TOP STORIES:

FOLLOW US

ಅಮ್ಮ ಹಚ್ಚಿದ ದೀಪಾವಳಿಯ ಹಣತೆ..!! ಬರಹ: ವಿಜೇತ್ ಪೂಜಾರಿ ಶಿಬಾಜೆ


ಬೆಳಗ್ಗೆ ಮಾಡಿದ್ದ ಒಣಗಿದ ರೊಟ್ಟಿಯ ತುಂಡನ್ನು ಸೂರ್ಯ ಇನ್ನೇನೋ ಮುಳುಗುವ ಹಂತಕ್ಕೆ ಬಂದಿದ್ದಾನೆ ಎನ್ನುವ ಅವಸರದಲ್ಲಿ ಕೈಯಲ್ಲಿ ಹಿಡಿದ ಮಗ,ಅದರ ಜೊತೆಗೆ ಬಿಟ್ಟು ಬಿಡದ ಹಾಳಾದ ತಲೆ ನೋವಿಗೆ ಇಳಿ ಸಂಜೆ ಮೂರರ ಹೊತ್ತಿಗೆ ಮಾಡಿದ ತಾಯಿಯ ಕರಿ “ಟೀ”ಯ ಉಳಿದ ಒಂದಿಷ್ಟನ್ನೂ ಕುಡಿಯುತ್ತಾ, ಸೊಟ್ಟಗಿನ ಪಾತ್ರೆಯ ತಳದಲ್ಲಿ ಇದ್ದ ಟೀ ಪುಡಿಯನ್ನು ಬಾಯಿಯಿಂದ ಉಫ್ ಉಫ್ ಎಂದು ಬದಿಗೆ ಸರಿಸಿ ತುಂಡು ರೊಟ್ಟಿಯ ಒಂದು ಭಾಗವನ್ನು ಇನ್ನೇನು ಅದರಲ್ಲಿ ಅದ್ದಿ ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಅದೇ ಮರುಗಿದ ಧ್ವನಿಯ ಲಯದಲ್ಲಿ ಒಳಗಿಂದ ಕೇಳಿದ ಆ ಮಾತಿಗೆ ಇದ್ದ ರೊಟ್ಟಿಯನ್ನು ಮೂಲೆಯಲ್ಲಿ ಅರ್ಧ ಕಬ್ಬಿನ ಸರಪಳಿ ಮತ್ತು ಗೋಣಿ ಚೀಲದಲ್ಲಿ ಮಾಡಿದ ಹಗ್ಗದಲ್ಲಿ ಬಂಧಿಯಾದ ಟಾಮಿಗೆ ಕೂತಲ್ಲಿಂದ ಎಸೆದು ಬಿಟ್ಟ,ಆ ರೊಟ್ಟಿಯ ತುಂಡು ಪಕ್ಕದಲ್ಲಿ ಬೀಳದೆ ತನ್ನ ಕಾಲು ಮತ್ತು ಕೈಯಿಂದ ಹೇಗೋ ಮಾಡಿ ಮಣ್ಣಿನ ಮುದ್ದೆಯ ಜೊತೆಗೆ ಆ ರೊಟ್ಟಿಯ ತುಂಡನ್ನು ತಿಂದು ಬಿಟ್ಟ..!

ಮತ್ತೇ ಆ ಧ್ವನಿ ಬಿರುಸಾಗಿತ್ತು..

“ನಮ ನರಮನಿ ಲೆಕಾ ಏಪಾ ಆಪನ”(ನಾವು ಯಾವಾಗ ಮನುಷ್ಯರಂತೆ ಆಗುತ್ತಿವೋ).

ಇತ್ತ ಮಗ ಚಂದು ಅದೇನೋ ಟಾಮಿಯನ್ನು ನೋಡುತ್ತಿರುವಾಗ ಮುಂದಿನ ವಾರ ದೀಪಾವಳಿ ಅಲ್ಲವ ಎಂದು ಒಂದು ಸಲ ಆಲೋಚಿಸಿ,ಅಮ್ಮನಲ್ಲಿ “ಅಮ್ಮ ಬರ್ಪುನ ವಾರ ಪರ್ಬ ಅತ”(ಮುಂದಿನ ವಾರ ದೀಪಾವಳಿ ಅಲ್ಲವೇ) ಎಂದು ಬಳಲಿದ ಧ್ವನಿಯಲ್ಲಿ ಇತ್ತ ಹೇಳದಂತೆಯು ಇತ್ತ ಕಡೆ ಕೇಳದಂತೆಯು ಹೇಳಿ ಬಚ್ಚಲು ಮನೆಗೆ ಬಿಸಿ ನೀರು ಕಾಯಿಸಲು ನಿನ್ನೆ ಇಟ್ಟ ಚಿಮಿಣಿ ದೀಪದ ಕಡೆ ಕೈಯಾಡಿಸಿ ಮಸಿ ಬಳಿದ ಆ ದೀಪವನ್ನು ಎತ್ತಿಕೊಂಡು ಹೊರ ನಡೆದನು ಚಂದು..!

ಇತ್ತ ಕಡೆ ಚಂದುನ ಅಮ್ಮ ಒಲೆಯ ಮೇಲೆ ಮೂಲೆಯಲ್ಲಿ ಇದ್ದ ಮಣ್ಣಿನ ಪಾತ್ರೆ ಮಸಿಯಿಂದ ಕಪ್ಪಾಗಿದ್ದನ್ನು ತೊಳೆಯಲು ಎಟುಗದ ಕೈಯಿಂದ ಹೇಗೋ ಕೆಳಗೆ ಇಳಿಸಿ ಹೊರ ನಡೆದಳು.

ಬಚ್ಚಲು ಮನೆ ದಾಟಿ ಸಾಗುವಾಗ “ಒಂದು ಸಿಹಿ ಮಾಡಲು ಒಂದು ಬೆಲ್ಲ ಕೂಡ ಇಲ್ಲಿ ಇಲ್ಲ” ಎಂದು ಗೊಣಗುತ್ತಾ ಹಳೆಯ ಕಲ್ಲಿನ ಮೆಟ್ಟಿಲನ್ನು ದಾಟಿ ತೋಟದ ತೊರೆಯತ್ತ ಸಾಗಿದಳು.ಇತ್ತ ಕಡೆ ಚಂದು ಆ ಮಣ್ಣಿನ ಮಡಿಕೆಯನ್ನು ನೋಡುತ್ತಾ,ಕಳೆದ ಬಾರಿ ಅಕ್ಕ ಗಂಡನ ಮನೆಯಿಂದ ಬಂದಾಗ ರಫೀಕಜ್ಜನ ಅಂಗಡಿಯಿಂದ ತಂದ ಆ ಮಡಿಕೆಯ ಪಾತ್ರೆಗಳು,ಅದರ ಜೊತೆಗೆ ಒಂದಿಷ್ಟೂ ತಂದ ದಿನಸಿಯ ಹಣವನ್ನು ಮೊನ್ನೆ ಮೊನ್ನೆ ಇದ್ದ ಕರಿ ಮೆಣಸನ್ನು ಮಾರಿ ಕೊಟ್ಟು ಬಂದಾಗ,ಕೋಪದಿಂದ ಅಜ್ಜ ಬಾಯಿಗೆ ಬಂದ ಹಾಗೆ ಬೈದು ನೀನು ಇನ್ನು ಇಲ್ಲಿಗೆ ಬರಬೇಡ ಅಂದದ್ದು ಕೂಡ ನೆನಪಾಗಿ ಹೋಯಿತು..!

ಇಂತಹ ಕಷ್ಟದಿಂದ ಇನ್ಯಾವಾಗ ನಾವು ಬರುತ್ತೇವೆ ಎನ್ನುತ್ತಾ,ಈ ದೀಪಾವಳಿಗೂ ಅಕ್ಕಾ ಬರುವಳು ಎನ್ನುವ ಮಾಹಿತಿಯನ್ನೂ ಮೊನ್ನೆ ಮೊನ್ನೆ ಪಕ್ಕದ ಮನೆಯ ಗೌಡರು ಹೇಳಿದ್ದು ನೆನಪಾಯಿತು.!( ಅಲ್ಲಿ ಮಾತ್ರ ದೂರವಾಣಿಯ ಸಂಪರ್ಕ ಇತ್ತು.)

ಇತ್ತ ಕಡೆ ತಾಯಿ ಆ ಪಾತ್ರೆಯನ್ನು ಮೊದಲಿನಂತೆ ಸ್ವಚ್ಚ ಮಾಡಿ ಸುಸ್ತಾದ ದೇಹದಿಂದ ಮೆಟ್ಟಿಲು ಹತ್ತುತ್ತಾ ಮನೆಯ ಒಳಗಡೆ ನಡೆದಳು.

ಯಾವುದೋ ವಸ್ತುವನ್ನು ಹುಡುಕುತ್ತಾ ಸಾಗಿದ ಚಂದುನ ಅಮ್ಮನಿಗೆ ಎಂದೋ ಇಟ್ಟಿದ್ದ “ಹಣತೆ”ಯ ಕಟ್ಟು ಧೋಪ್ಪನೆ ಕೆಳಗೆ ಬಿದ್ದು ಬಿಡ್ತು..!
ಅದರಲ್ಲಿ ಒಡೆಯದೆ ಇದ್ದ ಎರಡೂ ಮೂರು ಹಣತೆಯನ್ನು ತೆಗೆದು ದೇವರ ಪಟದ ಹತ್ತಿರ ಇದ್ದ ನಿನ್ನೆ ಉಳಿದ ಬತ್ತಿಯ ತುಂಡನ್ನು ತೆಗೆದು ಎಣ್ಣೆ ಹಾಕಿ ಹಣತೆಯನ್ನು ಹಚ್ಚಿ ಬಿಟ್ಟಳು..!

ಇತ್ತ ಚಂದು ಆ ಹಣತೆಯ ಬೆಳಕನ್ನು ನೋಡಿ ಏನೋ ಖುಷಿಯಾಗಿ “ಅಮ್ಮ ಹಚ್ಚಿದ ದೀಪಾವಳಿಯ ಹಣತೆ “ಎಂದುಕೊಂಡು,ತೋಟದ ಬದಿಯಲ್ಲಿ ನೆಟ್ಟಿದ್ದ ಮರ ಗೆಣಸು ಎರಡು ಮೂರು ದಿನದಿಂದ ಹಂದಿ ಮತ್ತು ಹೆಗ್ಗಣದ ಬಾಯಿಗೆ ತುತ್ತಾಗಿದ್ದನು ಬೆಳಗ್ಗೆ ಕಂಡಿದ್ದನು.

ಸಿಕ್ಕಿದಷ್ಟು ಸಿಗಲಿ ಎಂಬ ಭಾವದಿಂದ ಹಳೆಯ ಹಾರೆಯನ್ನು ಕೊಟ್ಟಿಗೆಯ ಮೇಲಿಂದ ತೆಗೆದು ಹೆಗಲಿಗೆ ಇರಿಸಿ ಇನ್ನೇನೋ ಕತ್ತಲೆ ಆಗಬೇಕು ಎನ್ನುವ ಸಮಯದಲ್ಲೇ ಹೊರ ನಡೆದನು..

ಬರಹ: ವಿಜೇತ್ ಪೂಜಾರಿ ಶಿಬಾಜೆ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »