TOP STORIES:

LIC ಯಲ್ಲಿ ಕೇವಲ 76 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ ₹10 ಲಕ್ಷ ಗಳಿಸುವ ಸುಲಭ ವಿಧಾನ


LIC Jeevan Anand Policy: ಕೇವಲ 76 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 10 ಲಕ್ಷ ಗಳಿಸುವ ಸುಲಭ ವಿಧಾನ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಯೋಜನೆ ಕೊನೆಯಲ್ಲಿ ಖಾತರಿಯ ಆದಾಯವನ್ನು ನೀಡಲಾಗುತ್ತದೆ.

LIC Scheme: ನಮಗೆ ಎಷ್ಟು ಆದಾಯ ಬರುತ್ತಿದೆ ಎನ್ನುವುದಕ್ಕಿಂತ ಅದರಲ್ಲಿ ನಾವು ಎಷ್ಟು ಹಣವನ್ನು ಉಳಿತಾಯ ಮಾಡುತ್ತಿದ್ದೇವೆ ಎನ್ನುವುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. 10 ಸಾವಿರ ರೂಪಾಯಿ ಆದಾಯ ಇದ್ದವನು 1 ಸಾವಿರ ರೂಪಾಯಿನಾದರೂ ಕೂಡಿಟ್ಟರೆ ಅವನು ಜಾಣ. ಲಕ್ಷಾಂತರ ರೂಪಾಯಿ ಆದಾಯ ಇದ್ದವನು 1 ರೂಪಾಯಿ ಕೂಡ ಕೂಡಿಡದೆ, ಎಲ್ಲವನ್ನೂ ಖುರ್ಚು ಮಾಡಿದರೆ ಆತ ನಿಜಕ್ಕೂ ಆರ್ಥಿಕ ಅಪಾಯದಲ್ಲಿದ್ದಾನೆ ಎಂದೇ ಅರ್ಥ. ಅದಕ್ಕಾಗಿ ಹಿರಿಯರು ಹಣ ಉಳಿತಾಯದ ಮಹತ್ವವನ್ನು ಒತ್ತಿ ಒತ್ತಿ ಹೇಳುವುದು. ಅದೇ ರೀತಿ ಹಣ ಉಳಿತಾಯದ ಹಾದಿಯಲ್ಲಿ ನೀವಿದ್ದರೆ ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಹಣ ಉಳಿತಾಯದ ಅತ್ತುತ್ತಮ ಯೋಜನೆ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಭಾರತೀಯ ಜೀವ ವಿಮಾ ನಿಗಮದಿಂ 10 ಲಕ್ಷ ಗಳಿಸಿ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಜೀವನ್ ಆನಂದ್ ಪಾಲಿಸಿ ವಿಶ್ವಾಸಾರ್ಹ ಹಾಗೂ ಹೂಡಿಕೆದಾರರಿಗೆ ದೊಡ್ಡ ಲಾಭವನ್ನು ನೀಡುವು ಯೋಜನೆಯಾಗಿದೆ. ನಾವು ಇಂದು ನಿಮಗೆ ಹೇಳಲಿರುವ LIC ಪಾಲಿಸಿ ಎರಡು ವಿಭಿನ್ನ ಬೋನಸ್‌ಗಳೊಂದಿಗೆ ಬರುತ್ತದೆ. 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಯೋಜನೆ ಕೊನೆಯಲ್ಲಿ ಖಾತರಿಯ ಆದಾಯವನ್ನು ನೀಡಲಾಗುತ್ತದೆ. ಪಾಲಿಸಿದಾರರ ಮರಣದ ಹೊಂದಿದಲ್ಲಿ ಸುರಕ್ಷತೆಯನ್ನು ಒದಗಿಸುತ್ತದೆ. ಪಾಲಿಸಿ ಅವಧಿಯ ಕೊನೆಯಲ್ಲಿ ಒಂದು ದೊಡ್ಡ ಮೊತ್ತವನ್ನು ಪಾವತಿಸಲಾಗುವುದು.

ಯೋಜನೆಯಲ್ಲಿ ಬೌನಸ್​​ ಪಡೆಯುವುದು ಹೇಗೆ?

ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮತ್ತು ಅದನ್ನು 15 ವರ್ಷಗಳವರೆಗೆ ಮುಂದುವರಿಸಿದರೆ ಬೋನಸ್ ಅನ್ನು ಸಹ ಪಡೆಯುತ್ತೀರಿ. ಅಂದರೆ ಪಾಲಿಸಿ ನೀತಿ ನಿಯಮಗಳ ಪ್ರಕಾರ, ಎಲ್‌ಐಸಿ ಯೋಜನೆಯಲ್ಲಿ ಕನಿಷ್ಠ ಮೊತ್ತವು 1 ಲಕ್ಷ ರೂ.ಯನ್ನು ನೀಡಲಿದೆ.

ಎಲ್ಐಸಿ ಜೀವನ್ ಆನಂದ್ ಪಾಲಿಸಿಯ ಪ್ರಮುಖ ವಿವರಗಳು

ಗರಿಷ್ಠ ವಯಸ್ಸು – 50 ವರ್ಷಗಳು

ಕನಿಷ್ಠ ಪಾಲಿಸಿ ಅವಧಿ – 15 ವರ್ಷಗಳು

ಗರಿಷ್ಠ ಪಾಲಿಸಿ ಅವಧಿ – 35 ವರ್ಷಗಳು

ಗರಿಷ್ಠ ಮೆಚ್ಯೂರಿಟಿ ವಯಸ್ಸು – 75 ವರ್ಷಗಳು

76 ರೂಪಾಯಿಂದ 10 ಲಕ್ಷ ಗಳಿಸುವುದು ಹೇಗೆ?

ಆರಂಭಿಕರಿಗಾಗಿ ನೀವು ಪ್ರತಿದಿನ ಸರಾಸರಿ 76 ರೂ. ಹೂಡಿಕೆ ಮಾಡಬೇಕಾಗುತ್ತದೆ. ನೀವು 24 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಮತ್ತು ಈ ಪಾಲಿಸಿಗೆ 5 ಲಕ್ಷ ರೂ. ಆಯ್ಕೆಯನ್ನು ಆರಿಸಿದರೆ ನೀವು 26 ರೂ, 815 ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡು, ನೀವು ದಿನಕ್ಕೆ 2,281 ರೂ. ಅಥವಾ 76 ರೂ. ಮುಂದಿನ 21 ವರ್ಷಗಳಲ್ಲಿ ಪಾಲಿಸಿಯು ಪಕ್ವವಾದ ನಂತರ, ಮತ್ತು ನೀವು ಹೂಡಿಕೆಯನ್ನು ಮುಂದುವರಿಸಿದರೆ, ನಿಮ್ಮ ಒಟ್ಟು ಮೊತ್ತವು ಸುಮಾರು 5,63,705 ಆಗಿರುತ್ತದೆ. ನೀವು ಸ್ವೀಕರಿಸುವ ಬೋನಸ್‌ಗೆ ಇದನ್ನು ಸೇರಿಸಿ ಮತ್ತು ಮುಕ್ತಾಯದ ಸಮಯದಲ್ಲಿ ನಿಮ್ಮ ಮೊತ್ತವು ಸುಮಾರು 10,33,000 ಆಗಿರುತ್ತದೆ.

ವಂಚಕರಿರುತ್ತಾರೆ ಎಚ್ಚರ..!

ಇನ್ನು ಈ ರೀತಿ ಪಾಲಿಸಿ ಹೊಂದಿರುವವರು ಮೋಸದ ಜಾಲಗಳಿಗೆ ಬಲಿಯಾಗುವ ಪ್ರಕರಣಗಳು ಹೆಚ್ಚಾಗಿದೆ. ವಂಚಕರು ಎಲ್‌ಐಸಿಯ ಪಾಲಿಸಿದಾರರ ಬಳಿ ತಾವು ವಿಮಾ ನಿಯಂತ್ರಕರ (IRDAI) ಅಧಿಕಾರಿ ಅಥವಾ ಎಲ್‌ಐಸಿಯ ಉದ್ಯೋಗಿ ಎಂದು ಹೇಳಿಕೊಂಡು ಫೋನ್​​ ಮಾಡಿ ವಂಚಿಸುತ್ತಿದ್ದಾರೆ.

ಈ ವಂಚಕರು ಮೊದಲು ಎಲ್‌ಐಸಿ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ನಿಮ್ಮಿಂದ ಮಾಹಿತಿ ಪಡೆದು ನಿಮ್ಮ ಖಾತೆಯಿಂದ ಹಣವನ್ನು ತೆಗೆಯುತ್ತಾರೆ. ಆಗಾಗ್ಗೆ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಐಸಿ ತನ್ನ ಗ್ರಾಹಕರನ್ನು ಈ ವಂಚನೆಯಿಂದ ರಕ್ಷಿಸಲು ಎಚ್ಚರಿಕೆಯನ್ನು ನೀಡಿದೆ. ಎಲ್ಐಸಿ ತನ್ನ ಗ್ರಾಹಕರಿಗೆ ಯಾವುದೇ ಪಾಲಿಸಿಯನ್ನು ಯಾವುದೇ ಗ್ರಾಹಕರಿಗೆ ಒಪ್ಪಿಸಲು ಸೂಚಿಸುವುದಿಲ್ಲ ಎಂದು ಹೇಳಿದೆ. ಇಂತಹ ಸಂಶಯಾಸ್ಪದ ಕರೆಗಳನ್ನು ತೆಗೆದುಕೊಳ್ಳದಂತೆ ಗ್ರಾಹಕರಿಗೆ ಕಂಪನಿ ಮನವಿ ಮಾಡಿದೆ. ಗ್ರಾಹಕರು ತಮ್ಮ ಪಾಲಿಸಿಯನ್ನು LIC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬೇಕು ಎಂದು ಕಂಪನಿ ಹೇಳುತ್ತಿದೆ.


Related Posts

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »