TOP STORIES:

ಕಾಂತಬಾರೆ ಬುದಾಬಾರೆ ತುಳುನಾಡ ಶಕ್ತಿಗಳ ಕಥೆ


ಮುಲ್ಕಿ ಸೀಮೆಯ ಅವಳಿ ವೀರರಾದ ಕಾಂತಬಾರೆ ಬೂದ ಬಾರೆಯರು ಕೋಟಿ ಚೆನ್ನಯರ ನಂತರದ ಕಾಲ ಘಟ್ಟದಲ್ಲಿ ಹುಟ್ಟಿ ತಮ್ಮದೇಯಾದ ಇತಿಹಾಸ ಸೃಷ್ಟಿಸಿದರು.ಮುಲ್ಕಿ ಸೀಮೆಯ ಸಾಮಂತರಸರ ಆಳ್ವಿಕೆಯ ಚಂದ್ರರಾಜ ಬಲ್ಲಾಳನು ಮುಲ್ಕಿ ಕೊಲ್ಲೂರಿನ ಸೀಮಂತೂರಿನಲ್ಲಿ ರಾಜ್ಯಭಾರ ಮಾಡಿಕೊಂಡಿದ್ದನು. ಅವನ ಪಟ್ಟದ ರಾಣಿ ಪುಲ್ಲ ಪೆರ್ಗಡ್ತಿ, ಮಕ್ಕಳಿಲ್ಲದ ಇವರು ಸಂತಾನ ಭಾಗ್ಯಕ್ಕಾಗಿ ಕದ್ರಿ ಮಂಜುನಾಥನಿಗೆ ಹರಕೆ ಸಲ್ಲಿಸಲು ಪರಿಹಾರ ಸಮೇತರಾಗಿ ದಂಡಿಗೆಯಲ್ಲಿ ಹೋಗುವಾಗ ಸುರತ್ಕಲ್ ಕಜೇರಿ ಎಂಬಲ್ಲಿ ಹೊಲ ಕಾಯುತ್ತಿದ್ದ ಏಳರ ಹರೆಯದ ಬಿಲ್ಲವ ಬಾಲಕಿ ಆಚು ಮಾತಿನ ಚತುರೋಕ್ತಿಗಳಿಗೆ ಮನಸೋತರು. ಹಿಂದಿರುಗಿ ಬರುವಾಗ ಅವಳ ಹಿರಿಯರ ಮನ ಒಪ್ಪಿಸಿ ಆಕೆಯನ್ನು ತಮ್ಮೊಂದಿಗೆ ಬೀಡಿಗೆ ಕರೆ ತರುತ್ತಾರೆ. ಆಕೆಯ ಜೊತೆಯಲ್ಲಿ ಬಂದ ಉಲ್ಲಾಯ ದೈವಕ್ಕೆ ಕೆಳಗಿನ ಗುಡ್ಡೆ ಮನೆಯಲ್ಲಿ ಸ್ಥಾನಕಟ್ಟಿ ಆರಾಧನೆ ಸಲ್ಲಿಸುತ್ತಾರೆ. ಮುಂದೆ ಆಕೆಯನ್ನು ತನ್ನ ಒಕ್ಕಲಾದ ವರಪಾಡಿ ಕುಂದಯ ಬಾರೆಗೆ ಮದುವೆ ಮಾಡಿ ಕೋಡುತ್ತಾರೆ. ಆಚು ಗರ್ಭವತಿಯಾಗಿ ಸೀಮಂತದ ಬಳಿಕ ತವರಿಗೆ ಹೋಗುವ ದಾರಿಯಲ್ಲಿ ಕೊಲ್ಲೂರಿನ ತಾಕಟೆ ಮರದ ಬಳಿ ಹೆರಿಗೆ ನೋವು ಕಾಣಿಸಿಕೊಂಡು ಅಲ್ಲಯೇ ದೈವಾಂಶ ಸಂಭೂತರಾದ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ, ತಾಕಟೆ ಮರಕ್ಕೆ ತೊಟ್ಟಿಲು ಕಟ್ಟಿ ಶಿಶುಗಳನ್ನು ತೂಗುತ್ತಾಳೆ, ಸುದ್ದಿ ತಿಳಿದ ಪೆರ್ಗಡ್ತಿ, ಬಾಣಂತಿ & ಮಕ್ಕಳನ್ನು ಬೀಡಿಗೆ ಕರೆದೊಯ್ಯುತ್ತಾಳೆ. ಕೆಲವು ದಿನಗಳಲ್ಲಿ ಆಚು ಕೈಲಾಸವಾಸಿಯಾಗುತ್ತಾಳೆ. ರಾಣಿಯು ಅವಳಿ ಮಕ್ಕಳಿಗೆ ಕಾಂತಾಬಾರೆ ಬೂದಬಾರೆ ಎಂದು ಹೆಸರಿಟ್ಟು ಅಕ್ಕರೆಯಿಂದ ಸಲಹುತ್ತಾರೆ.

ನಂತರದಲ್ಲಿ ಪೆರ್ಗಡ್ತಿಗೂ ಮಕ್ಕಳಾಗುತ್ತದೆ. ಅವಳಿ ಮಕ್ಕಳು ಅಂದಿನ ಪ್ರಸಿದ್ಥ ಗುರುಕುಲವಾಗಿದ್ದ ಹಳೆಯಂಗಡಿ ಹತ್ತಿರದ ದೈಬಿತ್ತಿಲ್ (ಸಸಿಹಿತ್ತಿಲು) ಸಾಮಂತ ಗರಡಿಯಲ್ಲಿ ಯುದ್ಥ ವಿದ್ಯಾ ಪಾರಂಗತರಾಗುತ್ತಾರೆ. ಪ್ರಾಯಬದ್ಥರಾಗಿ ಮುಲ್ಕಿ ಸೀಮೆಯ ಗಡಿ ರಕ್ಷಣೆ ಮಾಡುತ್ತಾ, ಶತ್ರುಗಳ ತಂಟೆ ನಿವಾರಿಸುತ್ತಾ ಅರಸರ ಎಡಬಲವಾಗುತ್ತಾರೆ. ಮಾಗಣೆಯಲ್ಲಿ ಹೊಲಗಳನ್ನು ನಿರ್ಮಿಸಿ ಕೃಷಿ ಕಾಯಕ ಮಾಡಿ ಇತರರಿಗೂ ನೆರವಾಗುತ್ತಾರೆ. ಸಾಮಂತರ ರಾಜ್ಯಭಾರ ಸುಸೂತ್ರಗೊಳಿಸಲು, ಗುತ್ತು ಭಾವಗಳನ್ನು ನಿರ್ಮಿಸಿ ಪಹರೆಯವರನ್ನು ನೇಮಿಸಿ ಬೊಕ್ಕಸಕ್ಕೆ ಕಂದಾಯ ಸಂದಾಯದ ಏರ್ಪಾಡು ಮಾಡುತ್ತಾರೆ. ಅರಸರಿಂದ ಕೊಲ್ಲೂರ ಗುಡ್ಡೆಯ ಮರ್ದನಾಯ್ಗರಿಗೆ ಗಡಿ ಪಟ್ಟವನ್ನು ಮಾಡಿಸುತ್ತಾರೆ. ಬಲ್ಲಾಳರು ವಿಧಿವಶರಾದಾಗ ಸೀಮೆಯ ಆಡಳಿತದಲ್ಲಿ ಪೆರ್ಗಡ್ತಿಗೆ ಬೆಂಬಲವಾಗಿ ನಿಂತು ಆಕೆಯ ಮಗಳಾದ ದುಗ್ಗುವಿಗೆ ಐಕಳ ಬಾವದ ಬೀಸಬನ್ನಾರನೊಂದಿಗೆ ವಿವಾಹ ಮಾಡಿಸುತ್ತಾರೆ. ರಾಜ್ಯದ ಮೇಲೆ ದಂಡೆತ್ತಿ ಬಂದ ಮೂಡಬಿದಿರೆಯ ಚೌಟ ಅರಸು ಕುಬೇರನನ್ನು ಎದುರಿಸಿ ವೀರ ದುಗ್ಗಣ್ಣ ಕೊಂಡೆಯನ್ನು ಕೊಂದು ಕುಬೇರನನ್ನು ಸೋಲಿಸುತ್ತಾರೆ.

ಪೆರ್ಗಡ್ತಿ ಪುತ್ರ ಚೆನ್ನರಾಯ ಸಾವಂತನಿಗೆ ಪಟ್ಟ ಕಟ್ಟಿಸಿ, ಪರಂಗಡಿ(ಹಳೆಯಂಗಡಿ) ಬಳಿಯ ಪಡು ಪಣಂಬೂರಿನಲ್ಲಿ ನೂತನ ಅರಮನೆ ನಿರ್ಮಿಸಿ, ತಾವು ಸೀಮೆಯ ಕಾವಲಿಗೆ ನಿಲ್ಲುತ್ತಾರೆ. ಕಾರ್ಕಳದ ಬೈಲಸೂಡ ಅರಸರಿಗೆ ಯುದ್ಥದಲ್ಲಿ ನೆರವಾಗಿ ಜಯ ಒದಗಿಸುತ್ತರೆ. ತಮ್ಮ ಜೊತೆಯಲ್ಲಿ ಬಂದ ಉಳ್ಳಾಯ ಜುಮಾದಿ ಸಾರಮಾನ್ಯ ದೈವಗಳಿಗೆ ಉಳೆಪಾಡಿ ಗುಡ್ಡೆಯಲ್ಲಿ ಸ್ಥಾನ ಕಟ್ಟಿಸಿ ಆರಾಧಿಸುತ್ತಾರೆ. ಗುಡ್ಡೆನಾಯ್ಗರಿಗೆ ನೂರ ಒಂದು ಮುಡಿ ಸಾಗುವಳಿ ಜಮೀನು ಮಾಡಿಕೊಡುತ್ತಾರೆ. ಕೆಳಗಿನ ಗುಡ್ಡೆಯಲ್ಲಿ ಕಾಡು ಕಡಿದು ಏಳು ಎಕರೆ ಬಾಕಿಮಾರು ಗದ್ದೆಗೆ ಪುನಾರು ಪುಚ್ಚಾಡಿ ಬೈಲಿನಿಂದ ಕಾಲುವೆ ನಿರ್ಮಿಸಿ ನೀರು ಒದಗಿಸುತ್ತಾರೆ. ಪಡುಪಣಂಬೂರುನಲ್ಲಿಯೂ ಇಂತಹುದೆ ಕೃಷಿ ಕಾಯಕ ಹಾಗೂ ನೀರಾವರಿ ಏರ್ಪಡಿಸುತ್ತಾರೆ.

ಅಸಾಮಾನ್ಯ ವೀರರಾಗಿ ಮೆರೆದ ಈ ಅವಳಿ ವೀರರು ಕಾಯಬಿಟ್ಟು ಮಾಯಸೇರಿದ ಬಳಿಕ ಅವರನ್ನು ಕಾರಣಿಕ ಪುರುಷರೆಂದು ಆರಾಧಿಸಲಾಯಿತು. ಮುಲ್ಕಿ ಉಳೆಪಾಡಿ ಮಿತ್ತಗುಡ್ಡೆಯಲ್ಲಿ ಕಾಂತಬಾರೆ ಬೂದಬಾರೆ ಗರಡಿಯಿದೆ. ಅವರು ಸ್ಥಾಪಿಸಿದ ದೈವಗಳ ಗರಡಿಯಿದೆ. ಗುಡ್ಡೆ ಸಾನದ ಮನೆಯಲ್ಲಿ ಬಾರೆಯರ ಪಟ್ಟದ ಉಂಗುರ& ಅವರು ಯುದ್ಥಗಳಲ್ಲಿ ಬಳಸುತ್ತಿದ್ದ ಬಿಲ್ಲು ಬಾಣಗಳು ಮುಂತಾದ ಮುವತ್ತೆರಡೂ ಆಯುಧಗಳನ್ನು ರಕ್ಷಿಸಿ ಇಡಲಾಗಿದೆ. ಅವರು ಧರಿಸುತ್ತಿದ್ದ ಉಡುಪುಗಳನ್ನು ಈಗಲೂ ಕಾಯ್ದಿರಿಸಲಾಗಿದೆ. ಅವರ ಕಾಲದ ಆಯತಾಕಾರದ ಮರದ ಪೆಟ್ಟಿಗೆಯೂ ಇದೆ. ವರ್ಷಾವಧಿ ಕಾವೇರಿ ಸಂಕ್ರಮಣದಂದು ಇವುಗಳನ್ನು ಹೊರಗೆ ತೆಗೆದು ಪೂಜೆ ಪುರಸ್ಕಾರ ಸಲ್ಲಿಸಲಾಗುತ್ತದೆ. ಅವರ ಬಿಲ್ಲುಗಳು 7ಅಡಿಗಳಷ್ಟು ಉದ್ದವಿರುವುದನ್ನು ಗಮನಿಸಿದರೆ ಈ ಅವಳಿ ವೀರರು ಆಜಾನುಬಾಹು ದೇಹ ಪ್ರಕೃತಿಯವರಾಗಿದ್ದರೆಂದು ತಿಳಿಯುತ್ತದೆ. ಇವರ ಕಾರ್ಯಕ್ಷೇತ್ರದ ಪ್ರದೇಶದ ಉದ್ದಗಲಕ್ಕೂ ಕಂಡು ಬರುವ ಕುರುಗಳು ಅವರ ಪವಾಡ ಸದೃಶ ಸಾಧನೆಗಳ ಅವಶೇಷಗಳು, ಅವರ ಆರಾಧನಾ ಕೇಂದ್ರಗಳು,ಸೀಮಂತೂರು & ಏಳಿಂಜೆಯಲ್ಲಿ ದೊರೆತಿರುವ ವೀರಗಲ್ಲು, ಅವರ ಕುರಿತಾದ ಜನ ಜನಿತ ಕಥೆಗಳು, ಪಾಡ್ದನಗಳೂ ಐತಿಹ್ಯದ ಮಹತ್ವದ ದಾಖಲೆಗಳಾಗಿದೆ.

Credits: ತುಳುನಾಡ ಬಿಲ್ಲವರು
-(ರಮಾನಾಥ ಕೋಟೆಕಾರ್)

ಪೆ.ಟೈ:- ಸುದರ್ಶನ್ ಪೂಜಾರಿ ಶ್ರೀ ದುರ್ಗಾ.

Email us: billavaswarriors@gmail.com

www.billavaswarriors.com


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »