TOP STORIES:

FOLLOW US

ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಹುಡುಗಿ ಕರ್ನಾಟಕದ ಕೋಟ್ಯಂತರ ಜನರ ಮನ ಗೆದ್ದು, ಪ್ರಸ್ತುತ ಮುಂಬೈ ಮಹಾನಗರದ ವಾಸಿಯಾಗಿದ್ದಾರೆ..ಹರಿಣಿ ನಿಲೇಶ್ ಪೂಜಾರಿ


ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಹುಡುಗಿ ಕರ್ನಾಟಕದ ಕೋಟ್ಯಂತರ ಜನರ ಮನ ಗೆದ್ದು, ಪ್ರಸ್ತುತ ಮುಂಬೈ ಮಹಾನಗರದವಾಸಿಯಾಗಿದ್ದಾರೆ.

ಹರಿಣಿ ನಿಲೇಶ್ ಪೂಜಾರಿ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ    ಶ್ರೀ ರಘುನಾಥ್ ಸುವರ್ಣ ಮತ್ತುಶ್ರೀಮತಿ ಶೋಭಾ ದಂಪತಿಯ ಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಶಾಲಾ ದಿನಗಳಲ್ಲಿಯೇ ಹರಿಣಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಪ್ರಶಸ್ತಿ ಪಡೆಯುತ್ತಿದ್ದರು.. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದಹರಿಣಿ.. 12 ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಹರಿಣಿ ನಿಲೇಶ್ ಪೂಜಾರಿ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ    ಶ್ರೀ ರಘುನಾಥ್ ಸುವರ್ಣ ಮತ್ತುಶ್ರೀಮತಿ ಶೋಭಾ ದಂಪತಿಯ ಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಶಾಲಾ ದಿನಗಳಲ್ಲಿಯೇ ಹರಿಣಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಪ್ರಶಸ್ತಿ ಪಡೆಯುತ್ತಿದ್ದರು.. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದಹರಿಣಿ.. 12 ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಮುಂದೆ ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ M. Com ಪದವಿದರೆಯಾದ ಹರಿಣಿ  ಅಲ್ಲಿಂದ ನೇರಾ ಹೊರಟಿದ್ದು ಕಲಾಜಗತ್ತಿಗೆ.. ಆವತ್ತಿನ ನಂಬರ್ ಒನ್ ಕನ್ನಡ ಕಾಮಿಡಿ ಸೀರಿಯಲ್ ಪಂಚರಂಗಿ ಪೊಂ ಪೊಂ ಸಾವಿರ ಸಂಚಿಕೆಗಳಲ್ಲಿ ಅಭಿನಯಿಸಿದ ಕೀರ್ತಿಹರಿಣಿಗಿದೆ.. ಅಲ್ಲಿಂದ ಮುಂದೆ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಇವರು ಮಾಡಿದ ಸರಸ್ವತಿ ದೇವಿಯ ಪಾತ್ರದಿಂದಜನಮಾನಸದಲ್ಲಿ ಹರಿಣಿ ಅಚ್ಚಳಿಯದೆ ಉಳಿದರು..ಮದುಬಾಲ, ಲಕ್ಷ್ಮಿ ಬಾರಮ್ಮ,ಮದುಮಗಳು ಹೀಗೆ ಸಾಲು ಸಾಲುಧಾರಾವಾಹಿಗಳಲ್ಲಿ ಹರಿಣಿ ಮಿಂಚಿದರು

ಕಂಚಿಲ್ದಾ ಬಾಲೆ ತುಳು ಸಿನಿಮಾದಲ್ಲಿ ಬಾಲಮಾಣಿಯಾಗಿ ಅಭಿನಯಿಸಿ ತುಳುಚಿತ್ರ ರಸಿಕರಿಗೆ ಮಾತ್ರವಲ್ಲದೆ ಆದ್ಯಾತ್ಮಿಕವಾದಿಗಳಿಗೂಹತ್ತಿರ

ವಾದರೂ.. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಬಾಜನವಾದ ಅರ್ಜುನ್ ವೆಡ್ಸ್ ಅಮೃತ ತುಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಕಾಣಿಸಿಕೊಂಡರು.. ಸುವರ್ಣ ಸೂಪರ್ ಜೋಡಿ, ಡ್ರೀಮ್ ಗರ್ಲ್ಸ್ ಹೀಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಬಾಗವಹಿಸಿದರು..

ಬೆಸ್ಟ್ ಕಾಮಿಡಿ ಆಕ್ಟ್ರೆಸ್ಸ್, ಬೆಸ್ಟ್ ಪರ್ಫಾರ್ಮೆನ್ಸ್, ಹೀಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಹರಿಣಿಯನ್ನ ಹುಡುಕಿ ಬಂದವು.

ಮುಂದೆ ಬಿಲ್ಲವ ಅಸೋಸಿಯೇಷನ್ ಮುಂಬೈ ಯುವ ವಿಭಾಗದ ಕಾರ್ಯಧ್ಯಕ್ಷರಾದ ನಿಲೇಶ್ ಪೂಜಾರಿ ಪಲಿಮಾರು ಅವರಬಾಳಸಂಗಾತಿಯಾದ ಹರಿಣಿ ಸದ್ಯಕ್ಕೆ ಕಲಾಜಗತ್ತಿನಿಂದ ದೂರವಿದ್ದರೂ ಕೂಡ ಸಾಮಾಜಿಕ ಸೇವೆಯಲ್ಲಿ ತಮ್ಮನ್ನ ತಾವುನಿರಂತರವಾಗಿ ತೊಡಗಿಸಿಕೊಂಡಿದ್ದಾರೆ..ಜೊತೆಗೆ ಬರವಣಿಗೆಯಲ್ಲಿಯೂ ಹರಿಣಿ ತಮ್ಮ ಛಾಪನ್ನ ಮೂಡಿಸುವತ್ತ ಹೆಜ್ಜೆ ಇಡುತ್ತಿದ್ದಾರೆ.. ಜೆಸಿಐ ಸಂಸ್ಥೆಯ ವಾರ್ಷಿಕ ಪುಸ್ತಕ ಚೈತನ್ಯ ಸಂಪಾದಕಿಯಾಗಿಯೂ ಹರಿಣಿ ಕಾರ್ಯನಿರ್ವಾಹಿಸಿದ್ದಾರೆ. ನಿರೂಪಕಿಯಾಗಿಯೂಹರಿಣಿಯ ಹೆಸರು ಪ್ರಸಿದ್ದಿಯಾಗಿದೆ.

2018ರಲ್ಲಿ ಮಡಿಕೇರಿಯಲ್ಲಿ ಸಂಭವಿಸಿದ ನೆರೆ ಸಂದರ್ಭದಲ್ಲಿ ಮಡಿಕೇರಿಯಲ್ಲಿಸ್ವಯಂಸೇವಕಿಯಾಗಿ ಕೆಲಸ ಮಾಡಿದ ಹರಿಣಿ, ತಮ್ಮ ಮಗಳು ಸಹನಿ ಮೊದಲ ವರ್ಷದ ಹುಟ್ಟುಹಬ್ಬವನ್ನ ಮಾನಸಿಕ ಭಿನ್ನಸಾಮರ್ಥ್ಯದ ಮಕ್ಕಳ ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ಮೆಚ್ಚುಗೆ ಪಡೆದಿದ್ದರು..

  ಸದ್ಯ ಸಹನಿ ಸ್ಟಾರ್ ಎಂಬ ಹೆಸರಿನ ಸಂಸ್ಥೆಯ ಮುಖ್ಯಸ್ತೆ ಯಾಗಿರುವ ಹರಿಣಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿಬಾಗಿಯಾಗುವ ಇಂಗಿತಾ ಹೊಂದಿದ್ದಾರೆ..ಹಲವಾರು ಬಾರಿ ರಕ್ತದಾನ ಶಿಬಿರ ಆಯೋಜನೆ ಮಾಡಿರುವ ಹರಿಣಿ ಸ್ವತಃ 24 ಬಾರಿರಕ್ತದಾನ ಮಾಡಿ ಸಾಮಾಜಿಕ ಕಳಕಳಿ ತೋರಿದ್ದಾರೆ..

   ಹರಿಣಿ ಅವರ ಯಶಸ್ಸಿಗೆ ಸ್ಫೂರ್ತಿಯಾದ ಅಪ್ಪ, ಅಮ್ಮ ಅಣ್ಣ ಹರಿಪ್ರಸಾದ್, ತಮ್ಮ ನಿತೇಶ್ ಜೊತೆಗೆ ಗಂಡ ನಿಲೇಶ್ ಪೂಜಾರಿಫಲಿಮಾರ್ ಅವರ ಸಹಕಾರಕ್ಕೆ ಅಭಾರಿಯಾಗಿರುವ ಹರಿಣಿ ಸದ್ಯ ಕಲಾ ಜಗತ್ತಿನಿಂದ ದೂರವಿದ್ದರೂ ಅವರೂ ನವರಾತ್ರಿಸಂದರ್ಭದಲ್ಲಿ ಮಾಡಿಸಿದ ಶಾರದೆಯಾ ಫೋಟೋಶೂಟ್ ಎಲ್ಲೆಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ..

  ಶಾರದೆಯ ಫೋಟೋಶೂಟ್ ಗಾಗಿ 21 ದಿನ ಕಟ್ಟುನಿಟ್ಟಿನ ವೃತ ಆಚರಿಸಿದ ಹರಿಣಿಗೆ ಶಾರದೆಯ ಆಶೀರ್ವಾದ ಮಡಿಲು ಸೇರಲಿಎನ್ನುವುದು ನಮ್ಮ ಆಶಯ..

ನವೀನ್ ಪಡ್ಡು ಇನ್ನಾ

ಕಮಲ  ಕಲಾ ವೇದಿಕೆ ಮುಂಬೈ


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »