TOP STORIES:

ನಾಡು ಕಂಡ ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ!! ಎಸ್ ಬಂಗಾರಪ್ಪ ಜನುಮ ದಿನದಂದು ಗೌರವ ಪೂರ್ವಕ ನಮನಗಳು


ಬಂಗಾರಪ್ಪಾಜಿಯವರ ಸ್ಮರಣೋತ್ಸವದ ಅಂಗವಾಗಿ ಈ ಲೇಖನ.

ಎಸ್, ಬಂಗಾರಪ್ಪ ಅಂದರೆ ಸಾರೆಕೊಪ್ಪ ಬಂಗಾರಪ್ಪ ಅಂತ ಅರ್ಥ. ಸಾರೆಕೊಪ್ಪ ಎಂಬುದು ಅಂಚೆ ವಿಳಾಸ.

ಇವರ ಹುಟ್ಟೂರು ಶಿವಮೊಗ್ಗ* ಜಿಲ್ಲೆಯ *ಸೊರಬ* ತಾಲೂಕಿನ *ಕುಬಟೂರು* ಎಂಭ ಕುಗ್ರಾಮ. ಇವರ ತಂದೆಯ ಹೆದರು *ಕಲ್ಲಪ್ಪ.* ಮತ್ತು ತಾಯಿಯ ಹೆಸರು *ಕಲ್ಲಮ್ಮ* ಎಂದು. ಇವರಿಗೆ ಈ ಹೆಸರು ಬರಲು ಕಾರಣ *ಕಾರವಾರ* ಜಿಲ್ಲೆಯ *ಶಿರ್ಶಿ* ತಾಲೂಕಿನ *ಕದಂಭರು* ಆಳಿದ *ಬನವಾಸಿಯ* ಹತ್ತಿರ ಕೇವಲ ಮೂರು ಕಿ.ಮೀ. ದಲ್ಲಿ *ಗುಡ್ನಾಪುರ* ಎಂಬ ಹಳ್ಳಿ ಇದೆ. ಈ ಹಳ್ಳಿಯ ಪಕ್ಕದಲ್ಲಿ *ದೊಡ್ಡದಾದ ಕೆರೆಯೊಂದಿದೆ* ಸದಾ ವರ್ಷವಿಡೀ ನೀರಿನಿಂದ ತುಂಬಿರುವ ಈ ಕೆರೆಯ ಮಧ್ಯಭಾಗದಲ್ಲಿ *ಬಂಗಾರೇಶ್ವರ ದೇವಾಲಯವಿದೆ.* ಅಲ್ಲಿ *ಶಿವನ* ಅವತಾರ *ಬಂಗಾರೇಶ್ವರ* ನೆಲೆಸಿದ್ದಾನೆ.

 

*ಕಲ್ಲಪ್ಪ* ಮತ್ತು *ಕಲ್ಲಮ್ಮ* ದಂಪತಿಗಳಿಗೆ ಬಹಳ ದಿನವಾದರೂ ಗಂಡು ಸಂತಾನವಾಗುವುದಿಲ್ಲ ಆಗ ಮನೆದೇವರು *ಹುಚ್ಚುರಾಯೇಶ್ವರ ಸ್ವಾಮಿ {ಆಂಜನೇಯ ಸ್ವಾಮಿ}* ನೆನೆಯುತ್ತಾ ಈ ಬಂಗಾರೇಶ್ವರ ದೇವರಿಗೆ ಹರಕೆ ಹೊತ್ತರಂತೆ ಗಂಡು ಮಗು ಜನಿಸಿದರೆ ನಿನ್ನ ಹೆಸರೇ ನಾಮಕರಣ ಮಾಡುತ್ತೇವೆ ಅಂತ.ಆ ನಂತರದಲ್ಲಿ ಕಲ್ಲಮ್ಮನವರು ನವಮಾಸ ತುಂಬಿ ಮಗುವಿಗೆ ಜನ್ಮ ನೀಡಿದಾಗ ಗಂಡಯ ಮಗು ಆಗಿತ್ತಂತೆ ಹರಕೆಯ ಪ್ರಕಾರ ಆ ಗಂಡು ಮಗುವಿಗೆ *ಬಂಗಾರೇಶ್ವರನ* ಆಶಿರ್ವಾದದಿಂದ ಜನಿಸಿದ್ದಕ್ಕೆ *ಬಂಗಾರಪ್ಪ* ಎಂದು ನಾಮಕರಣ ಮಾಡಿದರಂತೆ. ಇವರೇ ನಾಡುಕಂಡ ಧೀಮಂತ ವ್ಯಕ್ತಿ , ಬಡವರ ಬಂಧು *ಈಡಿಗ ಸಮುದಾಯದ ಆಶಾಕಿರಣ ಬಂಗಾರಪ್ಪನವರು.*

 

ಅದೇ ರೀತಿಯಾಗಿ *ಬಂಗಾರಪ್ಪನವರ* ಸಹೋದರಿಯರು *ದೊಡ್ಡ ಕೆರಿಯಮ್ಮ* ಮತ್ತು *ಸಣ್ಣ ಕೆರಿಯಮ್ಮ* ಎಂದು. *ಬಂಗಾರೇಶ್ವರ* ದೇವಾಲಯದ ಪಕ್ಕ ಇರುವ *ಗುಡ್ನಾಪುರ* ಎಂಬ ಕುಗ್ರಾಮದ ಪಕ್ಕ ಕೆರೆ ಇದೆಯಲ್ಲ, ಅಲ್ಲಿ *ಬಂಗಾರೇಶ್ವರ ಸ್ವಾಮಿಯ ಜೊತೆಗೆ ಶಕ್ತಿಸ್ವರೂಪಿಣಿ ಆದಿಶಕ್ತಿ ಅಮ್ಮನಾಗಿ ಕೆರೆಯಲ್ಲಿರುವುದರಿಂದ ಕೆರೆಯಮ್ಮಳಾಗಿ ದರ್ಶನ ಕೊಡುತ್ತಿದ್ದಾಳೆ.*

 

ಆದ್ದರಿಂದ *ಬಂಗಾರಪ್ಪನವರ* ತಂದೆ ತಾಯಿ ತಮ್ಮ ಹೆಣ್ಣಮಕ್ಕಳಿಗೆ *ದೊಡ್ಡ ಕೆರೆಯಮ್ಮ,,, ಸಣ್ಣ ಕೆರೆಯಮ್ಮ* ಎಂದು ನಾಮಕರಣ ಮಾಡಿದ್ದಾರೆ.

ಬಂಗಾರಪ್ಪನವರು ಈಡಿಗ ಜಾತಿಗೆ ಸೇರಿದವರು. ಈಡಿಗ ಜಾತಿಯ ಉಪಜಾತಿಯಾದ ದೀವರು ಸಮುದಾಯಕ್ಕೆ ಸೇರಿದವರು.ಇವರ ಧರ್ಮ ಪತ್ನಿಯ ಹೆಸರು *ಶಕುಂತಲ. ಇವರದು ಕಾರವಾರ ಜಿಲ್ಲೆಯ ಶಿರ್ಶಿ ತಾಲೂಕಿನ ಮಳಲಗಾಂವ್ಎಂಬ ಹಳ್ಳಿ.ಇವರದು ಸಹಿತ ಈಡಿಗ ಸಮುದಾಯದ ಉಪಜಾತಿ ನಾಯ್ಕ ಕುಟುಂಬದವರು.

 

ಬಂಗಾರಪ್ಪನವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಇವರ ಒಬ್ಬ ಪುತ್ರಿಯನ್ನು ಇದೇ ಸಮುದಾಯದ ಕನ್ನಡದ ಮುತ್ತು ಪದ್ಮಬೂಷಣ ಡಾ ! ರಾಜಕುಮಾರ ಅವರ ಪುತ್ರ ಶಿವರಾಜಕುಮಾರ ಮದುವೆಯಾಗಿದ್ದಾರೆ.

ಇನ್ನೋರ್ವ ಪುತ್ರಿ ಹೆಸರಾಂತ ದಿನಪತ್ರಿಕೆ ಪ್ರಜಾವಾಣಿಯ ಮಾಲಾಕರನ್ನು ಮಡದಿಯಾಗಿದ್ದಾರೆ.

ಬಂಗಾರಪ್ಪನವರು ತಮ್ಮ ರಾಜಕೀಯ ಅಕಾಂಕ್ಷೆಗೆ ಕಲಾವಿದರನ್ನು ಎಂದೂ ಬಳಸಿಕೊಳ್ಳಲಿಲ್ಲ. *ಡಾ ! ರಾಜ್* ಅವರನ್ನು ಒಂದು ದಿನವೂ ತಮ್ಮ ರಾಜಕೀಯ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಲಿಲ್ಲ.

ಮಿರಿ ಮಿರಿ ಮಿಂಚುವ ಶರ್ಟ್ ಬಿಳಿ ಪ್ಯಾಂಟ್ ಬಿಳಿ ಚಪ್ಪಲಿ ಅಥವಾ ಶೂ, ಕಣ್ಣಿಗೆ ಕೂಲಿಂಗ್ ಕನ್ನಡಕ, ಕೈಯಲ್ಲಿ ಕನ್ನಡಕ ಇಡುವ ಬಾಕ್ಸ್ ಇದು *ಬಂಗಾರಪ್ಪನವರ* ಸಾರ್ವಜನಿಕ ವಸ್ತ್ರ ಸಂಹಿತೆ. ವೇದಿಕೆ ಮೇಲಿರುವಾಗಲಂತೂ ದೂರದಲ್ಲಿ ನಿಂತು ನೋಡುವವರಿಗೆ ಗುರುತು ಹಿಡಿಯಲು *ಮಿಂಚು ಅಚ್ಚಕೆಂಪು, ತಿಳಿನೀಲಿ, ಅಚ್ಚನೀಲಿ,ಶರ್ಟ್ ದರಿಸುತ್ತಿದ್ದರು.

ಬಂಗಾರಪ್ಪನವರನ್ನು ಈ ದಿನ ಮನದಲ್ಲಿ ಸ್ಮರಿಸಿಕೊಳ್ಳುತ್ತಾ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಹಾರೈಸೋಣ.

ವಿಷಯ ಸಂಗ್ರಹ : ಆಂಜನೇಯ.ಟಿ.{ ಈಡಿಗ }

ಅಗಡಿ ಹಾವೇರಿ

9113604162


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »