾಡಿದ್ದಾರೆ, ತಂಡದಲ್ಲಿ ಪುಷ್ಪರಾಜ್ ಅಮೀನ್ ಸೇರಿದಂತೆ, ಟ್ರೈನಿ ಪೈಲಟ್ ವಿನಯಾ ಯು, ಯಾಚ್ ಕ್ಯಾಪ್ಟನ್ ವಸುರಾಜ್ ಅಮಿನ್, ವೃತ್ತಿಪರ ಡ್ರೋನ್‌‌ ಆಪರೇಟರ್ ಅಭಿಷೇಕ್ ಎಂ ಕೋಟ್ಯಾನ್, ಏರೋನಾಟಿಕಲ್ ವಿದ್ಯಾರ್ಥಿ ಉತ್ಸವ್ ಉಮೇಶ್, ಏರೋನಾಟಿಕಲ್ ಪ್ರಾಧ್ಯಾಪಕ ಶಯನಿ ರಾವ್, ರೇಶ್ಮಾ ಬಂಗೇರ, ಅಶ್ವಿನಿ ರಾವ್ ಸೇರಿದ್ದಾರೆ.

“ಈ ಸೀ ಪ್ಲೇನ್ 190 ಕೆಜಿ ಇದ್ದು, ಓರ್ವ ಪೈಲಟ್ ಕುಳಿತುಕೊಂಡು ಸಂಚರಿಸಲು ಸಾಧ್ಯವಿದೆ. ನಮ್ಮ ಪ್ರಥಮ ಪ್ರಯತ್ನದಲ್ಲೇ ನಾವು ಯಶಸನ್ನು ಕಂಡಿದ್ದೇವೆ. ನಮ್ಮ ದೇಶದಲ್ಲಿ ಇಷ್ಟು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ತಯಾರಾಗಿರುವ ಪ್ರಥಮ ವಿಮಾನ ಇದು. ಇದನ್ನು ದ್ವೀಪಗಳ ನಡುವೆ ಸಂಚಾರಕ್ಕೆ, ನೆರೆ ಸಂಧರ್ಭದಲ್ಲಿ ಪರಿಹಾರ ಕಾರ್ಯಕ್ಕೆ, ಪ್ರವಾಸೋದ್ಯಮಕ್ಕೆ, ಬಳಕೆ ಮಾಡಬಹುದು. ಆದರೆ ಸರಿಯಾದ ವರ್ಕ್ ಶಾಪ್, ಉಪಕರಣಗಳು ಇಲ್ಲದೇ ಈ ಪ್ರಯೋಗ ಯಶಸ್ವಿಯಾಗಿದೆ” ಎನ್ನುತ್ತಾರೆ ತಂಡದ ಸದಸ್ಯ ಶಯನಿ ರಾವ್.

ದೃತಿ ಮೈಕ್ರೋಲೈಟ್ ಸೀ ಪ್ಲೇನ್ ಎಂದು ಇದನ್ನು ಹೆಸರಿಸಲಾಗಿದ್ದು ಸುಮಾರು 120 ಕೆಜಿ ಭಾರವಿದೆ. 33 ಹೆಚ್.ಪಿ ಮೋಟಾರ್ ಅನ್ನು ಈ ಸೀ ಪ್ಲೇನ್‌‌ಗಾಗಿ ಬಳಸಲಾಗಿದೆ. ಗ್ರೇಡ್ ಅಲುಮಿನಿಯಂ, ಫೋಮ್, ಫೈಬರ್ ಬಟ್ಟೆ, ನೈಲಾನ್ ಬಟ್ಟೆ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಈ ಸೀ ಪ್ಲೇನ್ ತಯಾರಿಯಲ್ಲಿ ಬಳಸಲಾಗಿದೆ. ತಂಡವು ಸೂಕ್ತ ಪರಿಕರ, ವ್ಯವಸ್ಥೆಗಳು ಲಭ್ಯವಾದಲ್ಲಿ ಮುಂದಿನ ದಿನಗಳಲ್ಲಿ 4,610 ಸೀಟರ್ ಸೀ ಪ್ಲೇನ್ ಗಳನ್ನು ತಯಾರಿಸಲು ಕೂಡಾ ಯೋಜನೆ ಹಾಕಿಕೊಳ್ಳುತ್ತಿದೆ.

ಈ ಪ್ರಯೋಗಕ್ಕೆ ಆಗಿರುವ ಖರ್ಚು ವೆಚ್ಚ ಎಲ್ಲವನ್ನೂ ತಂಡದ ಸದಸ್ಯರು, ಸ್ನೇಹಿತರು, ಮತ್ತು ಸಾಲ ಮಾಡುವ ಮೂಲಕ ನಿಭಾಯಿಸಿದ್ದಾರೆ.

ಈ ಮೊದಲು ಗುಜರಾತಿನ ಅಹಮದಾಬಾದ್‌ನಲ್ಲಿ ವಿದೇಶದಿಂದ ತರಿಸಿದ್ದ ಸೀ ಪ್ಲೇನ್ ಅನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿ ಅದರಲ್ಲಿ ಪ್ರಯಾಣವನ್ನು ಕೂಡಾ ಮಾಡಿದ್ದರು. ಆದರೆ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್‌ಗೆ ಇದೀಗ ಅಗತ್ಯ ಬೆಂಬಲ ಬೇಕಾಗಿದೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಿ ಈ ಯುವ ಅವಿಷ್ಕಾರಿಗಳಿಗೆ ನೆರವಾಗಬೇಕಿದೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »