TOP STORIES:

FOLLOW US

ಇನ್ನು ಮುಂದೆ ಚೀನಾಗೆ ಸರಿಸಮನಾಗಿ ಭಾರತದಿಂದಲೇ ರವಾನೆಯಾಗಲಿದೆ ಆಪಲ್‌ ಐಫೋನ್‌


ಐಫೋನ್‌ ಎಂಬ ಅಮೆರಿಕದ ಉತ್ಪನ್ನ ಜಾಗತಿಕವಾಗಿ ಪ್ರತಿಷ್ಠೆಯ ವಿಷಯವಾಗಿರುವುದು ಗೊತ್ತೇ ಇದೆ. ಇದನ್ನು ಹೆಚ್ಚಿನಪ್ರಮಾಣದಲ್ಲಿ ಚೀನಾ ತಯಾರು ಮಾಡುತ್ತದೆ. ಚೀನಾದಲ್ಲಿ ಹೆಚ್ಚಿನ ಐಫೋನ್‌ ಕಂಪನಿಗಳಿವೆ. ಭಾರತದಲ್ಲೂ ಕೂಡ ಐಫೋನ್‌ಉತ್ಪಾದನಾ ಪಾಲುದಾರ ಫಾಕ್ಸ್‌ಕಾನ್‌ ಅದನ್ನು ತಯಾರಿಸುತ್ತಿದೆ. ಆದರೆ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಚೀನಾದಿಂದ ಜಗತ್ತಿನಮಾರುಕಟ್ಟೆಗೆ ರವಾನೆಯಾಗುವ ಐಫೋನ್‌ ಗಳ ಸಂಖ್ಯೆಗೆ ಸರಿಸಮನಾಗಿ ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ ಗಳನ್ನುಜಗತ್ತಿನ ಮಾರುಕಟ್ಟೆಗೆ ರವಾನಿಸುವಷ್ಟರ ಮಟ್ಟಿಗೆ ಭಾರತದ ಬೆಳೆದು ನಿಂತಿದೆ. ಹಿನ್ನೆಲೆಯಲ್ಲಿ ಜಾಗತಿಕ ಟೆಕ್‌ ದಿಗ್ಗಜ ಆಪಲ್‌ ತನ್ನ ಹೊಸ ಐಫೋನ್‌ ಆವೃತ್ತಿಯನ್ನು ಚೀನಾಗೆ ಸರಿಸಮನಾಗಿ ಭಾರತದಿಂದಲೇರವಾನಿಸಲು ಸಜ್ಜಾಗಿದೆ. . ಇದಕ್ಕೆ ಪೂರಕವೆಂಬಂತೆ ಪ್ರಮುಖ ಸೆಕ್ಯುರಿಟೀಸ್ ವಿಶ್ಲೇಷಕ, ಮಿಂಗ್ ಚಿ ಕುವೊ ಅವರು ತಮ್ಮ ಟ್ವೀಟ್ವರ್ನಲ್ಲಿಫಾಕ್ಸ್‌ಕಾನ್ ಶೀಘ್ರದಲ್ಲೇ ಚೀನಾದೊಂದಿಗೆ ಏಕಕಾಲದಲ್ಲಿ ಭಾರತದಿಂದ ಇತ್ತೀಚಿನ ಆವೃತ್ತಿಯ ಐಫೋನ್‌ಗಳನ್ನು ರವಾನಿಸಲುಪ್ರಾರಂಭಿಸಬಹುದುಎಂದಿದ್ದಾರೆ. ಮುಂದುವರೆದುಇತ್ತೀಚಿನ ಸಮೀಕ್ಷೆಯು ಭಾರತದಲ್ಲಿನ ಫಾಕ್ಸ್‌ಕಾನ್‌ನ ಐಫೋನ್ ಉತ್ಪಾದನಾಸೈಟ್ ಹೊಸ 6.1 ಐಫೋನ್ 14 ಅನ್ನು 2H22 ನಲ್ಲಿ ಮೊದಲ ಬಾರಿಗೆ ಚೀನಾದೊಂದಿಗೆ ಏಕಕಾಲದಲ್ಲಿ ಸಾಗಿಸುತ್ತದೆ ಎಂದುಸೂಚಿಸುತ್ತದೆಎಂದಿದ್ದಾರೆ.

ಕೆಲ ವರದಿಗಳ ಪ್ರಕಾರ ಆಪಲ್‌ ಕಂಪನಿಯು ಮುಂದಿನ ಪ್ರಮುಖ ಬೆಳವಣಿಗೆಯ ಚಾಲಕನಾಗಿ ಭಾರತವನ್ನು ನೋಡುತ್ತಿದ್ದು ಬೆಳವಣಿಗೆಯು ಚೈನೀಸ್ ಅಲ್ಲದ ಐಫೋನ್ ಉತ್ಪಾದನಾ ತಾಣವನ್ನು ನಿರ್ಮಿಸುವಲ್ಲಿ ಆಪಲ್‌ಗೆ ಪ್ರಮುಖ ಮೈಲಿಗಲ್ಲಾಗಿಪರಿಣಮಿಸಲಿದೆ.. ತನ್ನ ಪೂರೈಕೆಯ ಮೇಲೆ ಜಾಗತಿಕ ರಾಜಕೀಯ ಪರಿಣಾಮಗಳನ್ನು ಕಡಿಮೆ ಮಾಡಲು ಆಪಲ್‌ ಪ್ರಯತ್ನಿಸುತ್ತಿದ್ದುಮುಂದಿನ ಮಾರುಕಟ್ಟೆ ಚಾಲಕನಾಗಿ ಭಾರತವನ್ನು ಅದು ಎದುರು ನೋಡುತ್ತಿದೆ ಎಂದು ಮಿಂಗ್ ಚಿ ಕುವೊ ಕೂಡ ಟ್ವೀಟ್‌ಮಾಡಿದ್ದಾರೆ.

Apple 2017 ರಲ್ಲಿ iPhone SE ಯೊಂದಿಗೆ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. ಇದು ಪ್ರಸ್ತುತ iPhone 11, iPhone 12, ಮತ್ತು iPhone 13 ಸೇರಿದಂತೆ ಭಾರತದಲ್ಲಿ ತನ್ನ ಕೆಲವು ಅತ್ಯಾಧುನಿಕ ಐಫೋನ್‌ಗಳನ್ನು ತಯಾರಿಸುತ್ತಿದೆ. ಭಾರತದಲ್ಲಿ ಸುಮಾರು 20 ವರ್ಷಗಳ ಇತಿಹಾಸವನ್ನು ಆಪಲ್‌ ಹೊಂದಿದ್ದು 2020ರಲ್ಲಿ ಮೊದಲ ಆಪಲ್‌ ಆನ್‌ ಲೈನ್ ಸ್ಟೋರ್‌ಅನ್ನು ತೆರೆದಿದ್ದು ಮುಂದಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚಿನ ಆನ್‌ ಲೈನ್‌ ಸ್ಟೋರ್‌ ಗಳನ್ನು ತೆರೆಯಲು ಕಂಪನಿ ಯೋಚಿಸುತ್ತದೆ ಎಂದುಕೆಲ ವರದಿಗಳು ಹೇಳಿವೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »