TOP STORIES:

FOLLOW US

“ಕಸ್ತೂರಿ ಕನ್ನಡ” ಬಹರೈನ್ ಎಫ್.ಎಂ. ರೇಡಿಯೋ ಕಾರ್ಯಕ್ರಮದ ರೂವಾರಿ ಕಮಲಾಕ್ಷ ಅಮೀನ್ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ


ಬಹರೈನ್ ದ್ವೀಪ ರಾಷ್ಟ್ರದಲ್ಲಿ ಸುಮಾರು ಮೂರು ದಶಕದಿಂದ ಕನ್ನಡತುಳು ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದ ಶ್ರೀಕಮಲಾಕ್ಷ ಅಮೀನ್ ರವರ ಬಹುಮುಖೀ ಸೇವೆಯನ್ನು ಸರಕಾರವು ಗುರುತಿಸಿ  ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿರಾಜ್ಯೋತ್ಸವಪ್ರಶಸ್ತಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ. 1991ರಲ್ಲಿ ಬಹರೈನ್ ಗೆ ಬಂದಿದ್ದಕಮಲ್ನಂತರ ಹಿಂದೆ ತಿರುಗಿ ನೋಡಿಲ್ಲ. ಕನ್ನಡ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸುಧೆ, ಕನ್ನಡತುಳು ಸಮ್ಮೇಳನಗಳು, ಹೀಗೆ ಎಲ್ಲಾಕಾರ್ಯಕ್ರಮಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಬಹರೈನ್ ಉತ್ಕೃಷ್ಟ ನಿರೂಪಕನೆಂಬ ಹೆಗ್ಗಳಿಕೆಗಳ ಮಧ್ಯೆ ಬಹರೈನ್ರೇಡಿಯೋದಲ್ಲಿಕಸ್ತೂರಿ ಕನ್ನಡವೆಂಬ ಕನ್ನಡ ಎಫ್.ಎಂ. ರೇಡಿಯೋವನ್ನೂ ಪ್ರಾರಂಭಿಸಿದ ಕೀರ್ತಿ ಇವರದ್ದು. ಇದೇ ಎಫ್.ಎಂ. ನಲ್ಲಿ  ಜಯಮಾಲಾ ಹಾಗೂ ಆಗ ಕಾರ್ಮಿಕ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ರನ್ನು ಸಂದರ್ಶಿಸಿದ್ದರು. ಇವರ ಸ್ಪಷ್ಟ ಹಾಗೂಶುದ್ಧ ಕನ್ನಡದ ನಿರೂಪಣೆಯನ್ನು ಮೆಚ್ಚಿಕೊಂಡವರ ಸಾಲಿನಲ್ಲಿ ಶ್ರೀ ಬಿ. ಎಸ್. ಯೆಡಿಯೂರಪ್ಪ, ಶ್ರೀ ಅಭಯಚಂದ್ರ ಜೈನ್, ಕ್ಯಾಪ್ಟನ್ಗಣೇಶ್ ಕಾರ್ಣಿಕ್, ಮುಂತಾದವರು ಸೇರುತ್ತಾರೆ.

ಕರಾವಳಿ ಜಿಲ್ಲೆಗಳ ಕೆಲವೊಂದು ಕುಟುಂಬಗಳಿಗಾಗಿ ದ್ವೀಪದಲ್ಲಿ ಧನ ಸಂಗ್ರಹಿಸಿ ನೆರವಾದ ಹಿನ್ನೆಲೆಯೂ ಇವರದ್ದಾಗಿದೆ. ಕನ್ನಡ ಭಾಷೆಹಾಗೂ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ, ಕನ್ನಡದ ಕಂಪನ್ನು ಬಹರೈನ್ ದೇಶದಲ್ಲಿ ಪಸರಿಸುವಲ್ಲಿ ಇವರ ಕೊಡುಗೆದೊಡ್ಡಮಟ್ಟದಲ್ಲಿದೆ. ಕನ್ನಡ ಸಿನೆಮಾ ರಂಗದಲ್ಲಿ ಬಹಳಷ್ಟು ಮೇರು ಕಲಾವಿದರೊಡನೆ ಇವರಿಗೆ ನಿಕಟ ಸಂಪರ್ಕವಿದೆ.

ಕಳೆದ ದಶಕದಲ್ಲಿ ಇವರು ಗೆಳೆಯರೊಡನೆ ಹುಟ್ಟು ಹಾಕಿದನಮ್ಮ ಕನ್ನಡವೇದಿಕೆಯು ಬಹರೈನ್ ನಲ್ಲಿ ಉತ್ಕೃಷ್ಟ ಮಟ್ಟದ ಕನ್ನಡಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದೆ. ಸ್ಯಾಂಡಲ್ ವುಡ್ ಶ್ರೀನಾಥ್, ನೆನಪಿರಲಿ ಪ್ರೇಮ್, ಗುರು ಕಿರಣ್, ದರ್ಶನ್, ರವಿ ಶಂಕರ್, ಅನುರಾಧ ಭಟ್ ರಂತಹಾ ದಿಗ್ಗಜರನ್ನು ಆಹ್ವಾನಿಸಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮಡದಿ ಸೋನಲ್, ಮಕ್ಕಳಾದ ರಿಶಾನ್ ಮತ್ತು ಚಿರಾಗ್ ರನ್ನೊಳಗೊಂಡ ಸುಖೀ ಸಂಸಾರ ಇವರದ್ದು. ಬಹರೈನ್ ನಿಂದದಕ್ಷಿಣಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಪ್ರಥಮ ಕನ್ನಡಿಗ ಇವರು.

ಅಭಿನಂದನೆಗಳು ಕಮಲ್. ಬಹರೈನ್ ಕನ್ನಡಿಗರ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಇತಿಹಾಸ ತಾನಾಗಿನಿರ್ಮಾಣವಾಗುವದಿಲ್ಲ. ಸಾಧಕರಿಂದ ನಿರ್ಮಿಸಲ್ಪಡುತ್ತದೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »