TOP STORIES:

FOLLOW US

Cancer: ಭಾರತದಲ್ಲಿ ಹೆಡ್​ &​ ನೆಕ್​ ಕ್ಯಾನ್ಸರ್​ ಪ್ರಕರಣ ಹೆಚ್ಚಳ: ಕಾರಣ ಇಲ್ಲಿದೆ!


ನವದೆಹಲಿ: ಭಾರತದಲ್ಲಿ ಹೆಡ್​ ಆಯಂಡ್​ ನೆಕ್​ ಕ್ಯಾನ್ಸರ್​ ಉಲ್ಬಣಕ್ಕೆ ಪ್ರಮುಖ ಕಾರಣ ತಂಬಾಕು ಮತ್ತು ಆಲ್ಕೋಹಾಲ್​ ಬಳಕೆ.

 

ಪ್ರತಿ ವರ್ಷ ವರ್ಲ್ಡ್​ ಹೆಡ್​ ಆಯಂಡ್​ ನೆಕ್​ ಕ್ಯಾನ್ಸರ್​ ಡೇ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಸಾರ್ವಜನಿಕರಲ್ಲಿ ಇಂಥ ಕ್ಯಾನ್ಸರ್​ ಕುರಿತು ಅರಿವು ಮೂಡಿಸುವ ಅಗತ್ಯವೂ ಇದೆ. ಇದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ರೂಪುಗೊಂಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ 3ನೇ ಸ್ಥಾನ: ಜಾಗತಿಕ ಕ್ಯಾನ್ಸರ್​ ಅವಲೋಕನ ಸಂಸ್ಥೆ ಅಂದಾಜಿಸಿದಂತೆ, 2020ರಲ್ಲಿ ಜಗತ್ತಿನಾದ್ಯಂತ 19.3 ಮಿಲಿಯನ್​ ಕ್ಯಾನ್ಸರ್​ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಭಾರತ 3ನೇ ಸ್ಥಾನದಲ್ಲಿದ್ದು, ಚೀನಾ ಮತ್ತು ಅಮೆರಿಕ ಮೊದಲೆರಡು ಸ್ಥಾನದಲ್ಲಿವೆ. ಒಟ್ಟಾರೆ ಜಾಗತಿಕವಾಗಿ ದಾಖಲಾಗಿರುವ ಹೆಡ್ ಆಯಂಡ್​ ನೆಕ್​​ ಕ್ಯಾನ್ಸರ್​ನ ಶೇ 67.5ರಷ್ಟು ಪ್ರಕರಣಗಳ ಪೈಕಿ ಏಷ್ಯಾದಲ್ಲೇ ಹೆಚ್ಚು ವರದಿಯಾಗಿದ್ದು, ಭಾರತದಲ್ಲಿ ಶೇ 30 ಪ್ರಕರಣಗಳು ಕಂಡುಬಂದಿವೆ. ವಾರ್ಷಿಕವಾಗಿ, ಭಾರತದಲ್ಲಿ ಸರಿಸುಮಾರು 5,00,000 ಕ್ಯಾನ್ಸರ್​ ಪ್ರಕರಣಗಳು ದಾಖಲಾಗುತ್ತಿದ್ದು, 1,25,000 ಜನರು ಸಾವನ್ನಪ್ಪುತ್ತಿದ್ದಾರೆ.

ವೈದ್ಯರು ಹೇಳುವುದೇನು?: ಹೆಡ್​ ಆಯಂಡ್​ ನೆಕ್​ ಕ್ಯಾನ್ಸರ್​ ಎಂಬುದು ಸಾಮಾನ್ಯವಾಗಿ ನಾಲಿಗೆ, ಬಾಯಿ ಮತ್ತು ಗಂಟಲಿನ ಭಾಗದಲ್ಲಿ ಪತ್ತೆಯಾಗುತ್ತದೆ. ಓರೊಫಾರ್ನೆಕ್ಸ್​, ನಾಸೊಫಾರ್ನೆಕ್ಸ್​, ಹೈಪೋಫಾರ್ನೆಕ್ಸ್​, ಲಾಲಾರಸ ಗ್ರಂಥಿ, ಮೂಗಿನ ಭಾಗ ಮತ್ತು ಧ್ವನಿ ಪೆಟ್ಟಿಗೆ ಸೇರಿದಂತೆ ಮುಂತಾದವುಗಳನ್ನು ಒಳಗೊಂಡಿದೆ. ಈ ಕ್ಯಾನ್ಸರ್​​ ಅನೇಕ ಅಪಾಯದ ಅಂಶಗಳನ್ನು ಹೊಂದಿದೆ. ಇಂಥ ಕ್ಯಾನ್ಸರ್​​ಗೆ ತಂಬಾಕು ಮತ್ತು ಆಲ್ಕೋಹಾಲ್​ ಬಳಕೆ ಹೆಚ್ಚು ಕೊಡುಗೆ ನೀಡುತ್ತದೆ. ದೀರ್ಘಕಾಲದ ಧೂಮಪಾನ ಅಥವಾ ಗುಟ್ಕಾದಂತಹ ತಂಬಾಕು ಸೇವನೆ ಮತ್ತು ಆಲ್ಕೋಹಾಲ್​ ಸೇವನೆ ಕೋಶ ಮತ್ತು ಜೆನೆಟಿಕ್​ ಮ್ಯೂಟೆಷನ್​ ಹಾಳು ಮಾಡುತ್ತವೆ. ಇದು ಕ್ಯಾನ್ಸರ್​ ಉಲ್ಬಣಿಸುತ್ತದೆ ಎಂದು ಗುರುಗ್ರಾಮದ ಕ್ಯಾನ್ಸರ್​ ಇನ್ಸುಟಿಟ್ಯೂಟ್​ನ ವೈಸ್​ ಚೇರ್ಮಾನ್​ ಡಾ.ದೀಪಕ್​ ಸರಿನ್​ ತಿಳಿಸಿದ್ದಾರೆ.

ಭಾರತದಲ್ಲಿ ಸುಪಾರಿ ಸೇವನೆ ಮಾಡುವವರಲ್ಲಿ ಬಾಯಿಯೊಳಗಿನ ಚರ್ಮದ ಲೈನಿಂಗ್​ ಬದಲಾಗಿ ಅದೂ ಕೂಡ ಬಾಯಿ ಕ್ಯಾನ್ಸರ್​​ಗೆ ಕಾರಣವಾಗುತ್ತದೆ. ಇತ್ತೀಚೆಗೆ ಎಚ್​ಪಿವಿ ಸೋಂಕು ಕೂಡ ಗಂಟಲಿನ ಕ್ಯಾನ್ಸರ್​ನೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ಈ ವೈರಸ್​​ಗಳು ಓರಲ್​ ಸೆಕ್ಸ್​ ಅಥವಾ ಈ ರೀತಿಯ ಪರಿಣಾಮದಿಂದಲೂ ದೇಹ ಸೇರುತ್ತದೆ ಎಂದು ಅವರು ಹೇಳಿದ್ದಾರೆ.

ಇಂಥ ಕ್ಯಾನ್ಸರ್ ಲಕ್ಷಣಗಳೇನು?: ಕ್ಯಾನ್ಸರ್​.ನೆಟ್​ ವರದಿಯನುಸಾರು ಶೇ 70ರಿಂದ 80ರಷ್ಟು ಹೆಡ್​ ಆಯಂಡ್​ ನೆಕ್​ ಕ್ಯಾನ್ಸರ್​​ಗಳು ತಂಬಾಕು ಬಳಕೆಯೊಂದಿಗೆ ಸಂಬಂಧ ಹೊಂದಿದೆ. ಈ ಕ್ಯಾನ್ಸರ್​ ಅನ್ನು ಆರಂಭದಲ್ಲೇ ಪತ್ತೆ ಮಾಡುವುದರಿಂದ ಇದರಿಂದ ಚೇತರಿಕೆ ಹೊಂದುವ ಪ್ರಮಾಣ ಶೇ 80ರಿಂದ 90ರಷ್ಟಿದೆ. ಗಂಟಲು ಸೋರುವಿಕೆ, ಊತ, ನುಂಗಲು ಕಷ್ಟವಾಗುವುದು, ದೀರ್ಘ ಮೂಗು ಕಟ್ಟಿದ ಅನುಭವ, ಸೈನಸ್​ ಸೋಂಕು, ಬಾಯಿಯೊಳಗೆ ಕೆಂಪು ದದ್ದು ಇವುಗಳು ಈ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು. ಇಂಥ ಲಕ್ಷಣಗಳನ್ನು ಪತ್ತೆ ಮಾಡಿ ತಕ್ಷಣಕ್ಕೆ ಚಿಕಿತ್ಸೆ ಪಡೆಯುವುದು ಕೂಡ ನಿರ್ಣಾಯಕ ಎಂದು ವೈದ್ಯರು ತಿಳಿಸಿದ್ದಾರೆ.

ಪರೋಕ್ಷ ಧೂಮಪಾನಿಗಳಲ್ಲೂ ಹೆಡ್ ಆಯಂಡ್​ ನೆಕ್​ ಕ್ಯಾನ್ಸರ್​ ಅಭಿವೃದ್ಧಿ ಹೊಂದುತ್ತದೆ. ಆಲ್ಕೋಹಾಲ್​ ಕೂಡ ಇದಕ್ಕೆ ಅಪಾಯದ ಅಂಶವೇ. ಕ್ಯಾನ್ಸರ್​ನ ಪ್ರಾಥಮಿಕ ಚಿಕಿತ್ಸೆಯಲ್ಲಿ ಸರ್ಜರಿ, ರೆಡಿಯೇಷನ್​​ ಥೆರಪಿ, ಕಿಮೋಥೆರಪಿ ಮಾಡಲಾಗುತ್ತದೆ. ಇಂಥ ಥೆರಪಿಗಳು ಕೆಲವು ಅಡ್ಡ ಪರಿಣಾಮವನ್ನೂ ಹೊಂದಿದ್ದು, ಇದರಿಂದ ಮಾತಾಡಲು ಅಥವಾ ನುಂಗಲು ಕಷ್ಟಪಡಬಹುದು. ನೋವು, ಅಹಿತಕರ ಅನುಭವ, ಆಯಾಸ, ಸುಸ್ತು, ಕೂದಲು ನಷ್ಟ, ಹಸಿವು ನಷ್ಟದಂತಹ ಸಮಸ್ಯೆ ಕಾಡಬಹುದು.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »