TOP STORIES:

FOLLOW US

ಶ್ರೀ ಕ್ಷೇತ್ರ ಪೊಳಲಿಯ`ಮೃಣ್ಮಯ ಮೂರ್ತಿ’ ವೀಡಿಯೋ ಚಿತ್ರಣ ಬಿಡುಗಡೆ


ಪೊಳಲಿ : ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ನಡೆಯುವ ಒಂದು ತಿಂಗಳ ಜಾತ್ರೆ, ಜಾತ್ರೆಯ ಸೊಬಗು, ಔಚಿತ್ಯ, ಐತಿಹ್ಯ, ಸ್ಥಳನಾಮ ವಿಶೇಷತೆ, ನಂಬಿಕೆ, ಶ್ರೀ ದೇವಿಯ ಕಾರ್ಣಿಕದ ಜೊತೆಗೆ ಶ್ರೀ ಕ್ಷೇತ್ರದ ಸಂಪೂರ್ಣ ಚಿತ್ರಣ ಹಾಗೂ ಇತರ ಕೆಲವು ಮಹತ್ವದ ವಿಷಯಗಳನ್ನೊಳಗೊಂಡ ವಿಶಿಷ್ಟ ವೀಡಿಯೋ ಸಂಕಲನ `ಮೃಣ್ಮಯ ಮೂರ್ತಿ’ ಎ. ೧೦ ರಂದು ಶನಿವಾರ ಪೊಳಲಿ ದೇವರ ಸನ್ನಿಧಾನದಲ್ಲಿ ವಿದ್ಯುಕ್ತವಾಗಿ ಬಿಡುಗಡೆಗೊಂಡಿತು.

ಮೊದಲಿಗೆ ವೀಡಿಯೋ ಕ್ಲಿಪ್ಲಿಂಗ್‌ನ್ನು (ಪೋಸ್ಟರ್) ಶ್ರೀ ರಾಜರಾಜೇಶ್ವರಿ ಅಮ್ಮನವರ ಪದತಲದಲ್ಲಿಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ. ಮಾಧವ ಭಟ್ , ನಾರಾಯಣ ಭಟ್,ಕೆ.ರಾಮ್ ಭಟ್, ಮಾಧವ ಮಯ್ಯ,ನಡುಮನೆ. ಕಂಠೀರಾಯ ರಾಮಕೃಷ್ಣ ಭಟ್ ಅರ್ಚಕ, ಪರಮೇಶ್ವರ ಭಟ್ ಅವರ ಸಮಾಕ್ಷಮದಲ್ಲಿ ಚಂದ್ರಶೇಖರ ಭಟ್ ಮೃಣ್ಮಯ ಮೂರ್ತಿಯ ಯಶಸ್ವಿಗೆ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ ರಾದ ಯು .ತಾರನಾಥ ಆಳ್ವ ,ಚೇರ ಸೂರ್ಯನಾರಾಯಣ ರಾವ್ ಹಾಗೂ ರಮೇಶ್ ರಾವ್ ಚೇರಾ, ಸುಭಾಷ್ ಆಳ್ವ ಉಳಿಪಾಡಿಗುತ್ತು, ಅರುಣ್ ಆಳ್ವ ಉಳಿಪಾಡಿಗುತ್ತು, ಕೃಷ್ಣ ಕುಮಾರ್ ಪೂಂಜ, ಚಂದ್ರಹಾಸ ಶೆಟ್ಟಿ ಪೆರ್ಮಂಕಿ, ಜೀವರಾಜ ಶೆಟ್ಟಿ ಅಮ್ಮುಂಜೆಗುತ್ತು, ಉದಯ ಆಳ್ವ, ವಿಷ್ಣುಮೂರ್ತಿ ನಟ್ಟೋಜ, ಸೋಮಶೇಖರ್ ಶೆಟ್ಟಿ, ಅ.ನ.ಭ ಪೊಳಲಿ, ರೂಪಾ ಡಿ ಶೆಟ್ಟಿ, ದುರ್ಗಾಪ್ರಸಾದ ಶೆಟ್ಟಿ, ಸಂತೋಷ್ ಕುಮಾರ್ ಆಯೆರೆಮಾರ್ .ದೇವಳದ ಕಾರ್ಯನಿರ್ವಣಾಧಿಕಾರಿ ಜಯಮ್ಮ, ವೀಡಿಯೋ ನಿರ್ಮಾಪಕ ವಾಮನ್ ಪೂಜಾರಿ ಸೂರ್ಲ, ವೀಡಿಯೋ ಸಂಕಲನ ಮಾಡಿರುವ ಹರ್ಷ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪೊಳಲಿ ಅಮ್ಮನವರ ಆಶೀರ್ವಾದದೊಂದಿಗೆ `ಸುದ್ದಿ೯’ ಸುದ್ದಿ ಪ್ರಸಾರ ಸಂಸ್ಥೆಯ ಮಾಲಕ ವಾಮನ ಪೂಜಾರಿ ಸೂರ್ಲ ನಿರ್ಮಾಣದ ಈ ವೀಡಿಯೋ ಚಿತ್ರಣದಲ್ಲಿ ಹಲವರು ಕೈಜೋಡಿಸಿದ್ದಾರೆ. ಅ.ನ.ಭ ಪೊಳಲಿ ಚಿತ್ರಕತೆಗೆ ರೂಪಾ ಡಿ ಶೆಟ್ಟಿ ನಿರೂಪಣೆ ಇದೆ. ಟ್ಯಾಬ್ ಸ್ಟೂಡಿಯೋ ಬೆದ್ರ ಧ್ವನಿ ಮುದ್ರಣ ಮಾಡಿದ್ದರೆ, ವಿನಾಯಕ ಶೆಣೈ ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಹರ್ಷ ಕುಮಾರ್ ಕಳಸಗುರಿ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪೊಳಲಿ ಶ್ರೀ ಕ್ಷೇತ್ರದ ಕಾಲಾವಧಿ ಜಾತ್ರೆ ಹಾಗೂ ಜಾತ್ರೆಯ ಮರುದಿನ ಶ್ರೀ ಕ್ಷೇತ್ರದಲ್ಲಿ ನಡೆಯುವ ದೈವಾರಾಧನೆಯ ಸೊಬಗನ್ನು ಈ ವೀಡಿಯೋ ಚಿತ್ರಣದ ಮೂಲಕ ಹತ್ತಿರದಿಂದ ಕಂಡು ಧನ್ಯರಾಗಲು ಅವಕಾಶವಿದೆ. ಅತ್ಯಂತ ಸುಂದರ ಹಾಗೂ ಅಷ್ಟೇ ನೈಜವಾಗಿ ಮೂಡಿ ಬಂದಿರುವ ವೀಡಿಯೋ ಆಸ್ತಿಕ ಬಂಧುಗಳ ದೇವ-ದೈವಾರಾಧನೆಯ ಆಸಕ್ತಿ ಇನ್ನಷ್ಟು ಹೆಚ್ಚಿಸುವಂತಿದೆ. ಇದರಲ್ಲಿ ಅನೇಕರ ಶ್ರಮವಿದೆ ಎಂದು ಹೇಳುವ ಪತ್ರಕರ್ತ ವಾಮನ ಪೂಜಾರಿ ಸೂರ್ಲ, ಈ ವೀಡಿಯೋ ನಿರ್ಮಾಣದ ಪೊಳಲಿ ಅಮ್ಮನವರ ಭಕ್ತರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂದು ಹೇಳಲು ಅಭ್ಯಂತರವಿಲ್ಲ ಎಂದು ವೀಡಿಯೋ ವೀಕ್ಷಿಸಿದ ಭಕ್ತರು ಆಡಿಕೊಂಡಿದ್ದಾರೆ.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »