TOP STORIES:

FOLLOW US

Cancer: ಭಾರತದಲ್ಲಿ ಹೆಡ್​ &​ ನೆಕ್​ ಕ್ಯಾನ್ಸರ್​ ಪ್ರಕರಣ ಹೆಚ್ಚಳ: ಕಾರಣ ಇಲ್ಲಿದೆ!


ನವದೆಹಲಿ: ಭಾರತದಲ್ಲಿ ಹೆಡ್​ ಆಯಂಡ್​ ನೆಕ್​ ಕ್ಯಾನ್ಸರ್​ ಉಲ್ಬಣಕ್ಕೆ ಪ್ರಮುಖ ಕಾರಣ ತಂಬಾಕು ಮತ್ತು ಆಲ್ಕೋಹಾಲ್​ ಬಳಕೆ.

 

ಪ್ರತಿ ವರ್ಷ ವರ್ಲ್ಡ್​ ಹೆಡ್​ ಆಯಂಡ್​ ನೆಕ್​ ಕ್ಯಾನ್ಸರ್​ ಡೇ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಸಾರ್ವಜನಿಕರಲ್ಲಿ ಇಂಥ ಕ್ಯಾನ್ಸರ್​ ಕುರಿತು ಅರಿವು ಮೂಡಿಸುವ ಅಗತ್ಯವೂ ಇದೆ. ಇದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ರೂಪುಗೊಂಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ 3ನೇ ಸ್ಥಾನ: ಜಾಗತಿಕ ಕ್ಯಾನ್ಸರ್​ ಅವಲೋಕನ ಸಂಸ್ಥೆ ಅಂದಾಜಿಸಿದಂತೆ, 2020ರಲ್ಲಿ ಜಗತ್ತಿನಾದ್ಯಂತ 19.3 ಮಿಲಿಯನ್​ ಕ್ಯಾನ್ಸರ್​ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಭಾರತ 3ನೇ ಸ್ಥಾನದಲ್ಲಿದ್ದು, ಚೀನಾ ಮತ್ತು ಅಮೆರಿಕ ಮೊದಲೆರಡು ಸ್ಥಾನದಲ್ಲಿವೆ. ಒಟ್ಟಾರೆ ಜಾಗತಿಕವಾಗಿ ದಾಖಲಾಗಿರುವ ಹೆಡ್ ಆಯಂಡ್​ ನೆಕ್​​ ಕ್ಯಾನ್ಸರ್​ನ ಶೇ 67.5ರಷ್ಟು ಪ್ರಕರಣಗಳ ಪೈಕಿ ಏಷ್ಯಾದಲ್ಲೇ ಹೆಚ್ಚು ವರದಿಯಾಗಿದ್ದು, ಭಾರತದಲ್ಲಿ ಶೇ 30 ಪ್ರಕರಣಗಳು ಕಂಡುಬಂದಿವೆ. ವಾರ್ಷಿಕವಾಗಿ, ಭಾರತದಲ್ಲಿ ಸರಿಸುಮಾರು 5,00,000 ಕ್ಯಾನ್ಸರ್​ ಪ್ರಕರಣಗಳು ದಾಖಲಾಗುತ್ತಿದ್ದು, 1,25,000 ಜನರು ಸಾವನ್ನಪ್ಪುತ್ತಿದ್ದಾರೆ.

ವೈದ್ಯರು ಹೇಳುವುದೇನು?: ಹೆಡ್​ ಆಯಂಡ್​ ನೆಕ್​ ಕ್ಯಾನ್ಸರ್​ ಎಂಬುದು ಸಾಮಾನ್ಯವಾಗಿ ನಾಲಿಗೆ, ಬಾಯಿ ಮತ್ತು ಗಂಟಲಿನ ಭಾಗದಲ್ಲಿ ಪತ್ತೆಯಾಗುತ್ತದೆ. ಓರೊಫಾರ್ನೆಕ್ಸ್​, ನಾಸೊಫಾರ್ನೆಕ್ಸ್​, ಹೈಪೋಫಾರ್ನೆಕ್ಸ್​, ಲಾಲಾರಸ ಗ್ರಂಥಿ, ಮೂಗಿನ ಭಾಗ ಮತ್ತು ಧ್ವನಿ ಪೆಟ್ಟಿಗೆ ಸೇರಿದಂತೆ ಮುಂತಾದವುಗಳನ್ನು ಒಳಗೊಂಡಿದೆ. ಈ ಕ್ಯಾನ್ಸರ್​​ ಅನೇಕ ಅಪಾಯದ ಅಂಶಗಳನ್ನು ಹೊಂದಿದೆ. ಇಂಥ ಕ್ಯಾನ್ಸರ್​​ಗೆ ತಂಬಾಕು ಮತ್ತು ಆಲ್ಕೋಹಾಲ್​ ಬಳಕೆ ಹೆಚ್ಚು ಕೊಡುಗೆ ನೀಡುತ್ತದೆ. ದೀರ್ಘಕಾಲದ ಧೂಮಪಾನ ಅಥವಾ ಗುಟ್ಕಾದಂತಹ ತಂಬಾಕು ಸೇವನೆ ಮತ್ತು ಆಲ್ಕೋಹಾಲ್​ ಸೇವನೆ ಕೋಶ ಮತ್ತು ಜೆನೆಟಿಕ್​ ಮ್ಯೂಟೆಷನ್​ ಹಾಳು ಮಾಡುತ್ತವೆ. ಇದು ಕ್ಯಾನ್ಸರ್​ ಉಲ್ಬಣಿಸುತ್ತದೆ ಎಂದು ಗುರುಗ್ರಾಮದ ಕ್ಯಾನ್ಸರ್​ ಇನ್ಸುಟಿಟ್ಯೂಟ್​ನ ವೈಸ್​ ಚೇರ್ಮಾನ್​ ಡಾ.ದೀಪಕ್​ ಸರಿನ್​ ತಿಳಿಸಿದ್ದಾರೆ.

ಭಾರತದಲ್ಲಿ ಸುಪಾರಿ ಸೇವನೆ ಮಾಡುವವರಲ್ಲಿ ಬಾಯಿಯೊಳಗಿನ ಚರ್ಮದ ಲೈನಿಂಗ್​ ಬದಲಾಗಿ ಅದೂ ಕೂಡ ಬಾಯಿ ಕ್ಯಾನ್ಸರ್​​ಗೆ ಕಾರಣವಾಗುತ್ತದೆ. ಇತ್ತೀಚೆಗೆ ಎಚ್​ಪಿವಿ ಸೋಂಕು ಕೂಡ ಗಂಟಲಿನ ಕ್ಯಾನ್ಸರ್​ನೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ಈ ವೈರಸ್​​ಗಳು ಓರಲ್​ ಸೆಕ್ಸ್​ ಅಥವಾ ಈ ರೀತಿಯ ಪರಿಣಾಮದಿಂದಲೂ ದೇಹ ಸೇರುತ್ತದೆ ಎಂದು ಅವರು ಹೇಳಿದ್ದಾರೆ.

ಇಂಥ ಕ್ಯಾನ್ಸರ್ ಲಕ್ಷಣಗಳೇನು?: ಕ್ಯಾನ್ಸರ್​.ನೆಟ್​ ವರದಿಯನುಸಾರು ಶೇ 70ರಿಂದ 80ರಷ್ಟು ಹೆಡ್​ ಆಯಂಡ್​ ನೆಕ್​ ಕ್ಯಾನ್ಸರ್​​ಗಳು ತಂಬಾಕು ಬಳಕೆಯೊಂದಿಗೆ ಸಂಬಂಧ ಹೊಂದಿದೆ. ಈ ಕ್ಯಾನ್ಸರ್​ ಅನ್ನು ಆರಂಭದಲ್ಲೇ ಪತ್ತೆ ಮಾಡುವುದರಿಂದ ಇದರಿಂದ ಚೇತರಿಕೆ ಹೊಂದುವ ಪ್ರಮಾಣ ಶೇ 80ರಿಂದ 90ರಷ್ಟಿದೆ. ಗಂಟಲು ಸೋರುವಿಕೆ, ಊತ, ನುಂಗಲು ಕಷ್ಟವಾಗುವುದು, ದೀರ್ಘ ಮೂಗು ಕಟ್ಟಿದ ಅನುಭವ, ಸೈನಸ್​ ಸೋಂಕು, ಬಾಯಿಯೊಳಗೆ ಕೆಂಪು ದದ್ದು ಇವುಗಳು ಈ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು. ಇಂಥ ಲಕ್ಷಣಗಳನ್ನು ಪತ್ತೆ ಮಾಡಿ ತಕ್ಷಣಕ್ಕೆ ಚಿಕಿತ್ಸೆ ಪಡೆಯುವುದು ಕೂಡ ನಿರ್ಣಾಯಕ ಎಂದು ವೈದ್ಯರು ತಿಳಿಸಿದ್ದಾರೆ.

ಪರೋಕ್ಷ ಧೂಮಪಾನಿಗಳಲ್ಲೂ ಹೆಡ್ ಆಯಂಡ್​ ನೆಕ್​ ಕ್ಯಾನ್ಸರ್​ ಅಭಿವೃದ್ಧಿ ಹೊಂದುತ್ತದೆ. ಆಲ್ಕೋಹಾಲ್​ ಕೂಡ ಇದಕ್ಕೆ ಅಪಾಯದ ಅಂಶವೇ. ಕ್ಯಾನ್ಸರ್​ನ ಪ್ರಾಥಮಿಕ ಚಿಕಿತ್ಸೆಯಲ್ಲಿ ಸರ್ಜರಿ, ರೆಡಿಯೇಷನ್​​ ಥೆರಪಿ, ಕಿಮೋಥೆರಪಿ ಮಾಡಲಾಗುತ್ತದೆ. ಇಂಥ ಥೆರಪಿಗಳು ಕೆಲವು ಅಡ್ಡ ಪರಿಣಾಮವನ್ನೂ ಹೊಂದಿದ್ದು, ಇದರಿಂದ ಮಾತಾಡಲು ಅಥವಾ ನುಂಗಲು ಕಷ್ಟಪಡಬಹುದು. ನೋವು, ಅಹಿತಕರ ಅನುಭವ, ಆಯಾಸ, ಸುಸ್ತು, ಕೂದಲು ನಷ್ಟ, ಹಸಿವು ನಷ್ಟದಂತಹ ಸಮಸ್ಯೆ ಕಾಡಬಹುದು.


Share:

More Posts

Category

Send Us A Message

Related Posts

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share       ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »