TOP STORIES:

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು ವೈಧ್ಯಕೀಯ ನೆರವು ನೀಡುವುದಲ್ಲದೆ ಬಿಲ್ಲವ ಸಮಾಜದ ವತಿಯಿಂದ ವೈಧ್ಯಕೀಯ ಕಾಲೇಜಿನ ಅಗತ್ಯತೆಯನ್ನು ಅಲ್ಲಿ ನೆರೆದವರೆಲ್ಲರಿಗೆ ಮನವರಿಕೆ ಮಾಡಿದಲ್ಲದೆ ಶೀಘ್ರವೇ ಅದರ ಬಗ್ಗೆ ಕಾರ್ಯಪ್ರವರ್ತರಾಗಲು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಮಂಡಳಿಗೆ ವೈಧ್ಯಕೀಯ ಸಂಸ್ಥೆ ಯ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಬೇಕೆಂದು ಮನವಿ ನೀಡಿ ಒತ್ತಾಯಿಸಲಾಗುವುದು ಇದಕ್ಕೆ ಶಕ್ತಿ ಮೀರಿ ಆರ್ಥಿಕ ಸಹಾಯಕ್ಕೆ ದೇಶ ವಿದೇಶದಲ್ಲಿರುವ ಎಲ್ಲಾ ಬಿಲ್ಲವ ಸಂಘಗಳು ಶ್ರಮ ಪಡಬೇಕು ಎಂದು ಸಂಘದ ಪ್ರಮುಖ ನಾಯಕರು ಹಾಗು ಸಮಾಜ ಸೇವಕರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ಮಹಾಸಭೆಯಲ್ಲಿ ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಪೂಜಾರಿ ಮಾತನಾಡುತ್ತ ನಾರಾಯಣ ಗುರುಗಳ ಪ್ರೇರಣೆಯಂತೆ ನಾವು ಮತ್ತು ಎಲ್ಲಾ ಬಿಲ್ಲವ ಸಂಘಗಳು ಸಮಾಜದ ಏಳಿಗೆಗೆ ಶ್ರಮಿಸೋಣ ವಿದ್ಯೆಗೆ ಹೆಚ್ಚು ಪ್ರೋತ್ಸಹ ನೀಡುವುದರೊಂದಿಗೆ ಸಮಾಜದ ನಮ್ಮ ಯುವಕರು ವಿದ್ಯೆ ಯಿಂದ ವಂಚಿತರಾಗದಂತೆ ಹಾಗು ಆರೋಗ್ಯದ ಬಗ್ಗೆ, ಹೆಚ್ಚು ಗಮನಹರಿಸುವ ಬಗ್ಗೆ ಜಾಗ್ರತಿ ಮೂಡಿಸುವ ಕಾರ್ಯ ಆಗಬೇಕು ಎಂದರಲ್ಲದೆ , ವೈಧ್ಯಕೀಯ ಸಂಸ್ಥೆ ಯ ನಿರ್ಮಾಣಕ್ಕೆ ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿದ್ದ ಸುಂದರ್ ದಾಸ್ ಪೂಜಾರಿ, ವಿಶ್ವನಾಥ್ ಪೂಜಾರಿ ಯವರು ಸಂದರ್ಭೋಚಿತವಾಗಿ ಮಾತನಾಡಿದರು , ಹಾಗು ಯಕ್ಷಗಾನ ಭಾಗವತರಾದ ರೋಶನ್ ಕೋಟ್ಯಾನ್ ಮತ್ತು ಹಿರಿಯರಾದ ಆನಂದ ಪೂಜಾರಿ ಮಾರ್ಗದರ್ಶನ ನೀಡಿದರು.

ಹರೀಶ್ ಪೂಜಾರಿ, ಅರುಣ್ ಬಂಗೇರ, ಮನೋಹರ ಅಮಿನ್ , ಬಿಲ್ಲವ ವಾರಿಯರ್ಸ್ ನ್ಯೂಸ್ ತಂಡ ಹಾಗೂ ಮುಂತಾದವರ ಉಪಸ್ಥಿತಿಯಲ್ಲಿ 2025 – 26 ಸಾಲಿನ ನೂತನ ಸಮಿತಿ ರಚನೆ ಮಾಡಲಾಯಿತು.

ಯಶವಂತ್ ಸನಿಲ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ರೋಶನ್ ಕೋಟ್ಯಾನ್ ಸ್ವಾಗತಿಸಿ ಕೊನೆಯಲ್ಲಿ ಹರೀಶ್ ಪೂಜಾರಿ ವಂದಿಸಿದರು.

ಸೌದಿ ಬಿಲ್ಲವಾಸ್ ದಮ್ಮಾಮ್ ಸೌದಿ ಅರೇಬಿಯಾ.

ಗೌರವ ಸಲಹೆಗಾರರು:

ಶ್ರೀ ಶಂಕರ್ ಬಿಲ್ಲವ, ಸುದರ್ಶನ್ ಡಿ ಸನಿಲ್, ಶೇಖರ್ ಕೋಟ್ಯಾನ್, ಆನಂದ್ ಪೂಜಾರಿ, ಉಮೇಶ್ ಬಂಗೇರ, ಜಯ ಸುವರ್ಣ

ಗೌರವಾಧ್ಯಕ್ಷರು

ಶ್ರೀ ಸದಾಶಿವ ಪೂಜಾರಿ ಮತ್ತು ಯೋಗಿಶ್ ಡಿ ಪೂಜಾರಿ

ಅಧ್ಯಕ್ಷರು

ಶ್ರೀ. ಸತೀಶ್ ಕೆ ಅಂಚನ್ ಬಜಾಲ್

ಉಪಾಧ್ಯಕ್ಷರು

ಶ್ರೀ ವಿಶ್ವನಾಥ ಪೂಜಾರಿ ಮತ್ತು

ಶ್ರೀ ಸುಂದರ್ ದಾಸ್ ಪೂಜಾರಿ

ಪ್ರಧಾನ ಕಾರ್ಯದರ್ಶಿ

ಶ್ರೀ. ರೋಶನ್ ಕೋಟ್ಯಾನ್

ಜೊತೆ ಕಾರ್ಯದರ್ಶಿಗಳು

ಶ್ರೀ. ರಾಜೇಶ್ ತೋನ್ಸೆ &

ಶ್ರೀ. ಪ್ರವೀಣ್ ಪೂಜಾರಿ

ಸಂಘಟನಾ ಕಾರ್ಯದರ್ಶಿ

ಶ್ರೀಮತಿ. ಚೇತನ ಎಸ್ ಪೂಜಾರಿ

ಖಜಾಂಚಿ

ಶ್ರೀ. ಹರೀಶ್ ಕುಮಾರ್ ಪೂಜಾರಿ ತೋನ್ಸೆ

ಜೊತೆ ಖಜಾಂಚಿ

ಶ್ರೀಮತಿ. ಪ್ರೀತಾ ಎ ಬಂಗೇರ

ಸಾಂಸ್ಕೃತಿಕ ಕಾರ್ಯದರ್ಶಿ

ಶ್ರೀ. ಯಶವಂತ್ ಸನಿಲ್

ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ

ಶ್ರೀ. ಅಂಕಿತ್ ಪೂಜಾರಿ ಎರ್ಮಾಳ್

ಕ್ರೀಡಾ ಕಾರ್ಯದರ್ಶಿ

ಶ್ರೀ ಸಂತೋಷ ಜೆಡಿ ಪೂಜಾರಿ

ಜೊತೆ ಕ್ರೀಡಾ ಕಾರ್ಯದರ್ಶಿ

ಶ್ರೀ ಗಣೇಶ್ ಪಾಲನ್.

ಪ್ರಚಾರ ಸಮಿತಿ ಪ್ರಮುಖ್

ಶ್ರೀ ಪುಷ್ಪರಾಜ್ ಗಡಿಯಾರ್

ಪ್ರಚಾರ ಸಮಿತಿ ಸದಸ್ಯರು

ಶ್ರೀಮತಿ. ಸುನಿತಾ ಸುವರ್ಣ, ಶ್ರೀ. ಸಂದೀಪ್ ಸಾಲಿಯಾನ್, ಪ್ರವೀಣ್ ಪೂಜಾರಿ ಮತ್ತು ಅಂಕಿತ್ ಪಿ ಎರ್ಮಾಳ್.

ಕಾರ್ಯಕಾರಿ ಸಮಿತಿ ಸದಸ್ಯರು:

ಅರುಣ್ ಬಂಗೇರ, ಮನೋಹರ್ ಅಮೀನ್, ದಕ್ಷಯ ಪೂಜಾರಿ, ದೀಕ್ಷಿತ್ ಎಸ್ ಕೋಟ್ಯಾನ್, ಸೃುಜನ್ ಎಸ್ ಸನಿಲ್, ವಿದ್ಯಾಶ್ರೀ ಆರ್ ತೋನ್ಸೆ, ಭಾಗ್ಯ ಜ್ಯೋತಿ ಹರೀಶ್, ಸುಚಿತ್ರ ಎಸ್ ಬಜಾಲ್, ದೀಕ್ಷಾ ಆರ್ ಕೋಟ್ಯಾನ್.


Related Posts

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »