TOP STORIES:

ಅಮೇರಿಕಾದ ನೆಲದಲ್ಲಿ, ಭಾರತದ ಪ್ರಧಾನಿಗೆ ಆತಿಥ್ಯದ ಜವಾಬ್ದಾರಿಯನ್ನು ವಹಿಸಿಕೊಂಡ ತುಳುನಾಡ ಮನೆ ಮಗಳು ಸುಮಲ್ ಕೋಟ್ಯಾನ್


ಈ ತುಳುನಾಡಿನ ಮಣ್ಣಿನ ಗುಣವೇ ಹಾಗೇ, ಅದೇಷ್ಟೋ ಸಾಧಕರನ್ನು,ಉದ್ಯಮಿಗಳನ್ನು ಜಗತ್ತಿಗೆ ಬಳುವಳಿಯಾಗಿ ಕೊಟ್ಟ ಪುಣ್ಯ ಭೂಮಿ ಇದು. ಕೆಲವರು ಸದ್ದು ಮಾಡಿದರು,ಇನ್ನು ಕೆಲವರು ತನ್ನ ಕಾರ್ಯದಿಂದಲೇ ತನ್ನತ್ತ ತಿರುಗುವಂತೆ ಮಾಡಿದರು ಎಂಬುದನ್ನು ಹೇಳಲು ಯಾವುದೇ ಅಂಜಿಕೆಯಿಲ್ಲ.ಇಂದು ತುಳುನಾಡಿನ ಮನೆ ಮಗಳ ಸಣ್ಣ ಪರಿಚಯವನ್ನು ನಿಮ್ಮ ಎದುರಿಗೆ ತರಲೇಬೇಕು ಅನಿಸಿತು. ನಮ್ಮ ಪ್ರಧಾನಿಯಾದ ನರೇಂದ್ರ ಮೋದಿಯವರು ಇತ್ತೀಚೆಗೆ ಅಮೇರಿಕದ ಪ್ರವಾಸವನ್ನು ಕೈಗೊಂಡಿದ್ದರು.

ಪ್ರಧಾನಿ ಮತ್ತು ಭಾರತದ ಗಣ್ಯ ವ್ಯಕ್ತಿಗಳ ಆತಿಥ್ಯದ ಜವಾಬ್ದಾರಿಯನ್ನು ನಮ್ಮ ಕರಾವಳಿಯ ಆನಂದ್ ರೆಸ್ಟೋರೆಂಟ್ ಗೆ(ಆನಂದ್ ಪೂಜಾರಿ) ನೀಡಲಾಗಿತ್ತು. ಇವರು ಕ್ಯಾಪಿಟಲ್ ಹಿಲ್ ಮತ್ತು ವೈಟ್ ಹೌಸ್ಸ್ ಗೆ ಭಾರತೀಯ ಶೈಲಿಯ ಆಹಾರ ಕ್ರಮಕ್ಕೆ ಗುತ್ತಿಗೆ ಪಡೆದ ನಮ್ಮ ಹೆಮ್ಮೆಯ ಕರಾವಳಿಗರು. ಈ ಸಂದರ್ಭದಲ್ಲಿ ಸುಮಲ್ ಕೋಟ್ಯಾನ್ ಅವರು ನರೇಂದ್ರ ಮೋದಿ ಮತ್ತು ಗಣ್ಯ ವ್ಯಕ್ತಿಗಳಿಗೆ ಭಾರತೀಯ ಆತಿಥ್ಯ ನೀಡುವ ಜವಾಬ್ದಾರಿಯ ಹೊಣೆಯನ್ನು ಇವರು ವಹಿಸಿಕೊಂಡಿದ್ದರು.ಕರಾವಳಿಯ ಒಬ್ಬಳು ಮನೆ ಮಗಳು ದೂರದ ಅಮೆರಿಕದಲ್ಲಿ ಇಂತಹ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿದುದು ನಮಗೆಲ್ಲರಿಗೂ ಹೆಮ್ಮಯ ವಿಷಯವೇ. 2017 ಮತ್ತು 2021ರಲ್ಲೀ ಎರಡು ಬಾರಿ ಈ ಕಾರ್ಯವನ್ನು ಮಾಡಿದ ಸುಮಲ್ ಕೋಟ್ಯಾನ್ ರವರು ಮಂಗಳೂರಿನ ಮೇರಿ ಹಿಲ್ ನಲ್ಲಿ ಜನಿಸಿದವರು.

ಗೋಪಾಲ ಪೂಜಾರಿ ಮತ್ತು ಸುಫಲ ರವರ ಮಗಳಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಅನಾಸ್ ನಲ್ಲಿ ಪ್ರೌಢ ಶಿಕ್ಷಣವನ್ನು ಕಾರ್ಮಲ್ ಶಾಲೆಯಲ್ಲಿ ಪೂರ್ಣಗೊಳಿಸಿದರು.ಹಾಗೆಯೇ ಪಿ.ಯು.ಸಿ.ಯನ್ನು ಸೈಂಟ್ ಅಲೋಶಿಸ್,ಬಯೋಟೆಕ್ನಾಲಜಿ ಎಂಜಿನಿಯರಿಂಗ್ ನ್ನು ನಿಟ್ಟೆ ಮಂಗಳೂರಿನಲ್ಲಿ ಮುಗಿಸಿದರು.

ಅಮೆರಿಕದಲ್ಲಿ 9 ವರುಷದಿಂದ ವಾಸವಾಗಿರುವ ಸುಮಲ್ ಅವರು ಸಂದೀಪ್ ಕೋಟ್ಯಾನ್ ರವರನ್ನು ವಿವಾಹವಾಗಿ ತಮ್ಮ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ.ಹಾಗೆಯೇ ಎರಡು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ.ಹೊಟೇಲ್ ಉದ್ಯಮದಲ್ಲಿ ಅತೀವ ಆಸಕ್ತಿ ಇದ್ದ ಇವರು ಆನಂದ್ ಪೂಜಾರಿಯವರ ಆನಂದ್ ರೆಸ್ಟೋರೆಂಟ್ ನ ಜೊತೆ ಸೇರಿದರು,ಆನಂದ್ ರೆಸ್ಟೋರೆಂಟ್ 4 ಬಾರಿ ಪ್ರಧಾನಿ ಮತ್ತು ಭದ್ರತ ದಳದ ಆತಿಥ್ಯವನ್ನು ವಹಿಸಿಕೊಂಡ ಹೆಮ್ಮೆ ಇವರದು.

ಮೋದಿಯವರು ಸುಮಲ್ ಕೋಟ್ಯಾನ್ ಜೋತೆ ಹಂಚಿಕೊಂಡ ಮಾತು:

ಪ್ರಧಾನಿ ಮೋದಿಯವರು “ಮಗಳೇ” ಎಂದು ಕರೆಯುತ್ತಿದ್ದರಂತೆ, ಖುದ್ದಾಗಿ ಮೋದಿಯವರೇ ಕಳೆದ ಕಾರ್ಯಕ್ರಮದಲ್ಲಿ (2017) ನೀವೇ ಇದ್ದುದು ಅಲ್ಲವೇ ಎಂದು ಕೇಳಿದರಂತೆ. ಹಾಗೆಯೇ ಮಂಗಳೂರು ಎಂದಾಗ ಕರ್ನಾಟಕ ಎಂಬುದನ್ನು ಹೇಳಿದರಂತೆ.

ಒಬ್ಬ ಮಹಿಳೆಯಾಗಿ ಅಷ್ಟು ದೊಡ್ಡ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಕರಾವಳಿಗರ ಪಾಲಿಗೆ ಹೆಮ್ಮೆಯ ವಿಷಯವೇ. ಪ್ರಧಾನಿ ಮೋದಿಯವರ ಸರಳತೆಯನ್ನು ನೇರವಾಗಿ ಕಂಡ ಇವರು,ಇಂತಹ ಅವಕಾಶವನ್ನು ಪಡೆದು ಧನ್ಯನಾದೆ ಎನ್ನುತ್ತಾರೆ.

ವಿಜೇತ್ ಪೂಜಾರಿ ಶಿಬಾಜೆ.

 


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »