TOP STORIES:

LIC ಯಲ್ಲಿ ಕೇವಲ 76 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ ₹10 ಲಕ್ಷ ಗಳಿಸುವ ಸುಲಭ ವಿಧಾನ


LIC Jeevan Anand Policy: ಕೇವಲ 76 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 10 ಲಕ್ಷ ಗಳಿಸುವ ಸುಲಭ ವಿಧಾನ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಯೋಜನೆ ಕೊನೆಯಲ್ಲಿ ಖಾತರಿಯ ಆದಾಯವನ್ನು ನೀಡಲಾಗುತ್ತದೆ.

LIC Scheme: ನಮಗೆ ಎಷ್ಟು ಆದಾಯ ಬರುತ್ತಿದೆ ಎನ್ನುವುದಕ್ಕಿಂತ ಅದರಲ್ಲಿ ನಾವು ಎಷ್ಟು ಹಣವನ್ನು ಉಳಿತಾಯ ಮಾಡುತ್ತಿದ್ದೇವೆ ಎನ್ನುವುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. 10 ಸಾವಿರ ರೂಪಾಯಿ ಆದಾಯ ಇದ್ದವನು 1 ಸಾವಿರ ರೂಪಾಯಿನಾದರೂ ಕೂಡಿಟ್ಟರೆ ಅವನು ಜಾಣ. ಲಕ್ಷಾಂತರ ರೂಪಾಯಿ ಆದಾಯ ಇದ್ದವನು 1 ರೂಪಾಯಿ ಕೂಡ ಕೂಡಿಡದೆ, ಎಲ್ಲವನ್ನೂ ಖುರ್ಚು ಮಾಡಿದರೆ ಆತ ನಿಜಕ್ಕೂ ಆರ್ಥಿಕ ಅಪಾಯದಲ್ಲಿದ್ದಾನೆ ಎಂದೇ ಅರ್ಥ. ಅದಕ್ಕಾಗಿ ಹಿರಿಯರು ಹಣ ಉಳಿತಾಯದ ಮಹತ್ವವನ್ನು ಒತ್ತಿ ಒತ್ತಿ ಹೇಳುವುದು. ಅದೇ ರೀತಿ ಹಣ ಉಳಿತಾಯದ ಹಾದಿಯಲ್ಲಿ ನೀವಿದ್ದರೆ ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಹಣ ಉಳಿತಾಯದ ಅತ್ತುತ್ತಮ ಯೋಜನೆ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಭಾರತೀಯ ಜೀವ ವಿಮಾ ನಿಗಮದಿಂ 10 ಲಕ್ಷ ಗಳಿಸಿ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಜೀವನ್ ಆನಂದ್ ಪಾಲಿಸಿ ವಿಶ್ವಾಸಾರ್ಹ ಹಾಗೂ ಹೂಡಿಕೆದಾರರಿಗೆ ದೊಡ್ಡ ಲಾಭವನ್ನು ನೀಡುವು ಯೋಜನೆಯಾಗಿದೆ. ನಾವು ಇಂದು ನಿಮಗೆ ಹೇಳಲಿರುವ LIC ಪಾಲಿಸಿ ಎರಡು ವಿಭಿನ್ನ ಬೋನಸ್‌ಗಳೊಂದಿಗೆ ಬರುತ್ತದೆ. 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಯೋಜನೆ ಕೊನೆಯಲ್ಲಿ ಖಾತರಿಯ ಆದಾಯವನ್ನು ನೀಡಲಾಗುತ್ತದೆ. ಪಾಲಿಸಿದಾರರ ಮರಣದ ಹೊಂದಿದಲ್ಲಿ ಸುರಕ್ಷತೆಯನ್ನು ಒದಗಿಸುತ್ತದೆ. ಪಾಲಿಸಿ ಅವಧಿಯ ಕೊನೆಯಲ್ಲಿ ಒಂದು ದೊಡ್ಡ ಮೊತ್ತವನ್ನು ಪಾವತಿಸಲಾಗುವುದು.

ಯೋಜನೆಯಲ್ಲಿ ಬೌನಸ್​​ ಪಡೆಯುವುದು ಹೇಗೆ?

ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮತ್ತು ಅದನ್ನು 15 ವರ್ಷಗಳವರೆಗೆ ಮುಂದುವರಿಸಿದರೆ ಬೋನಸ್ ಅನ್ನು ಸಹ ಪಡೆಯುತ್ತೀರಿ. ಅಂದರೆ ಪಾಲಿಸಿ ನೀತಿ ನಿಯಮಗಳ ಪ್ರಕಾರ, ಎಲ್‌ಐಸಿ ಯೋಜನೆಯಲ್ಲಿ ಕನಿಷ್ಠ ಮೊತ್ತವು 1 ಲಕ್ಷ ರೂ.ಯನ್ನು ನೀಡಲಿದೆ.

ಎಲ್ಐಸಿ ಜೀವನ್ ಆನಂದ್ ಪಾಲಿಸಿಯ ಪ್ರಮುಖ ವಿವರಗಳು

ಗರಿಷ್ಠ ವಯಸ್ಸು – 50 ವರ್ಷಗಳು

ಕನಿಷ್ಠ ಪಾಲಿಸಿ ಅವಧಿ – 15 ವರ್ಷಗಳು

ಗರಿಷ್ಠ ಪಾಲಿಸಿ ಅವಧಿ – 35 ವರ್ಷಗಳು

ಗರಿಷ್ಠ ಮೆಚ್ಯೂರಿಟಿ ವಯಸ್ಸು – 75 ವರ್ಷಗಳು

76 ರೂಪಾಯಿಂದ 10 ಲಕ್ಷ ಗಳಿಸುವುದು ಹೇಗೆ?

ಆರಂಭಿಕರಿಗಾಗಿ ನೀವು ಪ್ರತಿದಿನ ಸರಾಸರಿ 76 ರೂ. ಹೂಡಿಕೆ ಮಾಡಬೇಕಾಗುತ್ತದೆ. ನೀವು 24 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಮತ್ತು ಈ ಪಾಲಿಸಿಗೆ 5 ಲಕ್ಷ ರೂ. ಆಯ್ಕೆಯನ್ನು ಆರಿಸಿದರೆ ನೀವು 26 ರೂ, 815 ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡು, ನೀವು ದಿನಕ್ಕೆ 2,281 ರೂ. ಅಥವಾ 76 ರೂ. ಮುಂದಿನ 21 ವರ್ಷಗಳಲ್ಲಿ ಪಾಲಿಸಿಯು ಪಕ್ವವಾದ ನಂತರ, ಮತ್ತು ನೀವು ಹೂಡಿಕೆಯನ್ನು ಮುಂದುವರಿಸಿದರೆ, ನಿಮ್ಮ ಒಟ್ಟು ಮೊತ್ತವು ಸುಮಾರು 5,63,705 ಆಗಿರುತ್ತದೆ. ನೀವು ಸ್ವೀಕರಿಸುವ ಬೋನಸ್‌ಗೆ ಇದನ್ನು ಸೇರಿಸಿ ಮತ್ತು ಮುಕ್ತಾಯದ ಸಮಯದಲ್ಲಿ ನಿಮ್ಮ ಮೊತ್ತವು ಸುಮಾರು 10,33,000 ಆಗಿರುತ್ತದೆ.

ವಂಚಕರಿರುತ್ತಾರೆ ಎಚ್ಚರ..!

ಇನ್ನು ಈ ರೀತಿ ಪಾಲಿಸಿ ಹೊಂದಿರುವವರು ಮೋಸದ ಜಾಲಗಳಿಗೆ ಬಲಿಯಾಗುವ ಪ್ರಕರಣಗಳು ಹೆಚ್ಚಾಗಿದೆ. ವಂಚಕರು ಎಲ್‌ಐಸಿಯ ಪಾಲಿಸಿದಾರರ ಬಳಿ ತಾವು ವಿಮಾ ನಿಯಂತ್ರಕರ (IRDAI) ಅಧಿಕಾರಿ ಅಥವಾ ಎಲ್‌ಐಸಿಯ ಉದ್ಯೋಗಿ ಎಂದು ಹೇಳಿಕೊಂಡು ಫೋನ್​​ ಮಾಡಿ ವಂಚಿಸುತ್ತಿದ್ದಾರೆ.

ಈ ವಂಚಕರು ಮೊದಲು ಎಲ್‌ಐಸಿ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ನಿಮ್ಮಿಂದ ಮಾಹಿತಿ ಪಡೆದು ನಿಮ್ಮ ಖಾತೆಯಿಂದ ಹಣವನ್ನು ತೆಗೆಯುತ್ತಾರೆ. ಆಗಾಗ್ಗೆ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಐಸಿ ತನ್ನ ಗ್ರಾಹಕರನ್ನು ಈ ವಂಚನೆಯಿಂದ ರಕ್ಷಿಸಲು ಎಚ್ಚರಿಕೆಯನ್ನು ನೀಡಿದೆ. ಎಲ್ಐಸಿ ತನ್ನ ಗ್ರಾಹಕರಿಗೆ ಯಾವುದೇ ಪಾಲಿಸಿಯನ್ನು ಯಾವುದೇ ಗ್ರಾಹಕರಿಗೆ ಒಪ್ಪಿಸಲು ಸೂಚಿಸುವುದಿಲ್ಲ ಎಂದು ಹೇಳಿದೆ. ಇಂತಹ ಸಂಶಯಾಸ್ಪದ ಕರೆಗಳನ್ನು ತೆಗೆದುಕೊಳ್ಳದಂತೆ ಗ್ರಾಹಕರಿಗೆ ಕಂಪನಿ ಮನವಿ ಮಾಡಿದೆ. ಗ್ರಾಹಕರು ತಮ್ಮ ಪಾಲಿಸಿಯನ್ನು LIC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬೇಕು ಎಂದು ಕಂಪನಿ ಹೇಳುತ್ತಿದೆ.


Related Posts

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »