TOP STORIES:

FOLLOW US

ಹೀಗೆ ಮಾಡಿ, ಒಂದು ತಿಂಗಳು ಬರುವ ಗ್ಯಾಸ್ ಎರಡು ತಿಂಗಳು ಬರುತ್ತೆ!


ಅಡುಗೆ ಅನಿಲದ ಬೆಲೆಯು ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಇದು ಜನಸಾಮಾನ್ಯರ ಮೇಲೆ ತೀವ್ರ ಹೊಡೆತ ಹಾಕಿದೆ. ಹೀಗಾಗಿ ಅಡುಗೆ ಗ್ಯಾಸ್ ಬಳಕೆ ಮಾಡುವ ಜನರು ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭ ಆದಷ್ಟು ಗ್ಯಾಸ್ ಉಳಿತಾಯ ಮಾಡಲು ಪ್ರಯತ್ನಿಸಬೇಕು.

ಗ್ಯಾಸ್ ನ್ನು ಉಳಿತಾಯ ಮಾಡಿದರೆ ಅದರಿಂದ ಹಣದ ಉಳಿತಾಯವು ಆಗುವುದು. ಹಾಗಾದರೆ ಗ್ಯಾಸ್ ಉಳಿಸುವುದು ಅಷ್ಟು ಸುಲಭವೇ ಎನ್ನುವ ಪ್ರಶ್ನೆಯು ಬರಬಹುದು. ಗ್ಯಾಸ್ ಉಳಿಸಲು ಏನು ಮಾಡಬೇಕು ಎಂದು ನೀವು ತಿಳಿಯಿರಿ.

​ಬರ್ನರ್ ಶುಚಿಯಾಗಿರಬೇಕು

ಗ್ಯಾಸ್ ನ್ನು ಉಳಿತಾಯ ಮಾಡಲು ನಿಯಮಿತವಾಗಿ ಬರ್ನರ್ ನ್ನು ಶುಚಿ ಮಾಡುತ್ತಲಿರಬೇಕು. ಬೆಂಕಿಯ ಬಣ್ಣವನ್ನು ಗಮನಿಸಿ ಮತ್ತು ಅದು ನೀಲಿ ಇದ್ದರೆ ಆಗ ಸರಿಯಾಗಿದೆ ಎಂದು ಹೇಳಬಹುದು.
ಆದರೆ ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ದರೆ, ಆಗ ಅದು ಸರಿಯಾಗಿ ಉರಿಯುತ್ತಿಲ್ಲ ಎಂದರ್ಥ.ಬರ್ನರ್ ನ್ನು ನಿಯಮಿತವಾಗಿ ಶುಚಿ ಮಾಡುತ್ತಲಿದ್ದರೆ, ಅದರಿಂದ ಬೆಂಕಿಯ ಬಣ್ಣವು ನೀಲಿ ಆಗಿರುವುದು. ಇದರಿಂದ ಗ್ಯಾಸ್ ನಷ್ಟವಾಗುವುದು ತಪ್ಪುವುದು.

​ಪಾತ್ರೆಗಳನ್ನು ಒರೆಸಿ

ಕೆಲವರು ಕುಕ್ಕರ್, ಪಾತ್ರೆ ಇತ್ಯಾದಿಗಳನ್ನು ತೊಳೆದು ನೇರವಾಗಿ ಗ್ಯಾಸ್ ಮೇಲೆ ಇಟ್ಟುಬಿಡುವರು. ಆಧರೆ ಇದರಿಂದ ಗ್ಯಾಸ್ ವೆಚ್ಚವಾಗುವುದು.
ಇದಕ್ಕಾಗಿ ಪಾತ್ರೆಯನ್ನು ತೊಳೆದ ಬಳಿಕ ಸ್ವಲ್ಪ ಒರೆಸಿಕೊಳ್ಳಿ. ಇದರಿಂದ ಪಾತ್ರೆ ಬೇಗ ಬಿಸಿ ಆಗುವುದು ಹಾಗೂ ಗ್ಯಾಸ್ ವೆಚ್ಚವಾಗುವುದು ತಪ್ಪುವುದು.
ಮೊದಲೇ ತಯಾರಿಸಿಡಿ

ಅಡುಗೆ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳನ್ನು ನೀವು ಮೊದಲೇ ತಯಾರು ಮಾಡಿಟ್ಟುಕೊಂಡು ಇದರ ಬಳಿಕ ಗ್ಯಾಸ್ ಉರಿಸಿ. ಗ್ಯಾಸ್ ಉರಿಸಿದ ಬಳಿಕ ತರಕಾರಿ ಕತ್ತರಿಸುವುದು ಸರಿಯಲ್ಲ. ಬೇಕಾಗುವಂತಹ ಸಾಮಗ್ರಿಗಳನ್ನು ಪಕ್ಕದಲ್ಲೇ ಇಟ್ಟುಕೊಂಡು ಅಡುಗೆ ಮಾಡಿ.

​ಪಾತ್ರೆಯ ಮುಚ್ಚಳ ಹಾಕಿಡಿ

ನೀವು ಯಾವುದೇ ಆಡುಗೆ ಮಾಡುತ್ತಲಿದ್ದರೂ ಆಗ ಪಾತ್ರೆಯ ಮುಚ್ಚಳ ಹಾಕಿಟ್ಟರೆ ಅದರಿಂದ ಬೇಗ ಬೇಯುವುದು ಹಾಗೂ ಅದರಿಂದ ಗ್ಯಾಸ್ ಕೂಡ ಉಳಿತಾಯ ಆಗುವುದು. ಪಾತ್ರೆಯ ಮುಚ್ಚಳವನ್ನು ಮುಚ್ಚಿಟ್ಟರೆ ಅದರಿಂದ ಹಬೆಯು ನಿರ್ಮಾಣವಾಗಿ ಆಹಾರ ಬೇಗ ಬೇಯುವುದು.

ಧಾನ್ಯ ಮತ್ತು ಅಕ್ಕಿ ನೆನೆಸಿಡಿ

ಕೆಲವೊಂದು ಧಾನ್ಯಗಳು ಬೇಯಲು ತುಂಬಾ ಸಮಯ ಬೇಕಾಗುವುದು. ಹೀಗಾಗಿ ಧಾನ್ಯಗಳು ಮತ್ತು ಅಕ್ಕಿಯನ್ನು ಕೆಲವು ಗಂಟೆಗಳ ಕಾಲ ನೆನೆಯಲು ಹಾಕಿ. ಇದರಿಂದ ಬೇಗನೆ ಬೇಯಲು ನೆರವಾಗುವುದು ಹಾಗೂ ಗ್ಯಾಸ್ ಉಳಿತಾಯವಾಗುವುದು.

​ಕೆಲವು ನಿಮಿಷ ಬಳಿಕ ಗ್ಯಾಸ್ ಕಡಿಮೆ ಮಾಡಿ

ಒಮ್ಮೆ ಪಾತ್ರೆಯು ಬಿಸಿಯಾದ ಬಳಿಕ ಗ್ಯಾಸ್ ಬೆಂಕಿ ಕಡಿಮೆ ಮಾಡಿ. ಆಹಾರ ಕುದಿಯಲು ಆರಂಭಿಸಿದ ವೇಳೆ ತುಂಬಾ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ತರಕಾರಿಗಳಲ್ಲಿ ಪೋಷಕಾಂಶಗಳು ಹಾಗೆ ಉಳಿಯುವುದು ಹಾಗೂ ಗ್ಯಾಸ್ ಬಳಕೆ ಕಡಿಮೆ ಆಗುವುದು.

​ಕುಕ್ಕರ್ ಬಳಸಿ

ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಬೇಗ ಆಗುವುದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಗ್ಯಾಸ್ ಖರ್ಚು ಕಡಿಮೆ ಮಾಡಲು ಕುಕ್ಕರ್ ನ್ನು ಬಳಸಿ. ಇದು ಸಮಯ ಹಾಗೂ ಗ್ಯಾಸ್ ಎರಡನ್ನು ಉಳಿತಾಯ ಮಾಡುವುದು.

ಅಗಲವಾದ ಪಾತ್ರೆ ಬಳಸಿ

ಕೆಲವರು ತುಂಬಾ ಸಣ್ಣ ಪಾತ್ರೆಗಳನ್ನು ಗ್ಯಾಸ್ ನಲ್ಲಿ ಇಡುವರು. ಇದರಿಂದ ಗ್ಯಾಸ್ ಹೊರಭಾಗಕ್ಕೆ ಬರುವುದು. ಗ್ಯಾಸ್ ನಲ್ಲಿ ಅಗಲವಾದ ಪಾತ್ರೆಗಳನ್ನು ಇಡಬೇಕು. ಇದರಿಂದ ಗ್ಯಾಸ್ ಹೊರಗೆ ಬರುವುದು ತಪ್ಪುವುದು ಹಾಗೂ ಗ್ಯಾಸ್ ನ ಉಳಿತಾಯ ಕೂಡ ಆಗುವುದು.

​ಲೀಕ್ ಇದೆಯಾ ಎಂದು ನೋಡಿ

ಬರ್ನರ್, ಪೈಪ್ ಮತ್ತು ರೆಗ್ಯೂಲೇಟರ್ ನಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎಂದು ನೋಡಿ. ಮೂಗಿನ ಮೂಲಕ ಸೋರಿಕೆ ಪತ್ತೆ ಮಾಡಬಹುದು. ಯಾವುದೇ ಲೀಕ್ ಇದ್ದರೆ ಆಗ ನೀವು ಬೇಗನೆ ಇದನ್ನು ಪತ್ತೆ ಮಾಡಿ.
ಗ್ಯಾಸ್ ನ ವಾಸನೆ ಬರುತ್ತಲಿದ್ದರೆ, ಆಗ ಲೀಕ್ ಇದೆ ಎಂದು ಅರ್ಥ ಮಾಡಿಕೊಳ್ಳಿ. ಕೆಲವೊಂದು ಸಲ ಇದು ಅಪಾಯಕಾರಿ ಕೂಡ ಆಗಬಹುದು. ಹೀಗಾಗಿ ಪದೇ ಪದೇ ಇದನ್ನು ಗಮನಿಸುತ್ತಿರಬೇಕು.
ಸೂಕ್ತ ಸರಬರಾಜುದಾರರಿಂದ ಪಡೆಯಿರಿ: ನೀವು ಸೂಕ್ತ ಸರಬರಾಜುದಾರರಿಂದ ಗ್ಯಾಸ್ ಖರೀದಿ ಮಾಡಿ. ಅನಧಿಕೃತ ಗ್ಯಾಸ್ ಬಳಕೆ ಮಾಡಬೇಡಿ. ಇದರ ತೂಕವನ್ನು ಸರಿಯಾಗಿ ಗಮನಿಸಿ ಪಡೆಯಿರಿ.

​ಕೊನೆ ಮಾತು

ನಿಮಗೆ ಈಗ ಗ್ಯಾಸ್ ಉಳಿತಾಯದ ಬಗ್ಗೆ ತಿಳಿದಿದೆ. ಇನ್ನು ನೀವು ಇದನ್ನು ಪಾಲಿಸಿಕೊಂಡು ಹೋಗಿ ನಿಮಗಾಗಿ ಹಾಗೂ ಕುಟುಂಬಕ್ಕಾಗಿ ಗ್ಯಾಸ್ ಉಳಿತಾಯ ಮಾಡಿ.
ಗ್ಯಾಸ್ ಉಳಿತಾಯವು ಪ್ರತಿನಿತ್ಯವೂ ಏನೂ ಬದಲಾವಣೆ ಉಂಟು ಮಾಡದು, ಆದರೆ ಇದು ತಿಂಗಳಲ್ಲಿ ಹಣ ಉಳಿತಾಯ ಮಾಡುವುದು. ಸಣ್ಣ ಸಣ್ಣ ಪ್ರಮಾಣದಲ್ಲಿನ ಉಳಿತಾಯವು ದೊಡ್ಡದಾಗುವುದು.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »