TOP STORIES:

FOLLOW US

Adhar card ಹೊಂದಿರುವವರಿಗೆ UIDAI ವತಿಯಿಂದ ಬಹುದೊಡ್ಡ ಉಡುಗೊರೆ


ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದೇಶಾದ್ಯಂತ 166 ಸ್ವತಂತ್ರ ಆಧಾರ್ ದಾಖಲಾತಿ ಮತ್ತು ನವೀಕರಣ ಕೇಂದ್ರಗಳನ್ನು ತೆರೆಯಲು ಸಜ್ಜಾಗಿದೆ. ಈ ಕುರಿತು ಯುಐಡಿಎಐ ಅಧಿಕೃತ ಹೇಳಿಕೆಯನ್ನು ನೀಡುವ ಮೂಲಕ ಈ ಮಾಹಿತಿಯನ್ನು ನೀಡಿದೆ.

ಪ್ರಸ್ತುತ 166 ಕೇಂದ್ರಗಳಲ್ಲಿ 55 ಆಧಾರ್ ಸೇವಾ ಕೇಂದ್ರಗಳು (ASKs) ಕಾರ್ಯನಿರ್ವಹಿಸುತ್ತಿವೆ. ಇದಲ್ಲದೇ 52,000 ಆಧಾರ್ ದಾಖಲಾತಿ ಕೇಂದ್ರಗಳು ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಜ್ಯ ಸರ್ಕಾರಗಳ ಮೂಲಕ ಕಾರ್ಯ ನಿರ್ವಹಿಸುತ್ತಿವೆ.

 

ಹೇಳಿಕೆ ಬಿಡುಗಡೆಗೊಳಿಸಿದ UIDAI

UIDAI ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, UIDAI 122 ನಗರಗಳಲ್ಲಿ 166 ಸ್ವತಂತ್ರ ಆಧಾರ್ ದಾಖಲಾತಿ ಮತ್ತು ನವೀಕರಣ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ ಎಂದು ಹೇಳಲಾಗಿದೆ. ವಾರದಲ್ಲಿ ಏಳು ದಿನಗಳು ಆಧಾರ್ ಸೇವಾ ಕೇಂದ್ರಗಳನ್ನು ತೆರೆದಿರಲಿವೆ ಎಂಬುದು ಇಲ್ಲಿ ಗಮನಾರ್ಹ. ಆಧಾರ್ ಕೇಂದ್ರಗಳು ವಿಕಲಚೇತನರು ಸೇರಿದಂತೆ 70 ಲಕ್ಷ ಜನರ ಅಗತ್ಯಗಳನ್ನು ಪೂರೈಸಲಿದೆ.

 

A ಮಾದರಿಯ ಆಧಾರ್ ಸೇವಾ ಕೇಂದ್ರಗಳು (Model-A ASKs) ದಿನಕ್ಕೆ 1,000 ದಾಖಲಾತಿಗಳನ್ನು ಮತ್ತು ನವೀಕರಣ ವಿನಂತಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ಇದೇ ವೇಳೆ Model-B ASKಗಳು 500 ಮತ್ತು Model-C ASKಗಳು 250 ದಾಖಲಾತಿ ಮತ್ತು ನವೀಕರಣ ವಿನಂತಿಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ. ಗಮನಿಸಬೇಕಾದ ಸಂಗತಿಯೆಂದರೆ ಇಲ್ಲಿಯವರೆಗೆ UIDAI 130.9 ಕೋಟಿ ಜನರಿಗೆ ಆಧಾರ್ ಸಂಖ್ಯೆಯನ್ನು ನೀಡಿದೆ.

 

ಖಾಸಗಿ ಆಧಾರ್ ಕೇಂದ್ರಗಳನ್ನು ತೆರೆಯಲಾಗುವುದಿಲ್ಲ

ಆಧಾರ್ ಸೇವಾ ಕೇಂದ್ರ ಖಾಸಗಿ ತೆರೆಯಲು ಸಾಧ್ಯವಿಲ್ಲ. ಅಂದರೆ, ಆಧಾರ್ ಸೇವೆಗಳು ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ಸಾಮಾನ್ಯ ಸೇವಾ ಕೇಂದ್ರಗಳು (Aadhaar Common Service Centres), ರಾಜ್ಯ ಸರ್ಕಾರಿ ಅಧಿಕಾರಿಗಳ ಕಚೇರಿ ಮತ್ತು UIDAI ನಿರ್ವಹಿಸುವ ಆಧಾರ್ ಸೇವಾ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದೆ. ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ, ನೀವು ಅದನ್ನು ರಾಜ್ಯ ಸರ್ಕಾರದ ಸ್ಥಳೀಯ ಅಧಿಕಾರಿಗಳಿಂದ ಪಡೆಯಬಹುದು (ಇದರ ಅಡಿಯಲ್ಲಿ ಆಧಾರ್ ಕೇಂದ್ರಗಳು ನಡೆಯುತ್ತಿವೆ).

ಇಂಟರ್ನೆಟ್ ಕೆಫೆಗಳು ಈ ಕೆಲಸ ಮಾಡುತ್ತವೆ

UIDAI ಸಾಮಾನ್ಯ ನಾಗರಿಕರಿಗೆ ನೀಡುವ ಅಧಿಕಾರಗಳನ್ನು ಇಂಟರ್ನೆಟ್ ಕೆಫೆಗಳಿಗೂ ಕೂಡ ನೀಡುತ್ತದೆ. ಈ ಅಧಿಕಾರಗಳಲ್ಲಿ ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಅಥವಾ ಇತರ ವಿವರಗಳ ತಿದ್ದುಪಡಿ, ಫೋಟೋ ಬದಲಾಯಿಸುವುದು, ಪಿವಿಸಿ ಕಾರ್ಡ್ ಮುದ್ರಿಸುವುದು, ಸಾಮಾನ್ಯ ಆಧಾರ್ ಕಾರ್ಡ್ ಕೇಳುವುದು ಇತ್ಯಾದಿ ಸೌಲಭ್ಯ ಮಾತ್ರ ಲಭ್ಯವಿದೆ.

 

ಆಧಾರ್‌ನಲ್ಲಿ ಯಾವುದೇ ತಿದ್ದುಪಡಿಗಾಗಿ ಅಥವಾ ಪಿವಿಸಿ ಕಾರ್ಡ್ ಪಡೆಯಲು ಯುಐಡಿಎಐ ನಿಗದಿಪಡಿಸಿದ ಶುಲ್ಕ 50 ರೂ. ಆದರೆ, ಕೆಫೆ ಮಾಲೀಕರು ಇದಕ್ಕಾಗಿ 70 ರಿಂದ 100 ರೂ. ಪಡೆಯುತ್ತಾರೆ. ಈ ರೀತಿಯಾಗಿ, ಅವರು ಈ ಕೆಲಸಗಳಿಗಾಗಿ 30 ರಿಂದ 50 ಅಥವಾ 100 ರೂಪಾಯಿಗಳನ್ನು ಗಳಿಸುತ್ತಾರೆ.

 

 


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »